X

ಶ್ರೀರಾಮುಲು ವಿರೋಧಿಯನ್ನು ಹಿಗ್ಗಾಮುಗ್ಗಾ ಝಾಡಿಸಿದ ರಾಕಿಂಗ್ ಸ್ಟಾರ್.! ಶುರುವಾಯ್ತು ಕಲಾವಿದರ ಕಲಹ..!

ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರಕ್ಕಿಳಿದಿರುವ ಕನ್ನಡ ಚಿತ್ರರಂಗದ ಸ್ಟಾರ್‌ಗಳ ಕ್ಯಾಂಪೇನ್‌ನಿಂದಾಗಿ ಮೊದಲೇ ರಂಗೇರುತ್ತಿದ್ದ ಚುನಾವಣೆಯನ್ನು ಮತ್ತಷ್ಟು ಕುತೂಹಲ ಕೆರಳಿಸುವಂತೆ ಮಾಡಿದೆ. ಯಾಕೆಂದರೆ ರಾಜ್ಯದ ಜನತೆಗೆ ರಾಜಕೀಯದ ಜೊತೆಗೆ ಸಿನಿಮಾ ರಂಗದಲ್ಲೂ ಆಸಕ್ತಿ ಹೆಚ್ಚು, ಆದ್ದರಿಂದ ತಮ್ಮ ನೆಚ್ಚಿನ ನಟ ನಟಿಯರು ಯಾರ ಬಗ್ಗೆ ಹೆಚ್ಚು ಒಲವು ತೋರಿಸುತ್ತಾರೋ ಅತ್ತ ಕಡೆ ಕೆಲವರು ವಾಲುತ್ತಾರೆ. ಆದ್ದರಿಂದಲೇ ಸ್ಟಾರ್ ಗಳು ಪ್ರಚಾರಕ್ಕೆ ಇಳಿದಿರುವುದರಿಂದ ಈ ಬಾರಿಯ ಪ್ರಚಾರಕ್ಕೂ ಜನ ಮುಗಿಬೀಳುತ್ತಿದ್ದಾರೆ.

ಬಿಜೆಪಿ ಪರ ಪ್ರಚಾರಕ್ಕಿಳಿದಿರುವ ರಾಕಿಂಗ್ ಸ್ಟಾರ್ ಯಶ್ ಈಗಾಗಲೇ ಶ್ರೀರಾಮುಲು ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಶ್ರೀರಾಮುಲು ಗೆಲುವಿನ ಮೆಟ್ಟಿಲು ಏರುತ್ತಿದ್ದರೆ, ಇತ್ತ ಯಶ್ ಕೂಡಾ ಕೈಜೋಡಿಸಿದ್ದಾರೆ. ಆದ್ದರಿಂದಲೇ ಕಂಗಾಲಾದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಗೆ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದು, ಪಕ್ಷೇತರ ಅಭ್ಯರ್ಥಿಗಳೂ ಇದರಿಂದ ಹೊರ ಉಳಿದಿಲ್ಲ.!

ಸುದೀಪ್-ಯಶ್ ಗೆ ಬಚ್ಚಾ ಎಂದಿದ್ದ ತಿಪ್ಪೇಸ್ವಾಮಿ..!

ಇತ್ತೀಚೆಗೆ ಕಾಂಗ್ರೆಸ್ ನ ಅಭ್ಯರ್ಥಿಗಳ ಪರವಾಗಿ ಮತಯಾಚನೆಗೆ ತೆರಳಿದ ಕಿಚ್ಚ ಸುದೀಪ್ ಗೆ ಜನರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರವಾಗಿ ಪ್ರಚಾರಕ್ಕೆ ತೆರಳಿದ್ದರು. ಶ್ರೀ ರಾಮುಲು ಮತ್ತು ಸುದೀಪ್ ಆತ್ಮೀಯರಾಗಿರುವುದರಿಂದ ಅವರ ಪರವಾಗಿ ಮತಯಾಚನೆ ನಡೆಸುತ್ತಿದ್ದೇನೆ ಎಂದಿದ್ದರು. ಇತ್ತ ಯಶ್ ಕೂಡಾ ಶ್ರೀರಾಮುಲು ಪರವಾಗಿಯೇ ಭರ್ಜರಿಯಾಗಿ ಕ್ಯಾಂಪೇನ್ ನಡೆಸುತ್ತಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ತಿಪ್ಪೇಸ್ವಾಮಿ ಯಶ್ ಮತ್ತು ಸುದೀಪ್ ಬಗ್ಗೆ, ನಟರಾಗಿದ್ದರೆ ಸಿನಿಮಾ ನಡೆಸಲಿ, ರಾಜಕೀಯದಲ್ಲಿ ಇವರಿಬ್ಬರು ಬಚ್ಚಾಗಳು ಎಂದಿದ್ದರು. ತಿಪ್ಪೇಸ್ವಾಮಿ ಈ ಹೇಳಿಕೆಗೆ ಜನರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿದ ರಾಕಿಂಗ್ ಸ್ಟಾರ್ ಯಶ್ ತನ್ನದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ..!

ಜನರಿಂದಲೇ ಉತ್ತರ ಸಿಗಲಿದೆ..!

ರಾಜಕೀಯ ಎಂಬುದು ಒಂದು ಆಟ, ಯಾರು ಗೆಲ್ಲುತ್ತಾರೆ ಸೋಲುತ್ತಾರೆ ಎಂಬುದು ರಾಜ್ಯದ ಜನರೇ ತೀರ್ಮಾನಿಸುತ್ತಾರೆ. ನಾವು ರಾಜಕೀಯದಲ್ಲಿ ಬಚ್ಚಾಗಳೇ ಇರಬಹುದು, ಆದರೆ ಇದನ್ನು ಸದ್ಯದಲ್ಲೇ ರಾಜ್ಯದ ಜನತೆ ಡಿಸೈಡ್ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ತಿಪ್ಪೇಸ್ವಾಮಿ ಅವರ ವಯಸ್ಸು ನಮಗಿಂತ ದೊಡ್ಡದು, ಅವರ ಮುಂದೆ ನಾವು ಬಚ್ಚಾಗಳೇ, ಒಬ್ಬರು ಒಂದು ಹೇಳಿಕೆ ನೀಡಿದರೆ ಅದು ಅವರ ವ್ಯಕ್ತಿತ್ವವನ್ನು ಪ್ರದರ್ಶಿಸುತ್ತದೆ ಎಂದು ತಕ್ಕ ಉತ್ತರ ನೀಡಿದ್ದಾರೆ. ಶ್ರೀರಾಮುಲು ನನಗೆ ಪರಿಚಿತರು, ನನ್ನ ಆತ್ಮೀಯರು , ಅದಕ್ಕಾಗಿಯೇ ನಾನು ಅವರ ಪರ ಪ್ರಚಾರ ನಡೆಸುತ್ತಿದ್ದೇನೆ ಎಂದಿದ್ದಾರೆ..

ಕಲಾವಿದರಿಗೆ ಅವಮಾನ ಮಾಡಿದ ತಿಪ್ಪೇಸ್ವಾಮಿ..!

ತಿಪ್ಪೇಸ್ವಾಮಿ ಯಶ್ ಮತ್ತು ಸುದೀಪ್ ಅವರನ್ನು ಹೀಯಾಳಿಸಲು ಹೋಗಿ ಇಡೀ ಕಲಾವಿದರಿಗೆ ಅವಮಾನ ಮಾಡಿದ್ದಾರೆ. ಯಶ್ ಮತ್ತು ಸುದೀಪ್ ಬಣ್ಣ ಹಚ್ಚುವುದಕ್ಕೂ ಮೊದಲೇ ನಾನು ಬಣ್ಣ ಹಚ್ಚಿ ನಟಿಸಿದವನು, ಇವರೆಲ್ಲಾ ಏನ್ ಮಹಾ , ನನ್ ಮುಂದೆ ರಾಜಕೀಯದಲ್ಲಿ ಇವರೆಲ್ಲಾ ಬಚ್ಚಾಗಳು ಎಂದು ಬಹಳ ಕೀಳಾಗಿ ಹೇಳಿಕೆ ನೀಡಿದ್ದರು..!

ಸಿನಿಮಾ ರಂಗದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಯಶ್ ಮತ್ತು ಸುದೀಪ್ ಬಿಜೆಪಿ ಪರ ರಾಜಕೀಯ ಪ್ರವೇಶಿಸಿರುವುದರಿಂದ ತಳಮಳಗೊಂಡ ಎದುರಾಳಿಗಳು ತಮ್ಮ ಭಯವನ್ನು ಹೊರಹಾಕುತ್ತಿದ್ದಾರೆ. ಆದರೆ ಯಶ್ ನೀಡಿರುವ ತಿರುಗೇಟಿಗೆ ಪೇಚೆಗೆ ಸಿಲುಕಿದ ತಿಪ್ಪೇಸ್ವಾಮಿ ಯಾವುದೇ ಪ್ರತಿಕ್ರಿಯೆ ನೀಡದೆ ನಾಪತ್ತೆಯಾಗಿದ್ದಾರೆ..!

–ಅರ್ಜುನ್

 

Editor Postcard Kannada:
Related Post