ಹಿಂದೂಗಳ ಬಹುಕಾಲದ ನಿರೀಕ್ಷೆ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡುವುದು. ಈ ಕನಸನ್ನು ನನಸು ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಈಗಾಗಲೇ ಕಾರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ವರ್ಷ ಅಂದರೆ ೨೦೨೪ ರ ಜನವರಿ ತಿಂಗಳಿನಲ್ಲಿ ಈ ಭವ್ಯ ರಾಷ್ಟ್ರ ಮಂದಿರ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಈಗಾಗಲೇ ಕೇಂದ್ರ ಸಚಿವ ಅಮಿತ್ ಶಾ ಅವರು ಘೋಷಿಸಿದ್ದಾರೆ.
ಅಂದ ಹಾಗೆ ಈ ಮಂದಿರ ನಿರ್ಮಾಣದ ಬಗ್ಗೆ ತಲೆ ಕೆಡಿಸಿಕೊಂಡಿರುವ ಪಾಕ್ ಪ್ರೇರಿತ ಉಗ್ರ ಸಂಘಟನೆಗಳು, ಇದರ ಮೇಲೆ ದಾಳಿ ನಡೆಸಲು ಪಿತೂರಿ ಮಾಡುತ್ತಿವೆ. ಉಗ್ರರ ಈ ಸಂಚಿನ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಹ ಸಿಕ್ಕಿದೆ. ರಾಮ ಮಂದಿರದ ಮೇಲೆ ದೊಡ್ಡ ಮಟ್ಟದಲ್ಲಿ ದಾಳಿ ನಡೆಸುವುದಕ್ಕೆ ಸಂಚು ಮಾಡಿರುವ ಹುನ್ನಾರವನ್ನು ಗುಪ್ತಚರ ಇಲಾಖೆ ಬಯಲು ಮಾಡಿದೆ.
ಜೈಷ್ ಎ ಮೊಹಮ್ಮದ್ ಮತ್ತು ಲಷ್ಕರ್ ಇ ತೈಬಾ ಸಂಘಟನೆಗಳ ಉಗ್ರಗಾಮಿಗಳು ಈ ಭಯೋತ್ಪಾದಕ ದಾಳಿಯನ್ನು ನಡೆಸಲು ಮುಂದಾಗಿವೆ. ಈ ಭಯೋತ್ಪಾದಕ ಸಂಘಟನೆಗಳು ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ತರಲು, ಆತ್ಮಹತ್ಯಾ ಬಾಂಬರ್ಗಳನ್ನು ಕಳುಹಿಸಲು ಯೋಜನೆಗಳನ್ನು ರೂಪಿಸಿರುವುದಾಗಿ ಗುಪ್ತಚರ ಮೂಲಗಳು ಮಾಹಿತಿ ಬಿಡುಗಡೆ ಮಾಡಿದೆ.
ಈ ದೇವಾಲಯ ಪೂರ್ಣಗೊಳ್ಳುವ ಮೊದಲೇ ಈ ದಾಳಿಯನ್ನು ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ. ಹಾಗೆಯೇ ಈ ದಾಳಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಿ, ಅದನ್ನು ಹಿಂದೂ – ಮುಸ್ಲಿಂ ಗಲಾಟೆ ಎಂಬುದಾಗಿ ಬಿಂಬಿಸಿ, ಅದನ್ನು ಜಗತ್ತಿನೆದುರು ಪ್ರಚಾರ ಮಾಡುವ ಹುನ್ನಾರ ಸಹ ಈ ಭಯೋತ್ಪಾದಕರದ್ದು ಎಂಬುದನ್ನು ಸಹ ಗುಪ್ತಚರ ಮೂಲಗಳು ಬಹಿರಂಗಗೊಳಿಸಿವೆ. ಕಾಶ್ಮೀರದಲ್ಲಿ ಪ್ರಸ್ತುತ ಉಗ್ರಗಾಮಿ ಚಟುವಟಿಕೆಗಳನ್ನು ಪೋಷಿಸಲು ಐಸಿಸ್ ಉಗ್ರರಿಗೆ ಸಾಧ್ಯವಾಗುತ್ತಿಲ್ಲ. ಪಾಕ್ ಉಗ್ರರು ಭಾರತದೊಳಕ್ಕೆ ನುಸುಳುವುದಕ್ಕೂ ಭಾರತೀಯ ಸೈನಿಕರು ಬಿಡುತ್ತಿಲ್ಲ. ಉಗ್ರ ರು ನುಸುಳುವ ಎಲ್ಲಾ ದಾರಿ ಗಳ ಮೇಲೆಯೂ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಮತ್ತೆ ನೆಲೆ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಉಗ್ರರು ಅಯೋಧ್ಯೆ ಶ್ರೀ ರಾಮ ಮಂದಿರದ ಮೇಲೆ ದಾಳಿಯ ಸಂಚನ್ನು ರೂಪಿಸಿದ್ದಾರೆ ಎಂಬುದು ಸದ್ಯದ ವಿಚಾರ.
ಒಟ್ಟಿನಲ್ಲಿ ಭಾರತದಿಂದ ಪದೇ ಪದೇ ಅವಮಾನಕ್ಕೆ ಒಳಗಾದರೂ ಸಹ ಉಗ್ರರಿಗಿನ್ನೂ ಬುದ್ಧಿ ಬಾರದಿರುವುದು, ಅವರ ಅಂತ್ಯಕ್ಕೆ ಅವರೇ ಗುಂಡಿ ತೇ ಡು ತಾ ತಿರುವು ದತ್ ಕೆ ನಿದರ್ಶನ. ಪಾಕಿಸ್ತಾನ ಗತಿಗೆಟ್ಟು ಭಿಕ್ಷೆ ಬೇಡುವ ಸ್ಥಿತಿ ತಲುಪಿದ್ದರೂ, ಉಗ್ರರನ್ನು ಪೋಷಿಸುವುದು, ಮತ್ತೊಂದು ದೇಶದ ಮೇಲೆ ಛೂ ಬಿಡುವುದು ಮಾಡುತ್ತಿದ್ದು, ತನ್ನ ನಿರ್ನಾಮಕ್ಕೆ ತಾನೇ ಆರಂಭ ನೀಡಿದಂತಿದೆ ಎನ್ನಬಹುದು