X

ಹೊಟ್ಟೆ ತುಂಬಾ ಪೂರಿ-ಚನ ಮಸಾಲ ತಿಂದು ಉಪವಾಸ ಸತ್ಯಾಗ್ರಹ ಹಿಡಿದ ಕಾಂಗ್ರೆಸ್ಸಿಗರು!! ದೇಶದ ಮುಂದೆ ಮತ್ತೊಮ್ಮೆ ಮಾನ ಹರಾಜು!!

ಅದೇನು ಉಪವಾಸನೋ ಏನೋ ಗೊತ್ತಿಲ್ಲ!! ಆದರೆ ಭರ್ಜರಿ ಉಪಾಹಾರಗಳನ್ನು ಸವಿದು ಉಪವಾಸ ಕೈಗೊಳ್ಳುವ ಕಾಂಗ್ರೆಸ್ಸಿಗರಿಗೆ ಅದೇನು ಹೇಳಬೇಕೋ ಗೊತ್ತಾಗುತ್ತಿಲ್ಲ!! ಆದರೆ ಸಂಸತ್ ಕಲಾಪ ಭಂಗ ಮತ್ತು ಕೋಮು ಸಾಮರಸ್ಯಕ್ಕೆ ಧಕ್ಕೆ ಒದಗಿರುವುಕ್ಕೆ ಪ್ರಧಾನಿ ಮೋದಿ ಸರ್ಕಾರವನ್ನು ಗುರಿ ಇರಿಸಿ ಕಾಂಗ್ರೆಸ್ಸಿಗರು ಆಡುತ್ತಿರುವ ನಾಟಕಗಳನ್ನು ನೋಡುತ್ತಿದ್ದರೆ ಕಾಂಗ್ರೆಸ್ಸಿಗರು ಅದ್ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎನ್ನುವುದನ್ನು ನಿರೂಪಿಸಿದ್ದಾರೆ!!

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆಯುವ ಮೂಲಕ ತನ್ನ ಅಸಲಿ ಸ್ವರೂಪವನ್ನು ತೋರಿಸಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷವು ಇದೀಗ ನಾಟಕೀಯ ಉಪವಾಸ ಸತ್ಯಾಗ್ರಹವನ್ನು ಮಾಡಲು ಮುಂದಾಗಿದ್ದಂತೂ ಅಕ್ಷರಶಃ ನಿಜ. ಹೊಟ್ಟೆ ತುಂಬ ಉಂಡು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿ ಸರ್ಕಾರವನ್ನು ಗುರಿ ಇರಿಸಿ ರಾಜಘಾಟ್‍ನಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದ ವಿವಾದಕ್ಕೆ ಕೊನೆಯೇ ಇಲ್ಲವೇನೋ ಎಂಬಂತಹ ಸ್ಥಿತಿ ಈಗ ಕಂಡುಬರುತ್ತಿದೆ.

ಹಾಗಾಗಿ ಇದೀಗ ರಾಜಘಾಟ್ ಉಪವಾಸ ವೇದಿಕೆಯಿಂದ ಸಿಕ್ಖ್ ವಿರೋಧಿ ದಂಗೆಯ ಕಳಂಕಿತ ಕಾಂಗ್ರೆಸ್ ನಾಯಕ, ಜಗದೀಶ್ ಟೈಟ್ಲರ್ ಅವರನ್ನು ಎತ್ತಂಗಡಿ ಮಾಡಿದ ವಿವಾದವನ್ನು ಅನುಸರಿಸಿ, ಕಾಂಗ್ರೆಸ್ ನಾಯಕರು ಉಪವಾಸ ಕೈಗೊಳ್ಳುವ ಮುನ್ನ ದಿಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಉಪಾಹಾರ ಸವಿದ ಚಿತ್ರ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಸಹಿತ ಪಕ್ಷದ ಹಲವು ಪ್ರಮುಖರು ರೆಸ್ಟೋರೆಂಟ್‍ನಲ್ಲಿ ಉಪಾಹಾರ ಸ್ವೀಕರಿಸುತ್ತಿರುವ ಫೆÇೀಟೋವನ್ನು ಮಾಜಿ ದಿಲ್ಲಿ ಮುಖ್ಯಮಂತ್ರಿ ಮದನ್ ಲಾಲ್ ಖುರಾನಾ ಅವರ ಪುತ್ರನಾಗಿರುವ ಬಿಜೆಪಿ ನಾಯಕ ಹರೀಶ್ ಖುರಾನಾ ಅವರು ಟ್ವಿಟರ್ ಗೆ ಅಪ್ ಲೋಡ್ ಮಾಡಿದ್ದಾರೆ.

ದೇಶದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ. ಆದರೆ ಉಪವಾಸದ ನೆಪವೊಡ್ಡಿ ನರೇಂದ್ರ ಮೋದಿ ಸರ್ಕಾರವನ್ನು ಮಣಿಸಲು ಯತ್ನಿಸುತ್ತಿರುವ ಕಾಂಗ್ರೆಸ್ಸಿಗರ ಅಸಲಿ ಮುಖ ಬಯಲಾಗಿದ್ದು, ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ!! ಈಗಾಗಲೇ ನರೇಂದ್ರ ಮೋದಿಯವರನ್ನು ತೆಗಳುತ್ತಾ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ಸಿಗರು ಅದೇನೇನೂ ನಾಟಕವಾಡುತ್ತಾರೋ ನಾ ಕಾಣೆ!!

ಸೋಮವಾರ ಬೆಳಗ್ಗೆ ದೆಹಲಿಯ ರಾಜ್ ಘಾಟ್ ನಲ್ಲಿರುವ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಭೇಟಿ ನೀಡಿದ ರಾಹುಲ್ ನಂತರ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು!!ಅಷ್ಟೇ ಅಲ್ಲದೇ, ದೇಶದಾದ್ಯಂತ ಎಲ್ಲಾ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಕಾಂಗ್ರೆಸ್ ನಾಯಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಕೋಮುವಾದ ಮತ್ತು ಸಂಸತ್ ಅಧಿವೇಶನ ಸುಸೂತ್ರವಾಗಿ ನಡೆಯದಿರುವುದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಆರೋಪಿಸಿ ಪ್ರತಿಭಟನೆ ನಡೆಸಿದೆ!!

ಆದರೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮುನ್ನ ಹೊಟ್ಟೆ ತುಂಬಾ ಊಟ ಮಾಡಿ ಬಂದಿದ್ದಾರೆ. ಅವರು ತೋರಿಕೆಗಾಗಿ ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ದೆಹಲಿಯ ಬಿಜೆಪಿ ನಾಯಕ ಹರೀಶ್ ಕೌರಾನಾ ಆರೋಪಿಸಿದ್ದು, ಈ ಕುರಿತು ಫೆÇೀಟೋವೊಂದನ್ನೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಫೆÇೀಟೋದಲ್ಲಿ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ಸೇರಿದಂತೆ ಹಲವು ನಾಯಕರು ಹೋಟೆಲ್ ನಲ್ಲಿ ಊಟ ಮಾಡುತ್ತಿರುವುದು ಕಂಡು ಬಂದಿದೆ.

ಉಪಾಹಾರ ಸವಿಯುತ್ತಿರುವವರಲ್ಲಿ ಮಾಕನ್ ಜತೆಗೆ ಹರೂನ್ ಯೂಸುಫ್ ಮತ್ತು ಅರವಿಂದರ್ ಸಿಂಗ್ ಲವ್‍ಲಿ ಕೂಡ ಕಾಣಿಸಿಕೊಂಡಿದ್ದಾರೆ. “ಕಾಂಗ್ರೆಸ್ ಪಕ್ಷದವರು ಇತರ ಪಕ್ಷದವರಿಗೆ ರಾಜ್ ಘಾಟ್ ಉಪವಾಸದಲ್ಲಿ ಜತೆಗೂಡುವಂತೆ ಕೇಳಿಕೊಂಡಿದ್ದಾರೆ; ಆದರೆ ಅವರೇ ಉಪವಾಸಕ್ಕೆ ಮುನ್ನ ದಿಲ್ಲಿ ರೆಸ್ಟೋರೆಂಟ್‍ನಲ್ಲಿ ಛೋಲೆ ಭಟೂರೆಯನ್ನು ಭರ್ಜರಿಯಾಗಿ ಸವಿದಿದ್ದಾರೆ’ ಎಂದು ಖುರಾನಾ ಬರೆದಿದ್ದಾರೆ.

ಹರೀಶ್ ಖುರಾನಾ ವೈರಲ್ ಪೆÇೀಸ್ಟ್ ಗೆ ಕಟುವಾಗಿ ಉತ್ತರಿಸಿರುವ ಕಾಂಗ್ರೆಸ್ ನಾಯಕ ಲವ್‍ಲಿ ಅವರು “ಈ ಚಿತ್ರವನ್ನು ಬೆಳಗ್ಗೆ 8 ಗಂಟೆಗೆ ಮುನ್ನ ತೆಗೆಯಲಾಗಿದೆ. ನಮ್ಮ ಸಾಂಕೇತಿಕ ಉಪವಾಸ 10.30ರಿಂದ 4.30ರ ವರೆಗೆ. ಇದೇನೂ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಅಲ್ಲ” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, “ಬಿಜೆಪಿಯವರು ದೇಶವನ್ನು ಸರಿಯಾಗಿ ನಡೆಸುವುದನ್ನು ಬಿಟ್ಟು ನಾವು ಕಾಂಗ್ರೆಸಿಗರು ಏನು ತಿನ್ನುತ್ತಿದ್ದೇವೆ ಎಂಬುದರ ಮೇಲೆಯೇ ಕಣ್ಣಿಟ್ಟಿದ್ದಾರೆ ಇದೇ ಅವರಲ್ಲಿನ ದೋಷ’ ಎಂದು ಲವ್‍ಲಿ ಜರೆದಿದ್ದಾರೆ.

ಅಷ್ಟೇ ಅಲ್ಲದೇ “ರಾಜಘಾಟ್ ಉಪವಾಸ ವೇದಿಕೆಯಲ್ಲಿ ರಾಹುಲ್ ಗಾಂಧಿ ಜತೆ ಪಕ್ಷದ ಉನ್ನತ ಪದಾಧಿಕಾರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳು ಮಾತ್ರವೇ ಇರಬೇಕೆಂಬುದನ್ನು ಮೊದಲೇ ತೀರ್ಮಾನಿಸಲಾಗಿತ್ತು. ಹಾಗಾಗಿ ಟೈಟ್ಲರ್ ಅವರನ್ನು ವೇದಿಕೆಯಿಂದ ತೆರವು ಗೊಳಿಸಲಾಯಿತು” ಎಂದು ಲವ್ವಿ “ಟೈಟ್ಲರ್ ವಿವಾದ’ಕ್ಕೆ ಉತ್ತರ ನೀಡಿದ್ದಾರೆ!!

ಅಂತೂ ಕಾಂಗ್ರೆಸ್ ನಾಯಕರು ಉಪವಾಸ ಕೈಗೊಳ್ಳುವ ಮುನ್ನ ದಿಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭರ್ಜರಿ ಉಪಾಹಾರ ಸವಿದ ಚಿತ್ರ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಒಟ್ಟಿನಲ್ಲಿ ಉಪವಾಸ ಮಾಡುವ ನಿಟ್ಟಿನಲ್ಲಿ ಭರ್ಜರಿಯಾಗಿ ತಿಂದು ತೇಗಿ ಉಪವಾಸದ ನಾಟಕವಾಡುತ್ತಿರುವ ಕಾಂಗ್ರೆಸ್ಸಿಗರ ಅಸಲಿ ಮುಖ ಬಯಲಾಗಿದ್ದು, ಟ್ವೀಟ್ವರ್ ಮೂಲಕ ಜನತೆ ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ!!

ಮೂಲ: https://www.firstpost.com/india/congress-leaders-caught-feasting-before-rajghat-fast-sambit-patra-terms-rahul-gandhi-led-event-farce-4424091.html

– ಅಲೋಖಾ

Editor Postcard Kannada:
Related Post