X

ಭಾರತದ ವಿರುದ್ಧ ಯುದ್ಧ ಸಾರಲು ಈ ಪಾಕ್ ಉಗ್ರ ಭಾರತದ ಮುಸ್ಲಿಮರನ್ನು ಹೇಗೆ ಬಳಸಿಕೊಂಡಿದ್ದಾನೆ ಗೊತ್ತೇ?! ಬಯಲಾಯಿತು ಸ್ಫೋಟಕ ಸತ್ಯ!!

ಈ ಹಿಂದೆ ರಾಜ್ಯದಲ್ಲಿ ಒಟ್ಟು 19,108 ಮದರಸಾಗಳಿಗೆ ರಾಜ್ಯ ಮದರಸಾ ಮಂಡಳಿ ಮಾನ್ಯತೆ ನೀಡಿದ್ದು, ಇವುಗಳಲ್ಲಿ 16,808 ಮದರಸಾಗಳನ್ನು ತಮ್ಮ ಮಾಹಿತಿ ವಿವರವನ್ನು ಮಂಡಳಿಯ ವೆಬ್‍ಸೈಟ್‍ಗೆ ನೀಡಿತ್ತು!! ಆದರೆ ಸುಮಾರು 2300 ಮದರಸಾಗಳು ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಇದ್ದುದರಿಂದ ಅವುಗಳನ್ನು ನಕಲಿ ಮಸೀದಿಗಳೆಂದು ಸರ್ಕಾರ ಘೋಷಿಸಿತ್ತು!! ಆದರೆ ನಕಲಿ ಮದರಸಾಗಳಿಗೆ ಬೀಗ ಜಡಿದ ನಂತರದಿಂದ ಕೆಲವರು ಮುಸ್ಲಿಂ ವಿರೋಧಿ ಎನ್ನುವ ಪಟ್ಟವನ್ನು ಕಟ್ಟಿ ಬಿಟ್ಟಿದ್ದರು!! ಅಲ್ಲದೆ ರಾಜ್ಯದ ಮುಸ್ಲಿಮರು ರಾಜ್ಯ ಬಿಟ್ಟು ಹೋಗಬೇಕಾಗುತ್ತದೆ ಎಂಬಿತ್ಯಾದಿ ಸುಳ್ಳು ಮಾಹಿತಿಗಳು ಹಬ್ಬುವಂತೆ ಮಾಡಿತ್ತು!! ಈಗಾಗಲೇ ಉತ್ತರ ಪ್ರದೇಶದಲ್ಲಿ ಕೆಲವು ಮದರಸಾಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಸ್ಪಷ್ಟ ನಿದರ್ಶನವೊಂದು ಸಿಕ್ಕಿದ್ದು, ಉಗ್ರರ ಜತೆ ನಂಟು ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಜಾಮಿಯಾ ಅರೇಬಿಯಾ ಮದರಸಾದಲ್ಲಿ ಓದುತ್ತಿದ್ದ 7 ವಿದ್ಯಾರ್ಥಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಈಗಾಗಲೇ ಅಧಿಕಾರಿಗಳು ಬಂಧಿಸಿದ್ದರು!! ಅದರ ಬೆನ್ನಲ್ಲೇ ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು ಭಾರತದ ವಿರುದ್ಧ ಹೋರಾಡಲು ಭಾರತದ ಯುವಕರನ್ನೇ ಬಳಸಲು ತೀರ್ಮಾನಿಸಿದೆ!!

ಹಫೀಜ್ ಸಯೀದ್, ಹೆಸರು ಕೇಳುತ್ತಲೇ ಜಗತ್ತಿನ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದತ್ತ ಬೆರಳು ಮಾಡುತ್ತವೆ. ಕಾರಣ ಲಷ್ಕರ್-ಈ-ತೊಯಿಬಾ ಎಂಬ ಉಗ್ರ ಸಂಘಟನೆಯನ್ನು ಸ್ಥಾಪಿಸಿ ಜಗತ್ತಿನಾದ್ಯಂತದ ದುಷ್ಕøತ್ಯ ಎಸಗಲು ತಯಾರಾದವನು. 2008ರಲ್ಲಿ ಮುಂಬಯಿ ಮೇಲೆ ದಾಳಿ ನಡೆಸಿದ ಈ ಸಂಘಟನೆ ಸುಮಾರು 166 ಅಮಾಯಕರ ಬಲಿ ಪಡೆದಿತ್ತು.
ಈ ದಾಳಿಯಲ್ಲಿ ಅನೇಕ ವಿದೇಶಿಗರೂ ಸಾವಿಗೀಡಾಗಿದ್ದರು. ಈ ಪೈಕಿ ಆರು ಮಂದಿ ಅಮೇರಿಕಾ ನಾಗರಿಕರೂ ಕೂಡ ಹತರಾಗಿದ್ದರು. ಈ ಕಾರಣದಿಂದಲೇ ಅಮೇರಿಕಾವು ಹಫೀಸ್ ಸಯೀದ್ ನನ್ನು ಜಾಗತಿಕ ಮಟ್ಟದಲ್ಲಿ ಉಗ್ರ ಎಂದು ಘೋಷಿಸಿತ್ತು. ಆದ್ದರಿಂದ ಹಫೀಸ್ ಸಯೀದ್ ಮುಖ್ಯಸ್ಥನಾಗಿದ್ದ ಜಮಾತ್ ಉದ್ -ದಾವಾ ಎಂಬ ಸಂಘಟನೆಯನ್ನು ನಿಷೇಧಿಸಲಾಗಿತ್ತು! ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಬೇಕೆಂದು ಒತ್ತಾಯಿಸುತ್ತಿರುವ ಹಫೀಜ್ ಸಯೀದ್ ಪದೇ ಪದೇ ಭಾರತದ ಮೇಲೆ ದಾಳಿ ನಡೆಸಲು ಪ್ರಯತ್ನಿಸುತ್ತಲೇ ಬಂದಿದ್ದಾನೆ. ಜಾಗತಿಕ ಮಟ್ಟದಲ್ಲಿ ನಿಷೇಧಿಸಲಾಗಿದ್ದರು ಪಾಕಿಸ್ತಾನ ಹಫೀಜ್ ಸಯೀದ್‍ಗೆ ಆಶ್ರಯ ನೀಡುತ್ತಲೇ ಬಂದಿದ್ದಕ್ಕೆ ಈಗಾಗಲೇ ಹಲವಾರು ರಾಷ್ಟ್ರಗಳು ವಿರೋಧಿತ್ತಾದರೂ ಪಾಕಿಸ್ತಾನ ಮಾತ್ರ ಕ್ಯಾರೇ ಅನ್ನಲಿಲ್ಲ!! ಇದೀಗ ಉಗ್ರ ಹಫೀಜ್ ಸಹೀದ್ ಭಾರತ ವಿರುದ್ಧ ಭಾರತೀಯರನ್ನೇ ಎತ್ತಿಕಟ್ಟಲು ರೆಡಿಯಾಗಿದ್ದಾನೆ!!

ಭಾರತದ ಯುವಕರನ್ನೇ ಉಗ್ರ ಸಂಘಟನೆಗಳು ಬಳಸಲು ತೀರ್ಮಾನ!!

ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ವಿರುದ್ಧ ಹೋರಾಡಲು ಭಾರತದ ಯುವಕರನ್ನೇ ಉಗ್ರ ಸಂಘಟನೆಗಳು ಬಳಸಲು ತೀರ್ಮಾನಿಸಲಾಗಿತ್ತು. ಅದರಂತೆ ಭಾರತದ ಹಲವು ಮದರಸಾಗಳಿಂದ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಜಬೀವುಲ್ಲಾ ಬಾಯಿಬಿಟ್ಟಿದ್ದಾನೆ. ಮೊದಲು ಮದರಸಾಗಳಲ್ಲಿರುವ ಯುವಕರನ್ನು ನೇಮಕ ಮಾಡಿಕೊಳ್ಳುವುದು. ಬಳಿಕ ಅವರನ್ನು ಲಾಹೋರಿನ ತರಬೇತಿ ಕೇಂದ್ರಕ್ಕೆ ಕಳಿಸುವುದು. ಅಲ್ಲಿ ಹಫೀಜ್ ಸಯೀದ್ ಯುವಕರನ್ನು ಪ್ರಚೋದಿಸಿ ಭಾರತದ ವಿರುದ್ಧವೇ ಹೋರಾಟ ಮಾಡಲು ಸ್ಫೂರ್ತಿ ನೀಡುತ್ತಿದ್ದ ಎಂದು ಜಬೀವುಲ್ಲಾ ತಿಳಿಸಿದ್ದಾನೆ.

ಅಷ್ಟೇ ಅಲ್ಲ, ತರಬೇತಿ ವೇಳೆ ಆಧುನಿಕ ತಂತ್ರಜ್ಞಾನದ ಬಳಕೆ, ಹೆಚ್ಚಿನ ತೂಕ ಹೊತ್ತು ದುರ್ಗಮ ಹಾದಿಯಲ್ಲಿ ಸಂಚರಿಸುವುದು, ಹಿಮ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವುದು, ಶಸ್ತ್ರಾಸ್ತ್ರ ಬಳಸುವುದು ಸೇರಿ ಹಲವು ವಿಧದಲ್ಲಿ ಮದರಸಾದಿಂದ ನೇಮಕವಾದ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಜಬೀವುಲ್ಲ ಹೇಳಿದ್ದಾನೆ. ಉಗ್ರ ಜಬೀವುಲ್ಲಾನ ಈ ಹೇಳಿಕೆಯಿಂದ ಭಾರತದಲ್ಲಿರುವ ಮದರಸಾಗಳು ಉಗ್ರ ಸಂಘಟನೆಗಳಿಗೆ ಯುವಕರನ್ನು ಸರಬರಾಜು ಮಾಡುವ ಕುರಿತು ಅನುಮಾನ ಮೂಡುತ್ತಿದ್ದು, ಇಂತಹ ಮದರಸಾಗಳನ್ನು ಹುಡುಕಿ ನಿರ್ನಾಮ ಮಾಡಬೇಕು. ಇಲ್ಲದಿದ್ದರೆ, ಇವರೇ ಮುಂದೆ ದೇಶಕ್ಕೆ ಕಂಟಕವಾಗುವ ಲಕ್ಷಣಗಳು ಗೋಚರಿಸಿವೆ.!! ಈಗಾಗಲೇ ಹಲವಾರು ನಕಲಿ ಮದರಾಸಗಳನ್ನು ಮುಚ್ಚಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರವಹಿಸುವುದು ಅಗತ್ಯ!! ಒಂದು ವೇಳೆ ಭಾರತದ ವಿರುದ್ಧ ಯಾರೂ ತಾಕರಾರು ಎತ್ತಿದರೂ ಅವರಿಗೆ ಉಳಿಗಾಲವಿಲ್ಲ ಎಂಬುವುದನುಲ್ಲೊಮ್ಮೆ ಅರ್ಥಮಾಡಿಕೊಂಡರೆ ಒಳಿತು!!

  • ಪವಿತ್ರ
Editor Postcard Kannada:
Related Post