X
    Categories: ಅಂಕಣ

ಭಾರತವನ್ನ ಇಸ್ಲಾಮೀಕರಣ ಮಾಡಲು ಪಾಕಿಸ್ತಾನ ಏನು ಮಾಡುತ್ತಿದೆ ಗೊತ್ತಾ? ಒಬ್ಬ ಮುಸಲ್ಮಾನನಾಗಿ ನಾನು ಇದನ್ನ ವಿರೋಧಿಸುತ್ತೇನೆ!! : ಅಶ್ರಫ್ ಅಬ್ಬಾಸ್

ನಾನು ಇದಕ್ಕೂ ಮೊದಲೇ ಪಾಕಿಸ್ತಾನದ ಕುತಂತ್ರದ ಬಗ್ಗೆ ಬಹಳ ವಿಚಾರ ಮಾಡಿದ್ದೆ ಹಾಗು ಭಾರತದಲ್ಲಿರೋ ಮುಸಲ್ಮಾನರು ಯಾಕೆ ಪಾಕಿಸ್ತಾನಕ್ಕೆ ತಮ್ಮ ಬೆಂಬಲ ಸೂಚಿಸುತ್ತಿರುತ್ತಾರೆ, ಭಾರತ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಸೋತರೆ ಪಟಾಕಿ ಸಿಡಿಸುತ್ತಾರೆ ಅಂತ ಬಹಳ ಯೋಚನೆ ಮಾಡಿದ್ದೆ.

ಆದರೆ ನಂತರದ ದಿನಗಳಲ್ಲಿ ನನಗೆ ಈ ಷಡ್ಯಂತ್ರದ ಅರಿವಾಗಿತ್ತು. ಪಾಕಿಸ್ತಾನದ ಹತ್ತಿರ ಯಾವ ಪರಮಾಣು ಬಾಂಬ್ ಇದ್ದರೂ ಅದು ಠುಸ್ ಆಗುತ್ತೆ ಅನ್ನೋದು ಅವರಿಗೆ ಗೊತ್ತಿದೆ ಆದರೆ ಇನ್ನೂ ಅವರು ಭಾರತವನ್ನ ಜಿಹಾದ್ ಮೂಲಕ ಗೆಲ್ಲುತ್ತೇವಂತ ಅದ್ಹೇಗೆ ಯೋಚಿಸುತ್ತಾರೆ ಅನ್ನೋದು ನನಗೆ ಅರ್ಥವಾಗಿರಲಿಲ್ಲ.

ಆದರೆ ಇದರ ಬಗ್ಗೆ ಸ್ವಲ್ಪ analyze ಮಾಡಲು ಕೂತಾಗ ಇದರ ಒಳ ಅರ್ಥ ನನಗೆ ಒಂದೊಂದಾಗಿ ಅರ್ಥವಾಯಿತು.

ಭಾರತದಲ್ಲಿರೋ 20 ಕೋಟಿ ಮುಸಲ್ಮಾನರನ್ನ ಬಳಸಿಕೊಂಡೇ ಭಾರತವನ್ನ ಪಾಕಿಸ್ತಾನವಾಗಿ ಮಾಡುವ ಹುನ್ನಾರ ಪಾಕಿಸ್ತಾನ ಮಾಡುತ್ತಿದೆ.

ಇದನ್ನ ನಾನು ಹೇಳಿದರೆ ನನ್ನ ಮುಸ್ಲಿಂ ಮಿತ್ರರೇ ನನಗೆ ವಿರೋಧ ಮಾಡಿದ್ದರು. ಆದರೆ ಈ ಮಾತನ್ನ ನಾನು ಹೇಳಿಲ್ಲ,

ಈ strategic doctrine ಅಂದರೆ ಈ ಕುತಂತ್ರದ ಯುದ್ಧತಂತ್ರದ ಬಗ್ಗೆ 80 ರ ದಶಕಲ್ಲಿಯೇ ಪಾಕಿಸ್ತಾನದ ಜನರಲ್ ಜಿಯಾ ಉಲ್ ಹಕ್ ಹೇಳಿದ್ದ.

ಆತ ಹೇಳ್ತಾನೆ “ಪಾಕಿಸ್ತಾನದಲ್ಲಿನ ಮುಸಲ್ಮಾನರಿಗಿಂತಲೂ ಭಾರತದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗುತ್ತೊ ಆಗ ನಮ್ಮ ದೇಶದ ಸೈನಿಕರನ್ನ ಭಾರತದ
ವಿರುದ್ಧ ಹೋರಾಟಕ್ಕೆ ಕಳಿಸುವ ಅವಶ್ಯಕತೆಯೇ ಇರುವುದಿಲ್ಲ”

ಆಗಿನಿಂದ ಇವತ್ತಿನವರೆಗೂ ಭಾರತದ ಮುಸಲ್ಮಾನರಿಗೆ ತಲೆಕೆಡಿಸುವ ಕೆಲಸವನ್ನ ಪಾಕಿಸ್ತಾನ ಮಾಡುತ್ತಲೇ ಬಂದಿದೆ. ಈಗಿರುವ ಜನಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಹತ್ತು ಪ್ರತಿಶತ ಮುಸಲ್ಮಾನರು, ಅಂದರೆ ಸುಮಾರು ಎರಡು ಕೋಟಿ ಮುಸಲ್ಮಾನರಾದರೂ ಪಾಕಿಸ್ತಾನದ ಟ್ರ್ಯಾಪ್ ಗೆ ಬಲಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಇದಕ್ಕೆ ನಮ್ಮನ್ನಾಳಿದ್ದ ಕಾಂಗ್ರೆಸ್ ಕೂಡ ಸಹಕರಿಸಿದೆ.

ಅಂದರೆ ಭಾರತೀಯ ಸೈನಿಕರ ಸಂಖ್ಯೆಗಿಂತ 15-20% ಹೆಚ್ಚು ಪ್ರತಿಶತ ಜನರು.

ಒಂದು ವೇಳೆ ಪಾಕಿಸ್ತಾನ ಇವರನ್ನೇನಾದರೂ ಭಾರತದಲ್ಲಿ ದಂಗೆಯೆಬ್ಬಿಸೋಕೆ ಸೂಚನೆ ಕೊಟ್ಟರೆ ಭಾರತದ ಗತಿಯೇನಾಗಬಹುದು?

ಅಷ್ಟಕ್ಕೂ ಉಳಿದ 18 ಕೋಟಿ ಮುಸಲ್ಮಾನರು ಇದರ ವಿರುದ್ಧ ಹೋರಾಟ ಮಾಡೋಕೆ ಮುಂದಾಗ್ತಾರೆ ಅನ್ನೋದೂ ಸಾಧ್ಯವಿಲ್ಲದ ಮಾತು. ಅವರೆಲ್ಲ ಮೂಕ ಪ್ರೇಕ್ಷಕರಾಗಿ ನಿಲ್ತಾರೆ ಹೊರತು ವಿರೋಧ ಮಾಡಲಿಕ್ಕಂತೂ ಮುಂದೆ ಬರಲ್ಲ ಅಥವ ಮುಸಲ್ಮಾನರ ಅತ್ಯಾಚಾರ ಆಗ್ತಿದೆ ಅಂತ ಬೊಬ್ಬೆ ಹಾಕುತ್ತ ಇಡೀ
ವಿಶ್ವಕ್ಕೆ ತಾವು ಭಾರತದಲ್ಲಿ ಸಂತ್ರಸ್ತರಾಗಿ ಹಿಂದುಗಳಿಗೆ ಬಲಿಯಾಗುತ್ತಿದ್ದೇವೆ ಅನ್ನೋ ಸಂದೇಶವನ್ನ ಸಾರುವ ಕೆಲಸಕ್ಕೆ ಕೈ ಹಾಕಬಹುದು.

ಇದರಲ್ಲಿ ಒಂದೆರಡು ಪ್ರತಿಶತ ಜನ ಮುಸಲ್ಮಾನರು ವಿರೋಧ ವ್ಯಕ್ತಪಡಿಸಿದರೂ ಅದು 1947 ರ ಸಮಯದಲ್ಲಿ ವಿರೋಧಿಸಿದ್ದ ದೇಶಭಕ್ತ ಮುಸಲ್ಮಾನರ ಪರಿಸ್ಥಿತಿಯೇ ನಮ್ಮ(ನನ್ನದೂ)ದಾಗಬಹುದು. ಈ ಹಿಂದಿನ ಕೆಲ ಘಟನೆಗಳನ್ನ ಸೂಕ್ಷ್ಮವಾಗಿ ಗಮನಿಸಿ ನೋಡಿ, ಒಂದಿಲ್ಲ ಒಂದು ಕಾರ್ಯಕ್ರಮದಲ್ಲಿ ಅಥವ ಪ್ರತಿಭಟನೆಯಲ್ಲಿ ಲಕ್ಷಾಂತರ ಮುಸಲ್ಮಾನರು ಒಂದೆಡೆ ಸೇರಿ ದಂಗೆಯೆಬ್ಬಿಸಿದ್ದನ್ನ ನೀವು ನೋಡಿದ್ದೀರ.

ಹಿಂಸೆಯನ್ನ ಭುಗಿಲೆಬ್ಬಿಸಿ ಮುಂಬೈನಲ್ಲಿ ಅಮರ್ ಜವಾನ್ ಒಡೆದುಹಾಕಿದ್ದನ್ನೂ ಗಮನಿಸಿರಬಹುದು.

ಹಿಂದೂ ಹಬ್ಬಗಳಲ್ಲಿ ಅಥವ ಮೊಹಮ್ಮದ್ ಪೈಗಂಬರ್ ವಿಷಯವನ್ನೆತ್ತಿಕೊಂಡು ವಿರೋಧ ಮಾಡಿದ್ದನ್ನ ನೀವು ನೋಡಿರಬಹುದು.

ಈ ಎಲ್ಲಾ ಬೆಳವಣಿಗೆಗಳು ಬ್ರೈನವಾಶ್ ಆಗಿರುವ ಜನಗಳಿಂದಲೇ ಆಗುತ್ತಿರೋದು. ಇದರಲ್ಲಿ ‘ವಹಾಬಿಸಂ’ ಪಾತ್ರವೂ ಬಹುಮಖ್ಯದ್ದಾಗಿದೆ.

ಇಷ್ಟಾಗಿತ್ತಿದ್ದರೂ ಇವರನ್ನ ವಿರೋಧ ಮಾಡೋಕೆ ನಮ್ಮ ಜನಗಳು ಒಂದು ಹೆಜ್ಜೆಯನ್ನಾದರೂ ಮುಂದಿಟ್ಟಿಲ್ಲ ಅನ್ನೋದೇ ಖೇದಕರ ವಿಷಯ.

ಮೋದಿ ಅಧಿಕಾರಕ್ಕೆ ಬಂದನಂತರ ಇವರೆಲ್ಲಾ ಬಾಲ ಮುದುರಿಕೊಂಡಿರ್ತಾರೆ ಅಂದಕೊಂಡಿದ್ದೆ ಆದರೆ ಇವರು ಮೊದಲಿಗಿಂತಲೂ ಹೆಚ್ಚು ಉಪಟಳ ಮಾಡ್ತಿರೋದನ್ನ ಪಾಕಿಸ್ತಾನದ ಭಯೋತ್ಪಾದಕರ ಜೊತೆಗೆ ನಿರಂತರ ಸಂಪರ್ಕದಲ್ಲಿರೋ ರೋಹಿಂಗ್ಯಾ ಮುಸಲ್ಮಾನರಿಗೆ ಭಾರತದಲ್ಲಿ ಶರಣಾಗತಿ ನೀಡಿ ಅನ್ನೋದನ್ನ ನೋಡಿದರೇ ಅರ್ಥವಾಗುತ್ತೆ.

ಇವರ ಈ ಕುತಂತ್ರಕ್ಕೆ ಬುದ್ಧಿಜೀವಿಗಳು, ಸೆಕ್ಯೂಲರ್ ಪಾರ್ಟಿಗಳೂ ಕೈ ಜೋಡಿಸಿ ನಿಂತುಬಿಟ್ಟಿವೆ.

ಇದಷ್ಟೇ ಅಲ್ಲದೆ ಕೇರಳದಲ್ಲಿ ಇಲ್ಲೀವರೆಗೂ ಅನೇಕ ಜನ ಮುಸಲ್ಮಾನರು ಐಸಿಸ್ ಸಂಘಟನೆಗೆ ಸೇರಿದ್ದಾರೆ ಅನ್ನೋ ಮಾಹಿತಿಯನ್ನೂ ಇತ್ತೀಚೆಗಷ್ಟೇ ನಾವು ಕೇಳಿದ್ದೇವೆ,

ಅಲ್ಲೆಲ್ಲೋ ಉಗ್ರ ಲಾಡೆನ್ ಸತ್ತರೆ ಇಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಸಲ್ಮಾನರು ಜುಲೂಸ್ ತೆಗಿತಾರೆ, ಅಲ್ಲೆಲ್ಲೋ ಮೈನ್ಮಾರಿನಲ್ಲಿ ದಂಗೆಯಾದರೆ ಅಲ್ಲಿನ ಮುಸಲ್ಮಾನರಿಗೆ ನಮ್ಮ ಬೆಂವಲವಿದೆಯಂತ ಇಲ್ಲಿನ ಮುಸಲ್ಮಾನರು ದಂಗೆಯೇಳುತ್ತಾರೆ. ಇದು ಹೀಗೆ ಮುಂದುವರೆದರೆ ನಮ್ಮ ದೇಶದ ಭದ್ರತೆ ಏನಾಗಬಹುದು?

ಕಳ್ಳ ಬೆಕ್ಕು ಹಾಲು ಕುಡಿಯೋಕೆ ಬಂದಾಗಲೇ ಅದರ ಬಾಯನ್ನ ಸುಡಬೇಕು ಇಲ್ಲವಾದರೆ ಒಮ್ಮೆ ರುಚಿ ನೋಡಿದ ಬೆಕ್ಕು ದಿನಬೆಳಗಾದರೆ ಕದ್ದು ಹಾಲನ್ನು ಕುಡಿಯೋ ಚಟಕ್ಕೆ ಬಿದ್ದು ಬಿಡುತ್ತೆ.

ಈಗಲಾದರೂ ದೇಶಭಕ್ತ ಜನರು, ಹಿಂದೂ ಬಾಂಧವರು ಹಾಗು ನಮ್ಮ ಮುಸ್ಲಿಂ ಜನರ ಇದರ ವಿರುದ್ಧ ಜಾಗೃತವಾಗಬೇಕಿದೆ, ನಾವು ಹುಟ್ಟಿದ್ದು ಈ ದೇಶದಲ್ಲಿ, ನಾಳೆ ಮಣ್ಣಲ್ಲಿ ಮಣ್ಣಾಗಿ ಹೋಗೋದೂ ಇದೇ ದೇಶದಲ್ಲಿ.

ಸಾವಿರಾರು ವರ್ಷಗಳ ಪರಂಪರೆ, ಇತಿಹಾಸವಿರೋ ನಮ್ಮ ರಾಷ್ಟ್ರದ ಅಸ್ಮಿತೆಯನ್ನ ನಾವು ಮೊದಲು ಉಳಿಸಿಕೊಳ್ಳಬೇಕು ಹೊರತು ಭಾರತವನ್ನೇ ಇಸ್ಲಾಮೀಕರಣ ಮಾಡುತ್ತೇನೆ ಅಂತ ಹೊರಟರೆ ಭಾರತ ಮತ್ತೊಂದು ಪಾಕಿಸ್ತಾನವಾಗಿ ಭಯೋತ್ಪಾದಕ ರಾಷ್ಟ್ರವಾಗಿ ಪರಿವರ್ತಿತವಾಗುವುದರಲ್ಲಿ ಸಂಶಯವೇ ಇಲ್ಲ.

ಎಷ್ಟೋ ಜನ ನನ್ನ ಮುಂಚಿನ ಅಂಕಣಗಳಲ್ಲಿ ನೀನೊಬ್ಬ ಮುಸಲ್ಮಾನನಾಗಿ ಈ ರೀತಿ ನಿನ್ನ ಧರ್ಮವನ್ನೇ ಪ್ರಶ್ನೆ ಮಾಡುತ್ತಿಯಲ್ಲ ನಿನಗೆ ನಾಚಿಕೆ ಆಗ್ಬೇಕು ಅಂತಲೂ ಜರಿದಿದ್ದಾರೆ ಆದರೆ ಅದ್ಯಾವುದಕ್ಕೂ ನಾನು ತಲೆಕೆಡಿಸಿಕೊಳ್ಳಲ್ಲ.

ನನಗೆ ನನ್ನ ರಾಷ್ಟ್ರ ಹಾಗು ಇಲ್ಲಿನ ಪರಂಪರೆ ಮುಖ್ಯ ಹೊರತು ಭಾರತವನ್ನ ಘಜವಾ- ಎ- ಹಿಂದ್ ಮಾಡಿ ಭಾರತವನ್ನ ಮತ್ತೊಂದು ಪಾಕಿಸ್ತಾನ ಅಥವ ಅಫ್ಘಾನಿಸ್ತಾನ ಮಾಡಿ ಜಗತ್ತಿನ ಕೈಯಿಂದ ಛೀ ಥೂ ಅಂತ ಉಗಿಸಿಕೊಳ್ಳೋದಕ್ಕೆ ಭಾರತೀಯನಾಗಿ ನಾನು ಯಾವತ್ತಿಗೂ ಬಿಡಲಾರೆ.

ಅಷ್ಟಕ್ಕೂ ಭಾರತದಲ್ಲಿನ ನಾವು ಮುಸಲ್ಮಾನರೇನು ಅರಬ್ ನಿಂದ ವಲಸೆ ಬಂದ ನಿಜವಾದ ಮೂಲ ಮುಸಲ್ಮಾನರಾ? ನಮ್ಮ ಪೂರ್ವಜರು ಹಿಂದುಗಳಾಗಿದ್ದು ಕಾರಣಾಂತರಗಳಿಂದ, ವಿದೇಶಿ ಮುಸಲ್ಮಾನ ಆಕ್ರಮಣಕಾರರಿಂದ ಮತಾಂತರವಾದವರು. ಇವತ್ತಲ್ಲ ನಾಳೆ ನಮ್ಮ ಮುಸಲ್ಮಾನ ಬಂಧುಗಳಿಗೂ ಈ ವಿಷಯದ ಅರಿವಾಗಿ ತಾವು ಮಾಡುತ್ತಿರೋ ಕೃತ್ಯಗಳ ಬಗ್ಗೆ ಎಚ್ಚೆತ್ತುಕೊಂಡು ಈ ದೇಶಕ್ಕಾಗಿ ಬದುಕುವದನ್ನ ಕಲಿಯುತ್ತಾರೆ ಅನ್ನೋ ಭರವಸೆಯಿದೆ.

ಜೈ ಹಿಂದ್,
ಭಾರತ್ ಮಾತಾ ಕೀ ಜೈ

– ಅಶ್ರಫ್ ಅಬ್ಬಾಸ್

Editor Postcard Kannada:
Related Post