ಕಾಂಗ್ರೆಸ್ನ ಅಧ್ಯಕ್ಷ ರಾಹುಲ್ ಗಾಂಧೀ ಎಡವಟ್ಟು ಮಾಡೋಕಂತಾನೇ ಹುಟ್ಟಿದ್ದಾರೆ ಅಂತ ಅನಿಸುತ್ತದೆ!! ಯಾಕೆಂದರೆ ಇದುವರೆಗೆ ಯಾವ ವಿಚಾರವನ್ನು ಮಾತನಾಡಿದರು ಸಹ ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟುಮಾಡಿ ಎಲ್ಲರನ್ನೂ ನಗೆಪಾಡಲಿಗೀಡಾಗುವಂತೆ ಮಾಡುವುದು ರಾಹುಲ್ಗಾಂಧಿಯವರಿಗೆ ಹುಟ್ಟಿನಿಂದಲೇ ಬಂದಿದೆ ಅಂತನಿಸುತ್ತದೆ!! ಇದೀಗ ಇಂತಹ ಎಡವಟ್ಟು ಮಹಾರಾಯನ ಬಗ್ಗೆ ಬಿಜೆಪಿ ಮುಖಂಡ ಸುಬ್ರಮಣಿಯನ್ಸ್ವಾಮಿ ಮಹತ್ವದ ನಿರ್ಧಾರವನ್ನೊಂದು ಬಿಚ್ಚಿಟ್ಟಿದ್ದಾರೆ!!
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ ಎಸ್ ವಿರುದ್ಧ ಹೇಳಿಕೆ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಹೇಳಿದ್ದು, ಇದಾಗಲೇ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ದಾಖಲಾಗಿತ್ತು!! ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸುವ ಅರ್ಹತೆಯನ್ನು ಹೊಂದಿಲ್ಲ ಎಂಬ ಸ್ಪೋಟಕ ಸತ್ಯವನ್ನು ಸುಬ್ರಮಣಿಯನ್ ಸ್ವಾಮಿ ಬಿಚ್ಚಿಟ್ಟಿದ್ದಾರೆ!!
ಮಹಾತ್ಮಾ ಗಾಂಧಿಜೀಯವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿ, ಮಾನನಷ್ಟ ಮೊಕ್ಕದಮ್ಮೆ ಎದುರಿಸಲು ಕೋರ್ಟ್ಗೆ ಹಾಜರಾಗಿದ್ದ ರಾಹುಲ್ ಗಾಂಧಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಮಹತ್ವದ ಸತ್ಯವನ್ನು ಬಿಚ್ಚಿಟ್ಟಿದ್ದಾರೆ!! ಐಪಿಸಿ ಸೆಕ್ಷನ್ 499 ಮತ್ತು 500 ಕ್ರಿಮಿನಲ್ ಡಿಫಮೇಷನ್ ಪ್ರಕರಣ ರಾಹುಲ್ ಗಾಂಧಿ ವಿರುದ್ಧ ಆರ್ ಎಸ್ಎಸ್ ಕೇಸು ದಾಖಲಿಸಿದ್ದು ಈ ಪ್ರಕರಣದ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ `ಈ ರೀತಿಯಾಗಿ ಸುಖಾಸುಮ್ಮನೆ ಆರ್ಎಸ್ಎಸ್ನ್ನು ದೂರಿರುವ ಕಾರಣ ರಾಹುಲ್ ಗಾಂಧಿ ಜೈಲಿಗೆ ಹೋಗಲೇ ಬೇಕು. ಯಾವುದೇ ಆಧಾರಗಳಿಲ್ಲದೇ ಒಂದು ವ್ಯಕ್ತಿ ಇಂತಹ ಸಂಘಟನೆಯ ವಿರುದ್ಧ ಕೊಲೆ ಆರೋಪ ಹೊರಿಸಿರುವ ರಾಹುಲ್ ಗಾಂಧಿ ದೊಡ್ಡ ತಪ್ಪು ಮಾಡಿದ್ದಾರೆ. ಈ ಕುರಿತಾಗಿ ಕೋರ್ಟ್ ನಲ್ಲಿ ತೀವ್ರ ವಿಚಾರಣೆ ನಡೆಸಬೇಕು. ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗದಿದ್ದರೇ ಬಂಧಿಸಿ ಕರೆದುಕೊಂಡು ಬಂದು, ಕೋರ್ಟ್ ಗೆ ಹಾಜರುಪಡಿಸಬೇಕು ಎಂದು ರಾಹುಲ್ ಗಾಂಧಿಯನ್ನು ತೀವ್ರ ವಿರೋಧಿಸಿ ಹೇಳಿಯನ್ನು ನೀಡಿದ್ದಾರೆ!! ಇಂಡಿಯನ್ ಪೀನಲ್ ಕೋಡ್ 499 ಹಾಗೂ 500 ರ ಪ್ರಕಾರ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಈ ರೀತಿ ಅಪವಾದ ಹೊರಿಸಿದರೆ 2 ವರ್ಷ ಜೈಲು ಮತ್ತು ದಂಡ ವಿಧಿಸಬೇಕು ಎಂದಿದ್ದಾರೆ.. . ಅಲ್ಲದೇ ಜೈಲು ಶಿಕ್ಷೆಯನ್ನು ಹೆಚ್ಚಿಸಲುಬಹುದು. ಒಂದು ವೇಳೆ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ಜೈಲು ಪಾಲಾದರೆ ಅಥವಾ ದಂಡಕ್ಕೆ ಕಾರಣರಾದರೇ ಅವರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡು ಬಿಡುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಅದಲ್ಲದೆ ದೂರುದಾರನ ಪರವಾಗಿ ವಾದ ಮಾಡಿದ ವಕೀಲರು ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ಆಗಬೇಕೆಂದು ಕೋರ್ಟ್ನಲ್ಲಿ ಮನವಿ ಮಾಡಿದ್ದಾರೆ. “ರಾಹುಲ್ ಗಾಂಧಿಯವರು ಬಹಿರಂಗ ಸಮಾವೇಶವೊಂದರಲ್ಲಿ ಆಧಾರ ರಹಿತವಾದ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಯು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೋಟ್ಯಾಂತರ ಕಾರ್ಯಕರ್ತರ ಭಾವನೆಗಳಿಗೆ ಘಾಸಿಯುಂಟಾಗಿದೆ. ಮಾತ್ರವಲ್ಲದೆ ದೇಶದ ಇತಿಹಾಸವನ್ನು ತಿರುಚಿ ಸುಳ್ಳು ಮಾಹಿತಿಯನ್ನು ಜನರಿಗೆ ನೀಡುವ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದು ಇದು ದೊಡ್ಡ ಅಪರಾಧ ಎಂದಿದ್ದಾರೆ!! ರಾಹುಲ್ ಗಾಂಧಿಯವರ ಇಂತಹ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯ ಅವರಿಗೆ ತಕ್ಕ ಶಿಕ್ಷೆಯನ್ನು ನೀಡಬೇಕಾಗಿದೆ” ಎಂದು ವಾದ ಕೂಡಾ ಮಾಡಿದ್ದಾರೆ!!
ಇದಕ್ಕುತ್ತರಿಸಿದ ರಾಹುಲ್ ಗಾಂಧಿಯವರು “ನಾನು ತಪ್ಪಿತಸ್ಥನಲ್ಲ” ಎಂದು ನ್ಯಾಯಾಲಯಕ್ಕೆ ಹೇಳಿಕೆಯನ್ನು ನೀಡಿದ್ದಾರೆ. ಆರ್ಎಸ್ಎಸ್ಗೆ ಇದೇ ಮೊದಲ್ಲದೆ ಇದಕ್ಕಿಂತ ಮುಂಚುತವಾಗಿಯೂ ಆರ್ಎಸ್ಎಸ್ ಮಹಿಳೆಯರ ಬಗ್ಗೆ ನಿರ್ಧಾಕ್ಷಿಣವಾಗಿ ಮಾತನಾಡಿದ್ದಾರೆ!! ಈ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹಿಳೆಯರು ಚಡ್ಡಿ ಹಾಕುತ್ತಾರಾ ಎಂಬ ನೀಚ ಪ್ರಶ್ನೆಯನ್ನು ಕೇಳಿದ್ದ ರಾಹುಲ್ ಗಾಂಧಿಯ ವಿರುದ್ಧವೂ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸಂಘದ ಪರವಾಗಿ ಕಠಿಣ ಸಾಕ್ಷ್ಯಾಧಾರಗಳು ಇದ್ದು, ರಾಹುಲ್ ಗಾಂಧಿ ಜೈಲುಪಾಲಾಗುವ ಸಾಧ್ಯತೆಯೂ ಎದುರಾಗಿದೆ!! ಇದೀಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಹುಲ್ ಗಾಂದಿಗೆ ಜೈಲುಪಾಲಾಗುವ ಸಾಧ್ಯತೆ ಹೆಚ್ಚಾಗಿದೆ ಅಂತನಿಸುತ್ತಿದೆ!!
source:
republic
tulunadunews.com
- ಪವಿತ್ರ