ಹಾಗೋ ಹೀಗೋ ಕೊನೆಗೂ ಭಾರತೀಯ ಜನತಾ ಪಕ್ಷದ ೨ನೇ ಸುತ್ತಿನ ಅಭ್ಯರ್ಥಿ ಗಳ ಪಟ್ಟಿಯನ್ನು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಬಿಡುಗಡೆಗೊಳಿಸಿದ್ದಾರೆ. ಇಂದು ದೆಹಲಿಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ.ನಡ್ಡಾ ಕರ್ನಾಟಕ ವಿಧಾನಸಭಾ ಚುನಾವಣೆಯ ಬಿಜೆಪಿ ಯ ೨ನೇ ಪಟ್ಟಿ ಯನ್ನು ಬಿಡುಗಡೆಗೊಳಿಸಿ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಬಹಳ ಕಾತರದಿಂದ ಕಾಯುತ್ತಿದ್ದ ಬಿಜೆಪಿ ಅಭ್ಯರ್ಥಿಗಳ ಹೆಸರು ಇದೀಗ ಘೋಷಣೆಯಾಗಿದ್ದು , ಇನ್ನೇನಿದ್ದರು ಪಕ್ಷದ ಪ್ರಚಾರ ಭರ್ಜರಿಯಾಗಿ ನಡೆಯಲಿದೆ.!
ಯಾವ್ಯಾವ ಕ್ಷೇತ್ರ ಯಾರ ಹೆಗಲಿಗೆ..?!
ಟಿಕೆಟ್ ಅಂತಿಮವಾಗುತ್ತಿದ್ದಂತೆ ಆಯಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಯಾಕೆಂದರೆ ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಈಗಾಗಲೇ ಕಿತ್ತಾಟ ಆರಂಭವಾಗಿದ್ದು, ಟಿಕೆಟ್ ವಂಚಿತ ಮುಖಂಡರು ಪಕ್ಷದ ವಿರುದ್ಧವೇ ತಿರುಗಿ ಬಿದ್ದು, ಪಕ್ಷದ ಸೋಲಿಗೆ ತೊಡೆತಟ್ಟಿದ್ದಾರೆ. ಆದರೆ ಬಿಜೆಪಿಯಲ್ಲಿ ಹೀಗಾಗಬಾರದು ಎಂಬ ಕಾರಣಕ್ಕಾಗಿಯೇ ಸ್ಥಳೀಯವಾಗಿ ಯಾವ ಮುಖಂಡನ ವರ್ಚಸ್ಸು ಹೆಚ್ಚಿದೆ ಎಂಬುವುದನ್ನು ಸರ್ವೆ ಮಾಡಿರುವ ಅಮಿತ್ ಷಾ ಟೀಂ , ಎಲ್ಲಾ ಅರಿತುಕೊಂಡು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆ ಮಾಡಿದ್ದಾರೆ.!
arjun