X

ಕೊನೆಗೂ ಶ್ರೀರಾಮುಲುವಿಗೆ ಜೈ ಎಂದ ಮಾಣಿಕ್ಯ!! ಬಳ್ಳಾರಿಗೂ ಲಗ್ಗೆ ಇಟ್ಟ ಕಿಚ್ಚ!!

ರಾಜ್ಯದಲ್ಲಿ ಚುನಾವಣಾ ಕಾರ್ಯ ರಂಗೇರುತ್ತಿದ್ದು ಇನ್ನು ಚುನಾವಣೆಗೆ ಬೆರಳೆಣಿಯಷ್ಟು ದಿನಗಳು ಮಾತ್ರ ಬಾಕಿ ಇದೆ!! ಈಗಾಗಲೇ ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧಿಸುತ್ತಿದ್ದು ಕಾಂಗ್ರೆಸ್‍ನಿಂದ ಸಿಎಂ ಸಿದ್ದರಾಮಯ್ಯನವರು ಕಣಕ್ಕಿಳಿದ್ದು ಇದೀಗ ಇಡೀ ರಾಜ್ಯದ ಕಣ್ಣು ಬಾದಾಮಿ ಹಾಗೂ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೇಲಿದೆ!! ಅದಲ್ಲದೆ ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲಾ ಕಾಂಗ್ರೆಸ್ ತೀವ್ರ ಮುಖಭಂಗಕ್ಕೀಡಾಗುತ್ತಿದೆ!! ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಹಲವು ವಿಚಾರಗಳಿಂದ ಗಮನ ಸೆಳೆದಿದ್ದು, ಬಾದಾಮಿ ಮೊಳಕಾಲ್ಮೂರು ಕ್ಷೇತ್ರವು ಹೈವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿದೆ. ಸ್ಟಾರ್ಗಳು ಅಖಾಡಕ್ಕಿಳಿದು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ!! ಇದೀಗ ಸಿಎಂ ಸಿದ್ದರಾಮಯ್ಯನವರ ಪರ ಪ್ರಚಾರಕ್ಕೆಂದು ಬಂದ ನಟ ಸುದೀಪ್ ಇದೀಗ ಸಿಎಂರನ್ನು ಬಿಟ್ಟು ಶ್ರೀರಾಮುಲು ಅವರ ಪರ ಪ್ರಚಾರಕ್ಕೆ ತೆರಳಿದ್ದಾರೆ!!

ರಾಮುಲು ಪ್ರಚಾರಕ್ಕೆ ಬಂದ ಮಾಣಿಕ್ಯ!!

ಮೊಳಕಾಲ್ಮೂರು ಕ್ಷೇತ್ರಕ್ಕೆ ಇತ್ತೀಚೆಗೆ ಚಿತ್ರನಟರ ದಂಡೇ ಹರಿದು ಬರ್ತಿದೆ. ಈಗಾಗಲೇ ನಟ ಯಶ್ ಭರ್ಜರಿ ರೋಡ್ ಶೋ ನಡೆಸಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಚಿತ್ರನಟ ಸುದೀಪ್ ಕೂಡ ಬಹಿರಂಗ ಸಭೆ ನಡೆಸಲಿದ್ದಾರೆ. ನಾಯಕನಟ್ಟಿಯ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಬೆಳಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಲಿರೋ ಸುದೀಪ್, 11 ಗಂಟೆಗೆ ಕೊಂಡ್ಲಹಳ್ಳಿ, 12 ಗಂಟೆಗೆ ಮೊಳಕಾಲ್ಮೂರು, ನಂತರ 12.45 ಕ್ಕೆ ರಾಂಪುರದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ.

ಸುದೀಪ್‍ಗೆ ಮಾಜಿ ಸಂಸದೆ ಜೆ. ಶಾಂತ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಸಾಥ್ ನೀಡಲಿದ್ದು, ನಾಯಕ ಸಮುದಾಯ ಹೆಚ್ಚಾಗಿರೋ ಮೊಳಕಾಲ್ಮೂರು ಕ್ಷೇತ್ರದಲ್ಲಿ ನೆಚ್ಚಿನ ನಟ ಸುದೀಪ್ ವೀಕ್ಷಣೆಗೆ ಅಪಾರ ಜನಸ್ತೋಮ ಸೇರುವ ಸಾಧ್ಯತೆ ಇದೆ. ಮುಂಜಾನೆ ಬಳ್ಳಾರಿಯ ಸಂಡೂರಿನ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಸಂಡೂರು, ತಾರಾನಗರದಲ್ಲಿ ಪ್ರಚಾರ ನಡೆಸೋ ಸುದೀಪ್ ನಂತರ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗೂ ರಾಂಪುರ ಕ್ಷೇತ್ರಗಳಲ್ಲಿ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಶ್ರೀರಾಮುಲು ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಮಧ್ಯಾಹ್ನ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಸಣ್ಣಫಕೀರಪ್ಪ ಪರವಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೋಕಾ ಸಂಗನಕಲ್ ಕೊಳ್ಳಗಲ್ ಗ್ರಾಮದಲ್ಲಿ ಸುದೀಪ್ ಪ್ರಚಾರ ಕೈಗೊಳ್ಳಲಿದ್ದಾರೆ. ನಂತರ ಸಂಜೆ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಬಳ್ಳಾರಿ ನಗರದ ವಿವಿಧೆಡೆ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಶ್ರೀರಾಮುಲು ಗೆಳೆಯ ಸೋಮಶೇಖರ್ ರೆಡ್ಡಿಯಾದ್ದರಿಂದ ರಾಮುಲು ಅವರ ಮಾತಿಗೆ ಓ ಕೊಟ್ಟು ಅವರ  ಸುದೀಪ್ ಸೋಮಶೇಖರ್ ಪರ ಪ್ರಚಾರ ಮಾಡಲು ಹೊರಟಿದ್ದಾರೆ!!

ಸಿಎಂ ಪರ ಸ್ಪರ್ಧಿಸಲ್ಲ ಎಂದ ಸುದೀಪ್!!

ಚುನಾವಣೆಗೆ ಈಗಾಗಲೇ ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಇದ್ದು ಇದೀಗ ಸಿಎಂ ಸಿದ್ದರಾಮಯ್ಯನವರಿಗೆ ಮಾತ್ರ ತಲೆನೋವಾಗಿ ಕಾಡಿದೆ!! ಕನ್ನಡ ಚಲನ ಚಿತ್ರ ನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡಲು ಮುಂದಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಸೋಲಿನ ಭೀತಿಯಲ್ಲಿದ್ದಾರೆ ಅನ್ನೋದು ಈಗ ಎಲ್ಲರಿಗೂ ತಿಳಿದಿರುವ ಸತ್ಯ. ಯಾಕೆಂದರೆ ತಾನು ಈ ಮೊದಲೇ ಆಯ್ಕೆ ಮಾಡಿಕೊಂಡಿದ್ದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲೋದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸ್ಪಷ್ಟ ಸಂದೇಶ ಸಿಕ್ಕ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು!!

ತನ್ನ ಪರ ಯಾರು ಪ್ರಚಾರಕ್ಕೆ ಬಂದರೂ ನಿಮ್ಮ ಸಹವಾಸ ಬೇಡ ಎಂದು ಬೇರೆ ಪಕ್ಷದ ಪ್ರಚಾರಕ್ಕೆ ತೆರಳುತ್ತಿದ್ದಾರೆ!! ಈಗಾಗಲೇ ಒಂದು ಕ್ಷೇತ್ರದಲ್ಲಿ ನಿಂತರೆ ತಾನು ಸೋಲುತ್ತೇನೆ ಎಂಬ ಭಯದಿಂದ ಪಾಪ ಎರಡೂ ಕ್ಷೇತ್ರದಲ್ಲೂ ಸ್ಪರ್ಥಿಸಲು ಮುಂದಾಗಿದ್ದಾರೆ!! ಈಗಾಗಲೇ ಸಿಎಂ ಪರ ಪ್ರಚಾರಕ್ಕೆಂದು ಬಂದ ಸುದೀಪ್‍ರವರಿಗೆ ಅಲ್ಲಿನ ಜನತೆ ಗೋ ಬ್ಯಾಕ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನು ಮಾಡಿದ್ದಲ್ಲದೆ ಸಿಎಂ ಪರ ಪ್ರಚಾರಕ್ಕೆಂದು ಗ್ರಾಮಕ್ಕೆ ಎಂಟ್ರಿ ಕೊಟ್ರೆ ಹುಷಾರ್ ಎಂಬ ಮಾತನ್ನು ಕೂಡಾ ಹೇಳಿದ್ದರು!! ಇದರಿಂದ ಗಲಿಬಿಲಿಗೊಂಡ ಕಿಚ್ಚ ಸುದೀಪ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಯಾವುದೇ ಕಾರಣಕ್ಕೂ ತಾನು ಶ್ರೀ ರಾಮುಲು ವಿರುದ್ಧ ಪ್ರಚಾರ ಮಾಡೋದಿಲ್ಲ. ಎಂದು ಸ್ಪಷ್ಟನೆಯನ್ನು ಕೂಡಾ ನೀಡಿದ್ದರು!! ಅದಾದ ಸ್ಪಲ್ಪ ಸಮಯದ ಬಳಿಕವೇ ನಟ ಸುದೀಪ್‍ರವರು ಸಿಎಂ ಪರ ನಾನು ಸ್ಪರ್ಧಿಸಲ್ಲ ಎಂಬ ಮಾತನ್ನು ಹೇಳಿದ್ದು, ಅದಲ್ಲದೆ ಶ್ರೀರಾಮುಲು ನಮ್ಮ ಸಮುದಾಯದವರು ನಾನು ಶ್ರೀರಾಮುಲು ಪರ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ..

ಚುನಾವಣೆಯಲ್ಲಿ ಸಿನಿಮಾ ನಟರನ್ನು ಕರೆತಂದು ಗೆಲ್ಲಿಸುವ ತಂತ್ರಗಳನ್ನು ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಪ್ಲಾನ್ ಇದೀಗ ಉಲ್ಟಾ ಆಗಿದ್ದು, ಮುಖಭಂಗದೊಂದಿಗೆ ಹಿನ್ನೆಡೆಯೂ ಅನುಭವಿಸುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸೋಲಿಸಲೇ ಬೇಕು ಎಂಬ ಹಠದಲ್ಲಿರುವ ಭಾರತೀಯ ಜನತಾ ಪಕ್ಷಕ್ಕೆ ದಾರಿ ಇನ್ನಷ್ಟು ಸುಲಭವಾಗಲಿದೆ. ಸಿಎಂ ಪರ ಹೋದ ಸುದೀಪ್ ಕೊನೆಗೂ ಶ್ರೀ ರಾಮುಲು ಮಾತನ್ನೇ ಕೇಳುವುದು ಎಂದು ಸ್ಪಷ್ಟವಾಯಿತು!!

ಪವಿತ್ರ

Editor Postcard Kannada:
Related Post