X

ಭಾರತ ಇಸ್ಲಾಂ ರಾಷ್ಟ್ರ! ತಿಳಿದೂ ತಿಳಿಯದಂತಿರುವ ಹಿಂದೂಗಳಿಗೇನನ್ನಬೇಕು?

ಹಿಂದೂಸ್ಥಾನವನ್ನು ಇಸ್ಲಾಮಿಕ್ ರಾಷ್ಟ್ರವಾಗಿಸಲು ಈ ದೇಶದ ಕೆಲ ಮುಸ್ಲಿಮರು, ಮುಸ್ಲಿಂ ಸಂಘಟನೆಗಳು, ಮತಾಂಧ ಶಕ್ತಿಗಳು ಕೆಲಸ ಮಾಡುತ್ತಿರುವುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮುಸ್ಲಿಂ ರಾಷ್ಟ್ರ ಮಾಡಲು ಯಾವೆಲ್ಲಾ ಹಾದಿ ಇದೆಯೋ, ಆ ಎಲ್ಲಾ ಹಾದಿಯನ್ನು ಬಳಸಿ ಹಿಂದೂಸ್ಥಾನದ ಏಕತೆಗೆ ಧಕ್ಕೆ ತರುವ ಕೆಲಸವನ್ನು ಮತಾಂಧ ಮುಸ್ಲಿಮರು ಮಾಡುತ್ತಿದ್ದಾರೆ.

ಇದಕ್ಕಾಗಿ ಹಿಂದೂ ಹೆಣ್ಣು ಮಕ್ಕಳ‌ನ್ನು ಬುಟ್ಟಿಗೆ ಹಾಕಿಕೊಂಡು ತಮ್ಮ ಧರ್ಮದ‌ತ್ತ ಆಕರ್ಷಣೆ ಮಾಡುವುದು, ಲವ್ ಜಿಹಾದ್, ಆಮಿಷದ, ಬಲವಂತದ ಮತಾಂತರ, ಲ್ಯಾಂಡ್ ಜಿಹಾದ್, ಶಾಹೀನ್ ಗ್ಯಾಂಗ್ ಬಳಸಿಕೊಂಡು ಹಿಂದೂ ಹೆಣ್ಮಕ್ಕಳ ದಾರಿ ತಪ್ಪಿಸುವ ಕೆಲಸ, ವಿದೇಶಗಳ ಫಂಡ್ ಬಳಸಿಕೊಂಡು ಭಾರತದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ‌ಕೊಂಡು ಬಾಂಬ್ ದಾಳಿ, ಹಿಂಸಾತ್ಮಕ ದಾಳಿ ಮೊದಲಾದವುಗಳನ್ನು ಮಾಡುತ್ತಿರುವುದು ಇಸ್ಲಾಮೀಕರಣದ ಕಲ್ಪನೆಯಿಂದಲೇ ಎನ್ನುವುದು ‘ಹಿಂದೂಗಳು ಜಾಗೃತರಾಗಬೇಕು’ ಎನ್ನುವುದನ್ನು ಸೂಚಿಸುವ ಸಂಗತಿ.

ಈ ಬಗ್ಗೆ ಹಿಂದೂ ಹುಲಿ, ಹಿಂದೂ ಜಾಗರಣ ವೇದಿಕೆಯ ಪ್ರಾಂತೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತರು ಶಿವಮೊಗ್ಗ‌ದಲ್ಲಿ ‘ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ’ ವತಿಯಿಂದ ನಡೆದ ಮೂರನೇ ವರ್ಷದ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತವನ್ನು 2047 ರೊಳಗಾಗಿ ಇಸ್ಲಾಂ ರಾಷ್ಟ್ರವಾಗಿಸುವ ಮತಾಂಧರ ಬಗ್ಗೆ ಹಿಂದೂಗಳಾದ ನಮಗೆ ತಿಳಿದಿದೆ. ಈ ವಿಚಾರ ತಿಳಿದಿದ್ದರೂ ಹಿಂದೂ ಸಮಾಜ ಹಗಲು ಕನಸು ಕಾಣುತ್ತಾ ಕೂರುವುದಲ್ಲ. ಎಚ್ಚರಾಗಬೇಕು ಎಂದು ತಿಳಿಸಿದ್ದಾರೆ.

ಭಾರತವನ್ನು ಭಾರತವನ್ನಾಗಿಯೇ ಉಳಿಯುವುದಕ್ಕೆ ಬಿಡಬಾರದು. ಹಿಂದೂಸ್ಥಾನವನ್ನು ನಾಶ ಮಾಡಬೇಕು ಎಂದು ಬೇರೆ ಬೇರೆ ನೆಲೆಯಲ್ಲಿ ಸಕ್ರಿಯವಾಗಿ ಸಾಮಾಜಿಕ ಯುದ್ಧ ನಡೆಸುತ್ತಿರುವ ಮತಾಂಧ ಶಕ್ತಿಗಳ ಬಗ್ಗೆ ತಿಳಿದಿದೆ. ಇಂತಹ ಆಕ್ರಮಣವನ್ನು ಮಟ್ಟ ಹಾಕುವುದು ಹೇಗೆ ಎನ್ನುವುದರ ಬಗ್ಗೆ ಹಿಂದೂ ಸಮಾಜ ದಿಟ್ಟ ನಿಲುವು ತಾಳಬೇಕಾಗಿದೆ ಎಂದು ಕಾರಂತ್ ಜಿ ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ ಈ ದೇಶವನ್ನು ಮತ್ತೆ ಒಡೆಯುವ ನಿಟ್ಟಿನಲ್ಲಿ, ಇಸ್ಲಾಮಿಕ್ ಉಗ್ರವಾದಿ ಮನಸ್ಥಿತಿ‌ಯ ಸಂಘಟನೆಗಳು, ವ್ಯಕ್ತಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದು, ಈ ಬಗ್ಗೆ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ. ಹಿಂದೂ‌ಗಳು ಜಿಹಾದಿಗಳ ಏಟಿಗೆ ಎದುರೇಟು ನೀಡುವಂತಹವರಾದಲ್ಲಿ ಮಾತ್ರ ಹಿಂದೂಸ್ಥಾನ ವಿರುದ್ಧ ಯಾವ ಮತಾಂಧ ಶಕ್ತಿಗಳೂ ತಮ್ಮ ಕುಬುದ್ಧಿ ಪ್ರದರ್ಶನ ಮಾಡಲು ಸಾಧ್ಯವಿಲ್ಲ. ಈ ದೇಶದ ಉಳಿವು, ಹಿಂದುತ್ವದ ಉಳಿವಿಗಾಗಿ ಹಿಂದೂಗಳು ಜಾಗೃತರಾದಲ್ಲಿ ಮಾತ್ರ ಹಿಂದೂಸ್ಥಾನ ಭದ್ರ.

Post Card Balaga:
Related Post