X

ನೆಹರೂ ಜನ್ಮದಿನ `ಅಂಕಲ್ ಡೇ’ ಆಗಲಿದೆಯೇ? ಡಿಸೆಂಬರ್ 26ಕ್ಕೆ ಮಕ್ಕಳ ದಿನ ಮಕ್ಕಳ ದಿನ ಆಚರಿಸಲು ಮೋದಿಗೆ ಪತ್ರ!! ಡಿಸೆಂಬರ್ 26ರ ದಿನದ ಮಹತ್ವ ತಿಳಿದರೆ ರಕ್ತ ಕುದಿಯವುದಂತೂ ಗ್ಯಾರಂಟಿ!

ನವೆಂಬರ್ 14 ಎಂದಾಕ್ಷಣ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆ ಎನ್ನುವ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ!! ಆದರೆ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಆಚರಿಸಬಾರದು ಅದನ್ನು ಡಿಸೆಂಬರ್ 26 ರಂದು ಆಚರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಜೆಪಿ ಸಂಸದರೊಬ್ಬರು ಪತ್ರ ಬರೆದಿದ್ದಾರೆ!!! ಅಷ್ಟಕ್ಕೂ ಡಿಸೆಂಬರ್ 26 ರಂದು ಯಾಕೆ ಮಕ್ಕಳ ದಿನಾಚರಣೆಯನ್ನು ಆಚರಿಸಬೇಕು?? ಎನ್ನುವ ವಿಚಾರದಲ್ಲಿ ಪತ್ರ ಬರೆದಿರುವ ಬಿಜೆಪಿ ಸಂಸದರು ಇತಿಹಾಸದ ಪುಟಗಳಲ್ಲಿರುವ ನೈಜಾಂಶವನ್ನು ಈ ಮೂಲಕ ಬಿಚ್ಚಿಟ್ಟಿದ್ದಾರೆ.

ಹೌದು…. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನವಾದ ನವೆಂಬರ್ 14 ರಂದು ರಾಷ್ಟ್ರಾದ್ಯಂತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ಡಿಸೆಂಬರ್ 26ಕ್ಕೆ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಂಸದರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಅರೇ!! ನೆಹರು ಹುಟ್ಟಿದ ದಿನ ಬದಲಾಯಿತೇ?? ಮಕ್ಕಳ ದಿನಾಚರಣೆಯಂದೇ ನೆಹರೂ ಜನ್ಮದಿನವಲ್ಲವೇ?? ಎನ್ನುವ ಪ್ರಶ್ನೆ ಮನದಲ್ಲಿ ಮೂಡುವುದಂತೂ ಖಂಡಿತ!! ಆದರೆ ಇಲ್ಲಿ ನೆಹರು ಜನ್ಮದಿನ ಬದಲಾಗಿಲ್ಲ, ಇದರ ಬದಲಾಗಿ ಮಕ್ಕಳ ದಿನಾಚರಣೆಯನ್ನು ಡಿಸೆಂಬರ್ 26 ರಂದೇ ಆಚರಿಸಬೇಕೆಂದು ಮೋದಿಗೆ ಬಿಜೆಪಿ ಸಂಸದರೊಬ್ಬರು ಮನವಿ ಮಾಡಿದ್ದಾರೆ!!

ಆದರೆ ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸಬಾರದು, ಹಾಗಾಗಿ ನವೆಂಬರ್ 14ರಂದು ಚಾಚಾ ದಿನ ಅಥವಾ ಅಂಕಲ್ ಡೇ ಎಂದೇ ಆಚರಿಸಬೇಕು ಎಂದು ಪ್ರಧಾನಿ ಮೋದಿಗೆ ಪಶ್ಚಿಮ ದೆಹಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಈ ಬಗ್ಗೆ ಮನವಿ ಪತ್ರ ಬರೆದಿದ್ದಾರೆ. ಈ ಪತ್ರಕ್ಕಾಗಿ ಸುಮಾರು 50ಕ್ಕೂ ಅಧಿಕ ಬಿಜೆಪಿ ಸಂಸದರು ಸಹಿ ಹಾಕಿದ್ದಾರೆ.

ಹೌದು…. “ಜವಾಹರ್ ಲಾಲ್ ನೆಹರು ಅವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು ಮತ್ತು ಮಕ್ಕಳ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನೆಹರು ಜನ್ಮ ದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ನಿಜವಾಗಿ ಮಕ್ಕಳ ದಿನಾಚರಣೆ ಆಚರಿಸಬೇಕಾದದ್ದು, ಡಿಸೆಂಬರ್ 26 ರಂದು. ಅದು ಗುರು ಗೋವಿಂದ್ ಸಿಂಗ್ ಪುತ್ರರಾದ ಶಾಹಿಬ್ಜಾನ್ ಅಜಿತ್ ಸಿಂಗ್(18), ಜುಜ್ಹಾರ್ ಸಿಂಗ್(14), ಜೋರಾವರ್ ಸಿಂಗ್(9) ಮತ್ತು ಫತೇಹ್ ಸಿಂಗ್(7) ಅವರು ಮೊಘಲ ದೊರೆ ಜೌರಂಗಜೇಬ್ ಆಡಳಿತಾವಧಿಯಲ್ಲಿ ಹುತಾತ್ಮರಾದ ದಿನ” ಎಂದು ಮನವಿಯಲ್ಲಿ ಹೇಳಿದ್ದಾರೆ.

ಅಷ್ಟೇ ಅಲ್ಲದೇ ಜವಾಹರಲಾಲ್ ನೆಹರೂರು ಅವರನ್ನು ಮಕ್ಕಳು ಪ್ರೀತಿಯಿಂದ ಚಾಚಾ ಅಂದರೆ ಈಗಿನ ಭಾಷೆಯಲ್ಲಿ ಅಂಕಲ್ ಎಂದು ಕರೆಯಲಾಗುತ್ತೆ, ಹಾಗಿದ್ದಮೇಲೆ ಅಂಕಲ್ ಹುಟ್ಟಿದ ದಿನದಂದು ಅಂಕಲ್ ಡೇ ಆಚರಿಸೋ ಬದಲು ಮಕ್ಕಳ ದಿನ ಆಚರಿಸೋಕೆ ಹೇಗೆ ಸಾಧ್ಯ? ಆದ್ದರಿಂದ ನವೆಂಬರ್ 14 ರಂದು ಮಕ್ಕಳ ದಿನಾಚರಣೆಯ ಬದಲು ಅಂಕಲ್ ಡೇ ಆಚರಿಸಿ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡಿದ ಗುರುಗೋವಿಂದ ಸಿಂಗರ ನಾಲ್ವರು ಮಕ್ಕಳು ಹಾಗು ಗುರುಗೋವಿಂದರ ಸ್ಮರಣಾರ್ಥ ಡಿಸೆಂಬರ್ 26 ರಂದು ಮಕ್ಕಳ ದಿನಾಚರಣೆಯಾಗಿ ಬದಲಾಯಿಸಬೇಕು ಎಂದು ಪರ್ವೇಶ್ ಶರ್ಮಾ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಅಷ್ಟಕ್ಕೂ ಈ ಗುರು ಗೋವಿಂದ್ ಸಿಂಗ್ ಯಾರು ಗೊತ್ತೇ?? ಅವರ ಮಕ್ಕಳು ದೇಶಕ್ಕೋಸ್ಕರ ಮಾಡಿರುವ ಸಾಹಸಗಾಥೆಯಾದರೂ ಏನು ಗೊತ್ತೆ??

ವೈದಿಕ ಕಾಲದಿಂದಲೂ ಮಹಾಭಾರತದ ಕಾಲದವರೆಗೆ ಪಂಜಾಬ್ ಪ್ರಾಂತ್ಯಕ್ಕೆ ಅಭೂತಪೂರ್ವವಾದ ಇತಿಹಾಸವಿದೆ. ಸುಮಾರು 400 ವರ್ಷಗಳ ವರೆಗೆ ಮೊಘಲ ಸುಲ್ತಾನರು ಪಂಜಾಬ ಪ್ರಾಂತ್ಯದ ಮೇಲೆ ಅನೇಕ ಆಕ್ರಮಣಗಳನ್ನು ಮಾಡಿ ಅದರ ಸತ್ವವನ್ನು ಹೀರಿದರು. ಆ ಸಂದರ್ಭದಲ್ಲಿ ಪಂಜಾಬಿನ ಉಳಿವಿಗಾಗಿ ಗುರುನಾನಕರ ದೂರದೃಷ್ಟಿಯಿಂದ “ಸಿಖ್” ಸಂಪ್ರದಾಯವು ನಿರ್ಮಾಣಗೊಂಡಿತಲ್ಲದೇ ಸಿಖ್ಖರ ಹತ್ತು ಗುರುಗಳು ಈ ಆಕ್ರಮಣದ ವಿರುದ್ಧ ತೀವೃವಾಗಿ ಹೋರಾಡಿದರು. ಈ ಹೋರಾಟದಲ್ಲಿ ಗುರು ಗೋವಿಂದಸಿಂಗ್ ಸಿಖ್ ಸಂಪ್ರದಾಯದ ಹತ್ತನೆಯ ಹಾಗೂ ಕೊನೆಯ ಗುರುಗಳಾಗಿದ್ದರು.

ಔರಂಗಜೇಬನು ಗುರು ಗೋವಿಂದಸಿಂಗ್ ಆಲಮಪುರದಲ್ಲಿ ತಂಗಿದ್ದಾಗ, ಅಲ್ಲಿಗೆ ಸೈನ್ಯ ಸಹಿತವಾಗಿ ಪೈಂದೆಖಾನ ಮತ್ತು ದೀನಾ ಬೇಗ ಎಂಬ ಇಬ್ಬರು ಸರದಾರರನ್ನು ಕಳುಹಿಸಿದನು. ಆದರೆ ಅದೇ ಸಂದರ್ಭದಲ್ಲಿ “ಆಲಮಪುರದಲ್ಲಿ ಯುದ್ಧ ಮಾಡುವುದು ಬೇಡ” ಎಂಬುದು ಈ ಇಬ್ಬರ ಧೋರಣೆಯಾಗಿತ್ತು. ಸಮಸ್ತ ಸಿಖ್ಖರು ಪೈಂದೆಖಾನನ್ನು ದಾರಿಯಲ್ಲಿ ಅಡ್ಡಗಟ್ಟಿ ಅವನೊಂದಿಗೆ ವೀರಾವೇಶದಿಂದ ಹೋರಾಡಿದರು. ಆದರೆ ಈ ಹೋರಾಟದಲ್ಲಿ ಗುರು ಗೋವಿಂದಸಿಂಗ್ ಪೈಂದೆಖಾನನ ಕಿವಿಗೆ ಬಾಣಬಿಟ್ಟು ಅವನನ್ನು ವಧಿಸಿದರು. ಗಾಯಗೊಂಡ ದೀನಾ ಬೇಗನು ಅಲ್ಲಿಂದ ಓಡಿಹೋದನು. ಕೊನೆಯ ಉಪಾಯವೆಂದು ಔರಂಗಜೇಬನು ಆಲಮಪುರಕ್ಕೆ ಜಮ್ಮುರಪುರ ಮಾರುಕಟ್ಟೆ, ಭೂತಾ ಕುಲೂ, ಕೈಂಥಲ, ಮುರೇಲ, ಚಂಬಾ, ದಡವಾಲ ಹಾಗೂ ಶ್ರೀನಗರದ ರಾಜರಿಂದ ಆಗುವ ಅನ್ನಪೂರೈಕೆಯನ್ನು ನಿಲ್ಲಿಸಲು ಪ್ರಯತ್ನಿಸಿದನು; ಆದರೆ ಸಿಖ್ಖರು ಅದನ್ನೂ ವಿರೋಧಿಸಿದರು. ಕೊನೆಗೆ ಬಸಾಲಿ ರಾಜನ ಮಧ್ಯಸ್ತಿಕೆಯಿಂದ ಈ ಶೀತಸಮರವು ಕೊನೆಗೊಂಡಿತು.

ಇದೇ ವೇಳೆ ಸಿಖ್ಖರ ಗುರುಗಳು ಶರಣಾಗುವುದಿಲ್ಲ ಎಂಬುದು ಔರಂಗಜೇಬನ ಗಮನಕ್ಕೆ ಬಂದನಂತರ ಅವನು ಆನಂದಪುರಕ್ಕೆ ವಜೀರಖಾನನ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳುಹಿಸಿದನು. ಅದನ್ನು ಎದುರಿಸುವಾಗ ಅನೇಕ ಸಿಖ್ಖರು ಪ್ರಾಣ ಕಳೆದುಕೊಂಡರು, ಸಿಖ್ಖರೂ ಅನೇಕ ಮೊಘಲರ ಸೈನಿಕರನ್ನು ಧರೆಗೆ ಉರುಳಿಸಿದರು. ಆದರೂ ಮೊಘಲರ ಸಾಮರ್ಥ್ಯವು ಹೆಚ್ಚು ಇರುವುದರಿಂದ ಸಿಖ್ಖರು ಹಿಂದೆ ಸರಿಯಬೇಕಾಯಿತು. ಆನಂದಪುರಕ್ಕೆ ಬಿಗಿಯಾದ ಕಾವಲಿನಲ್ಲಿ ಮುತ್ತಿಗೆ ಹಾಕಿರುವುದರಿಂದ ಕೆಲವೇ ದಿನಗಳಲ್ಲಿ ಅಲ್ಲಿನ ಧಾನ್ಯವು ಮುಗಿಯುತ್ತ ಬಂದಿತು.

ಉಪವಾಸದಿಂದ ಒಳ್ಳೆಯ ಕುದುರೆಗಳು ಮತ್ತು “ಪ್ರಾಸಾದಿ” ಎಂಬ ಪ್ರಖ್ಯಾತ ಆನೆಯು ಮೃತ ಪಟ್ಟಿತು. ಗುರು ಗೋವಿಂದಸಿಂಗ್ ಹಾಗೂ ಅವರ ಪರಿವಾರದವರಿಗೆ ಉಪವಾಸವನ್ನು ಸಹಿಸಬೇಕಾಯಿತು; ಆದರೆ ಅವರಲ್ಲಿ ಆನಂದಪುರವನ್ನು ಬಿಟ್ಟು ಹೊರಹೋಗುವ ಸಿದ್ಧತೆಯಿರಲಿಲ್ಲ. ಕೊನೆಗೆ ವಜೀರಖಾನನು ಔರಂಗಜೇಬನ ಹೇಳಿಕೆಯಂತೆ ಆನಂದಪುರದಲ್ಲಿನ ಎಲ್ಲರಿಗೂ ಅಭಯ ನೀಡಿದನು. ಆದರೆ ಮೊಘಲರು ಸುಳ್ಳು ವಚನವನ್ನು ಕೊಡುತ್ತಾರೆ ಎಂಬುದು ಗುರು ಗೋವಿಂದಸಿಂಗ್ ರಿಗೆ ತಿಳಿದಿದ್ದರಿಂದ, ಕೊನೆಗೆ ಡಿಸೆಂಬರ್ 6, 1705 ರಂದು ರಾತ್ರಿ ಅವರು ತಮ್ಮ ಪರಿವಾರ ಸಹಿತ ಮೊಘಲರ ಕಣ್ಣು ತಪ್ಪಿಸಿ ಹೊರಟು ಹೋದರು. ಹೋಗುವ ಮೊದಲು ಅವರಿಗೆ ಎಷ್ಟು ಸಾಧ್ಯವಾಗುವುದೋ ಅಷ್ಟು ನಷ್ಟಗೊಳಿಸಿ ಹೋದರು.

ಈ ವೇಳೆ ಮೊಘಲರ ಸೈನ್ಯವು ಅವರನ್ನು ಬೆನ್ನಟ್ಟಿತು, “ಶಿರಸಾ” ನದಿಯ ತೀರದಲ್ಲಿ ಮೊದಲ ಕಾಳಗವಾಯಿತು. ಈ ಕಾಳಗದಲ್ಲಿ ಪ್ರಖ್ಯಾತ ಸೇನಾಪತಿ ಭಾಯಿ ಉದಯಸಿಂಗರು ಮರಣ ಹೊಂದಿದರು. ಗುರು ಗೋವಿಂದಸಿಂಹರು ಶಿರಸಾ ನದಿಯನ್ನು ದಾಟಿ ಛಾಮಖೌರನ್ನು ತಲುಪಿ ತಮ್ಮ ಪರಿವಾರದೊಂದಿಗೆ ಅಲ್ಲಿನ ಕೋಟೆಯಲ್ಲಿ ಆಶ್ರಯ ಪಡೆದರು. ಮೊಘಲರ ಸೈನ್ಯವು ಬೆನ್ನಟ್ಟಿ ಬಂದು ಆ ಕೋಟೆಯನ್ನೂ ಮುತ್ತಿಗೆ ಹಾಕಿತು. ಪರಿಸ್ಥಿತಿಯು ಬಹಳ ಗಂಭೀರವಾಗಿತ್ತು, ಗುರು ಗೋವಿಂದಸಿಂಗ್ ಹಾಗೂ ಅವರ ಪರಿವಾರದವರು ನಿಶಸ್ತ್ರರಾಗಿದ್ದರು, ಹಾಗೆಯೇ ಅವರ ಬಳಿ ಬಹಳ ಕಡಿಮೆ ಧಾನ್ಯ ಉಳಿದಿತ್ತು.

ಮುತ್ತಿಗೆಯನ್ನು ಒಡೆಯುವ ಪ್ರಯತ್ನದಲ್ಲಿ ಅವರ ಹಿರಿಯ ಪುತ್ರರಾದ ಅಜೀತಸಿಂಗ್ ಮತ್ತು ಝುಜರಸಿಂಗ್ ವೀರಮರಣವನ್ನಪ್ಪಿದರು. ಗುರು ಗೋವಿಂದಸಿಂಗ್ ತಮ್ಮ ಮೂರು ವಿಶ್ವಾಸಿ ಸಿಖ್ಖರಾದ ಭಾಯಿ ದಯಾಸಿಂಗ್, ಧರಮಸಿಂಗ್ ಹಾಗೂ ಮಾನಸಿಂಗ್.ರೊಂದಿಗೆ ಅಲ್ಲಿಂದ ಹೊರಟು ಹೋದರು. ಕೊನೆಯಲ್ಲಿ ಈ ಮೂವರು ಸಿಖ್ಖರು ಹಾಗೂ ಗುರು ಗೋವಿಂದಸಿಂಗ್ ಪರಸ್ಪರ ಅಗಲಿದರು ಇದರಿಂದ ಗುರು ಗೋವಿಂದಸಿಂಗ್ ಒಬ್ಬಂಟಿಯಾದರು. ಅವರ ಬಳಿ ಸೈನ್ಯ, ಅಂಗರಕ್ಷಕರು, ಸಂಪತ್ತು, ಮಿತ್ರರು ಏನೂ ಇರಲಿಲ್ಲ; ಅದರೂ ಅವರು ತಮ್ಮ ಸ್ವಾಭಿಮಾನವನ್ನು ಬಿಡಲಿಲ್ಲ. “ಮಚ್ಛೀವಾರಾ” ಅರಣ್ಯದಲ್ಲಿ ಅವರಿಗೆ ಬಹಳ ಕಷ್ಟಗಳನ್ನು ಸಹಿಸಬೇಕಾಯಿತು, ಅವರ ಬಟ್ಟೆಗಳು ಹರಿದುಹೋದವು, ಕಾಲಿಗೆ ಪಾದರಕ್ಷೆಗಳು ಇರಲಿಲ್ಲ. ಅವರು ಮಲಗುವಾಗ ದಿಂಬಾಗಿ ಬಂಡೆಗಲ್ಲನ್ನು ಇಟ್ಟು ಭೂಮಿಯ ಮೇಲೆ ಮಲಗುತ್ತಿದ್ದರು.

ಸಿರಹಂದಿನ ನವಾಬನಿಂದ ಗುರು ಗೋವಿಂದಸಿಂಗ್ ರ ಪತ್ನಿ ಹಾಗೂ ಮಕ್ಕಳ ಧರ್ಮಾಂತರದ ಪ್ರಯತ್ನ, ಒಪ್ಪದ ಮಕ್ಕಳನ್ನು ನವಾಬನು ಗೋಡೆಗೆ ಅಪ್ಪಳಿಸಿ ಕೊಲ್ಲುವುದಲ್ಲದೇ
ಸಿರಹಂದಿನ ನವಾಬನು ಗುರು ಗೋವಿಂದಸಿಂಗ್ ರ ಪತ್ನಿ ಗುಜರಿ ಹಾಗೂ ಇಬ್ಬರು ಕಿರಿಯ ಮಕ್ಕಳನ್ನು ಬಂಧಿಸಿ, ಮೃತ್ಯು ಅಥವಾ ಧರ್ಮಾಂತರದ ಪರ್ಯಾಯವನ್ನು ಮುಂದಿಟ್ಟನು. ಆಗ ಅವರ ಮಕ್ಕಳು ಹತ್ತು ವರ್ಷಕ್ಕಿಂತ ಚಿಕ್ಕವರಾಗಿದ್ದರು; ಅವರು ಧರ್ಮಾಂತರವನ್ನು ನಿರಾಕರಿಸಿದರು. ನವಾಬ ವಜೀರಖಾನನು ಇಬ್ಬರೂ ಮಕ್ಕಳನ್ನು ಗೋಡೆಗೆ ಅಪ್ಪಳಿಸಿ ಕೊಂದು ಹಾಕಿದನು. ಈ ನೋವಿನಿಂದ ಆ ಮಕ್ಕಳ ಅಜ್ಜಿಯು ತೀರಿಹೋದಳು. ನಾಲ್ಕೂ ಮಕ್ಕಳ ಮರಣದಿಂದ ಮಾತೆ ಗುಜರಿಗೆ ಬಹಳ ದುಃಖವಾಯಿತು. ದುಃಖಿತ ಮಾತೆ ಗುಜರಿಯು ಗುರು ಗೋವಿಂದಸಿಂಗ್ ರಿಗೆ “ನನ್ನ ಮಕ್ಕಳೆಲ್ಲಿದ್ದಾರೆ” ಎಂದು ಪ್ರಶ್ನಿಸಿದಳು. ಆಗ ಗುರು ಗೋವಿಂದಸಿಂಗ್ ಮುಂದೆ ಕುಳಿತ ಶಿಷ್ಯರ ಕಡೆಗೆ ಬೆರಳು ತೋರಿಸಿ “ಇವರೆಲ್ಲರೂ ನಿನ್ನ ಮಕ್ಕಳೆ”ಎಂಬ ತೇಜಸ್ವಿ ಉತ್ತರ ನೀಡಿದರು!! ಈ ಯುದ್ಧದ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಗುರುಗೋವಿಂದಸಿಂಗರು ತಮ್ಮ ಸಂಪೂರ್ಣ ಪರಿವಾರದ ಆಹುತಿ ನೀಡಬೇಕಾಯಿತು.

ಅದಕ್ಕಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಜನ್ಮ ದಿನವಾದ ನ.14ರಂದು ರಾಷ್ಟ್ರಾದ್ಯಂತ ಆಚರಿಸಲಾಗುವ ಮಕ್ಕಳ ದಿನಾಚರಣೆ ದಿನಾಂಕವನ್ನು ಡಿಸೆಂಬರ್ 26ಕ್ಕೆ ಬದಲಾವಣೆ ಮಾಡಬೇಕು ಎಂದು ಬಿಜೆಪಿ ಸಂಸದರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, “ಜವಾಹರ್ ಲಾಲ್ ನೆಹರು ಅವರನ್ನು ಎಲ್ಲರೂ ಪ್ರೀತಿಯಿಂದ ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು. ಹಾಗಾಗಿ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಬದಲಾಗಿ ‘ಚಾಚಾ ದಿವಸ್’ ಅಥವಾ ‘ಅಂಕಲ್ ಡೇ’ ಆಗಿ ಆಚರಿಸಬೇಕು. ಹಾಗೇ ಗುರು ಗೋವಿಂದ್ ಸಿಂಗ್ ಪುತ್ರರು ಹುತಾತ್ಮರಾದ ಡಿಸೆಂಬರ್ 26ನ್ನು ಮಕ್ಕಳ ದಿನಾಚರಣೆ ಆಗಿ ಆಚರಿಸಬೇಕು. ಇದರಿಂದ ಮಕ್ಕಳಿಗೆ ತಮ್ಮ ತಮ್ಮಲ್ಲಿರುವ ಸಾಮರ್ಥ್ಯದ ಬಗ್ಗೆ ಅರಿವಾಗುವುದಲ್ಲದೆ, ತಪ್ಪುಗಳ ವಿರುದ್ಧ ಹೋರಾಡುವ ಶಕ್ತಿ ದೊರೆಯುತ್ತದೆ” ಎಂದು ಸಂಸದರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಹಾಗಾಗಿ ಸ್ವಾತಂತ್ರ್ಯಕ್ಕಾಗಿ, ಧರ್ಮವನ್ನು ಉಳಿಸುವುದಕ್ಕೋಸ್ಕರವಾಗಿ ತನ್ನ ಇಡೀ ಕುಟುಂಬವನ್ನೇ ದೇಶಕ್ಕಾಗಿ ಅರ್ಪಿಸಿದ ಗುರು ಗೋವಿಂದಸಿಂಗ್ ಅವರ ಸವಿನೆನಪಿಗಾಗಿ ಡಿಸೆಂಬರ್ 26 ರಂದು ಮಕ್ಕಳ ದಿನಾಚರಣೆ ಆಚರಿಸಬೇಕಾದದ್ದೇ ಹೊರತು ನವೆಂಬರ್ 26ರಂದು ಅಲ್ಲ!!ಹಾಗಾಗಿ ನವೆಂಬರ್ 14ರಂದು ಮಕ್ಕಳ ದಿನಾಚರಣೆ ಬದಲಾಗಿ ‘ಚಾಚಾ ದಿವಸ್’ ಅಥವಾ ‘ಅಂಕಲ್ ಡೇ’ ಆಗಿ ಆಚರಿಸಬೇಕು ಎಂದು ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ!!

ಮೂಲ: http://zeenews.india.com/kannada/india/november-14-can-be-uncle-day-not-childrens-day-bjp-mps-writes-to-pm-4876

– ಅಲೋಖಾ

Editor Postcard Kannada:
Related Post