ಮತ್ತೆ ಬಂದಿದ್ದೇನೆ ಪ್ರಕಾಶ್! ಸರಿಯಾಗಿ ತಿಂದು ಮೈ ಕೈ ಆರೋಗ್ಯ ಸರಿ ಇದೆ ಅಲ್ವೇ?! ಬಿಡಿ! ನಿಮಗೆ ಬುದ್ಧಿ ಸರಿ ಇದೆಯೋ ಎಂದು ಕೇಳುವುದಿಲ್ಲ! ಅದಾಗಲೇ ಭ್ರಮ ನಿರಸನದ ಕೇಸಿದು ಎಂದು ನಮಗೆ ಗೊತ್ತಿದೆ!!
ಒಂದು ವಿಚಾರ ಸ್ಪಷ್ಟಪಡಿಸಬೇಕಿದೆ! ಅಲ್ಲಾ ಪ್ರಕಾಶ್! ಅವತ್ತು, ಮೋದಿ ಮತ್ತು ಯೋಗಿಗೆ ಬಹಳಷ್ಟು ವ್ಯಂಗ್ಯವಾಗಿ ಟೀಕಿಸಿದಿರಿ! ಬೈದಿರಿ! ಅದೂ ಹೇಗೆ?! ‘ನಟನೆ’ ಯ ವಿಚಾರವೊಂದನ್ನಿಟ್ಟುಕೊಂಡು ಅದೂ ಸಹ! ಅವತ್ತೇ ನಾವ್ಯಾರೂ ಏನನ್ನೂ ಹೇಳಲಿಲ್ಲ! ನಿಮಗೆ ಅವತ್ತು ಸ್ವತಃ ಆ ‘ನಟನೆ’ ಎಂಬುದು ವ್ಯಂಗ್ಯವಾಗಿ ಹೋಗಿತ್ತು! ಒಬ್ಬ ನಟನಾದವನು ನಟನೆಯನ್ನು ಕೆಳಗಿಳಿಸಿದ ರೀತಿಗೆ ವಿಧಿ ಚಪ್ಪಾಳೆ ಹೊಡೆದುಕೊಂಡು ನಕ್ಕಿತ್ತು! ಆದರೆ ಇವತ್ತು ನೀವು ಮಾಡಿದ್ದು ಅತ್ಯಂತ ಹೀನಾಯವಾದ ಕೆಲಸ ಪ್ರಕಾಶ್ ರಾಜ್!!
ಅದೂ ಬೇಡ! ಅಲ್ಲಿಂದ ಪ್ರಾರಂಭವಾಯಿತಲ್ಲ ನಿಮ್ಮ ಪರಮಾತ್ಮನಾಟ?! ಅಬ್ಬೋ! ಎಲ್ಲಿ ನೋಡಿದರೂ ಪ್ರಕಾಶ್ ಪ್ರಕಾಶ್! ಮಾಧ್ಯಮಗಳಲ್ಲಿ ನೀವು ಮಿಂಚಿಂಗು! ನಮಗೇನೂ ಅದರ ಬಗ್ಗೆ ಮತ್ಸರವಿಲ್ಲ! ಆದರೆ, ಬಿಟ್ಟಿ ಎಂಟರ್ ಟೈನ್ ಮೆಂಟ್ ನೀಡುತ್ತ ಬಂದ ನೀವು ಅವತ್ತು ಕರ್ನಾಟಕದಲ್ಲಿ ಇರಲು ಉಸಿರು ಕಟ್ಟುತ್ತೆ! ಕೇರಳಾ ಮಾತ್ರ ಅಬ್ಬಾ ಅದ್ಭುತ ಎಂಬ ಹೇಳಿಕೆ ನೀಡಿದ್ದಲ್ಲದೇ, ಉಗ್ರ ಸಂಘಟನೆಯಾದ ಎಸ್ ಡಿ ಪಿ ಐ ಗೆ ಬೆಂಬಲ ನೀಡುತ್ತೇನೆ ಎಂದಾಗಲೇ ನಾವು ಕನ್ನಡಿಗರು, ವಿಶೇಷವಾಗಿ ಹಿಂದೂಗಳು ಹರಿದ ಮೆಟ್ಟನ್ನು ತಯಾರಿ ಮಾಡಿಕೊಳ್ಳಬೇಕಿತ್ತಾದರೂ, ಸುಮ್ಮನೇ ಬಿಟ್ಟೆವು! ಆದರೆ….
ನಿಮ್ಮ ಅಧಿಕ ಪ್ರಸಂಗಿ ತನವೊಂದು ಅದೆಷ್ಟು ರೀತಿಯಲ್ಲಿ ಮುಂದುವರೆಯಿತೆಂದರೆ, ಮೊನ್ನೆ ಮೊನ್ನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹಗುರವಾಗಿ ಮಾತನಾಡುವಷ್ಟು! ನಮಗೆ ಅದರಿಂದ ಏನೂ ಬೇಸರವಾಗಲಿಲ್ಲ! ಯಾಕೆಂದರೆ ಯಾವುದೋ ಬೀದಿ ನಾಯೊಂದು ಬೊಗಳಿತು ಎಂದು ಸುಮ್ಮನಾದೆವು! ಬುಡ ಸಮೇತ ಕಿತ್ತು ಹಾಕುವುದು ಹಾಗಿರಲಿ, ನಾವು ಸ್ವಲ್ಪ ಸೌಜನ್ಯವನ್ನು ಮರೆತಿದ್ದರೆ ನಿಮ್ಮ ವೈಯುಕ್ತಿಕ ಬದುಕಿನ ಬಗ್ಗೆ ಒಂದೆರಡು ಪ್ರಶ್ನೆ ಕೇಳಿದರೆ
ಸಾಕಿತ್ತು! ನಿಮ್ಮ ಬುಡ ಅದುರಿ ಹೋಗುತ್ತಿತ್ತು! ನಾವು ಥರ್ಡ್ ಕ್ಲಾಸ್ ಅಲ್ಲ ನೋಡಿ ಸ್ವಾಮಿ! ಅದಕ್ಕೇ ಸುಮ್ಮನಾದೆವು!
ಆದರೆ, ಇವತ್ತು?! ಮಂಗಳೂರಿನಲ್ಲಿ ಒಂದು ಭಾರತ ಜನತಾ ಪಕ್ಷದ ಅಭ್ಯರ್ಥಿಯಾದ ವೇದವ್ಯಾಸ ಕಾಮತ್ ರವರ ಹೆಂಡತಿ ಪಕ್ಷದ ಪ್ರಚಾರ ಮಾಡುತ್ತಿದ್ದ ವೀಡಿಯೋವೊಂದನ್ನು ಟ್ವೀಟು ಮಾಡಿ, “ಬೇಡುತ್ತಿದ್ದಾರೆ” ಎಂದೆಲ್ಲ ಬರೆದಿದ್ದೀರಿ! ಪ್ರಕಾಶ್! ಒಂದು ಮಾತು ನೆನಪಿರಲಿ! ಆಕೆ ನಿಮ್ಮ ಮಾತಿನ ಹಾಗೆ ಭಿಕ್ಷೆಯನ್ನೇ ಬೇಡಿರಬಹುದು! ಆದರದು, ಒಳ್ಳೆಯ ಆಡಳಿತ ಕೊಡಲು ಮಹದಾಸೆ ಇಟ್ಟುಕೊಂಡಿರುವ ಪತಿಯ ಶ್ರೇಯಸ್ಸಿಗೆ ಪ್ರಕಾಶ್! ನೀವಿ ಒಮ್ಮೆ ದೇಹಕ್ಕಾಗಿ ಬೇಡಿದ ಹಾಗೆಂದುಕೊಂಡಿರಾ?!\
ಜಾತಿ ರಾಜಕಾರಣ ಎಂದೆಲ್ಲ ಹೇಳಿದ್ದೀರಲ್ಲ ಪ್ರಕಾಶ್?! ನಿಮ್ಮ ಎಡಪಂಥೀಯರು ಮಾಡುತ್ತಿರುವುದು ಏನು ಹಾಗಾದರೆ?! ಬಿದ್ದ ತಿರುಬೋಕಿ ಎದ್ದು ಬಂದ ಎನ್ನುವ ಹಾಗೆ ನಿಮ್ಮ ಮುಸುಡಿಯೊಂದು ಕರ್ನಾಟಕದ ಸಮಾಜದಲ್ಲಿ ಇಣುಕಿತು ನೋಡಿ! ಗಬ್ಬೆದ್ದು ಹೋಯಿತು!!!
ಛೇ! ನನಗೆ ಇವತ್ತು ನಿಜಕ್ಕೂ ಅಸಹ್ಯವೆನಿಸುತ್ತಿದೆ! ಯಾಕೆಂದರೆ, ನಿಮ್ಮಂತಹವರ ಅಸಹ್ಯವಾದ ಬದುಕಿನ ಬಗ್ಗೆ ಅನಿವಾರ್ಯವಾಗಿ ಪ್ರಶ್ನಿಸಬೇಕಾದ ಸ್ಥಿತಿ ಬಂದುದಕ್ಕಾಗಿ! ನೋಡಿ ಪ್ರಕಾಶ್! ನಿಮಗೆ ಪರಸಂಗ ಮಾಡುವುದು, ನಾಲಗೆ ಹರಿ ಬಿಡುವುದೆಲ್ಲ ಸಾಮಾನ್ಯವಿರಬಹುದು! ಆದರೆ, ನಮಗಲ್ಲ!
ವಾಸ್ತವವಾಗಿ, ನಿಮ್ಮ ಹೆಂಡತಿಯ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ವೈಯುಕ್ತಿಕವಾದ ವಿಚಾರ ಎಂದು ಕೇಸುಗಳ ಮೇಲೆ ಕೇಸು ಹಾಕಿದ ನೀವು ಇನ್ನೊಬ್ಬರ ಹೆಂಡತಿಯ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ?! ಯೋಚಿಸಿ!
ತಪಸ್ವಿ