X

ಭಾರತದ ವಿರುದ್ಧ ಹೋರಾಟಕ್ಕೆ ಒಗ್ಗಟ್ಟಾದ ಪಾಕ್ ಉಗ್ರ ಸಂಘಟನೆಗಳು!! ಮತ್ತೊಮ್ಮೆ ಪಾಕ್‍ನ ಅಸಲಿ ಮುಖ ಬಯಲು!!

ಭಾರತೀಯರು ಯಾರನ್ನೂ ಕೆಣಕಲ್ಲ ಕೆಣಕಿದರೆ ಯಾರನ್ನೂ ಬಿಡೋರಲ್ಲ!! ಪ್ರತೀಯೊಂದು ರಾಷ್ಟ್ರಗಳು ಕೂಡಾ ಪಾಕಿಸ್ತಾನವನ್ನು ತಮ್ಮ ಸ್ನೇಹದಿಂದ ಹೊರಗಿಟ್ಟರೂ ತನ್ನ ನರಿ ಬುದ್ಧಿಯನ್ನು ಬಿಡಲ್ಲ ಅಂತಾ ಶಪಥ ಮಾಡಿದಂತಿದೆ!! ಇತ್ತ ಚೀನಾ ಒಂದು ರಾಷ್ಟ್ರ ಮಾತ್ರ ಪಾಕಿಸ್ತಾನಸದ ಜೊತೆ ಸಂಬಂಧವನ್ನು ಬೆಳೆಸಿತ್ತು.. ಆದರೆ ಇದೀಗ ಚೀನಾ ಕೂಡಾ ಪಾಕಿಸ್ತಾನದಿಂದ ದೂರಸರಿದಿದ್ದು ಪಾಕ್, ಚೀನಾದ ಸ್ನೇಹ ಹಳಸುತ್ತಾ ಬಂದಿದೆ!! ಹೇಗಾದರೂ ಮಾಡಿ ಭಾರತವನ್ನು ಸರ್ವನಾಶ ಮಾಡಬೇಕು ಎಂದು ಪಾಕಿಸ್ತಾನ ಪಣ ತೊಟ್ಟರೂ ಎಲ್ಲಾ ಪ್ಲಾನ್‍ಗಳೂ ಕೂಡಾ ಪ್ಲಾಪ್ ಆಗುತ್ತನೇ ಬರುತ್ತಿದೆ!! ಇದೀಗ ಭಾರತದ ವಿರುದ್ಧ ಪಾಕಿಸ್ತಾನ ಮತ್ತೊಂದು ತಂತ್ರ ರೂಪಿಸಿದೆ!!

ಭಾರತದ ವಿರುದ್ಧ ಹೋರಾಟಕ್ಕೆ ಮೂರು ಉಗ್ರ ಸಂಘಟನೆಗಳು ಸಿದ್ಧ!!

ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಪಾಕಿಸ್ತಾನದ ಮೂರು ಉಗ್ರ ಸಂಘಟನೆಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು, ಅದಕ್ಕೆ ಪಾಕಿಸ್ತಾನದ ಐಎಸ್‍ಐ ಬೆನ್ನೆಲುಬಾಗಿ ನಿಂತಿರುವುದು ಬಹಿರಂಗವಾಗಿದೆ. ಉಗ್ರ ಆಶಿಕ್ ಬಾಬಾ ವಿಚಾರಣೆ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಈ ಮಾಹಿತಿ ನೀಡಿದ್ದಾನೆ. ಜೈಷ್ ಎ ಮೊಹಮದ್, ಲಷ್ಕರ್ ಎ ತೊಯ್ಬಾ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಒಟ್ಟಾಗಿ ಭಾರತದ ವಿರುದ್ಧ ಕಾರ್ಯಾಚರಣೆಗೆ ತಂತ್ರ ರೂಪಿಸುತ್ತಿವೆ. . ಪಾಕಿಸ್ತಾನದಿಂದ ಭಾರತದ ಗಡಿಗೆ ಉಗ್ರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಲಾಗುತ್ತಿದೆ. ಗಡಿಯಲ್ಲಿ ಇದರ ಜವಾಬ್ದಾರಿಯನ್ನು ಅಬ್ದುಲ್ಲಾ ಎನ್ನುವ ಉಗ್ರನಿಗೆ ವಹಿಸಲಾಗಿದೆ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿದುಬಂದಿದೆ.

ಪಾಕಿಸ್ತಾನ ಸರ್ಕಾರ ತಮ್ಮ ತಮ್ಮ ವೈಮನಸ್ಸಿನಿಂದ ಹೊಡೆದಾಡುತ್ತಿದ್ದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತಯ್ಯಬ್ಬಾ, ಜೈಷ್ ಇ ಮೊಹಮದ್ಮ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರರಿಗೆ ಪಾಕಿಸ್ತಾನದ ಸೈನ್ಯದ ಮಾರ್ಗದರ್ಶನದಲ್ಲೇ ತರಬೇತಿ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಉಗ್ರ ಆಶಿಕ್ ಬಾಬಾ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ. ಜೈಷ್ ಇ ಮೊಹಮ್ಮದ್, ಲಷ್ಕರ್ ಈ ತೊಯ್ಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಮೂರು ಉಗ್ರ ಸಂಘಟನೆಗಳು ಪಾಕಿಸ್ತಾನದ ಸೈನ್ಯದ ಮಾರ್ಗರ್ದಶನದಲ್ಲೇ ಕಾರ್ಯ ನಿರ್ವಹಿಸುತ್ತಿವೆ.

ಅಲ್ಲದೇ ಈ ಮೂರು ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಸಹ ಸಾಥ್ ನೀಡುತ್ತಿದೆ ಎಂದು ವಿಚಾರಣೆ ವೇಳೆ ಆಶಿಕ್ ಬಾಬಾನಿಂದ ಹೊರಬಿದ್ದಿದೆ!!. ಭಾರತದಲ್ಲಿ ಉಗ್ರರ ಪ್ರತಿನಿಧಿಯಾಗಿ ಉಗ್ರ ಅಬ್ದುಲ್ಲಾ ಎಂಬಾತನನ್ನು ನೇಮಕ ಮಾಡಿದ್ದು, ಆತನ ನೇತೃತ್ವದಲ್ಲೇ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ನೇಮಿಸಲಾಗಿದೆ. ಆತ ಭಾರತದ ಗಡಿಯಲ್ಲಿ ತನ್ನ ದುಷ್ಕೃತ್ಯ ನಡೆಸಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಆಶಿಕ್ ತಿಳಿಸಿದ್ದಾನೆ. ಎಂಟು ಸೈನಿಕರನ್ನು ಬಲಿ ಪಡೆದುಕೊಂಡಿದ್ದ 2017ರ ಪುಲ್ವಾಮಾ ಪೆÇಲೀಸ್ ಡೇರೆಯ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಜೈಷ್ ಎ ಮಹಮ್ಮದ್ ಸಂಘಟನೆಯ ಮುಫ್ತಿ ವಕ್ಕಾಸ್ ಎಂಬುವುದನ್ನು ರಾಷ್ಟ್ರಿಯ ತನಿಖಾ ದಳದ ಎದುರು ಬಾಯಿ ಬಿಟ್ಟಿದ್ದಾನೆ.. ಭಾರತವನ್ನು ಹೇಗಾದರೂ ಮಣಿಸಬೇಕು ಎಂಬ ದುರುದ್ಧೇಶದಿಂದ ಪಾಕಿಸ್ತಾನ ಹಲವಾರು ಯೋಜನೆಗಳನ್ನು ಮಾಡುತ್ತ ಬಂದರೂ ಎಲ್ಲವೂ ನಿಷ್ಪ್ರಯೋಜಕವಾಗುತ್ತಿದ್ದು ಪಾಕ್‍ಗೆ ಒಂದು ಕಡೆಯಲ್ಲಿ ತಲೆನೋವಾಗಲೂ ಶುರುವಾಗಿದೆ!!

ಅದಲ್ಲದೆ ಈಗಾಗಲೇ ಲಷ್ಕರ್ ಎ ತೋಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಭಾರತದ ವಿರುದ್ಧ ಹೋರಾಡಲು ಭಾರತದ ಯುವಕರನ್ನೇ ಉಗ್ರ ಸಂಘಟನೆಗಳು ಬಳಸಲು ತೀರ್ಮಾನಿಸಿತ್ತು!! ಅದರಂತೆ ಭಾರತದ ಹಲವು ಮದರಸಾಗಳಿಂದ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸಿ ಅವರಿಗೆ ತರಬೇತಿ ನೀಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಜಬೀವುಲ್ಲಾ ಬಾಯಿಬಿಟ್ಟಿದ್ದ!! ಮೊದಲು ಮದರಸಾಗಳಲ್ಲಿರುವ ಯುವಕರನ್ನು ನೇಮಕ ಮಾಡಿಕೊಳ್ಳುವುದು. ಬಳಿಕ ಅವರನ್ನು ಲಾಹೋರಿನ ತರಬೇತಿ ಕೇಂದ್ರಕ್ಕೆ ಕಳಿಸುವುದು. ಅಲ್ಲಿ ಹಫೀಜ್ ಸಯೀದ್ ಯುವಕರನ್ನು ಪ್ರಚೋದಿಸಿ ಭಾರತದ ವಿರುದ್ಧವೇ ಹೋರಾಟ ಮಾಡಲು ಸ್ಫೂರ್ತಿ ನೀಡುತ್ತಿದ್ದ ಎಂದು ಜಬೀವುಲ್ಲಾ ತಿಳಿಸಿದ್ದ!!

ಅಷ್ಟೇ ಅಲ್ಲ, ತರಬೇತಿ ವೇಳೆ ಆಧುನಿಕ ತಂತ್ರಜ್ಞಾನದ ಬಳಕೆ, ಹೆಚ್ಚಿನ ತೂಕ ಹೊತ್ತು ದುರ್ಗಮ ಹಾದಿಯಲ್ಲಿ ಸಂಚರಿಸುವುದು, ಹಿಮ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವುದು, ಶಸ್ತ್ರಾಸ್ತ್ರ ಬಳಸುವುದು ಸೇರಿ ಹಲವು ವಿಧದಲ್ಲಿ ಮದರಸಾದಿಂದ ನೇಮಕವಾದ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು ಎಂದು ಜಬೀವುಲ್ಲ ಹೇಳಿದ್ದ!! ಉಗ್ರ ಜಬೀವುಲ್ಲಾನ ಈ ಹೇಳಿಕೆಯಿಂದ ಭಾರತದಲ್ಲಿರುವ ಮದರಸಾಗಳು ಉಗ್ರ ಸಂಘಟನೆಗಳಿಗೆ ಯುವಕರನ್ನು ಸರಬರಾಜು ಮಾಡುವ ಕುರಿತು ಅನುಮಾನ ಮೂಡುತ್ತಿದ್ದು, ಇಂತಹ ಮದರಸಾಗಳನ್ನು ಹುಡುಕಿ ನಿರ್ನಾಮ ಮಾಡಬೇಕು. ಇಲ್ಲದಿದ್ದರೆ, ಇವರೇ ಮುಂದೆ ದೇಶಕ್ಕೆ ಕಂಟಕವಾಗುವ ಲಕ್ಷಣಗಳಿದ್ದು ಅದಕ್ಕೆ ಈಗಾಗಲೇ ಉತ್ತರ ಪ್ರದೇಶದಲ್ಲಿರುವ ನಕಲಿ ಮದರಾನಸಳನ್ನು ಕಿತತೊಗೆಯಲಾಗಿತ್ತು!!

ಭಾರತ ವಿರುದ್ಧ ದಾಳಿಗೆ ಯಾರೇ ಸಂಚು ಹೂಡಿದರೂ ನಮ್ಮ ಸೈನಿಕರೂ ಯಾರನ್ನೂ ಬಿಡೋರಲ್ಲ!! ಹಾಗಾಗಿ ಯಾವ ಸಂಘಟನೆಗಳೂ ಭಾರತ ವಿರುದ್ಧ ಕತ್ತಿ ಮಸೆದರೂ ಅವರನ್ನು ಹೊಡೆದುರುಳಿಸುವ ಶಕ್ತಿ ನಮ್ಮ ಭಾರತಕ್ಕೆ ಇದೆ ಎಂಬುವುದನ್ನು ಮರೆಯಬಾರದು!!

source: http://vijayavani.net

  • ಪವಿತ್ರ
Editor Postcard Kannada:
Related Post