X

ಜವಾಬ್ದಾರಿಯೇ ಇಲ್ಲದ ರಾಹುಲ್ ಕೈಗೆ ಈ ದೇಶದ ಜವಾಬ್ದಾರಿ ಸಿಕ್ಕರೆ!!!

ಬಹಳ ಹಿಂದಿನಿಂದಲೂ ಭಾರತದ ಜನರನ್ನು ಮೋಸಗೊಳಿಸುತ್ತಲೇ ಬಂದಿರುವ ನಕಲಿ ಗಾಂಧಿ ಕುಟುಂಬದ ಕಾಂಗ್ರೆಸ್ ಪಕ್ಷ, ಚುನಾವಣೆ ಹತ್ತಿರ ಬಂದಂತೆ ದೇವರ ಹೆಸರಿನಲ್ಲಿಯೂ ಜನರಿಗೆ ಉಂಡೆ ನಾಮ ಹಾಕಲು ಮುಂದಾಗಿದೆ.

ಹಿಂದೂಗಳು, ಹಿಂದೂ ದೇವರುಗಳನ್ನು ಅವಹೇಳನ ಮಾಡುವುದರಲ್ಲಿಯೇ ಸದಾ ಕಾಲ ತಲ್ಲೀನರಾಗಿರುವ ಕಾಂಗ್ರೆಸ್ ನಾಯಕರು, ಸದ್ಯ ದೇವರ ಹೆಸರು ಹೇಳಿಕೊಂಡು ಮೋಸ ಮಾಡಲು ಹೊರಟಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ವರೆಗೆ ಹಿಂದೂಗಳನ್ನು ಗಮನದಲ್ಲಿರಿಸಿಕೊಂಡು ಯಾವುದೇ ಯೋಜನೆ, ಸಾಧನೆ ಮೆರೆದಿಲ್ಲವಾದರೂ, ಸದ್ಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ದೇವಾಲಯಗಳಿಗೆ ಹೋಗುವುದು, ಕೇಸರಿ ಶಾಲು ಹಾಕಿಕೊಳ್ಳುವುದು, ಆರತಿ ಬೆಳಗುವುದು.. ಹೀಗೆ ತಾನೂ ಸಹ ಹಿಂದೂ ಎಂದು ತೋರಿಸಿಕೊಳ್ಳುವುದಕ್ಕೆ ಬೇಕಾದ ಎಲ್ಲಾ ರೀತಿಯ ನಾಟಕಗಳನ್ನು ಸಹ ಮಾಡುತ್ತಿದ್ದಾರೆ.

ಹಿಂದೂ ವಿರೋಧಿ ಮನಸ್ಥಿತಿಯ ಕಾಂಗ್ರೆಸ್ ದೇವರನ್ನು ಸಹ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ದುರಂತ. ಭಯೋತ್ಪಾದಕರು ಸತ್ತಾಗ ಪರಿತಪಿಸುವ ಕಾಂಗ್ರೆಸ್, ಹಿಂದೂ ಸಂತ ಶ್ರೀ ಸಿದ್ದೇಶ್ವರ ಸ್ವಾಮಿಗಳು ಇಹಲೋಕ ತ್ಯಜಿಸಿದಾಗಲೂ ಶ್ರದ್ಧಾಂಜಲಿ ಸಲ್ಲಿಸದಿರುವುದು ಅವರಿಗೆ ಹಿಂದೂ ಗಳ ಮೇಲೆ ಯಾವ ಭಾವನೆ ಇದೆ ಎನ್ನುವುದಕ್ಕೆ ಸಾಕ್ಷಿ.

ನೀವು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣ‌ಗಳಲ್ಲಿ ವೈರಲ್ ಆಗಿದ್ದ ರಾಹುಲ್ ಗಾಂಧಿ ಅವರ ಸ್ಟೇಜ್ ಮ್ಯಾನರ್ಸ್ ಹೇಗಿದೆ ಎಂಬುದನ್ನು ತೋರಿಸುವ ವಿಡಿಯೋ ಒಂದನ್ನು ಗಮನಿಸಿರಬಹುದು. ಅದರಲ್ಲಿ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಹೆಗಲಿಗೆ ಕೈ ಹಾಕಿ, ಅವರನ್ನು ಎಳೆದು ಮುತ್ತು ನೀಡುವ ದೃಶ್ಯ ನೋಡಿರಬಹುದು. ಇದು ಒಂದು ನಾಯಕನಿಗೆ ಇರಬೇಕಾದ ಗುಣವೇ?.. ಇಂತಹ ಗುಣಗಳಿರವ ಬೇಜವಾಬ್ದಾರಿಯುತ ವ್ಯಕ್ತಿಯ ಕೈಗೆ ಈ ರಾಷ್ಟ್ರವನ್ನು ನೀಡಿದರೆ, ಈ ದೇಶದ ಕಥೆ ಏನಾಗಬಹುದು ಎಂದು ಜವಾಬ್ದಾರಿಯುತ ಜನರಾದ ನಾವೆಲ್ಲರೂ ಚಿಂತಿಸಬೇಕಾದಿದೆ. ಮುಂದಿನ ಚುನಾವಣೆಯಲ್ಲಿ ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುವ ಕಾಂಗ್ರೆಸ್ನಂತಹ ಶಕ್ತಿಗಳ ಹುಟ್ಟಡಗಿಸಲು ಕೇವಲ ಮತದಾರರಿಂದ ಮಾತ್ರ ಸಾಧ್ಯ.

Post Card Balaga:
Related Post