X

ಕಾಂಗ್ರೆಸ್ ಕಾರ್ಪೋರೇಟರ್ ಬೆಂಬಲಕ್ಕೆ ನಿಂತ ಸಂಘಪರಿವಾರ.! ವಿರೋಧಿಸಿದರೂ ಕೈಜೋಡಿಸಿದ ಸನಾತನ ಸಂಸ್ಕ್ರತಿ.!

ಹಿಂದೂ ಸಂಪ್ರದಾಯಕ್ಕೆ, ಹಿಂದೂ ಹೆಣ್ಣುಮಕ್ಕಳ ವಿಚಾರಕ್ಕೆ ಬಂದಾಗ ಇಡೀ ಪಕ್ಷಭೇದ ಮರೆತು ಹಿಂದೂಪರ ಸಂಘಟನೆಗಳು ಒಟ್ಟಾಗುತ್ತವೆ ಎಂಬೂದಕ್ಕೆ ಮತ್ತೊಂದು ಉದಾಹರಣೆ ದೊರಕಿದೆ. ದೇಶದಲ್ಲಿ ಈ ಕಾಂಗ್ರೆಸ್ ಮಹಿಳಾ ಸಬಲೀಕರಣ ಎಂದು ಬೊಬ್ಬೆ ಹೊಡೆಯುತ್ತಿದೆ, ಆದರೆ ಸ್ವತಃ ಕಾಂಗ್ರೆಸ್ ನ ಮಹಿಳೆಯರಿಗೇ ಕಾಂಗ್ರೆಸ್ ರಕ್ಷಣೆ ನೀಡುತ್ತಿಲ್ಲ, ಬದಲಾಗಿ ಕಿರುಕುಳ ನೀಡುತ್ತಿದೆ ಎಂದರೆ ಕಾಂಗ್ರೆಸ್ ನ ಅಸಲಿ ಮುಖ ಏನು ಎಂಬುದು ಸದ್ಯ ದೇಶದ ಜನತೆಗೆ ಗೊತ್ತಾಗಿದೆ.

ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಯವರು ತಾವು ಕಾಂಗ್ರೆಸ್ ಎಂಬ ಕಾರಣಕ್ಕೆ ಹಿಂದೂ ಸಂಘಟನೆಗಳನ್ನು ಅವಮಾನಿಸಿ ಮಾತನಾಡಿದ್ದರು. ಕಾಂಗ್ರೆಸ್ ಗೆ ಹಿಂದೂಗಳ ಮೇಲಿನ ಭಾವನೆ ಏನು ಎಂಬೂದು ಮಂಗಳೂರಿನಲ್ಲಿ ಮತ್ತೊಮ್ಮೆ ಪ್ರದರ್ಶನವಾಗಿತ್ತು.

ಸಾಯುವವರು ಭಜರಂಗದಳಕ್ಕೆ ಸೇರಿ..!

ಭಜರಂಗದಳ ಎಂದರೆ ಸಾಕು , ಹಿಂದೂ ವಿರೋಧಿಗಳು ಒಮ್ಮೆ ನಡುಗುತ್ತಾರೆ, ಯಾಕೆಂದರೆ ಧರ್ಮ ವಿರೋಧಿಗಳ ಪಾಲಿಗೆ ಭಜರಂಗದಳ ಯವತ್ತಿಗೂ ಕಂಟಕವೇ. ಆದರೆ ಇದೇ ಸಂಘಟನೆಯನ್ನು ಕಾಂಗ್ರೆಸ್ ಕಾರ್ಪೋರೇಟರ್ ಪ್ರತಿಭಾ ಕುಳಾಯಿ, ಹಿಂದೂ ಯುವಕರಿಗೆ ಸಾಯಲು ಮನಸಿದ್ದರೆ ನೀವು ಭಜರಂಗದಳಕ್ಕೆ ಸೇರಿಕೊಳ್ಳಿ ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಪ್ರತಿಭಾ ಕುಳಾಯಿ ಯವರ ಈ ಹೇಳಿಕೆಗೆ ಕರಾವಳಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ನಲ್ಲೇ ಈ ಬಗ್ಗೆ ಕೆಲ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದರು.

ಮಹಿಳೆಯ ಮೈಮೇಲೆ ಕೈ ಹಾಕಿದ ಕಾಂಗ್ರೆಸ್ ನ ಮುಸ್ಲಿಂ ಮುಖಂಡ..!

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದ್ದೀನ್ ಬಾವಾ ರವರ ಮನೆಯಲ್ಲಿ ಪಕ್ಷದ ಸಭೆ ಏರ್ಪಡಿಸಿದ್ದರು. ಈ ವೇಳೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಜೊತೆ ಅಸಭ್ಯವಾಗಿ ವರ್ತಿಸಿದ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಸತ್ತಾರ್, ಮೈಮೇಲೆ ಕೈ ಹಾಕಿದ್ದ. ತಕ್ಷಣ ಗಮನಿಸಿದ ಪ್ರತಿಭಾ ಕುಳಾಯಿ ಸ್ಥಳದಲ್ಲೇ ಸತ್ತಾರ್ ಗೆ ಕಪಾಳಮೋಕ್ಷ ಮಾಡಿದ್ದರು. ಈ ಬಗ್ಗೆ ಮಹಿಳೆಯ ಪರನಿಲ್ಲಬೇಕಾಗಿದ್ದ ಕಾಂಗ್ರೆಸ್ , ಸತ್ತಾರ್ ಪರ ಮಾತನಾಡಿದ್ದಲ್ಲದೆ ಪ್ರತಿಭಾ ಕುಳಾಯಿ ಗೆ ನೋಟೀಸ್ ಜಾರಿಗೊಳಿಸಿತ್ತು. ಮಹಿಳಾ ಸಬಲೀಕರಣ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ಮಹಿಳೆಗೆ ಅನ್ಯಾಯವಾದಾಗ ನ್ಯಾಯ ದೊರಕಿಸಿ ಕೊಡಲಿಲ್ಲ. ಇದರಿಂದ ಕಾಂಗ್ರೆಸ್ ನ ನಿಲುವ ಜನರೆದುರು ಸ್ಪಷ್ಟವಾಗಿತ್ತು.

ಪ್ರತಿಭಾ ಕುಳಾಯಿ ಬೆಂಬಲಕ್ಕೆ ನಿಂತ ವಿ.ಹೆಚ್.ಪಿ ಮತ್ತು ದುರ್ಗಾವಾಹಿನಿ..!

ಹಿಂದೂ ಧರ್ಮ ಮತ್ತು ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಯಾದರೂ ತಕ್ಷಣ ಅದರ ವಿರುದ್ಧ ಧ್ವನಿ ಎತ್ತುವ ಹಿಂದೂಪರ ಸಂಘಟನೆಗಳು , ಪ್ರತಿಭಾ ಕುಳಾಯಿ ಯವರ ಬೆಂಬಲಕ್ಕೂ ನಿಂತಿದೆ. ಕಾಂಗ್ರೆಸ್ ಹಿಂದೂಗಳನ್ನು ಮತ್ತು ಸಂಘಪರಿವಾರವನ್ನು ದ್ವೇಷಿಸುತ್ತಲೇ ಬಂದಿದ್ದರು, ಅನ್ಯ ಕೋಮಿನ ಮುಖಂಡನೊಬ್ಬ ಹಿಂದೂ ಮಹಿಳೆಯ ಸೀರೆ ಎಳೆದು ಅಸಭ್ಯವಾಗಿ ನಡೆದುಕೊಂಡಿದ್ದರು. ಇದೀಗ ಇದನ್ನು ವಿರೋಧಿಸಿದ ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗಾವಾಹಿನಿ ಸಂಘಟನೆ ಪ್ರತಿಭಾ ಕುಳಾಯಿಯವರ ಈ ನಡೆಗೆ ಬೆಂಬಲ ವ್ಯಕ್ತಪಡಿಸಿದ್ದರು.!

ಅಬ್ದುಲ್ ಸತ್ತಾರ್ ಈಗಾಗಲೇ ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಂಡು ಹಿಂದೂ ಸಂಘಟನೆಗಳ ಕೈಯಿಂದ ಒದೆ ತಿಂದಿದ್ದ. ಇದೀಗ ತಮ್ಮದೇ ಪಕ್ಷದ ಮಹಿಳೆಗೆ ಈ ರೀತಿ ನಡೆದುಕೊಂಡಿದ್ದಲ್ಲದೇ , ತಮ್ಮ ಪಕ್ಷದಿಂದ ಮಹಿಳೆಗೆ ನೋಟೀಸ್ ಜಾರಿಗೊಳಿಸಿದ್ದಾರೆ.

ತನ್ನ ವಿರುದ್ಧ ನಡೆದ ಅನ್ಯಾಯಕ್ಕೆ ಪ್ರತಿಭಾ ಕುಳಾಯಿ ತೆಗೆದುಕೊಂಡ ದಿಟ್ಟ ಕ್ರಮವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಮಾತೃ ಶಕ್ತಿ ದುರ್ಗಾ ವಾಹಿನಿ ಶ್ಲಾಘಿಸುತ್ತದೆ , ಮತ್ತು ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಅವರ ಪರವಾಗಿ ನಮ್ಮ ಸಂಘಟನೆಗಳು ಯಾವತ್ತೂ ಇದೆ ಎಂಬೂದನ್ನು ಸ್ಪಷ್ಟಪಡಿಸಿದೆ.!

–ಅರ್ಜುನ್

 

Editor Postcard Kannada:
Related Post