X

ಕಣ್ಣಿಲ್ಲದವರು ಕ್ರೈಸ್ತ ಮತಕ್ಕೆ ಮತಾಂತರವಾದರೆ ಕಣ್ಣು ಬರಲಿದೆ!

ಯಾವ್ಯಾವುದೋ ರೀತಿಯಲ್ಲಿ ಮತಾಂತರ ಮಾಡುವ ಅಲ್ಪ ಬುದ್ಧಿಯ ಜನರನ್ನು ನೀವು ಕಂಡಿರಬಹುದು. ತಮ್ಮ ಧರ್ಮದ ಧರ್ಮ ಗ್ರಂಥಗಳನ್ನು ನೀಡುವುದು, ಬಲವಂತದ ಮತಾಂತರ ಮಾಡುವುದು, ಆಸೆ ಅಮಿಷಗಳನ್ನೊಡ್ಡಿ ಮತಾಂತರ ಮಾಡುವುದು, ಪ್ರೀತಿಯ ಹೆಸರಲ್ಲಿ ಮತಾಂತರ ಹೀಗೆ ಹಲವು ಬಗೆಯ ದಾರಿಯನ್ನು ಅನುಸರಿಸಿ, ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡುವುದನ್ನು ನೀವು ಕೇಳಿರಬಹುದು. ಮತಾಂತರ‌ದ ವಿಚಾರದಲ್ಲಿ ಭಾರತಕ್ಕೆ ಮುಸ್ಲಿಮರು, ಕ್ರೈಸ್ತ‌ರಿಂದ ಸಮಾನ ಸಮಸ್ಯೆ ಇದೆ ಎನ್ನಬಹುದು.

ಅಂದ ಹಾಗೆ ಇದೊಂದು ವಿಚಿತ್ರ ಕ್ರೈಸ್ತ ಮತಾಂತರ‌ದ ಕಥೆ. ಏಸುವನ್ನು ನಂಬೀದರೆ ಅಂಧ ಕಣ್ಣು ಬರುತ್ತೆ ಅಂತ ಹೇಳಿ, ಮತಾಂತರಗೊಳಿಸಿದ ಕಥೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಆದ್ರೆ ಕುರುಡರೂ ದೃಷ್ಟಿ ಪಡೆಯುತ್ತಾರಂತೆ. ಕ್ರೈಸ್ತರಾಗಿ ಕಣ್ಣು ಬರುತ್ತೆ ಅಂತ ಹೇಳಿ ಹಿಂದೂ ಧರ್ಮದ ಯುವಕನನ್ನೊಬ್ಬನನ್ನು ‘ಕ್ರೈಸ್ತ’ ನಾಗುವಂತೆ ಮತಾಂತರಕ್ಕೆ ಹುನ್ನಾರ ನಡೆಸಲಾಗಿದೆ. ಕ್ರೈಸ್ತ ಧರ್ಮದ ‘ಫಾದರ್’ (ಪಾದ್ರಿ) ಯಿಂದ ಹಾವೇರಿಯ ಈ ಯುವಕನಿಗೆ ಮೋಸ ಮಾಡಲು ಪ್ರಯತ್ನ ನಡೆಸಿದ್ದಾನೆ.

ಇದೀಗ ಕ್ರೈಸ್ತರ ಫಾದರ್‌ನಿಂದಾಗಿ ಕ್ರೈಸ್ತನಾಗಿ ,ಅಲ್ಲಿ ಅವರು ಅನುಭವಿಸಿದ ಕಷ್ಟ‌ ಕೋಟಲೆಗಳನ್ನು ಸಾರ್ವಜನಿಕ‌ವಾಗಿ ಮಾತನಾಡಿ, ಮತಾಂಧರ ಹುನ್ನಾರವನ್ನು ಬೆತ್ತಲು ಮಾಡಿದ್ದಾರೆ. ತನಗಾದ ಮೋಸ ಇನ್ಯಾರಿಗೂ ಆಗಬಾರದು ಎನ್ನುವ ಸದುದ್ದೇಶದಿಂದ, ನಾನು ಮೋಸ ಹೋದಂತೆ ನೀವು ಮೋಸ ಹೋಗದಿರಿ ಎಂದು ಹಿಂದೂಗಳನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಯುವಕ ತನ್ನ ಮತಾಂತರದ ಕಥೆಯನ್ನು ಜನರೆದುರು ಬಿಚ್ಚಿಟ್ಟಿದ್ದಾರೆ. ಹಾಗೆಯೇ ತಾನು ಕ್ರೈಸ್ತ ಧರ್ಮದ ಬಂಧನದಿಂದ ಪಾರಾಗಿದ್ದೇ ಒಂದು ವಿಸ್ಮಯ ಎಂದು ಅವರು ಹೇಳಿದ್ದಾರೆ.

ಇವರ ಹೆಸರು ಕುಮಾರ್ ಅಂತ. 15 ನೇ ವಯಸ್ಸಿನ‌ಲ್ಲಿ ತಮ್ಮ ಅನಾರೋಗ್ಯ ಪೀಡಿತ ತಾಯಿಯನ್ನು ಊರಿನಲ್ಲಿ ಬಿಟ್ಟು ಬರುವ ಸಂದರ್ಭದಲ್ಲಿ ರೈಲ್ವೆ ಸ್ಟೇಷನ್‌ ಸಮೀಪದಲ್ಲಿ ಅಟೋ ಚಾಲಕ ಜಾನ್ ಎಂಬಾತ ಏಸುವನ್ನು ನಂಬಿದರೆ ಕಣ್ಣು ಬರುತ್ತದೆ ಎಂದು ಹೇಳುತ್ತಾನೆ. ನಿನ್ನ ಹಿಂದೂ ಧರ್ಮದ ದೇವರುಗಳ ಜೊತೆಗೆಯೇ ಏಸುವನ್ನು ನಂಬು ಎಂದು ಹೇಳುತ್ತಾನಂತೆ. ಕುಮಾರ್ ಅವರು ಏಸುವನ್ನು ನಂಬಿದರೆ ನನಗೇನೂ ನಷ್ಟ ಇಲ್ಲ ಎಂದುಕೊಂಡು, ಆ ಚಾಲಕನ ಬಳಿ ಚರ್ಚ್‌ ವಿಳಾಸ ಕೇಳುತ್ತಾರೆ. ಆ ಚರ್ಚ್ ಮನೆಯ ಪಕ್ಕದಲ್ಲಿ‌ಯೇ ಇತ್ತು. ಚರ್ಚ್‌ಗೆ ಹೋಗುತ್ತಾ ಬರುತ್ತಾ ಇದ್ದರು. ದಿನಗಳೆದ ಹಾಗೆಯೇ ಅಲ್ಲಿಗಾಂಧಿ ಬರ್ತಾ ಇದ್ದ ಜಾನ್‌ನ ಗೆಳೆಯ ಏಸು ಬಿಟ್ರೆ ಬೇರೆ ದೇವರೇ ಇಲ್ಲ ಅನ್ನುವ ಹಾಗೆ ಬ್ರೈನ್ ವಾಷ್ ಗೆ ತೊಡಗುತ್ತಾನೆ. ಕುಂಕುಮ ಇಡದಂತೆ ಮೈಂಡ್ ವಾಷ್ ಮಾಡಲಾರಂಭಿಸುತ್ತಾನೆ. ಜೀಸಸ್ ಬಿಟ್ಟು ಬೇರೆ ದೇವರಿಲ್ಲ. ಅವನನ್ನು ನಂಬು. ಕಣ್ಣು ಬರುತ್ತದೆ ಎಂದು ಮೋಡಿ ಮಾಡುತ್ತಾನೆ. ಆ ಸಮಯದಲ್ಲಿ ತಮ್ಮ ತಾಯಿಯನ್ನು ಸಹ ಕುಮಾರ್ ಕಳೆದುಕೊಳ್ಳುತ್ತಾರೆ.

ಆ ಸಂದರ್ಭದಲ್ಲಿ ಬೈಬಲ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಏಸುವನ್ನು ನಂಬಿದರೆ ಅದ್ಭುತ‌ಗಳು ನಡೆಯುತ್ತವೆ ಎಂದು ನಂಬಿದ್ದ ಅವರು, ಆ ಬಳಿಕ ಬೈಬಲ್ ಓದ ತೊಡಗುತ್ತಾರೆ. ಇವರು ಚರ್ಚ್ಗೆ ಹೋಗೋದು ಸಹ ಯಾರಿಗೂ ತಿಳಿದಿರಲಿಲ್ಲ. ಅಮ್ಮನ ಸಾವಿನ ಬಳಿಕ ಮನೆಯಲ್ಲಿ ಶುಭಕಾರ್ಯ ನಡೆಸಲು ತೀರ್ಮಾನಿಸಿದರು. ತಾಯಿಯ ಊರಿಗೆ ಹೋಗಿದ್ದ ಅಣ್ಣಂದಿರು ಊರಿಗೆ ಬಂದಾಗ, ಕುಮಾರ್ ಚರ್ಚ್‌ಗೆ ಹೋಗುವ ಬಗ್ಗೆ ಯಾರೋ ಹೇಳುತ್ತಾರೆ. ಅಣ್ಣ ಮನೆಯಲ್ಲಿ ಪೂಜೆ ಮಾಡುವಂತೆ ತಿಳಿಸುತ್ತಾರೆ. ಈ ಸಮಯದಲ್ಲಿ ಕುಮಾರ್ ಸಂಪೂರ್ಣ‌ವಾಗಿ ಕ್ರೈಸ್ತ ಧರ್ಮ‌ದ ಅನುಯಾಯಿಯಾಗಿರುತ್ತಾರೆ. ಕುಮಾರ್ ಪೂಜೆ ಮಾಡಲು ಒಪ್ಪುವುದಿಲ್ಲ. ಅಣ್ಣ ಒಂದೇಟು ಹೊಡೆಯುತ್ತಾರೆ. ಆಗ ಅಣ್ಣನಿಗೆ ತಾನು ಕ್ರೈಸ್ತ‌ನಾಗಿರುವುದು ಗೊತ್ತಾಗಿರುವುದರ ಅರಿವಾಗುತ್ತದೆ. ತಂದೆ ತಾಯಿಗೆ ಕ್ಯಾಂಡಲ್ ಹಚ್ಚುವೆ. ಪೂಜೆ ಮಾಡಲಾರೆ ಎನ್ನುತ್ತಾರೆ ಕುಮಾರ್. ಅಣ್ಣ ಈ ರೀತಿಯಾಗಿ ಇರುವುದಾದರೆ ಈ ಮನೆಯಲ್ಲಿ ಇರಬೇಡ ಎಂದು ಅಣ್ಣ ಹೇಳುತ್ತಾರೆ. ಕುಮಾರ್ ನನಗೆ ಏಸುವೇ ಬೇಕೆಂದು ಬ್ಯಾಗ್ ಪ್ಯಾಕ್ ಮಾಡಿ ಹೊರಡಲುನುವಾಗುತ್ತಾರೆ. ಆಗ ಹಿರಿಯರ ಮಾತು ಕೇಳಿ ಮತ್ತೆ ಮನೆಯಲ್ಲೇ ಉಳಿಯುತ್ತಾರೆ.

ಅಣ್ಣನ ಮದುವೆ ಆದ ಮೇಲೆ ಅಣ್ಣಂದಿರು ತಾಯಿಯ ಊರಿಗೆ ತೆರಳುತ್ತಾರೆ. ಹಾವೇರಿಯಲ್ಲಿ‌ಯೇ ಕುಮಾರ್ ಇರುತ್ತಾರೆ. ಫಾಸ್ಟಿಂಗ್ ಸಂದರ್ಭದಲ್ಲಿ ಒಂದು ಹನಿ ನೀರು ಕುಡಿಯದೆ ಉಪವಾಸ ಮಾಡಿದ್ದರು. ಆದರೂ ಕಣ್ಣು ಬರಲಿಲ್ಲ. ಮತಾಂತರ ಮಾಡಿಕೊಳ್ಳಲು ಇವರ ಕುರುಡುತನವನ್ನೇ ಬಳಸಿಕೊಂಡಿದ್ದರು ಕ್ರೈಸ್ತರು. ಆ ಸಂದರ್ಭದಲ್ಲಿ ಆ ಚರ್ಚ್‌ಗೆ ಹೊಸ ಮುಖಗಳು ಸಹ ಕಂಡುಬಂದವು. ಅದರಲ್ಲಿ‌ದ್ದ ಹೆಣ್ಣು ಮಕ್ಕಳಿಗೆ ದೆವ್ವ ಬರುತ್ತದೆ. ಅವರನ್ನು ಫಾಸ್ಟರ್ ನೀವ್ಯಾರು ಅಂತ ಪ್ರಶ್ನಿಸಿದಾಗ ‘ನಾವೆಲ್ಲ ಗುಡ್ಡದಲ್ಲಿರೋರು’ ಅಂತ (ಹಿಂದೂ ದೇವತೆಗಳ‌ನ್ನು ಅವಹೇಳನ) ಹೇಳ್ತಾರೆ. ಈ ಸಂದರ್ಭದಲ್ಲಿ ಕುಮಾರ್‌ಗೆ ಅನುಮಾನ ಬಂದ್ರೂ, ಅವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆ ಬಳಿಕ ಅವರ ಮತಾಂತರ ಆಗಿದ್ದ ಅದೇ ಊರಲ್ಲಿದ್ದ ಸಂಬಂಧಿಕರೊಂದಿಗೆ ತಾನು ಕಠಿಣ ಉಪವಾಸ ಮಾಡಿದರೂ ಕಣ್ಣು ಬಂದಿಲ್ಲ ಯಾಕೆ ಎಂದು ಕೇಳುತ್ತಾರೆ. ಆಗ ಅವನು ವಿದೇಶದಿಂದ ಒಬ್ಬ ಫಾಸ್ಟರ್ ಬಂದು ನಿನ್ನ ತಲೆ ಮೇಲೆ ಕೈ ಇಟ್ಟ ತಕ್ಷಣ ನಿನಗೆ ಕಣ್ಣು ಬರುತ್ತದೆ ಎನ್ನುತ್ತಾರೆ‌ ಆದರೆ ಆ ವ್ಯಕ್ತಿ ಬಂದೇ ಇಲ್ಲ. ಬಳಿಕ ಮತ್ತೆ ಹೋಗಿ ಅವರನ್ನು ಪ್ರಶ್ನೆ ಮಾಡುತ್ತಾರೆ. ಅಷ್ಟೊಂದು ನಂಬಿಕೆ ಇತ್ತು ಏಸುವಿನ ಮೇಲೆ ಕುಮಾರ್‌ಗೆ. ಮತ್ತೆ ಪ್ರಶ್ನೆ ಮಾಡಿದಾಗ, ಅದಕ್ಕೆ ಅವರ ಸಹೋದರ ನಿನಗೆ ಸ್ವರ್ಗ‌ದಲ್ಲಿ ಕಣ್ಣು ಬರುತ್ತದೆ ಎಂದು ಹೇಳುತ್ತಾನೆ. ಇದು ಕುಮಾರ್‌ಗೆ ತನಗೆ ಕಣ್ಣು ಬರೋದಿಲ್ಲ ಅನ್ನುವುದು ಸ್ಪಷ್ಟವಾಗುತ್ತದೆ. ಆಗ ಬೈಬಲ್ ಓದುವ ಯೋಚನೆ ಬರುತ್ತದೆ‌. ಆಗ ಒಂದು ಕಣ್ಣು ಸ್ವಲ್ಪ ಕಣ್ಣು ಕಾಣಿಸ್ತಾ ಇತ್ತು. ಬೈಬಲ್ ಓದುತ್ತಿದ್ದಂತೆ ಕ್ರೈಸ್ತ‌ರ ಮೋಸ ,ಮತಾಂತರದ ಹುನ್ನಾರ ಅರ್ಥ ಮಾಡಿಕೊಳ್ಳುತ್ತಾರೆ.

ಅಲ್ಲಿಂದ ಕ್ರೈಸ್ತ‌ರಿಂದ ದೂರ ಸರಿಯುತ್ತಾರೆ. ಅವರು ತೆಲಂಗಾಣ‌ದ ಶಿವಶಕ್ತಿ ಕರುಣಾಕರ ಅವರ ವಿಡಿಯೋ ನೋಡ್ತಾರೆ. ಅವರು ಕ್ರೈಸ್ತ‌ನಾಗಿ ಘರ್ ವಾಪಸಿ ಆದ ವ್ಯಕ್ತಿ. ಮತಾಂತರ‌ದ ವಿರುದ್ಧ ಹೋರಾಟ ನಡೆಸುತ್ತಿರುವ ವ್ಯಕ್ತಿ. ಅವರ ತ್ರಿಜಿ ಸಿರೀಸ್ ನೋಡಿದ ಮೇಲೆ ಅವರಿಗೆ ಕ್ರೈಸ್ತ ಧರ್ಮದ ಹುಳುಕುಗಳ ಸ್ಪಷ್ಟ ಚಿತ್ರಣ ದೊರಕುತ್ತದೆ. ಆ ಸಮಯದಲ್ಲಿ ಇನ್ನೊಂದು ಕಣ್ಣು ಸಹ ಹೊರಟು ಹೋಗುತ್ತದೆ.

ಹುಟ್ಟಿನಿಂದಲೇ ಕಣ್ಣಿನ ಸಮಸ್ಯೆ ಇತ್ತು. ಆ ಬಳಿಕ ಎಳವೆಯಲ್ಲಿ ಕ್ರಿಕೆಟ್ ಆಡುವಾಗ ಕಣ್ಣಿಗೆ ಚೆಂಡು ಬಿದ್ದು, ಕಣ್ಣು ಶಾಶ್ವತ‌ವಾಗಿ ಕುರುಡಾಗುತ್ತದೆ. ಡಾಕ್ಟರ್ ಹತ್ತಿರ ಹೋಗದೆ ಏಸುವನ್ನು ನಂಬಿ ಕಣ್ಣು ಬರುತ್ತೆ ಅಂತ ಕಾದು ಕುಳಿತ ಕುಮಾರ್‌ಗೆ ಈ ಮತಾಂತರ‌ದ ಭೂತ ನೀಡಿದ್ದು ಎರಡೂ ಕಣ್ಣುಗಳ ಕುರುಡುತನ.

ಈಗ ಎಚ್ಚೆತ್ತುಕೊಂಡಿದ್ದಾರೆ ಕುಮಾರ್. ಆ ಬಳಿಕ ತಾನೊಬ್ಬ ಹಿಂದೂ ಆಗಿಯೇ ಇರಬೇಕು ಎಂದು ನಿರ್ಧಾರ ಮಾಡುತ್ತಾರೆ. ತನ್ನಂತೆ ನೀವೂ ಯಾವುದೋ ಆಮಿಷಕ್ಕೆ ತುತ್ತಾಗಿ ಮತಾಂತರದ ಭೂತಕ್ಕೆ ಬಲಿಯಾಗದಿರಲಿ ಎಂದು ತಮ್ಮ ಕಥೆಯನ್ನು ತೆರೆದಿಟ್ಟುಕೊಂಡಿದ್ದಾರೆ. ನನ್ನಂತೆ ನೀವ್ಯಾರೂ ಆಗಬೇಡಿ ಎನ್ನುವ ಕಾಳಜಿ ಇವರದು. ನಿಮ್ಮ ಹತ್ತಿರದಲ್ಲೂ ಮತಾಂತರಿಗಳಿರಬಹುದು. ಹಿಂದೂಗಳೇ ಟಾರ್ಗೆಟ್ ಆಗಬೇಡಿ‌. ಜಾಗೃತರಾಗಿರಿ ಎನ್ನುವುದು ಇವರ ಮನದಾಳ.

Post Card Balaga:
Related Post