X

ಸ್ಫೋಟಕ ಸುದ್ಧಿ: ಬಯಲಾಯ್ತು ಕಾಂಗ್ರೆಸ್ ಹಾಗೂ ಎಸ್‍ಡಿಪಿಐ ಅಕ್ರಮ ಸಂಬಂಧ!! ಕೊಲೆಗಡುಕರನ್ನೇ ಅಪ್ಪಿಕೊಂಡ ಕಾಂಗ್ರೆಸ್!!

ನರೇಂದ್ರ ಮೋದಿಯವರನ್ನು ಮಣಿಸಲು ದೇಶದ ಎಲ್ಲಾ ವಿರೋಧಿ ಬಣಗಳು ಒಂದಾದರೆ, ಇತ್ತ ಕರ್ನಾಟಕದಲ್ಲಿ ಬಿಜೆಪಿಯನ್ನು ಮಣಿಸಲು ರಾಜ್ಯದ ಎಲ್ಲಾ ಪಕ್ಷಗಳು ಒಂದಾಗಿವೆ. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನ ಬಲ ಕಳೆದುಕೊಳ್ಳುತ್ತಿದ್ದು ಕರ್ನಾಟಕವೊಂದೇ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಇತ್ತ ಬಿಜೆಪಿ ಕರ್ನಾಟಕದಲ್ಲಿ ಈ ಬಾರಿ ತಮ್ಮದೇ ಸರಕಾರ ರಚನೆ ಮಾಡಲು ತಂತ್ರ ರೂಪಿಸುತ್ತಿದ್ದು, ಕಾಂಗ್ರೆಸ್ ನ್ನು ಮಣಿಸಲು ತಯಾರಿ ನಡೆಸಿದೆ. ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿಯುವುದರಿಂದ ಬಾಕಿ ಉಳಿದಿರುವ ಎಲ್ಲಾ ಪಕ್ಷಗಳು ಈ ಬಾರಿ ಸ್ನೇಹ ಬೆಳೆಸಿ ಒಗ್ಗಟ್ಟಾಗುವ ಮುನ್ಸೂಚನೆ ನೀಡಿದ್ದಾರೆ.!

ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ತಂತ್ರಗಾರಿಕೆ..!

ಒಂದೆಡೆ ಇಡೀ ದೇಶಾದ್ಯಂತ ತಮ್ಮ ಪಕ್ಷ ಬೆಳೆಸಿಕೊಂಡು ವಿರೋಧೀಗಳನ್ನೆಲ್ಲಾ ಮಕಾಡೆ ಮಲಗಿಸಿಕೊಂಡು ಬರುತ್ತಿರುವ ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಲು ಕಾಂಗ್ರೆಸ್ ಭಾರೀ ತಂತ್ರವೊಂದನ್ನು ರೂಪಿಸಿದೆ‌. ಈಗಾಗಲೇ ನಡೆದ ಎಲ್ಲಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲೂ ಬಿಜೆಪಿಯೇ ಮೇಲುಗೈ ಸಾಧಿಸಿರುವುದರಿಂದ ಕಂಗಾಲಾಗಿರುವ ಕಾಂಗ್ರೆಸ್ , ಒಂಟಿಯಾಗಿ ಚುನಾವಣೆ ಎದುರಿಸಲು ಹಿಂದೇಟು ಹಾಕಿದೆ. ಅದಕ್ಕಾಗಿಯೇ ರಾಜ್ಯದ ಬೇರೆ ಬೇರೆ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಹೇಗಾದರೂ ಬಿಜೆಪಿಯನ್ನು ಸೋಲಿಸಲೇಬೇಕು ಎಂಬ ಹಠಕ್ಕೆ ಬಿದ್ದಿದೆ.

ಕಾಂಗ್ರೆಸ್ ಗೆ ಅತೀ ದೊಡ್ಡ ಪ್ರಮಾಣದಲ್ಲಿ ಬೀಳುವ ಮತ ಎಂದರೆ ಅದು ಅಲ್ಪಸಂಖ್ಯಾತರ ಮತ, ಕಾಂಗ್ರೆಸ್ ನಂಬಿಕೊಂಡಿರುವುದು ಇದನ್ನೇ ಹೊರತು ಬಹುಸಂಖ್ಯಾತರ ಮತಗಳನ್ನಲ್ಲ. ಅದಕ್ಕಾಗಿಯೇ ಮುಸ್ಲೀಮರ ಮತಗಳು ಎಲ್ಲೂ ವಿಭಜನೆ ಆಗಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಗೆ ಎದುರಾಳಿಗಳಾಗಿ ಸ್ಪರ್ಧಿಸುವ ಎಸ್ ಡಿ ಪಿ ಐ ಅಭ್ಯರ್ಥಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಚುನಾವಣೆಯಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ.

ಎಲ್ಲಾ ಕ್ಷೇತ್ರಗಳಲ್ಲೂ ನಾಮಪತ್ರ ಹಿಂತೆಗೆತ..!

ಕರಾವಳಿಯಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಎಸ್ ಡಿ ಪಿ ಐ ಪಕ್ಷದ ಅಭ್ಯರ್ಥಿಗಳು ಇದೀಗ ಏಕಾಏಕಿ ತಾವು ಸಲ್ಲಿಸಿದ್ದ ನಾಮಪತ್ರ ಹಿಂಪಡೆದಿದ್ದಾರೆ. ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ಎಸ್ ಡಿ ಪಿ ಐ ನಿಂದ ಸ್ಪರ್ಧಿಸಬೇಕಿದ್ದ ತನ್ಜಿಮ್ ತಟಸ್ಥರಾಗಿದ್ದು, ತಮ್ಮ ನಾಮಪತ್ರ ಸಲ್ಲಿಸಲೇ ಇಲ್ಲ. ಇತ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಕೂಡಾ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಎಸ್ ಡಿ ಪಿ ಐ ನಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿ ಕೂಡಾ ಏಕಾಏಕಿ ತಮ್ಮ ನಾಮಪತ್ರ ಹಿಅಮಪಡೆದಿದ್ದಾರೆ.!

ಹಿಂದೂಗಳಲ್ಲಿ ಒಗ್ಗಟ್ಟು ಅಗತ್ಯ..!

ಒಂದೆಡೆ ಬಿಜೆಪಿಯನ್ನು ಹೇಗಾದರೂ ಮಣಿಸಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಮತ್ತು ವಿರೋಧಿ ಬಣಗಳಲ್ಲಾ ಒಂದಾಗಿ ಕೈ ಜೋಡಿಸಿದೆ. ಆದರೆ ಹಿಂದೂಗಳಿಗೆ ಇನ್ನೂ ಇವೆಲ್ಲಾ ಅರ್ಥವಾಗಿಲ್ಲ ಎಂಬಂತೆ ಕಾಣುತ್ತಿದೆ. ಯಾಕೆಂದರೆ ಎಸ್ ಡಿ ಪಿ ಐ ಕಾರ್ಯಕರ್ತರಿಂದಲೇ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆ ನಡೆದು ಆರೋಪಿಗಳಿಗೆ ಶಿಕ್ಷೆಯೂ ಆಗಿತ್ತು. ಆದರೆ ಕಾಂಗ್ರೆಸ್ ತನ್ನ ಅಧಿಕಾರ ಬಳಸಿಕೊಂಡು ಎಲ್ಲಾ ಆರೋಪಿಗಳಿಗೆ ಖುಲಾಸೆ ನೀಡುವಂತೆ ಮಾಡಿತ್ತು. ಇದೀಗ ಇವೆಲ್ಲಾ ಒಟ್ಟಾಗಿ ಮತ್ತೆ ಬಿಜೆಪಿಯ ಮೇಲೆ ಸವಾರಿ ಮಾಡಲು ಉಪಾಯ ಹೂಡಿದೆ.

ಹಿಂದೂ ಕಾರ್ಯಕರ್ತರ ಕೊಲೆಗೆ ಕಾರಣರಾದವರ ಜೊತೆ ಇದೀಗ ಕಾಂಗ್ರೆಸ್ ಕೂಡಾ ಸೇರಿಕೊಳ್ಳುತ್ತಿದ್ದು , ವೋಟ್ ಹಾಕುವುದಕ್ಕೂ ಮುನ್ನ ಹಿಂದೂಗಳು ಒಂದು ಬಾರಿ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ..!

–ಅರ್ಜುನ್

Editor Postcard Kannada:
Related Post