X

ಉತ್ತರ ಪ್ರದೇಶದ ರೈಲ್ವೇ ನಿಲ್ದಾಣಕ್ಕೆ ಜನಸಂಘದ ದಿಗ್ಗಜನ ಹೆಸರಿಟ್ಟ ಸನ್ಯಾಸಿ ಸಿಎಂ.! ತ್ಯಾಗಿಗೆ ನಮೋ ಎಂದ ಯೋಗಿ…!

ಫೈರ್ ಬ್ರಾಂಡ್ ಅಂತಾನೇ ಪ್ರಖ್ಯಾತಿಯನ್ನು ಹೊಂದಿರುವಂತಹ ಯೋಗಿ ಆದಿತ್ಯನಾಥರು ಒಬ್ಬ ಮಾಸ್ಟರ್ ಮೈಂಡ್ ಅಂತಾನೇ ಹೇಳಬಹುದು!! ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಅಲ್ಲಿನ ಬದಲಾವಣೆಗಳು ನಿಜವಾಗಿಯೂ ಗ್ರೇಟ್… ಯಾವುದೇ ಸಮಸ್ಯೆಯನ್ನಾದರೂ ತೆಗೆದುಕೊಳ್ಳಿ, ಉತ್ತರ ಪ್ರದೇಶ ಈ ಹಿಂದೆ ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದಷ್ಟು ಅಪರಾಧಗಳು ತುಂಬಿ ತುಳುಕುತ್ತಿತ್ತು!! ಉತ್ತರ ಪ್ರದೇಶಕ್ಕೆ ಹೋಗುವುದೇ ದೊಡ್ಡ ಅಪಾಯ ಎನ್ನುವಂತಿದ್ದ ಪರಿಸ್ಥಿತಿಯನ್ನು ಬದಲು ಮಾಡಿದ್ದು ಯೋಗಿ ಆದಿತ್ಯನಾಥ್ ಸರಕಾರ!! ನಿರಾಶ್ರಿತರಿಗೆ ಸೂರನ್ನು ಮಾತ್ರವೇ ಕಲ್ಪಿಸಿಕೊಡದೇ ಜೊತೆಗೆ, ಉದ್ಯೋಗವನ್ನು ಕಲ್ಪಿಸಿದ ಯೋಗಿ ಸರಕಾರದ ಬಲದಿಂದ ಇವತ್ತು ಉತ್ತರ ಪ್ರದೇಶ ದಿನೇ ದಿನೇ ಅಪರಾಧ ರಹಿತವಾಗುತ್ತ ಹೋಗುತ್ತಿದೆ!! ಭಾರತ ಒಂದು ಹಿಂದೂ ರಾಷ್ಟ್ರವಾಗಿದ್ದರು ಸಹ ಮೊಘಲರ ಆಕ್ರಮಣದಿಂದ ತಮಗಿಷ್ಟ ಬಂದಂತೆ ಎಲ್ಲಾ ಕಡೆ ಅವರ ಹೆಸರುಗಳನ್ನೇ ನಾಮಕರಣ ಮಾಡುತ್ತಾನೇ ಬಂದಿದ್ದರು!! ಇದೀಗ ಯೋಗಿಜೀ ಅಧಿಕಾರವನ್ನು ವಹಿಸಿದ ಬಳಿಕ ರಾಷ್ಟ್ರವಾದರೂ ಸಹ ಯೋಗೀಜೀ ಸರಕಾರ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ!!

ಮುಗಲಸರಾಯ್ ರೈಲ್ವೆ ಸ್ಟೇಷನ್ನಿನ ಹೆಸರನ್ನು ಬದಲಿಸಿದ ಯೋಗಿ ಆದಿತ್ಯನಾಥ್!!

ಉತ್ತರ ಪ್ರದೇಶದಲ್ಲಿ ಮೊಘಲರ ಅಟ್ಟಹಾಸವನ್ನು ಮೆರೆದಿದ್ದಕ್ಕೆ ಅನೇಕ ಕುರುಹುಗಳಿವೆ!! ಅದನ್ನೀಗ ಒಂದೊಂದಾಗಿಯೇ ಅಳಿಸಿ ಹಾಕಲು ಯೋಗೀಜೀ ಮಾಸ್ಟರ್ ಪ್ಲಾನ್‍ಗಳನ್ನೇ ಮಾಡಿದ್ದಾರೆ!! ಈಗಾಗಲೇ ಉತ್ತರಪ್ರದೇಶವನ್ನು ಕಂಡು ಕೇಳರಿಯದಂತೆ ಬದಲಾವಣೆ ಮಾಡಿದ ಯೋಗೀಜೀ ಇದೀಗ ಮತ್ತೊಂದು ಮಹತ್ತರ ಬದಲಾವಣೆಯನ್ನೇ ಮಾಡಿದ್ದಾರೆ!! ಉತ್ತರಪ್ರದೇಶದ ಮುಘಲ್ ಸರಾಯ್ ರೈಲ್ವೇ ಸ್ಟೇಶನ್ನಿನ ಹೆಸರನ್ನ ಇದೀಗ ಬದಲಿಸಿರುವ ಯೋಗಿ ಆದಿತ್ಯನಾಥರ ಸರ್ಕಾರ ಇದೀಗ ಅದನ್ನ ಪಂಡಿತ್ ದೀನದಯಾಳ್ ಸ್ಟೇಷನ್ ಅಂತ ಮರುನಾಮಕರಣ ಮಾಡಿಬಿಟ್ಟಿದೆ. ಮುಘಲ್ ಸರಾಯ್ ನ ಲೋಕೋಪಯೋಗಿ ಇಲಾಖೆಯ ಮಹಾ ಸಚಿವ ಹಾಗು ಚಂದೋಲಿಯಿಂದ ಸಂಸದರಾಗಿರುವ ಮಹೇಂದ್ರ ನಾಥ್ ಪಾಂಡೇ ಯವರು ಮಾಡಿದ ಪ್ರಯಾಸದ ಇದೀಗ ಫಲ ಕೊಟ್ಟಿದೆ.

ಪಂಡಿತ್ ದೀನದಯಾಳ್ ಉಪಾಧ್ಯಾಯರು ಇದೇ ಮುಗಲಸರಾಯ್ ರೇಲ್ವೆ ಸ್ಟೇಷನ್ನಿನಲ್ಲಿ ನಿಗೂಢವಾಗಿ 1962 ರಲ್ಲಿ ಸಾವನ್ನಪ್ಪಿದ್ದರು. ಇದೇ ಕಾರಣಕ್ಕಾಗಿ ಇದೀಗ ಯೋಗಿ ಸರ್ಕಾರ ಇದನ್ನ ಮುಘಲ್ ಸರಾಯ್ ಹೆಸರನ್ನ ಬದಲಿಸಿ ಇದೀಗ ಪಂಡಿತ್ ದೀನದಯಾಳ್ ಸ್ಟೇಷನ್ ಎಂದು ನಾಮಕರಣ ಮಾಡಿದೆ.

ಅದಲ್ಲದೆ ಮುಂದಿನ ವರ್ಷ ನಡೆಯಲಿರುವ ಕುಂಭಮೇಳದ ವೇಳೆಗೆ “ಅಲಹಾಬಾದ್’ಗೆ ಮರುನಾಮಕರಣ ಮಾಡುವ ಸಿದ್ಧತೆ ನಡೆದಿದ್ದು “ಪ್ರಯಾಗ್‍ರಾಜ್’ ಎಂದು ಹೆಸರಿಡಲು ಕೂಡಾ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ. ಅಷ್ಟಕ್ಕೂ “ಪ್ರಯಾಗ್‍ರಾಜ್’ ಎಂದು ಹೆಸರಿಡಲು ನಿರ್ಧರಿಸಿದ್ದಕ್ಕೂ ಬಲವಾದ ಕಾರಣ ಇದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ ಕಾರಣಕ್ಕಾಗಿ ಅಲಹಾಬಾದ್ ಅನ್ನು “ಪ್ರಯಾಗ್‍ರಾಜ್’ ಎಂದು ನಾಮಕರಣ ಮಾಡಬೇಕೆನ್ನುವುದು ಸರಕಾರದ ಉದ್ದೇಶ. ಈಗಾಗಲೇ ಕುಂಭ ಮೇಳದ ಬ್ಯಾನರ್ಗಳಲ್ಲಿ ಅಲಹಾಬಾದ್ ಎಂಬ ಹೆಸರನ್ನು ಪ್ರಯಾಗ್‍ರಾಜ್ ಆಕ್ರಮಿಸಿಕೊಂಡಿದೆ!! ಅದಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅಲಹಾಬಾದ್ ಎಂದು ನಾಮಕರಣ ಮಾಡಿರುವಂತಹದ್ದು ಮೊಘಲರು!! ಮೊಘಲರ ಕುರುಹುವನ್ನು ಹೊಂದೊಂದಾಗಿಯೇ ಉತ್ತರ ಪ್ರದೇಶದಿಂದ ಇಲ್ಲವಾಗಿಸುವಲ್ಲಿ ಯೋಗೀಜೀ ನಿರತರಾಗಿದ್ದಾರೆ!! ಅದಲ್ಲದೆ ಈಗಾಗಲೇ ಫಜಿಯಾಬಾದ್ ಅನ್ನು ಕೂಡಾ ಅಯೋಧ್ಯಾ ಧಾಮ್ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಈ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂಬ ಹೆಸರನ್ನಿಡುವ ಮೂಲಕ ಯೋಗಿ ಆದಿತ್ಯನಾಥರು ಮತ್ತಷ್ಟು ಪ್ರಸಿದ್ಧಿಯನ್ನು ಹೊಂದುತ್ತಿದ್ದಾರೆ!!

ಹೀಗೆ ಹಿಂದೂ ರಾಷ್ಟ್ರವನ್ನು ಮುಸ್ಲಿಮರ ಆಕ್ರಮಣದಿಂದ ಇಡೀ ದೇಶವನ್ನೇ ಬದಲಾಯಿಸಿಬಿಟ್ಟಿದ್ದರು!! ಇದೀಗ ಉತ್ತರ ಪ್ರದೇಶದಲ್ಲಿ ಒಂದೊಂದಾಗಿಯೇ ಇವರ ಕುರುಹುಗಳನ್ನು ಇಲ್ಲವಾಗಿಸುವಲ್ಲಿ ಶ್ರಮವಹಿಸುವ ಹಾಗೆ ಪ್ರತೀಯೊಮದು ರಾಜ್ಯದಲ್ಲಿ ಕೂಡಾ ಯೋಗಿ ಆದಿತ್ಯನಾಥರಂತಹ ಮುಖ್ಯಮಂತ್ರಿ ಹುಟ್ಟಿ ಬಂದರೆ ಭಾರತದಲ್ಲಿ ಬದಲಾವಣೆಯ ಮಹಾಪೂರವೇ ಆಗುತ್ತದೆ!!

  • ಪವಿತ್ರ
Editor Postcard Kannada:
Related Post