ಯಾವಾಗ ಮುಂಬೈನಲ್ಲಿ ಹಿಂಸಾಚಾರ ಭುಗಿಲೆದ್ದಿತೋ, ಒಂದಷ್ಟು ಜನ ಸ್ಪಷ್ಟವಾಗಿಯೇ ಹೇಳಿದರು! ‘ಇದು ದಲಿತರೆನ್ನಿಸಿಕೊಂಡವರ ಕೃತ್ಯವಲ್ಲ’ ಎಂದು! ಆದರೆ, ಸ್ವಾತಂತ್ರ್ಯ ಆಜಾದಿ ಎನ್ನುವ ಹೆಸರಿನಲ್ಲಿ ಇನ್ಯಾವುದೋ ಕಾಣ ‘ಕೈ’ ಜಾತಿಗಳ ನಡುವೆ ಬಿರುಕು ಮೂಡಿಸುವ ಪೂರ್ವ ಯೋಜನೆಗೆ ತಕ್ಕನಾಗಿ ಕೆಲಸ ಮಾಡಿತ್ತು! ಅದರಲ್ಲೂ, ಜಿಗ್ನೇಶ್ ಹಾಗೂ ಉಮರ್ ಕಾಲಿಟ್ಟ ದಿನವೇ ಹಿಂಸಾಚಾರವಾದದ್ದು ಒಂದಷ್ಟು ಸತ್ಯಗಳನ್ನು ಹೊರಗೆಡವಿತ್ತು!
ಈ ಉಮರ್ ಖಲೀದ್ ಎಂಬುವವನಿದ್ದಾನಲ್ಲ?! ಅಫ್ಜಲ್ ಗುರುವಿನ ಅಪ್ಪಟ ಅಭಿಮಾನಿಯೋ ಶಿಷ್ಯನೋ! ಒಟ್ಟಿನಲ್ಲಿ, ಅಫ್ಜಲ್ ಗುರುವಿಗೆ ಕ್ಷಮೆ ನೀಡಿ
ಎಂದು ಹೋರಾಡಿದ್ದ ಈತನ ಅಪ್ಪ ಸಿಮಿ ಘಟನೆಯ ಸಕ್ರಿಯ ಕಾರ್ಯಕರ್ತ! ಹುಟ್ಟುತ್ತಲೇ ಜಿಹಾದ್ ಅಫೀಮು ತಿಂದವನಿಗೆ ಮದವೇರದೇ ಇರುತ್ತದೆಯೇ?! ಇವನಲ್ಲೂ ಪಾಕಿಸ್ಥಾನವೊಂದು ಹುಟ್ಟಿತು! ನಾನು ಭಾರತೀಯನೆನ್ನುತ್ತಲೇ ಭಾರತವನ್ನು ಸೀಳ ಬಯಸಿದವನನ್ನು ಭೀಮಾ ಕೋರೆಗಾವೋನ್ ಆಚರಣೆಗೆ ಕರೆಸಿದರು! ಅದಕ್ಕೂ ಇವನಿಗೂ ಇದ್ದ ಸಂಬಂಧವಾದರೂ ಏನು?! ಬಿಡಿ! ಜಿಗ್ನೇಶ್ ಮೇವಾನಿಯೆಂಬುವವನು ನಿಷೇಧಿತ ಉಗ್ರ ಸಂಘಟನೆಗಳ ಕೃಪಾದೃಷ್ಟಿಯಲ್ಲಿ ಬೆಳೆದವನು! ಅಂತಹವನನ್ನೂ ಸಂಭ್ರಮಿಸೆಂದು ಕರೆಸಲಾಗಿತ್ತು! ಒಟ್ಟಾರೆಯಾಗಿ, ದೇಶದ್ರೋಹದ ಆಪಾದನೆಗಳೇ ಇದ್ದವರು ಮುಖ್ಯ ಅತಿಥಿಗಳನ್ನಾಗಿ ಕರೆಸಬೇಕೆಂದಾಗಲೇ ಸೂಕ್ಷ್ಮತೆ ಸ್ಪಷ್ಟವಾಗಿತ್ತು! ಆಗಬಾರದ್ದೊಂದು ಆಗಲಿದೆ!
ಇಷ್ಟು ವರ್ಷ ಕಾರ್ಯಕ್ರಮ ನಡೆದರೂ ಸಹ ಒಮ್ಮೆಯೂ ಜಾತಿಯಾಧಾರದ ಮೇಲೆ ಗಲಾಟೆಯಾಗದೇ ಇದ್ದದ್ದು ತಕ್ಷಣವೇ ಗಲಾಟೆಯಾಯಿತು! ಅದೂ ಸಹ, ಈವೆರಡು ಪ್ರಾಣಿಗಳು ಕಾಲಿಟ್ಟು, ಬಹಿರಂಗವಾಗಿ ‘ರಸ್ತೆಯುದ್ಧ’ ಘೋಷಿಸಿದ 12 ಗಂಟೆಗಳಲ್ಲಿ, ಅಮಾಯಕನಾದ ರಾಹುಲ್ ಬಾಬಾಜಿಯ ಪ್ರಾಣ ತೆಗೆದಿತ್ತು!
ತಕ್ಷಣವೇ ವಿಚಾರಣೆ ಆರಂಭಿಸಿದ ಇಂಟೆಲಿಜೆನ್ಸ್ ಭೀಕರ ಅನುಮಾನವೊಂದನ್ನು ವ್ಯಕ್ತಪಡಿಸಿತ್ತು!
ಹಾ! ಇದು ದಲಿತರು ಪೇಶ್ವಾಗಳ ಮಧ್ಯೆ ನಡೆದಂತಹ ವಿವಾದವಲ್ಲ! ಬದಲಾಗಿ, ಕಾರ್ಯಕ್ರಮದ ನೆಪದಲ್ಲಿ ಒಂದಷ್ಟು ಆತಂಕವಾದಿಗಳು ಅಥವಾ ನಕ್ಸಲ್ ಗಳು ಬಳಸಿಕೊಂಡು ಸೃಷ್ಟಿಸಲಾಗಿರುವ ವಿವಾದ.” ಎಂಬುದು!
ಮುಂಚೆ ಅನುಮಾನಕ್ಕಷ್ಟೇ ಸೀಮಿತವಾಗಿದ್ದದ್ದು, ಈಗ ನೂರಕ್ಕೆ ನೂರು ನಿಜವಾಗಿ ಹೋಗಿದೆ! ಯಾವ ಮಾಧ್ಯಮವೂ ಸತ್ಯವನ್ನು ತೋರುವ
ಧೈರ್ಯ ತೋರುವುದಿಲ್ಲವಾದರೂ, ವಾಸ್ತವ ಹೇಳಿಬಿಡುತ್ತೇನೆ! ಮತ್ತದೇ ಹಿಂಸಾಚಾರಕ್ಕೆ ತೊಡಗಿದವರು ಕೂಗಿದ್ದು ‘ಆಜಾದಿ’ ಘೋಷಣೆಯನ್ನು! ಮತ್ತದೇ, ಎರಡು ವರ್ಷಗಳ ಹಿಂದೆ ಜೆಎನ್ ಯು, ದೆಹಲಿಯಲ್ಲಿ ಕೇಳಿದ್ದ ಕೂಗು! ಏನು ಗೊತ್ತಾ?!
‘ಚೀನ್ ಕೆ ಲೇಂಗಿ ಆಜಾದಿ! ಭಾರತ್ ಕೀ ಬರ್ಬಾದಿ! ಭಾರತ್! ತೇರೆ ತುಕಡೇ ತುಕಡೇ ಹೋಂಗೇ!”
ಸರಿಯಾಗಿಯೇ ಕೇಳಿಸಿದೆಯಲ್ಲವಾ?! ‘ಚೀನ್ ಕೆ ಲೇಂಗಿ ಆಜಾದಿ!” ಇದಾಗಿದ್ದು ಇನ್ನೆಲ್ಲೋ ಅಲ್ಲ, ಮೊನ್ನೆಯಷ್ಟೇ ಭಿಮಾ ಕೋರೆಗಾವೋನ್ ವಿವಾದದಲ್ಲಿ
ಕೇಳಿಬಂದ ಘೋಷಣೆಗಳಿವು!
ಯಾವತ್ತಿಗೂ ಸಹ 20,000 ಕ್ಕಿಂತ ಜಾಸ್ತಿ ಸೇರದಿದ್ದ ಜನ, ಇದ್ದಕ್ಕಿದ್ದಂತೆ 3,00,000 ಜನವಾಗಿದ್ದು ಹೇಗೆ?!
ಪಿಎಫ್ ಐ ಮತ್ತು ಯಲ್ಗಾರ್ ಪರಿಷದ್ ಎಂಹ ನಕ್ಸಲ್ ಸಂಘಟನೆಯೊಂದು ಜವಾಬ್ದಾರಿ ಹೊತ್ತು ರಾತ್ರಿ ಬೆಳಗಾಗುವುದರೊಳಗೆ ತಂದು ನಿಲ್ಲಿಸಿತ್ತು ಇಸ್ಲಾಮಿಕ್ ಆತಂಕವಾದಿಗಳನ್ನು!
ಕೇವಲ ಘೋಷಣೆಗಳಿಗಷ್ಟೇ ಸೀಮಿತವಾಗಲಿಲ್ಲ ಹಿಂಸಾಚಾರ! ಬದಲಿಗೆ, ಪಾಕಿಸ್ಥಾನದ ಧ್ವಜಗಳೂ ಮೇಳೈಸಿದವು! ಹಾಗಾದರೆ, ಇದು ದಲಿತರ ಹೋರಾಟವಾ?! ಸರಕಾರೀ ಆಸ್ತಿಗಳನ್ನು ಹಾಳುಗೆಡವುದು, ಜನರನ್ನು ಕೊಲ್ಲುವುದು,ರಾಷ್ಟ್ರ ವಿರೋಧಿ ಘೋಷಣೆ ಕೂಗುವುದು! ಇವೆಲ್ಲವೂ., ದಲಿತರ ಹೋರಾಟವಾ?! ಖಂಡಿತವಾಗಿಯೂ ಅಲ್ಲ!
ಈ ಕೆಳಗಿನ ವೀಡಿಯೋ ನೋಡಿ!!!
ದಲಿತ ಪರ ಹೋರಾಟ ಇದ್ದಕ್ಕಿದ್ದಂತೆ ಮೋದಿಗೆ ವಿಷ ಕಕ್ಕುತ್ತಿದೆ! ಮೋದಿಯನ್ನು, ಮೇವಾನಿ ಹೇಳಿದ ಹಾಗೆಯೇ ‘ಬುಡ್ಡ’ ನೆಂದು ಕರೆದು ಇಲ್ಲಸಲ್ಲದ ಆರೋಪ ಹೊರಿಸಿ ಹುಚ್ಚುಗಟ್ಟುವುದು ದಲಿತರ ಹೋರಾಟವಾ?!
ದುರಂತವೆಂದರೆ, ರಾಹುಲ್ ಗಾಂಧಿಯ ಪಕ್ಷವೊಂದು ಇಂತಹವರನ್ನು ಸಮರ್ಥಿಸಿಕೊಳ್ಳುತ್ತ, ಮತ್ತೆ ಮತ್ತೆ ಪಕ್ಷಕ್ಕೆ ಇಂತಹ ಆತಂಕವಾದಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸುತ್ತಾ ಇರುವುದು ರಾಷ್ಟ್ರದ್ರೋಹದ ಇನ್ನೊಂದು ಮುಖವಲ್ಲವೇ?! ಇದೇ ನೋಡಿ ದುರಾದೃಷ್ಟ!!!
– ಅಜೇಯ ಶರ್ಮ **