X

ಮತ್ತೊಮ್ಮೆ ರೆಬಲ್ ಆದ ನವರಸ ನಾಯಕ!! ಕಾಂಗ್ರೆಸ್ ಸಚಿವನ ಮುಸ್ಲಿಮ್ ಪ್ರೇಮದ ಬಗ್ಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?!

ಸರ್ಕಾರದ ಮುಜುರಾಯಿ ಇಲಾಖೆಗೆ ಒಳಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಾಲಯದಿಂದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಆಡಳಿತದ ವಿದ್ಯಾ ಸಂಸ್ಥೆಯಾದ ಶ್ರೀರಾಮ ವಿದ್ಯಾ ಸಂಸ್ಥೆಗೆ ಬರುತ್ತಿದ್ದ ಅನ್ನ ದಾಸೋಹಕ್ಕೆ ಕಡಿವಾಣ ಹಾಕಿದಂತಹ ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಚುನಾವಣೆಯಲ್ಲಿ ವಿಜಯಶಾಲಿಯಗಲು ಕಾರಣವೇನು ಎಂಬುವುದರ ಬಗ್ಗೆ ವಿಸ್ಮಯಕಾರಿಯಾದ ವಿಚಾರವೊಂದನ್ನು ಬಿಚ್ಚಿಟ್ಟಿದ್ದು, ಇದಕ್ಕೆ ನಟ ಜಗ್ಗೇಶ್ ಅವರು ಟ್ವೀಟ್ ಮಾಡುವ ಮೂಲಕ ಸಖತ್ತಾಗಿ ಟಾಂಗ್ ನೀಡಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಏನೆಲ್ಲಾ ತಂತ್ರಗಳನ್ನು ಕಾಂಗ್ರೆಸ್ಸಿಗರು ಹೆಣೆಯುತ್ತಾರೆ ಎಂದರೆ ಒಂದು ಕ್ಷಣ ಅಚ್ಚರಿಯಾಗುತ್ತೇ!! ಈಗಾಗಲೇ ಬಂಟ್ವಾಳದ ಹುಲಿ ಎಂದೇ ಖ್ಯಾತಿಯಲ್ಲಿರುವ ರಮಾನಾಥ್ ರೈ “ನನ್ನ ಜೀವನದಲ್ಲಿ ನಾನು ಯಾರಿಗೂ ಭಯ ಬಿಳೋಲ್ಲ. ಹುಲಿ, ಸಿಂಹ ವಂಶದಲ್ಲಿ ಹುಟ್ಟಿದವನು ನಾನು” ಅಂತಾ ಅರಣ್ಯ ಸಚಿವ ರಮಾನಾಥ ರೈ ಹೇಳಿಕೆ ನೀಡಿರೋದು ಗೊತ್ತೇ ಇದೆ!!

ಆದರೆ ಇದೀಗ, ತಾವು 6 ಬಾರಿ ಶಾಸಕರಾಗಲು ಮುಸ್ಲಿಮರ ಮತಗಳು ಕಾರಣ ಎಂಬ ಸಚಿವ ರಮಾನಾಥ್ ರೈ ಅವರ ಹೇಳಿಕೆಗೆ ನಟ ಜಗ್ಗೇಶ್ ಟ್ವೀಟ್ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಹೆಸರು ಹೇಳದೆ ಟ್ವೀಟ್ ಮಾಡಿರುವ ಅವರು ‘ದಯಮಾಡಿ ಈಗಾಗಲೇ ಮುಲ್ಲಾ ಕರೆಸಿ ಕತ್ನ ಮಾಡಿಸಿಕೊಂಡು.. ಮುಸಲ್ಮಾನರಿಗಾದರು ವಿಧೇಯರಾಗಿ..! 5 ಬಾರಿ ನಮಾಜ ಶುರುಮಾಡಿ..! ಯಾವುದೆ ಕಾರಣಕ್ಕು ಹಿಂದುಗಳ ಮತ ಕೇಳಬೇಡಿ.. ನಿಮ್ಮ ಹೆಸರು ರಸತ್ತುಲ್ಲಾ ಅಂತ ಬದಲಾಯಿಸಿಕೊಂಡು ಚೆನ್ನಾಗಿ ಬಾಳಿ! ಎಂದು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಮಾರಂಭವೊಂದರಲ್ಲಿ ತಾವು 6 ಬಾರಿ ಶಾಸಕರಾಗಲು ಮುಸ್ಲಿಮರ ಮತಗಳು ಕಾರಣ ಎಂದು ಸಚಿವ ರಮಾನಾಥ್ ರೈ ಹೇಳಿದ ವಿಡಿಯೋ ಎಲ್ಲಡೆ ವೈರಲ್ ಆಗಿದ್ದು, ಈ ಬಗ್ಗೆ ತೀವ್ರ ಆಕ್ರೋಶಗಳು ಕೂಡ ವ್ಯಕ್ತವಾಗಿದೆ. ಮುಸ್ಲಿಮರ ಮತಕ್ಕೋಸ್ಕರ ಹೀನಾಯ ತಂತ್ರಗಳನ್ನು ಉಪಯೋಗಿಸುತ್ತಿರುವ ರಮಾನಾಥ ರೈ ಹಿಂದೂಗಳನ್ನು ಕಡೆಗಣಿಸುತ್ತಿರುವುದಂತೂ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಆದರೆ ಪ್ರತೀ ಬಾರಿಯೂ ಒಂದಲ್ಲ ಒಂದು ರೀತಿಯ ತಂತ್ರಗಳನ್ನು ಬಳಸುತ್ತಿರುವ ರಮಾನಾಥ್ ರೈ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದ ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರಲ್ಲದೇ , ತನ್ನ ತಾಯಿಯ ಬಗ್ಗೆ ಅವಮಾನಿಸಿದ್ದಕ್ಕಾಗಿ ಸಾರ್ವಜನಿಕ ವೇದಿಕೆಯಲ್ಲಿ ಕಣ್ಣೀರು ಸುರಿಸಿದ್ದು, ಕರಾವಳಿಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ಸ್ವಪಕ್ಷೀಯ ಪರ ಗುಡುಗಿರುವ ಜನಾರ್ಧನ ಪೂಜಾರಿಯವರು ರಮಾನಾಥ್ ರೈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ಹಿರಿ ಜೀವದ ಕಣ್ಣೀರಿನ ಶಾಪ ಎಂದು ಮಾಸೋದಿಲ್ಲ ಅಂತ ಹೇಳ್ತಾರೆ!! ರಮಾನಾಥ್ ರೈ ಬಡ ಮಕ್ಕಳ ಅನ್ನವನ್ನೂ ಕಿತ್ತುಕೊಂಡರು, ತನ್ನ ಪಕ್ಷದ ಹಿರಿಯ ನಾಯಕನನ್ನೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿ ಚೀಮಾರಿ ಹಾಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ತಾವು 6 ಬಾರಿ ಶಾಸಕರಾಗಲು ಮುಸ್ಲಿಮರ ಮತಗಳು ಕಾರಣ ಎಂದಿರುವ ಸಚಿವ ರಮಾನಾಥ್ ರೈ ಗೆ ಹಿಂದೂಗಳ ಮತ ಅಷ್ಟು ಕೀಳಾಯಿತೇ ಎನ್ನುವ ಪ್ರಶ್ನೆಯೂ ಇದೀಗ ಮೂಡುತ್ತಿದೆ!!

ಈ ಹಿಂದೆ ಮಂಗಳೂರಿನ ಉಳ್ಳಾಲದ ಅಸೈಗೋಳಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಕೆಟ್ಟ ಶಬ್ಧದಿಂದ ನಿಂದಿಸಿದ್ದ ರಮಾನಾಥ್ ರೈ, ತುಳು ಭಾಷೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಅವಾಚ್ಯ ಶಬ್ಧಗಳಿಂದ ಟೀಕಿಸಿದ್ದರು. ನೆಹರೂ ಕುಟುಂಬದ ಬಗ್ಗೆ ಮಾತನಾಡುವ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ, ಇಂತವರನ್ನು ಜೈಲಿಗೆ ಹಾಕಬೇಕು ಎಂದು ಸೂಲಿಬೆಲೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೈ ಬಾಯಿಚಪಲಕ್ಕೆ ಭಾರೀ ಟೀಕೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು!!

ಆದರೆ ಇದೀಗ, ತನಗೆ ಬಂಟ್ವಾಳದ ವಿಧಾನ ಸಭಾ ಕ್ಷೇತ್ರದಲ್ಲಿ 6 ಬಾರಿ ಶಾಸಕನಾಗಲು ಅವಕಾಶ ಸಿಕ್ಕಿದ್ದರೆ ಅದು ಅಲ್ಲಾಹುನ ಕೃಪೆಯಿಂದಾಗಿ, ಅಷ್ಟೇ ಅಲ್ಲದೇ ಮುಸ್ಲಿಂಮರ ಜಾತ್ಯಾತೀತ ನಿಲುವಿನಿಂದಾಗಿ ಎಂದಿರುವ ರಮಾನಾಥ್ ರೈಯವರ ಬಗ್ಗೆ ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಸಖತ್ತಾಗಿ ಟಾಂಗ್ ನೀಡಿದ್ದಾರೆ.

 

– ಅಲೋಖಾ

Editor Postcard Kannada:
Related Post