X

ನ್ಯೂ ಇಯರ್ ಆಚರಿಸಿದ್ರೆ ಹುಷಾರ್… ಅಷ್ಟಕ್ಕೂ ಈ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ವಿರೋಧ ಯಾಕೆ ಗೊತ್ತಾ..?

ಹೊಸವರ್ಷಾಚರಣೆಗೆ ಈ ಬಾರಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಈ ಜಿಲ್ಲೆಯ ಸಂಘಟನೆಯೊಂದು ಕಠಿಣ ಎಚ್ಚರಿಕೆಯ ಸಂದೇಶವನ್ನೇ ಸಾರಿಬಿಟ್ಟಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಮೋಜು ಮಸ್ತಿ ಮಾಡಿದ್ರೆ ಚೆನ್ನಾಗಿರಲ್ಲ. ಇದನ್ನು ನಾವು ಸಹಿಸೋದಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

ದಕ್ಷಿಣ ಕನ್ನಡ. ಹಿಂದೂ ಸಂಘಟನೆಗಳ ಭದ್ರಕೋಟೆ. ಮುಗಿಲು ಮುಟ್ಟಿದ ಪಾಕ್ ಪ್ರೇರಿತ ಜಿಹಾದಿಗಳ ಅಟ್ಟಹಾಸವನ್ನು ಮುರಿಯಲು ಇಲ್ಲಿ ಹಿಂದೂ ಪರ ಸಂಘಟನೆಗಳು ಕಟಿಬದ್ದವಾಗಿ ನಿಲ್ಲುತ್ತಾರೆ. ಅದೇನೇ ಸಮಸ್ಯೆ ಎದುರಾದರೂನೂ ಮೊದಲು ಬೀದಿಗಿಳಿದು ಹೋರಾಟ ನಡೆಸೋದು ಅಲ್ಲಿನ ಹಿಂದೂಪರ ಸಂಘಟನೆಗಳು.

ನ್ಯೂ ಇಯರ್ ಆಚರಿಸಿದ್ರೆ ಹುಷಾರ್..!!!

ನ್ಯೂ ಇಯರ್ ಆಚರಣೆ. ಇಂಗ್ಲಿಷರು ಬಿಟ್ಟುಹೋದ ಅತ್ಯಂತ ಕೆಟ್ಟ ಸಂಸ್ಕøತಿ. ಈ ಸಂಸ್ಕøತಿಯನ್ನು ಇಂದಿನ ಕೆಲವು ಬುದ್ದಿಜೀವಿಗಳು ಅದನ್ನೇ ಬಂಡವಾಳವಾಗಿಟ್ಟುಕೊಂಡು ತಮ್ಮ ಮೊಂಡುತನವನ್ನು ಸಾಧಿಸುತ್ತಾ ಹೋಗುತ್ತಿದ್ದಾರೆ. ಮೋಜು ಮಸ್ತಿಗಳಿಗೆ ಹೆಸರಾಗಿರುವ ಈ ಹೊಸವರ್ಷಾಚರಣೆಯು ಮುಂದಿನ ಅಷ್ಟೂ ದಿನಗಳನ್ನು ಅಷ್ಟೇ ದುರ್ನಡತೆಯಿಂದ ಮುಂದೂಡುವುದಕ್ಕೆ ಹೆಬ್ಬಾಗಿಲಾಗಿದೆ! ಆದರೆ ಇದ್ಯಾವುದೂ ಇಲ್ಲಿನ ಬುದ್ಧಿಜೀವಿಗಳಿಗೆ ಅರಿಯೋದೇ ಇಲ್ಲ. ಯಾಕೆಂದರೆ ಅವರಿರೋದೇ ಹಿಂದೂಗಳ ಆಚರಣೆಗಳಿಗೆ ವಿರೋಧ ವ್ಯಕ್ತ ಪಡಿಸೋಕೆ. ಅರ್ಥಾತ್ ಭಾರತೀಯ ಸಂಸ್ಕøತಿಯನ್ನು ಮುರಿದು ಹಾಕೋಕೆ.

“ಈ ಬಾರಿ ನ್ಯೂ ಇಯರ್ ಸೆಲೆಬ್ರೇಟ್ ಮಾಡೋಕೆ ನಾವು ಬಿಡೋದಿಲ್ಲ. ಹೊಸವರ್ಷಾಚರಣೆ ಹೆಸರಿನಲ್ಲಿ ಡಿಸೆಂಬರ್ 31ರಂದು ನಡೆಯುವ ಡಿಜೆ ಪಾರ್ಟಿ ಹಾಗೂ ಅಶ್ಲೀಲ ನೃತ್ಯಗಳಂತಹ ಕಾರ್ಯಕ್ರಮಗಳಿಗೆ ಬಜರಂಗದಳ ವಿರೋಧ ವ್ಯಕ್ತ ಪಡಿಸುತ್ತಿದೆ. ಯಾವುದೇ ಹೊಟೇಲ್, ಪಬ್‍ಗಳಿಗೆ ಯಾವುದೇ ಡಿಜೆ ಪಾರ್ಟಿ ನಡೆಸಲು ಅವಕಾಶವನ್ನು ಪೊಲೀಸ್ ಇಲಾಖೆ ನೀಡಬಾರದು. ಎಲ್ಲಾ ಬಾರ್ ಹಾಗೂ ಪಬ್‍ಗಳು ರಾತ್ರಿ 11 ಗಂಟೆಯ ಒಳಗೆ ಮುಚ್ಚಬೇಕು. ಒಂದು ವೇಳೆ ಅವಕಾಶ ನೀಡಿದ್ದೇ ಆದರೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗಿರುತ್ತದೆ”. ಇದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಖಡಕ್ ಎಚ್ಚರಿಕೆ.

ಹೊಸವರ್ಷಾಚರಣೆಗೆ ಯಾಕಿಷ್ಟು ವಿರೋಧ..?

ಇಷ್ಟಕ್ಕೂ ಮಂಗಳೂರಿನಲ್ಲಿ ಹೊಸವರ್ಷಾಚರಣೆಗೆ ಇಷ್ಟೊಂದು ವಿರೋಧ ಯಾಕೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಹೋಗುವಾಗ ಅನೇಕ ಕಾರಣಗಳು ಇಲ್ಲಿ ಗೋಚರಿಸುತ್ತದೆ. ಈ ಕಾರಣಕ್ಕಾಗಿಯೇ ಮಂಗಳೂರಿನಲ್ಲಿ ಹೊಸವರ್ಷಾಚರಣೆಗಳಿಗೆ ಇಲ್ಲಿ ಅವಕಾಶ ನೀಡೋದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

* ಕರಾವಳಿಯ ಹಿಂದೂ ಸಮಾಜ ಈಗಾಗಲೇ ಲವ್ ಜಿಹಾದ್ ಎಂಬ ಕೂಪಕ್ಕೆ ಬಿದ್ದು ನರಳುತ್ತಿದೆ. ಇತ್ತೀಚೆಗೆ ಹಲವಾರು ಹಿಂದೂ ಹುಡುಗಿಯರು ಈ ಜಿಹಾದಿಗಳ ಬಲೆಗೆ ಬಿದ್ದು ನರಳುತ್ತಿದ್ದಾರೆ. ಇದಕ್ಕೆ ಮೂಲ ಕಾರಣವಾಗಿರುವುದು ಮಂಗಳೂರಿನಲ್ಲಿ ನಡೆಯುತ್ತಿರುವ ಮೋಜು ಮಸ್ತಿಗಳು. ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಈ ಮೋಜು ಮಸ್ತಿಗಳಿಗೆ ಬ್ರೇಕ್ ಬಿದ್ದರೆ ಮಾತ್ರ ಲವ್ ಜಿಹಾದ್ ಎಂಬ ಕರಾಳ ದಂಧೆಯನ್ನು ತಡೆಯಬಹುದಾಗಿದೆ.

* ತಡರಾತ್ರಿ ಹೆಣ್ಣುಮಕ್ಕಳು ಇಂತಹ ಪಾರ್ಟಿಗಳಿಗೆ ತೆರಳುವುದರಿಂದ ಅಲ್ಲಿ ಅಜಾಗರತೆ ಉಂಟಾಗುತ್ತದೆ. ಡಾನ್ಸ್ ನೆಪದಲ್ಲಿ ವಿಕೃತ ಮನಸ್ಸುಳ್ಳ ಹುಡುಗರಿಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ.

* ನ್ಯೂ ಇಯರ್ ಆಚರಣೆಗೆ ಬರುವ ಮತಾಂಧ ಹಿಂದೂ ಹೆಣ್ಣುಮಕ್ಕಳ ಅರೆಬರೆ ಉಡುಪಿನ ಡ್ಯಾನ್ಸ್‍ಗಳನ್ನು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ತಮ್ಮ ದಂಧೆಯನ್ನು ಆರಂಭಿಸುತ್ತಾರೆ. ಆರಂಭದಲ್ಲಿ ಅವರನ್ನು ಬೆದರಿಸಿ ಪ್ರೀತಿ ಎಂಬ ನಾಟಕವಾಡಿ ಕೊನೆಗೆ ಜಿಹಾದ್ ಎಂಬ ಕೂಪಕ್ಕೆ ಹಿಂದೂ ಹೆಣ್ಣು ಮಕ್ಕಳನ್ನು ದೂಡಿ ಬಿಡುತ್ತಾರೆ.

* ಕಳೆದ ಬಾರಿಯ ಹೊಸವರ್ಷಾಚರಣೆಯ ಸಮಯದಲ್ಲಿ ಬೆಂಗಳೂರಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಕುಡಿತದ ಅಮಲಿನಲ್ಲಿ ಕಾಮದ ಕಣ್ಣಿಗೆ ಬಿದ್ದು ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ.

* ಕರಾವಳಿಯ ಬಹುತೇಕ ಯುವಕ ಯುವತಿಯರು ಇಂದು ಡ್ರಗ್ಸ್ ಎಂಬ ಅಂಕುಶಕ್ಕೆ ಬಿದ್ದು ನರಳಾಡುತ್ತಿದ್ದಾರೆ. ಇಸ್ಲಾಂ ಯುವಕರ ಡ್ರಗ್ಸ್ ಜಾಲಗಳಿಗೆ ಹಿಂದೂ ಯುವತಿಯರು ಬಲಿಯಾಗಿ ಇಂದು ತಮ್ಮತನವನ್ನೇ ಕಳೆದುಕೊಳ್ಳುತ್ತಿದ್ದಾರೆ. ಹಿಂದೂ ಯುವಕ ಯುವತಿಯರ ಸಭ್ಯತೆ ಎಲ್ಲೆ ಮೀರುತ್ತಿದೆ. ಹೆತ್ತವರು ಕಣ್ಣೀರು ಹಾಕುತ್ತಾ ತಮ್ಮ ಮಕ್ಕಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಡ್ರಗ್ಸ್ ಮಾಫಿಯಾ ಎಂಬ ಭೂತ ಹೊಸ ವರ್ಷಾಚರಣೆಯಂದು ತುಂಬಾನೇ ಸದ್ದು ಮಾಡಲಿದೆ. ಮೊದಲೇ ಮೋಜು ಮಸ್ತಿ ಕುಡಿತಗಳಿಂದ ತುಂಬಿರುವ ಈ ಹೊಸ ವರ್ಷಾಚರಣೆಯಲ್ಲಿ ಡ್ರಗ್ಸ್ ಯುವಜನಾಂಗವನ್ನು ಹಾಳುಕೆಡವುದರಲ್ಲಿ ಸಂಶಯವೇ ಇಲ್ಲ. ಹಿಂದೂ ಯುವ ಸಮೂಹವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುವುದೇ ಸಂಘಟನೆಯ ಉದ್ಧೇಶವಾಗಿದೆ.

* ಭಾರತೀಯರಿಗೆ ತಮ್ಮದೇ ಆದಂತಹ ಸಂಸ್ಕಾರ ಸಂಸ್ಕøತಿ ಅನ್ನೋದು ಇರುತ್ತದೆ. ಆ ಸಂಸ್ಕøತಿ ಎಲ್ಲೆ ಮೀದರೆ ಭಾರತೀಯತೆ ಅನ್ನೋದು ನಾಶವಾಗಿ ಹೋಗುತ್ತದೆ. ಹಿಂದೂ ಸಮಾಜ ಭಾರತೀಯ ಸಂಸ್ಕøತಿಯ ಮೇಲೆ ನಿಂತಿರುವ ಸಮಾಜವಾಗಿದೆ. ರಾತ್ರಿ ಹೊತ್ತು ನಮ್ಮ ಸಮಾಜದ ಹೆಣ್ಣು ಮಕ್ಕಳು ಬೀದಿ ಕಾಮಣ್ಣರೊಂದಿಗೆ, ಅರೆಬರೆ ಉಡುಪುಗಳನ್ನು ತೊಟ್ಟು, ಮಧ್ಯ, ಡ್ರಗ್ಸ್ ಸೇವಿಸಿ ತಮ್ಮ ತನವನ್ನೇ ಕಳೆದುಕೊಳ್ಳುವ ಇಂದಿನ ಮಹಿಳೆಯರ ರಕ್ಷಣೆಗಾಗಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಹಿಂದೂ ಸಂಘಟನೆಗಳು ಕರೆ ನೀಡಿರುವುದು.

* ಹೊಸವರ್ಷಾಚರಣೆಯನ್ನು ಮಾಡಲೇಬೇಕೆನ್ನುವುದಾದರೆ ಅದನ್ನು ದೇವರ ಪೂಜೆಯೊಂದಿಗೆ ಯಾಕೆ ಮಾಡಬಾರದು. ಕುಡಿತಕ್ಕಾಗಿ ಉಪಯೋಗಿಸುವ ಹಣಗಳನ್ನು ಪೂಜೆಗಳಿಗೆ ಉಪಯೋಗಿಸಿದರೆ ಪುಣ್ಯಸಂಪಾದನೆಯಾದರೂ ಆಗಬಹುದಲ್ಲವೇ..?

* ಸಾವಿರಾರು ರೂಗಳನ್ನು ಪೋಲು ಮಾಡುವ ನಮ್ಮ ಯುವ ಸಮೂಹ ಅದೇ ಹಣಗಳನ್ನು ಅನಾಥರ ಹಾಗೂ ಅಬಲರ ಅಭಿವೃದ್ಧಿಗೆ ಉಪಯೋಗಿಸಿದರೆ ಮಾನಸಿಕ ನೆಮ್ಮದಿಯಾದರೂ ಸಿಗಬಹುದಲ್ಲವೇ..?

ಬುದ್ಧಿಜೀವಿಗಳಿಗೆ ಇದ್ಯಾಕೆ ಕಾಣೋದೇ ಇಲ್ಲ..?

ಬಲಪಂಥೀಯ ಸಂಘಟನೆಗಳು ಯಾವುದೇ ವಿಚಾರವಾಗಿ ತಗಾದೆ ತೆಗೆದರೆ ಅದರ ವಿರುದ್ಧ ಗಂಟಲು ಹರಿಯುವವರೆಗೆ ಮಾತನಾಡುವ ರಾಜ್ಯದ ಬುದ್ಧಿಜೀವಿಗಳು ಹೆಣ್ಣು ಮಕ್ಕಳ ರಕ್ಷಣೆ ಕುರಿತು ಮಾತೇ ಆಡೋದಿಲ್ಲ.

* ಬಲಪಂಥೀಯ ಸಂಘಟನೆಗಳು ಹಿಂದೂ ಹೆಣ್ಣುಮಕ್ಕಳ ಕುರಿತು ಮಾತನಾಡುವಾಗ ಬೀದಿಗಿಳಿದು ಹೋರಾಟ ಮಾಡುವ ಬುದ್ಧಿಜೀವಿಗಳು ಲವ್ ಜಿಹಾದ್ ಎಂಬ ಭೂತ ತಾಂಡವವಾಡುತ್ತಿದ್ದರೂ ತುಟಿ ಬಿಚ್ಚೋದಿಲ್ಲ ಏಕೆ..?

* ಹೋಮ್ ಸ್ಟೇ ದಾಳಿ ನಡೆದಾಗ ಬೀದಿರಂಪ ಮಾಡಿದ ಎಡಪಂಥೀಯರು ಹಾಗೂ ಕೆಲವು ರಾಜಕೀಯ ಪಕ್ಷದವರು, ಹಿಂದೂ ಹೆಣ್ಣು ಮಕ್ಕಳನ್ನು ಮತಾಂಧರು ಪ್ರೀತಿ ಎಂಬ ಮೋಸದ ಬಲೆಗೆ ಬೀಳಿಸಿ ನಾಟಕವಾಡುವಾಗ ಯಾಕೆ ಮಾತನಾಡೋದಿಲ್ಲ.?

* ಅನಂತ್ ಕುಮಾರ್ ಹೆಗಡೆ ಮಾತು ಜಾಸ್ತಿ ಆಡಿದರೆ ಕಿರುಚುವ ವಿಚಾರವಾದಿಗಳು, ರಾಜ್ಯದಲ್ಲಿ ಹಿಂದೂಗಳ ಮಾರಣ ಹೋಮ ನಡೆಯುತ್ತಿರುವಾಗ ಬಾಯಿ ಮುಚ್ಚಿ ಕುಳಿತಿದ್ದರು ಯಾಕೆ..?

* ರಾಜ್ಯದಲ್ಲಿ, ಅದರಲ್ಲೂ ಕರಾವಳಿಯಲ್ಲಿ ಡ್ರಗ್ಸ್ ಹಾಗೂ ಗಾಂಜಾ ಅಫೀಮು ಮಾಫಿಯಾಗಳು ತಾಂಡವವಾಡುತ್ತಿದೆ. ಈ ದಂಧೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುವುದು ಮುಸ್ಲಿಂ ಮತಾಂಧರು. ಈ ಬಗ್ಗೆ ಬಜರಂಗ ದಳ ಸಹಿತ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಾ ಬಂದಿದೆ. ಆದರೆ ಈ ಬಗ್ಗೆ ಇಂದಿನವರೆಗೂ ಈ ಎಡಪಂಥೀಯ ಸಂಘಟನೆಗಳು ಹಾಗೂ ಬುದ್ಧಿಜೀವಿಗಳು ಪ್ರತಿಭಟಿಸಿಲ್ಲ. ಹಾಗಾದರೆ ಈ ಸಂಘಟನೆಗಳ ಉದ್ದೇಶವೇನು..?

* ಹಿಂದೂ ಸಂಘಟನೆಗಳು ಹಿಂದೂ ಸಮಾಜದ ಕಾಳಜಿ ವಹಿಸುತ್ತೆ ವಿನಹ ಯಾವುದೇ ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆಗಳೇ ಇಲ್ಲ. ಆದರೆ ಕೆಲವು ಪ್ರಗತಿ ಪರ ಬುದ್ಧಿಜೀವಿಗಳು ಬಲಪಂಥೀಯ ಸಂಘಟನೆಗಳ ವಿರುದ್ಧ ವಿನಾಕಾರಣ ಕಿರುಚುತ್ತಾರೆ.

ಒಟ್ಟಾರೆ ಈ ಬಾರಿಯ ಹೊಸವರ್ಷಾಚರಣೆ ಕರಾವಳಿಯಲ್ಲಿ ಹೊಸ ಅಲೆಯನ್ನು ಎಬ್ಬಿಸುವುದು ಖಂಡಿತಾ. ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳು ತಡರಾತ್ರಿ ಬೀದಿಗಿಳಿದು ಕಂಠಪೂರ್ತಿ ಕುಡಿದು ಡ್ಯಾನ್ಸ್ ಮಾಡಿದರೆ ಅದನ್ನು ಸಹಿಸಲು ಹಿಂದೂ ಸಂಘಟನೆಗಳಿಂದ ಸಾಧ್ಯನೇ ಇಲ್ಲ ಎಂಬ ನೇರ ಸಂದೇಶವನ್ನು ಬಜರಂಗದಳ ಸಾರಿದೆ. ಒಂದು ವೇಳೆ ಇಂತಹ ಭಾರತ ವಿರೋಧಿ ಆಚರಣೆಗಳನ್ನು ನಡೆಸಿದರೆ ಹಾಗೂ ಅಹಿತಕರ ಘಟನೆಗಳು ಸಂಭವಿಸಿದರೆ ಅದಕ್ಕೆ ಪೊಲೀಸ್ ಇಲಖೆ ಹಾಗೂ ಸರ್ಕಾರವೇ ನೇರ ಹೊಣೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

-ಸುನಿಲ್ ಪಣಪಿಲ

Editor Postcard Kannada:
Related Post