ಕಾಂಗ್ರೆಸ್ ನ ಆಡಳಿತಕ್ಕೆ ಕರ್ನಾಟಕ ಬಲಿಪಶು ಆಗುತ್ತಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಈ ಕಾಂಗ್ರೆಸ್ ನಾಯಕರ ಮೂಗು ದಾರ ಹಾಕಲು ಯಾರೊಬ್ಬರೂ ಇಲ್ಲದಂತಾಗಿದೆ. ಯಾಕೆಂದರೆ ಸರಕಾರವೇ ತಮ್ಮದು ಎಂಬ ದುರಾಲೋಚನೆ ಇರುವುದರಿಂದ ಯಾವುದೇ ಕಾನೂನನ್ನು ಕ್ಯಾರೇ ಅನ್ನುತ್ತಿಲ್ಲ. ಅದಕ್ಕಾಗಿಯೇ ಸಿಕ್ಕ ಸಿಕ್ಕಲ್ಲಿ ದರ್ಪ , ದಬ್ಬಾಳಿಕೆ ನಡೆಸುವ ಕಾಂಗ್ರೆಸಿಗರು ಇದೀಗ ಚುನಾವಣೆ ಹತ್ತಿರ ಬರುತ್ತಿದ್ದರೂ ಕೂಡ ಮತ್ತೆ ಮತ್ತೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಲೇ ಇದ್ದಾರೆ.!
ಬಿಜೆಪಿಗರ ಮೇಲೆ ಕಾಂಗ್ರೆಸ್ ಮುಖಂಡರ ದಾಳಿ..!
ರಾಜ್ಯ ವಿಧಾನಸಭಾ ಚುನಾವಣೆ ಭಾರೀ ಪೈಪೋಟಿ ಸೃಷ್ಟಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಅಖಾಡಕ್ಕೆ ಇಳಿದು ಹೋರಾಟಕ್ಕೆ ಸಜ್ಜಾಗಿದೆ. ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಯ ಜಿದ್ದಾ ಜಿದ್ದಿನ ಕ್ಷೇತ್ರವಾಗಿರುವುದರಿಂದ ಭಾರೀ ಕುತೂಹಲ ಕೆರಳಿಸಿದೆ. ನಿನ್ನೆ ಕಾಂಗ್ರೆಸ್ ಮುಖಂಡನೊಬ್ಬ ಬಿಜೆಪಿ ನಾಯಕನ ಮೇಲೆ ತನ್ನ ಬಂದೂಕಿನಿಂದ ಗುಂಡು ಹಾರಿಸಿದ್ದಾರೆ.
ಹೊಸಕೋಟೆಯ ಹುಣಸೇನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡ ಜನಾರ್ಧನ್ ಅಲಿಯಾಸ್ ಜಾನಿ ಎಂಬಾತ ಬಿಜೆಪಿ ಕಾರ್ಯಕರ್ತ ರಾಮಣ್ಣ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ರಾಮಣ್ಣ ಪಾರಾಗಿದ್ದು , ಗುರಿ ತಪ್ಪಿ ಅನಾಹುತ ಉಂಟಾಗಲಿಲ್ಲ.
ಚುನಾವಣೆ ಸಮೀಪಿಸುತ್ತಿದ್ದಂತೆ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಎಲ್ಲಾ ಪಕ್ಷಗಳು ಭಾರೀ ಪೈಪೋಟಿಗೆ ಇಳಿದಿವೆ. ಇದೇ ರೀತಿ ರಾಮಣ್ಣ ಕೂಡ ಬಿಜೆಪಿ ಪರ ಮತ ಯಾಚನೆ ಮಾಡುತ್ತಿದ್ದರು. ಪ್ರಚಾರ ಮಾಡುತ್ತಾ ಕಾಂಗ್ರೆಸ್ ಮುಖಂಡ ಜನಾರ್ಧನ್ ಅವರ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಇದರಿಂದ ಕೋಪಗೊಂಡ ಜನಾರ್ಧನ್ , ರಾಮಣ್ಣ ಅವರ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಮೈಮೇಲೆ ಕೈ ಹಾಕಿ ಜಗಳ ಶುರು ಮಾಡಿಕೊಂಡಿದ್ದರು.ಈ ವೇಳೆ ಏಕಾಏಕಿ ತನ್ನ ಬಳಿಯಿದ್ದ ಪಿಸ್ತೂಲು ಹೊರ ತೆಗೆದ ಜನಾರ್ಧನ್ ಗುಂಡು ಹಾರಿಸಿದ್ದಾರೆ. ಆದರೆ ತಪ್ಪಿಸಿಕೊಂಡ ರಾಮಣ್ಣ ಅಪಾಯದಿಂದ ಪಾರಾಗಿದ್ದಾರೆ.!
ಇಡೀ ರಾಜ್ಯವನ್ನು ನರಕದ ಕೂಪವನ್ನಾಗಿಸಿರುವ ಕಾಂಗ್ರೆಸ್ ಅಶಾಂತಿ ಸೃಷ್ಟಿಸಿ ರಾಜ್ಯದ ಜನತೆಯನ್ನು ಸುಖವಾಗಿ ಜೀವಿಸಲು ಬಿಡುತ್ತಿಲ್ಲ. ಇವೆಲ್ಲದಕ್ಕೂ ಚುನಾವಣೆಯೇ ಉತ್ತರವಾಗಿರುವುದಂತೂ ಸತ್ಯ..!
source:dailyhunt
–ಅರ್ಜುನ್