X

ರಾಡ್ ಹಾಗೂ ಕೊಡಲಿಗಳಿಂದ ಹೋಗಿ ತಾಜ್ ಮಹಲ್ ಅನ್ನು ಕೆಡವಲು ನಾನು ರೆಡಿ ಎಂದ ಅಜಂ ಖಾನ್!!

ವಿವಾದತ್ಮಾಕ ಹೇಳಿಕೆ ನೀಡಿದರೆ ಸದಾ ಸುದ್ದಿಯಲ್ಲಿರಬಹುದು ಎನ್ನುವ ಚಿಂತನೆಯೋ ಏನೋ ಗೊತ್ತಿಲ್ಲ!! ಆದರೆ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಲೇ ಇರುವ  ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಇದೀಗ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿ ತಮ್ಮ ಇರುವಿಕೆಯನ್ನು ಮತ್ತೊಂದು ಬಾರಿ ಖಾತ್ರಿ ಪಡಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ!! ಸದಾ ತಮ್ಮ ವಿಚಿತ್ರ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುವ ಸಮಾಜವಾದಿ ಮುಖಂಡ ಅಜಂ ಖಾನ್ ಪ್ರಪಂಚದ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ಕೆಡವಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ವಿವಾದಗಳ ಭಂಡಾರದಲ್ಲಿಯೇ ಮುಳುಗಿಹೋಗಿರುವ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರು ಈಗಾಗಲೇ ಜಗತ್ಪ್ರಸಿದ್ದ ಸ್ಮಾರಕ ತಾಜ್ ಮಹಲ್ ಅನ್ನು ಧ್ವಂಸ ಮಾಡಿ, ಆ ಜಾಗದಲ್ಲಿ ಶಿವ ದೇವಾಲಯ ನಿರ್ಮಿಸುವಂತೆ ಶಿವಸೇನೆಗೆ ಸವಾಲು ಹಾಕಿದ್ದ ವಿಚಾರ ಗೊತ್ತೇ ಇದೆ!! ಅಷ್ಟೇ ಅಲ್ಲದೇ, ಆರ್ ಎಸ್ ಎಸ್ ನಂತರ ಶಿವಸೇನೆ ವಿರುದ್ಧ ಹರಿ ಹಾಯ್ದಿರುವ ಅಜಂಖಾನ್, ಶಿವಸೇನೆ ತಾಜ್ ಮಹಲ್ ಅನ್ನು ಧ್ವಂಸ ಮಾಡಿ, ಅದರ ಮೇಲೆ ಶಿವನ ದೇವಾಲಯ ನಿರ್ಮಿಸಲಿ. ಮಣ್ಣು ತೆಗೆದು ಹಾಕಲು ತಾವು ಸಹಾಯ ಮಾಡುವುದಾಗಿ ಎಂದು ಹೇಳುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಆದರೆ ಇದೀಗ, ವಿಶ್ವವಿಖ್ಯಾತ ಪ್ರವಾಸಿ ತಾಣ ತಾಜ್ ಮಹಲ್ ಶಿವನ ಮಂದಿರವಾಗಿದ್ದರೆ ಅದನ್ನು ಖಂಡಿತಾ ಕೆಡವಿ ಹಾಕಬೇಕು. ಹೀಗಾಗಿ ಮೊದಲ ಇಟ್ಟಿಗೆಯನ್ನು ಸಿಎಂ ಯೋಗಿ ಆದಿತ್ಯಾನಾಥ್ ಕಿತ್ತು ಹಾಕಿದರೆ ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ಗುಲಾಮ ಗಿರಿಯ ಗುರುತು ನಮಗೇಕೆ ಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್ ವ್ಯಂಗ್ಯ ಮಾಡಿದ್ದಾರೆ.

ಈಗಾಗಲೇ ಭಾರತೀಯ ಯೋಧರ ಮೇಲೆಯೂ ಗಂಭೀರ ಆರೋಪ ಮಾಡುವ ಮೂಲಕ ಸುದ್ದಿಯಾಗಿದ್ದ ಇವರು, “ಗಡಿಯಲ್ಲಿ ಕದನ ನಡೆಯುತ್ತಿದೆ. ಆದರೆ, ಒಂದೆಡೆ ಮಹಿಳೆಯರು ಯೋಧರ ಗುಪ್ತಾಂಗ ಕತ್ತರಿಸಿ ಕೊಲೆ ಮಾಡಿದ್ದಾರೆ, ಮಹಿಳೆಯರು ಹೀಗೆ ಮಾಡಲು ಕಾರಣವೇನು ಎಂಬುದರ ಬಗ್ಗೆ ಯೋಚಿಸಬೇಕಿದೆ. ತಮ್ಮ ಮೇಲಿನ ಅತ್ಯಾಚಾರಕ್ಕೆ ಪ್ರತಿಯಾಗಿ ಮಹಿಳೆಯರು ಇಂಥ ಕೃತ್ಯಕ್ಕೆ ಮುಂದಾಗಿದ್ದಾರೆ. ಇದು ದೇಶಕ್ಕೆ ಅವಮಾನ. ಭಾರತ ವಿಶ್ವವನ್ನು ಎದುರಿಸಲು ಹೇಗೆ ಸಾಧ್ಯ” ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಆದರೆ ಇದೀಗ ತಾಜ್ ಮಹಲ್ ಅನ್ನು ಕೆಡವಲು ನಾನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜೊತೆ ಹೋಗುವೆ ಎಂದು ಎಸ್ ಪಿ ಮುಖಂಡ ಅಜಂಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು… ತಾಜ್ ಮಹಲ್ ಶಿವನ ಮಂದಿರವಾಗಿತ್ತು ಎಂಬ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರಿಗೆ ತಿರುಗೇಟು ನೀಡಿರುವ ಅಜಂಖಾನ್, ‘ತಾಜ್ ಮಹಲ್ ನಿಜಕ್ಕೂ ಶಿವನ ಮಂದಿರವೇ ಆಗಿದ್ದರೆ ಅದನ್ನು ಖಂಡಿತಾ ಕೆಡವಿ ಹಾಕಬೇಕು. ಹೀಗಾಗಿ ಸಿಎಂ ಯೋಗಿ ಆದಿತ್ಯಾನಾಥ್ ಅವರ ವಾದವನ್ನು ನಾನು ಒಪ್ಪುತ್ತೇನೆ. ಅಂತೆಯೇ ಯೋಗಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದ್ದು. ತಾಜ್ ಮಹಲ್ ಕೆಡವಲು ಅವರೊಂದಿಗೆ ಕೈ ಜೋಡಿಸುತ್ತೇವೆ ಎಂದು ಹೇಳಿದ್ದಾರೆ. ಅಜಂಖಾನ್ ಅವರ ಈ ಕುರಿತಾದ  ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರ-ವಿರೋಧ ಚರ್ಚೆಗಳಾಗುತ್ತಿವೆ.

https://twitter.com/ANINewsUP/status/1012327186357989376

ಹೌದು… ‘ತಾಜ್ ಮಹಲ್ ಕೆಡವಿ ಹಾಕುವ ಸಿಎಂ ಯೋಗಿ ಆದಿತ್ಯಾನಾಥ್ ಅವರ ಕಾರ್ಯಕ್ಕೆ ನಮ್ಮ ಬೆಂಬಲವಿದೆ. ತಾಜ್ ಮಹಲ್ ನ ಮೊದಲ ಇಟ್ಟಿಗೆಯನ್ನು ಅವರು ಕಿತ್ತುಹಾಕಲಿ, ಎರಡನೇ ಇಟ್ಟಿಗೆಯನ್ನು ನಾನು ಕಿತ್ತು ಹಾಕುತ್ತೇನೆ. ನಾನಷ್ಚೇ ಅಲ್ಲ ನನ್ನ ಸಮುದಾಯ ಸುಮಾರು 20 ಸಾವಿರ ಮಂದಿ ಈ ಕಾರ್ಯದಲ್ಲಿ ಕೈ ಜೋಡಿಸಲಿದ್ದಾರೆ. ಯೋಗಿ ಆದಿತ್ಯಾನಾಥ್ ಅವರು ತಾಜ್ ಮಹಲ್ ಅನ್ನು ಗುಲಾಮಗಿರಿಯ ಸಂಕೇತ ಎಂದು ಹೇಳುತ್ತಿದ್ದಾರೆ. ಗುಲಾಮಗಿರಿಯ ಸಂಕೇತ ನಮಗೇಕೆ ಬೇಕು. ಅದನ್ನು ಕೂಡಲೇ ಕೆಡವಿ ಹಾಕೋಣ” ಎಂದು ಅಜಂಖಾನ್ ವ್ಯಂಗ್ಯವಾಡಿರುವುದು ನಿಜಕ್ಕೂ ಕೂಡ ಹೇಯ ವಿಚಾರವೇ ಆಗಿರುವುದಂತೂ ಅಕ್ಷರಶಃ ನಿಜ.

ಅಷ್ಟೇ ಅಲ್ಲದೇ, ಮುಸ್ಲಿಂ ಆಗಿ ಆದೊಂದು ಶಿವನ ಮಂದಿರ ಎಂದು ನಾನು ಒಪ್ಪುವೆ. ಆದರಿಂದ ರಾಡ್ ಹಾಗೂ ಕೊಡಲಿಗಳಿಂದ ಹೋಗಿ ತಾಜ್ ಮಹಲ್ ಅನ್ನು ಕೆಡವಲು ನಾನು ರೆಡಿ ಎಂದಿದ್ದಾರೆ. ಯೋಗಿ ಅವರಿಗೆ ಹೆಗಲು ಕೊಟ್ಟು ನಡೆಯಲು ನನ್ನಂತ ಮುಸ್ಲಿಮರು ಸಿದ್ದರಿದ್ದಾರೆ ಎಂದು ಹೇಳುವ ಮೂಲಕ ಸಮಾಜವಾದಿ ಮುಖಂಡ ಅಜಂಖಾನ್ ಮತ್ತೊಂದು  ಸುದ್ದಿಗೆ ಗ್ರಾಸವಾಗಿರುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ!!

ಮೂಲ:http://zeenews.india.com/india/azam-khan-says-will-go-with-yogi-adityanath-to-demolish-taj-mahal-as-it-is-shiva-temple-2120847.html/div>

– ಅಲೋಖಾ

Editor Postcard Kannada:
Related Post