X

ಬಿಗ್ ಬ್ರೇಕಿಂಗ್! ಕಾಂಗ್ರೆಸ್ ನಾಯಕರ ಅರೆಸ್ಟ್..! ಹಿಂಬಾಣವಾಗುತ್ತಿದೆಯಾ ಕಾಂಗ್ರೆಸ್ ಬಿಟ್ಟಿದ್ದ ಬಾಣ..!

ಅಧಿಕಾರ ಅನ್ನೋದು ಯಾರಿಗೂ ಶಾಶ್ವತ ಅಲ್ಲ ಎಂಬುವುದು ಕಾಂಗ್ರೆಸ್ ನಾಯಕರಿಗೆ ಇದೀಗ ಮನವರಿಕೆ ಆಗಿದೆ ಅಂತ ಕಾಣುತ್ತೆ. ಕಳೆದ 5 ವರ್ಷದಲ್ಲಿ ಗೃಹ ಇಲಾಖೆಯನ್ನು ತನ್ನ ಕಪಮುಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದ ಜನತೆಯೊಂದಿಗೆ ಚೆಲ್ಲಾಟವನ್ನು ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಬೀದಿ ಪಾಲಾಗಿರುವ ವಿಚಾರ ಜಗದ್ಜಾಹೀರು. ಆದರೆ ಅಧಿಕಾರ ಕಳೆದುಕೊಂಡ ಕೇವಲ ಮೂರೇ ದಿನಕ್ಕೆ ಯಾವ ಪೊಲೀಸರನ್ನು ತನ್ನ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಆಳುತ್ತಿದ್ದ ಕಾಂಗ್ರೆಸ್ ನಾಯಕರು ಇದೀಗ ಅದೇ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. 
 ನಿನ್ನೆ ತಾನೇ ರಾಜ್ಯದ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡಿದ್ದರು. ರಾಜ್ಯಪಾಲರ ಆಹ್ವಾನದಂತೆ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಇದೀಗ ಕಾಂಗ್ರೆಸ್ ನಾಯಕರು ರಾಜ್ಯಪಾಲರ ವಿರುದ್ಧ ಹೋರಾಟ ನಡೆಸಲು ಮುಂದಾಗಿದ್ದಾರೆ.
ರಾಜ್ಯಪಾಲರ ನಡೆ ಸರಿಯಾಗಿಲ್ಲ ಎಂದು ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ. ರಾಜಭವನ ಛಲೋ ಎಂಬ ಹೆಸರಿನಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಕಾಂಗ್ರೆಸ್ ಹಾಗೂ ಜನತಾ ದಳ ಸಜ್ಜಾಗಿತ್ತು. ಆದರೆ ಇದೀಗ ಪೊಲೀಸ್ ಇಲಾಖೆ ನೂತನ ಸರ್ಕಾರದಲ್ಲಿರುವುದೆಂದು ಅವರು ಮರೆತಿರುವಂತಿದೆ. ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ನಾಯಕರಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 
ರಾಜಭವನಕ್ಕೆ ಆಗಮಿಸುತ್ತಿದ್ದ ಪ್ರತಿಭಟನಾ ಮೆರವಣಿಗೆಯನ್ನು ಆರಂಭದಲ್ಲೇ ಪೊಲೀಸರು ತಡೆಯಲು ಯತ್ನಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ಮೊಂಡು ಹಠವನ್ನು ಮುಂದುವರೆಸಿದ್ದರಿಂದ ರಾಜಭವನ ಪ್ರವೇಶಕ್ಕೂ ಮೊದಲೇ ಕಾಂಗ್ರೆಸ್ ನಾಯಕರನ್ನು ಬಂಧಿಸಿ ಕ್ರಮ ಕೈಗೊಂಡಿದೆ.

ಇದು ಕಾಂಗ್ರೆಸ್ ಹಾಗೂ ಜನತಾ ದಳಕ್ಕೆ ಭಾರೀ ಮುಜುಗರವನ್ನೇ ತಂದಿಟ್ಟಿದೆ. ಮೊನ್ನೆ ಮೊನ್ನೆಯವರೆಗೂ ರಾಜ್ಯವನ್ನು ಆಳುತ್ತಿದ್ದ ಕಾಂಗ್ರೆಸ್ ಸರ್ಕಾರ ಇದೀಗ ಏಕಾಏಕಿ ತಾವೇ ಬಂಧನವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕೇ ಹೇಳೋದು, “ಕಾಲೈ ತಸ್ಮೈ ನಮಃ”…

-ಸುನಿಲ್ ಪಣಪಿಲ

Editor Postcard Kannada:
Related Post