X

ಬ್ರೇಕಿಂಗ್! ಬಹುಮತ ಸಾಬೀತಿಗೆ ಅಮಿತ್ ಷಾ ಕರೆ..! ಚಾಣಕ್ಯನ ಒಂದೇ ಕರೆಗೆ ರಾಜ್ಯ ರಾಜಕಾರಣವೇ ಅಲ್ಲೋಲ ಕಲ್ಲೋಲ..!

ಇಡೀ ರಾಜ್ಯದ ನಿದ್ದೆ ಕೆಡಿಸಿರುವ ರಾಜಕೀಯ ವ್ಯವಸ್ಥೆ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದ್ದು ಕೋರ್ಟ್ ಆದೇಶದಂತೆ ಬಿಜೆಪಿ ನಾಳೆ ಸಂಜೆ ಕೋರ್ಟ್ ಕಾಲಾವಧಿಯಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಆದೇಶ ನೀಡಿದೆ. ಆದರೆ ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ತನ್ನ ಬಳಿ ಇರುವ ಶಾಸಕರು ಎಲ್ಲೂ ಹೋಗದಂತೆ ಎಚ್ಚರಿಕೆ ವಹಿಸಿದ್ದು, ಬಿಜೆಪಿ ಭಾರೀ ತಂತ್ರ ರೂಪಿಸಿದೆ. ಬಿಜೆಪಿಯಿಂದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪನವರು ಮುಂದೆಯೂ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಬೇಕಾದರೆ ನಾಳೆ ಬಹುಮತ ಸಾಬೀತು ಪಡಿಸಲೇಬೇಕು. ಆದ್ದರಿಂದ ಭಾರೀ ತಂತ್ರ ರೂಪಿಸಿರುವ ಬಿಜೆಪಿ ಚಾಣಾಕ್ಯ ಅಮಿತ್ ಷಾ ಇದೀಗ ರಾಜ್ಯ ಬಿಜೆಪಿಗೆ ಕರೆ ನೀಡಿದ್ದಾರೆ..!

ಬಿಎಸ್‌ವೈ ಗೆ ಷಾ ಕರೆ..!

ಈಗಾಗಲೇ ಕೋರ್ಟ್ ವಿಚಾರಣೆ ಮುಗಿದಿದ್ದು, ನಾಳೆ ಸಂಜೆ ೪ ಗಂಟೆಗೆ ನಡೆಯುವ ಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತು ಪಡಿಸಬೇಕೆಂದು ಖಡಕ್ಕಾಗಿ ಆದೇಶಿಸಿದೆ‌. ಅದೇ ರೀತಿ ಬಿಜೆಪಿಯೂ ಬಹುಮತಕ್ಕೂ ಹೆಚ್ಚಿನ ಸ್ಥಾನ ನಾವು ಕೋರ್ಟ್ ಮುಂದೆ ಹಾಜರುಪಡಿಸುತ್ತೇವೆ ಎಂದು ಸರಾಗವಾಗಿಯೇ ಹೇಳಿಕೊಂಡಿದ್ದು, ನಮಗೆ ಬೇಕಾದ ಬೆಂಬಲ ಈಗಾಗಲೇ ನಮ್ಮ ಕೈಯಲ್ಲಿ ಇದೆ ಎಂದು ಹೇಳಿಕೊಂಡಿದ್ದಾರೆ. ಅದೇ ರೀತಿ ತಂತ್ರ ರೂಪಿಸಿರುವ ಬಿಜೆಪಿ ಚಾಣಾಕ್ಯ ಅಮಿತ್ ಷಾ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಕರೆ ಮಾಡಿದ್ದು, ಸದ್ಯದ ಸ್ಥಿತಿಯ ಬಗ್ಗೆ ವಿವರಣೆ ಕೇಳಿದ್ದಾರೆ.

ಅಮಿತ್ ಷಾ ಕರ್ನಾಟಕದಲ್ಲಿ ಬಂದು ಇಲ್ಲಿನ ಬಿಜೆಪಿಗೆ ಎದುರಾಗಿರುವ ಎಲ್ಲಾ ಕಗ್ಗಂಟುಗಳನ್ನು ನಿವಾರುಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಷಾ ಮಾತ್ರ ದೆಹಲಿಯಲ್ಲಿಯೇ ಕೂತು ಬಿಜೆಪಿಗೆ ಬೇಕಾದ ಎಲ್ಲಾ ಉಪಾಯಗಳನ್ನು ನೀಡುತ್ತಿದ್ದಾರೆ. ಅದರಂತೆಯೇ ಇದೀಗ ಕರೆ ಮಾಡಿದ ಷಾ , ಕೋರ್ಟ್ ನಲ್ಲಿ ನಡೆದ ವಿಚಾರಣೆಯ ಬಗ್ಗೆ ವರದಿ ಕೇಳಿದ್ದಾರೆ.‌!

ಡೋಂಟ್ ವರಿ ಸಾರ್, ಎಲ್ಲಾ ಸರಿ ಹೋಗುತ್ತೆ..!

ಅಮಿತ್ ಷಾ ಮಾಡಿದ ಕರೆಗೆ ಅಷ್ಟೇ ಸಲೀಸಾಗಿ ಉತ್ತರಿಸಿದ ಯಡಿಯೂರಪ್ಪ ನವರು, ಡೋಂಟ್ ವರಿ ಸಾರ್, ಎಲ್ಲಾ ಸರಿಯಾಗಿಯೇ ಇದೆ, ನಿಮಗೆ ನಾನು ಎಲ್ಲಾ ಅಪ್ಡೇಟ್ ನೀಡುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲಾ ನಾವು ಸೇರಿ ಮಾಡುತ್ತೇವೆ ಎಂದು ಆರಾಮವಾಗಿ ಉತ್ತರಿಸಿದ ಯಡಿಯೂರಪ್ಪ ನವರು ಅಮಿತ್ ಷಾಗೆ ಭರವಸೆ ನೀಡಿದರು. ಈಗಾಗಲೇ ತುರ್ತು ಕ್ಯಾಬಿನೆಟ್ ಸಭೆ ಕರೆದಿರುವ ಯಡಿಯೂರಪ್ಪ ನವರು, ಇದಾದ ಕೂಡಲೇ ಮತ್ತೊಮ್ಮೆ ನಮ್ಮ ನಾಯಕರ ಸಭೆ ಕರೆದು , ಇದಕ್ಕೆ ಬೇಕಾದ ಎಲ್ಲಾ ಸಲಹೆಗಳನ್ನು ಪಡೆದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ..!

ಈಗಾಗಲೇ ಬಿಜೆಪಿ ಚಾಣಾಕ್ಯ ಅಮಿತ್ ಷಾ ತಂತ್ರಕ್ಕೆ ಬೆಚ್ಚಿಬಿದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಷಾ ಬಿಎಸ್‌ವೈ ಗೆ ಕರೆ ಮಾಡಿರುವ ವಿಚಾರ ತಿಳಿಯುತ್ತಿದ್ದಂತೆ ಮತ್ತೆ ಕಂಗಾಲಾಗಿದೆ..!

–ಅರ್ಜುನ್

Editor Postcard Kannada:
Related Post