X

ಮುಸ್ಲಿಮ್ ಆಕ್ರಮಣಕಾರಿ ಇಟ್ಟ ಹೆಸರನ್ನೇ ಬದಲಾಯಿಸಿದ ಯೋಗಿ!! ಬದಲಾಗುತ್ತಿದೆ ಭಾರತ!!

ಫೈರ್ ಬ್ರಾಂಡ್ ಅಂತಾನೇ ಪ್ರಖ್ಯಾತಿಯನ್ನು ಹೊಂದಿರುವಂತಹ ಯೋಗಿ ಆದಿತ್ಯನಾಥರು ಒಬ್ಬ ಮಾಸ್ಟರ್ ಮೈಂಡ್ ಅಂತಾನೇ ಹೇಳಬಹುದು!! ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮೇಲೆ ಅಲ್ಲಿನ ಬದಲಾವಣೆಗಳು ಒಂದಾ ಎರಡಾ? ಸೇವೆಗೆಂದು ನಿಂತವನಾಗಲಿ, ಕರ್ತವ್ಯ ಪಾಲನೆಗೆ ಬದ್ಧವನಾಗಿರಲಿ, ದೇಶವನ್ನು ಬದಲಾಯಿಸಬೇಕೆಂದು ಅಂದುಕೊಂಡವನಾಗಿರಲಿ ಯುಕ್ತಿಯಿಂದಲೇ ತನ್ನೆಲ್ಲ ಕೆಲಸಗಳನ್ನೂ ಯಶಸ್ವಿಯಾಗಿಯೇ ಪೂರೈಸುವ ರಾಜಕೀಯ ಸಂತರಿಗೆ ಉದಾಹರಣೆ ಯೋಗಿ ಆದಿತ್ಯನಾಥ್! ಯಾವುದೇ ಸಮಸ್ಯೆಯನ್ನಾದರೂ ತೆಗೆದುಕೊಳ್ಳಿ, ಉತ್ತರ ಪ್ರದೇಶ ಈ ಹಿಂದೆ ಬದುಕಲು ಯೋಗ್ಯವೇ ಅಲ್ಲ ಎಂಬಂತಿದ್ದಷ್ಟು ಅಪರಾಧಗಳು ತುಂಬಿ ತುಳುಕುತ್ತಿತ್ತು!! ಉತ್ತರ ಪ್ರದೇಶಕ್ಕೆ ಹೋಗುವುದೇ ದೊಡ್ಡ ಅಪಾಯ ಎನ್ನುವಂತಿದ್ದ ಪರಿಸ್ಥಿತಿಯನ್ನು ಬದಲು ಮಾಡಿದ್ದು ಯೋಗಿ ಆದಿತ್ಯನಾಥ್ ಸರಕಾರ!! ನಿರಾಶ್ರಿತರಿಗೆ ಸೂರನ್ನು ಮಾತ್ರವೇ ಕಲ್ಪಿಸಿಕೊಡದೇ ಜೊತೆಗೆ, ಉದ್ಯೋಗವನ್ನು ಕಲ್ಪಿಸಿದ ಯೋಗಿ ಸರಕಾರದ ಬಲದಿಂದ ಇವತ್ತು ಉತ್ತರ ಪ್ರದೇಶ ದಿನೇ ದಿನೇ ಅಪರಾಧ ರಹಿತವಾಗುತ್ತ ಹೋಗುತ್ತಿದೆ!! ಯೋಗೀಜೀ ಸರಕಾರ ಇದೀಗ ಉತ್ತರ ಪ್ರದೇಶದಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ!!

ಅಲಹಾಬಾದ್‍ನ್ನು ಮರುನಾಮಕರಣ ಮಾಡಿದ ಯೋಗೀಜೀ!!

ಇಡೀ ದೇಶವೇ ಉತ್ತರ ಪ್ರದೇಶದತ್ತ ನೋಡುತ್ತಿದೆ ಎಂದರೆ ಯೋಗಿ ಆದಿತ್ಯನಾಥರು ಉತ್ತರಪ್ರದೇಶವನ್ನು ಬದಲಾವಣೆ ಮಾಡಿರುವ ರೀತಿ ಅಂತಹದ್ದು!! ಮುಂದಿನ ವರ್ಷ ನಡೆಯಲಿರುವ ಕುಂಭಮೇಳದ ವೇಳೆಗೆ “ಅಲಹಾಬಾದ್’ಗೆ ಮರುನಾಮಕರಣ ಮಾಡುವ ಸಿದ್ಧತೆ ನಡೆದಿದ್ದು “ಪ್ರಯಾಗ್‍ರಾಜ್’ ಎಂದು ಹೆಸರಿಡಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ ನಿರ್ಧರಿಸಿದೆ.

ಅಷ್ಟಕ್ಕೂ “ಪ್ರಯಾಗ್‍ರಾಜ್’ ಎಂದು ಹೆಸರಿಡಲು ನಿರ್ಧರಿಸಿದ್ದಕ್ಕೂ ಬಲವಾದ ಕಾರಣ ಇದೆ ಎಂದು ಸರಕಾರ ಸಮರ್ಥಿಸಿಕೊಂಡಿದೆ. ಪ್ರಯಾಗ್ ಎನ್ನುವುದು ಕುಂಭಮೇಳ ನಡೆಯುವ ಪವಿತ್ರ ಪ್ರದೇಶವಾಗಿದೆ. ಇದು ಗಂಗೆ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮಸ್ಥಳ. ಈ  ಕಾರಣಕ್ಕಾಗಿ ಅಲಹಾಬಾದ್ ಅನ್ನು “ಪ್ರಯಾಗ್‍ರಾಜ್’ ಎಂದು ನಾಮ ಕರಣ ಮಾಡಬೇಕೆನ್ನುವುದು ಸರಕಾರದ ಉದ್ದೇಶ. ಈಗಾಗಲೇ ಕುಂಭ ಮೇಳದ ಬ್ಯಾನರ್‍ಗಳಲ್ಲಿ ಅಲಹಾಬಾದ್ ಎಂಬ ಹೆಸರನ್ನು ಪ್ರಯಾಗ್‍ರಾಜ್ ಆಕ್ರಮಿಸಿಕೊಂಡಿದೆ!! ಅದಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಅಲಹಾಬಾದ್ ಎಂದು ನಾಮಕರಣ ಮಾಡಿರುವಂತಹದ್ದು ಮೊಘಲರು!! ಮೊಘಲರ ಕುರುಹುವನ್ನು ಹೊಂದೊಂದಾಗಿಯೇ ತ್ತರ ಪ್ರದೇಶದಿಂದ ಇಲ್ಲವಾಗಿಸುವಲ್ಲಿ ಯೋಗೀಜೀ ನಿರತರಾಗಿದ್ದಾರೆ!!

ಅದಲ್ಲದೆ ಈಗಾಗಲೇ ಫಜಿಯಾಬಾದ್ ಅನ್ನು ಕೂಡಾ ಅಯೋಧ್ಯಾ ಧಾಮ್ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಈ ಅಲಹಾಬಾದ್ ಅನ್ನು ಪ್ರಯಾಗ್ ರಾಜ್ ಎಂಬ ಹೆಸರನ್ನಿಡುವ ಮೂಲಕ ಯೋಗಿ ಆದಿತ್ಯನಾಥರು ಮತ್ತಷ್ಟು ಪ್ರಸಿದ್ಧಿಯನ್ನು ಹೊಂದುತ್ತಿದ್ದಾರೆ!!

ಹೀಗೆ ಉತ್ತರಪ್ರದೇಶವನ್ನು ಸಂಪೂರ್ಣವಾಗಿ ಬದಲಾವಣೆ ಮಾಡುವುದೇ ಯೋಗಿ ಆದಿತ್ಯನಾಥರ ಕನಸಾಗಿದೆ!! ಇಂತಹ ಮುಖ್ಯಮಂತ್ರಿ ಪ್ರತೀ ರಾಜ್ಯದಲ್ಲೂ ಇದ್ದರೆ ಇಡೀ ಭಾರತ ರಾಮರಾಜ್ಯವಾಗುವುದಂತೂ ಖಂಡಿತ!! ಇನ್ನು ಮುಂದೆಯೂ ಇಂತಹವರನ್ನು ಗೆಲ್ಲಿಸಿದ್ದಲ್ಲಿ ಈ ದೇಶ ಸುಭೀಕ್ಷವಾಗಬಹುದು!!

ಪವಿತ್ರ

Editor Postcard Kannada:
Related Post