X

ಹಿಂದುತ್ವವೇ ಪ್ರಾಣವೆನ್ನುವ ಯೋಗಿ ಆದಿತ್ಯನಾಥ್!! ಮುಸ್ಲಿಂ ಓಟ್ ಬ್ಯಾಂಕ್‍ಗಾಗಿ ಟೋಪಿ ತೊಡಲು ನಿರಾಕರಿಸಿದ ಸನಾತನ ಸಂತ!!

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಟೋಪಿ ಹಾಕಲು ಮುಸ್ಲಿಮರು ಮುಂದೆ ಬಂದರು ಅದರೆ ಮೋದೀಜೀ ಮಾತ್ರ ಅದನ್ನು ನಿರಾಕರಿಸಿದ್ದರು!! ಅದರ ಮರು ಕ್ಷಣವೇ ಕೆಲ ಬುದ್ಧಿಜೀವಿಗಳು ಮೋದೀಜೀಯವರ ಮುಸ್ಲಿಂ ವಿರೋಧಿ ಎಂದು ಪಟ್ಟ ಕಟ್ಟಿದ್ದರು!! ಅದರೆ ಮೋದಿಜೀ ಯಾವತ್ತೂ ಯಾವ ಧರ್ಮದವರನ್ನೂ ದ್ವೇಷಿಸುವ ವ್ಯಕ್ತಿಯಲ್ಲ!! ಪ್ರತೀಯೊಂದು ಧರ್ಮಕ್ಕೂ ಅವರು ಗೌರವವನ್ನು ಸೂಚಿಸುತ್ತಾರೆ!! ಆ ರೀತಿ ಏನಾದರೂ ಮೋದೀಜೀಯವರು ಮುಸ್ಲಿಂ ವಿರೋಧಿಯಾಗಿದ್ದರೆ ಮುಸ್ಲಿಂರಿಗೆ ಇಷ್ಟೆಲ್ಲಾ ಸವಲತ್ತು ನೀಡುತ್ತಿದ್ದರಾ ಎಂಬುವುದನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಒಳಿತು!!

ಅದಾದ ಬಳಿಕ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ರಜತ್ ಶರ್ಮಾ ಎನ್ನುವವರು ಪ್ರಶ್ನೆಯನ್ನು ಕೇಳುತ್ತಾರೆ!! ನೀವು ಮುಸ್ಲಿಮರ ಟೋಪಿ ಧರಿಸಲು ನಿರಾಕರಿಸಿದ್ಯಾಕೆ ಎಂದು? ಅದಕ್ಕೆ ಕೂಲ್ ಆಗಿಯೇ ಉತ್ತರಿಸಿದ್ದ ನಮ್ಮ ಮೋದೀಜೀ ಆ ಟೋಪಿ ಐಕ್ಯತೆಯ ಸಂಕೇತವಾಗಿದ್ದರೆ ಮಹಾತ್ಮ ಗಾಂಧಿ ಸರ್ದಾರ್ ಪಟೇಲ್, ಪಂಡಿತ್ ಜವಹರಲಾಲ್ ನೆಹರೂ ಏಕೆ ಅದನ್ನು ತೊಡಲಿಲ್ಲ ಎಂದು ಸಂದರ್ಶನವೊಂದರಲ್ಲಿ ಅವರು ಪ್ರಶ್ನಿಸಿದ್ದರು..

ಇದೀಗ ಮತ್ತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಘರ್ ನಲ್ಲಿರುವ ಪ್ರಸಿದ್ಧ ಸಂತ ಕಬೀರ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಮುಸ್ಲಿಂ ರ ಧರಿಸುವ ಉಣ್ಣೆಯ ಟೋಪಿ ಧರಿಸಲು ನಿರಾಕರಿಸಿದ್ದಾರೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಅಥವಾ ಜಮ್ಮು -ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ ಅಂತಹವರು ಇಂತಹ ಟೋಪಿ ಧರಿಸುತ್ತಿದ್ದರಂತೆ. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಆದಿತ್ಯನಾಥ್ ಅವರಿಗೆ ಅಲ್ಲಿನ ಧರ್ಮಗುರುಗಳು ಟೋಪಿ ಧರಿಸಲು ಮುಂದಾದಾಗ ಅದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ನಿರಾಕರಿಸಿದ್ದಾರೆ!! ಯಾವಾಗಲು ಬಿಜೆಪಿಯವರು ಓಟ್ ಬ್ಯಾಂಕ್‍ಗಾಗಿ ಏನನ್ನೂ ಮಾಡಲು ತಯಾರಿಲ್ಲ ಎಂಬುವುದನ್ನು ಮತ್ತೊಮ್ಮೆ ಯೋಗಿ ಆದಿತ್ಯನಾಥರು ತೋರಿಸಿಕೊಟ್ಟಿದ್ದಾರೆ!!

ಈ ಇಡೀ ಘಟನೆಯ ವಿಡಿಯೋ ಮಜಾರ್ ನ ಹತ್ತಿರ ಇದ್ದ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಕಾರಾಕುಲ್ ತೊಡಿಸಲು ಬಂದ ಆ ಮುಸ್ಲಿಂ ಟೋಪಿ ಕಾರಾಕುಲ್ ಸಂಪ್ರದಾಯದ ಪ್ರಕಾರ ಅದು ಕುರಿಯ ಉಣ್ಣೆಯಿಂದ ಮಾಡಿರುವ ಟೋಪಿಯಾಗಿರುತ್ತದೆ. ಭಾರತವನ್ನ ಇಬ್ಭಾಗ ಮಾಡಿ ತನ್ನ ಇಸ್ಲಾಮಿಕ್ ಮತಾಂಧತೆಯ ಪರಾಕಾಷ್ಠೆಯನ್ನ ಮೆರೆದಿದ್ದ ಮೊಹಮ್ಮದ್ ಅಲಿ ಜಿನ್ನಾ ಕೂಡ ಇಂತಹುದ್ದೇ ಟೋಪಿ ಧರಿಸುತ್ತಿದ್ದರು ಹಾಗು ಅನೇಕ ಮುಸ್ಲಿಂ ಮುಖಂಡರು ಈ ರೀತಿಯ ಟೋಪಿಗಳನ್ನ ಈಗಲೂ ಹಾಕಿಕೊಳ್ಳುತ್ತಾರೆ.

ಯೋಗಿ ಆದಿತ್ಯನಾಥರು ಇಂತಹ ಮುಸ್ಲಿಂ ಟೋಪಿಯನ್ನ ಧರಿಸಲು ನಿರಾಕರಿಸಿದ್ದನ್ನ ಹಿಂದೂ ಸಮಾಜ ಸ್ವಾಗತಿಸಿದ್ದಲ್ಲದೆ ಅನ್ಯಧರ್ಮೀಯರ ಭಾವನೆಗಳಿಗೆ ಧಕ್ಕೆ ತರದೆ ಟೋಪಿಯನ್ನೂ ಧರಿಸದೆ ಮಜಾರ್ ಗೆ ಭೇಟಿ ನೀಡಿದರೂ ಅನ್ಯ ಸೆಕ್ಯೂಲರ್ ರಾಜಕಾರಣಿಗಳ ರೀತಿಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡದಿರುವ ಯೋಗಿ ಆದಿತ್ಯನಾಥರ ನಡೆಯ ಕುರಿತೂ ಹಾಡಿ ಹೊಗಳಿದೆ!! ಅದಲ್ಲದೆ ಮುಸ್ಲಿಮರು ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಉಪಯೋಗಿಸುತ್ತಾರೆ!! ಆದರೆ ಯೋಗಿ ಆದಿತ್ಯನಾಥರ ಕಣ ಕಣದಲ್ಲೂ ಹಿಂದುತ್ವದ ರಕ್ತ ಹರಿಯುತ್ತಿದ್ದು ಯಾವ ಕಾರಣಕ್ಕೂ ಯೋಗೀಜೀ ಮುಸ್ಲಿಮರ ಟೋಪಿಯನ್ನು ಧರಿಸಲ್ಲ ಅಂತ ಸ್ಟಷ್ಟ ಉತ್ತರವನ್ನು ಜನತೆಗೆ ನೀಡಿದ್ದಾರೆ!!

ಆದರೆ ಕಾಂಗ್ರೆಸ್‍ನವರು ಓಟ್ ಬ್ಯಾಂಕ್‍ಗಾಗಿ ಏನೂ ಮಾಡಲೂ ತಯಾರಿರುತ್ತಾರೆ!! ಆದರೆ ಬಿಜೆಪಿಯವರು ತಮ್ಮ ಸ್ವಾಭಿಮಾನವನ್ನು ಬಿಡಲು ಮಾತ್ರ ತಯಾರಿರುವುದಿಲ್ಲ!! ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏರ್ಪಡಿಸಿದ್ದ ಇಫ್ತಾರ್ ಕೂಟ ಭಾರೀ ಸುದ್ದಿ ಮಾಡಿತ್ತು!! ಸುದ್ದಿ ಮಾಡಿರುವುದು ಇಫ್ತಾರ್ ಕೂಟದಲ್ಲಿ ಯಾವೆಲ್ಲ ಗಣ್ಯಾತಿಗಣ್ಯರು ಭಾಗವಹಿಸಿದರು ಎಂಬ ಕಾರಣಕ್ಕಲ್ಲ. ಬದಲಾಗಿ ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‍ಗಳಲ್ಲಿ ಅದನ್ನು ತೆಗೆದ ಕಾರಣಕ್ಕಾಗಿ!!

ಪ್ರತಿ ಬಾರಿಯು ಒಂದಲ್ಲ ಒಂದು ಗಿಮಿಕ್ ಗಳನ್ನು ಮಾಡುತ್ತಾ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ, ಇಫ್ತಾರ್ ಕೂಟ ನಡೆಸಿ ಮುಸಲ್ಮಾನರ ಮತ ಕೀಳುವ ಮುಂದಾಲೋಚನೆ ಮಾಡಿದ್ದೇ ಅವರಿಗೆ ಮುಳುವಾಯಿತೋ ಏನೋ ಗೊತ್ತಿಲ್ಲ!! ಆದರೆ ಮುಸ್ಲಿಂ ಧಾರ್ಮಿಕ ಅಸ್ಮಿತೆಯಾಗಿರುವ ಬಿಳಿ ಕ್ಯಾಪನ್ನು ಧರಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ರಾಹುಲ್ ಅದನ್ನು ತೆಗೆದಿರುವುದು ಮುಸ್ಲಿಂ ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟುಮಾಡಿತ್ತು!!

ಪ್ರತಿ ಬಾರಿಯು ಹಿಂದೂಗಳನ್ನು ಕಡೆಗಾಣಿಸಿ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿಯವರು ಮುಸಲ್ಮಾನರಿಗೆ ಈ ಮೂಲಕ ಮುಜುಗರ ಉಂಟು ಮಾಡುವಂತೆ ಮಾಡಿದ್ದಂತೂ ಅಕ್ಷರಶಃ ನಿಜ!! ಇದು ಕೇವಲ ಮತ ಪ್ರಚಾರದ ಗಿಮಿಕ್ !! ಅಷ್ಟೇ ಅಲ್ಲದೇ, “ರಾಹುಲ್ ಗಾಂಧಿ ಅವರ ಇಫ್ತಾರ್ ಪಾರ್ಟಿ ಕೇವಲ ಒಂದು ನಾಟಕವಾಗಿದ್ದು, ಮುಸ್ಲಿಮರನ್ನು ಸಂಪ್ರೀತಗೊಳಿಸುವ ತಂತ್ರವಾಗಿತ್ತು.. ಅದಲ್ಲದೆ ಓಟ್‍ಗಳಿಕಗೋಸ್ಕರ ಕಾಂಗ್ರೆಸ್‍ನವರು ಯಾವ ರೀತಿಯ ತಂತ್ರಗಾರಿಗೂ ನಾವು ಸೈ ಎಂಬುವುದನ್ನು ಇಲ್ಲಿ ಮತ್ತೊಮ್ಮೆ ರಾಹುಲ್ ಗಾಂಧಿ ನಿರೂಪಿಸಿ ಬಿಟ್ಟಿದ್ದರು!!

ಆದರೆ ನಿಜವಾದ ಹಿಂದೂವಾದರೆ ಮೋದಿಜೀ ಹಾಗೂ ಯೋಗಿಜೀಯಂತೆ ಯಾವ ಕಾರಣಕ್ಕೂ ಮುಸ್ಲಿಮರ ಟೋಪಿಯನ್ನು ಹಾಕಲ್ಲ!! ಇದೀಗ ಪ್ರಧಾನಿ ಮೋದಿ ಹಾಗೂ ಯೋಗೀಜೀ ಮುಸ್ಲಿಮರ ಟೋಪಿಯನ್ನು ನಿರಾಕರಿಸುವ ಮೂಲಕ ಸ್ಪಷ್ಟ ಸಂದೇಶವನ್ನು ಇಡೀ ಜಗತ್ತಿಗೆ ನೀಡಿದ್ದಾರೆ!! ಇದರಲ್ಲಿ ತಿಳಿಯುತ್ತದೆ ಬಿಜಪಿಯವರ ಪ್ರತೀಯೊಬ್ಬರ ರಕ್ತದಲ್ಲೂ ಹಿಂದೂತ್ವವಿದೆ!! ಹಾಗಾಗಿ ಯಾವ ಆಸೆಗಾಗಿಯೂ ಕಾಂಗ್ರೆಸ್‍ವರಂತೆ ತಮ್ಮ ತನವನ್ನು ಬಿಡುವವರಲ್ಲ ಎಂದು!!

source: nationalist view

  • ಪವಿತ್ರ
Editor Postcard Kannada:
Related Post