X

ಮೋದಿ ಮೇನಿಯಾಗೆ ನಲುಗಿದ ಕಾಂಗ್ರೆಸ್ : ಹಣ ಕೊಟ್ಟರೂ ಜನ ಮಾತ್ರ ಬರುತ್ತಿಲ್ಲ

ದೇಶದ ಯಾವ ಹಳ್ಳಿಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಡೆಯಲು, ಅದರಲ್ಲಿ ಭಾಗವಹಿಸುವ ಲಕ್ಷಾಂತರ ಜನ ಅಭಿಮಾನಿಗಳನ್ನು ಕಂಡು ಕಾಂಗ್ರೆಸ್ ಪಕ್ಷಕ್ಕೆ ಉರಿ ಹತ್ತಿದೆ. ಹೀಗೆಯೇ ಮುಂದುವರಿದರೆ ಜನರಿಗೆ ಕಾಂಗ್ರೆಸ್ ಎನ್ನುವುದು ಇತ್ತು ಎಂಬುದೇ ಮರೆತು ಹೋಗಬಹುದು ಎನ್ನುವ ಭಯ ಕಾಂಗಿಗಳಿಗೆ ಶುರುವಾಗಿಬಿಟ್ಟಿದೆ.

ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹಣ ಕೊಟ್ಟು ಜನರನ್ನು ಸೇರಿಸಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿರುವಂತಿದೆ. ಅಯ್ಯೋ ಎಲೆಕ್ಷನ್ ಬಂತಲ್ಲಾ, ಅದಿಕ್ಕೆ ಸಿದ್ದಣ್ಣನ ಬಗ್ಗೆ ಹೀಗೆಲ್ಲಾ ಇಲ್ಲಸಲ್ಲದ್ದು ಮಾತಾಡುತ್ತಿದ್ದಾರೆ ಅಂದುಕೊಳ್ಳಬೇಡಿ. ಸ್ವತಃ ಸಿದ್ದಣ್ಣನೇ ತಮ್ಮ ಪಕ್ಷದ ಇತರ ನಾಯಕರ ಜೊತೆ ೫೦೦ ರೂ. ಚಿಲ್ಲರೆ ಹಣ ಕೊಟ್ಟು ಜನರನ್ನು ಸೇರಿಸಿ ಎಂದು ಹೇಳುತ್ತಿರುವ ಖತರ್ನಾಕ್ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಯ್ಯೋ ಕಾಂಗ್ರೆಸ್ಸಿನ ದುರವಸ್ಥೆಯೇ ಎಂದು ಜನರು ಆಡಿ ನಗುವಂತೆ ಈ ವಿಡಿಯೋ ವೈರಲ್ ಆಗಿದ್ದು, ಕಾಂಗ್ರೆಸ್ ಹಣೆಬರಹ ಇಷ್ಟೇ ಎನ್ನುವುದು ಬಟಾಬಯಲಾಗಿದೆ.

ಈ ಹಿಂದೆ ಮತ್ತು ಈಗಲೂ ಓಟು ಕೇಳುವ ಸಮಯದಲ್ಲಿ ಕಾಂಗ್ರೆಸ್ ಜನರಿಗೆ ನೋಟು, ವಸ್ತುಗಳನ್ನು ನೀಡಿ ಅವರ ಕಿವಿಗೆ ಹೂ ಇಡುವ ಕೆಲಸ ಮಾಡುತ್ತಿತ್ತು. ಆದರೆ ಈಗ ಜನರು ಜಾಗೃತರಾಗಿದ್ದಾರೆ. ದೇಶವನ್ನು ಕೊಳ್ಳೆ ಹೊಡೆಯುವ ಕಾಂಗ್ರೆಸ್‌ಗಿಂತ, ದೇಶವನ್ನು ಅಭಿವೃದ್ಧಿ ಮಾಡುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯತ್ತಲೇ ಜನರು ಒಲವು ತೋರಿಸಿದ್ದು, ಇದು ಕಾಂಗ್ರೆಸ್ ‌ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಹಣ ಕೊಟ್ಟರೂ ಹೋಗಲ್ಲ ಎಂದು ಹೇಳುವ ಜನರು, ಬಿಜೆಪಿ ಕಾರ್ಯಕ್ರಮಗಳಿಗೆ ಯಾವುದೇ ಆಮಿಷ ಇಲ್ಲದೆ ಹೋದರೂ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೆಲ್ಲಾ ಗಮನಿಸಿದ ಕಾಂಗ್ರೆಸ್ ಪಕ್ಷ ತಲೆ ಮೇಲೆ ಕೈ ಹೊತ್ತು ಕೂರುವ ಸ್ಥಿತಿ ತಲುಪಿದೆ. ಜನರನ್ನು ಓಲೈಕೆ ಮಾಡುವ ಭರದಲ್ಲಿ ತನ್ನ ಮರ್ಯಾದೆಯನ್ನು ತಾನೇ ಕಳೆದು ಕೊಳ್ಳುತ್ತಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮೂಲೆ ಸೇರಲಿದೆ ಎನ್ನುವುದು ಬಲ್ಲವರ ಮಾತು.

Post Card Balaga:
Related Post