X

ಕಾಂಗ್ರೆಸ್‌ನಿಂದ ಕುಕ್ಕರ್ ಸ್ಫೋಟ: ಚುನಾವಣೆಯ ಹೊಸ್ತಿಲಲ್ಲೇ ಕಳಚಿಬಿತ್ತು ಕಾಂಗ್ರೆಸ್‌ನ ಕರಾಳಮುಖ!

ಕಾಂಗ್ರೆಸ್ ಮತ್ತು ಕುಕ್ಕರ್‌ಗೆ ಅದ್ಯಾವ ನಂಟೋ ತಿಳಿಯದು. ಪ್ರತಿ ಚುನಾವಣೆಯ ಸಂದರ್ಭದಲ್ಲಿಯೂ ಕಾಂಗ್ರೆಸ್ ಪಕ್ಷದ ಜೊತೆ ಕುಕ್ಕರ್ ಹೆಸರೂ ಸಹ ತಳುಕು ಹಾಕಿಕೊಂಡು ಬಿಡುತ್ತೆ.

ಸದ್ಯ ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಓಲೈಕೆ ಮಾಡೋ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ರಾಮಲಿಂಗ ರೆಡ್ಡಿ ಅವರು ಕುಕ್ಕರ್ ಹಂಚಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಂದ ಹಾಗೆ ಚುನಾವಣೆಯ ಸಮಯದಲ್ಲಿ ಜನರಿಗೆ ಹಣ, ವಸ್ತುಗಳನ್ನು ನೀಡಿ ಬುಟ್ಟಿಗೆ ಹಾಕಿಕೊಳ್ಳುವ ಕೆಲಸವನ್ನು ಎಲ್ಲಾ ಪಕ್ಷಗಳೂ ತೆರೆ ಮರೆಯಲ್ಲಿ ಮಾಡುತ್ತವಲ್ಲಾ. ಹಾಗೆಯೇ ಇವರೂ ಸಹ ಮಾಡಿದ್ದಾರೆ ಎಂದುಕೊಂಡಿರಾ. ಹೌದು, ಅದೇನೇ ಸರಿ. ಆದರೆ ರೆಡ್ಡಿ ಹಂಚಿದ ಕುಕ್ಕರ್ ಕಳಪೆ ಗುಣಮಟ್ಟದ್ದಾಗಿದ್ದು, ಓಟು ಪಡೆಯೋದಿಕ್ಕೆ ಜನರ ಜೀವದ ಜೊತೆಗೆಯೇ ಚೆಲ್ಲಾಟ ಆಡೋಕೆ ಹೊರಟ ಅವರ ವಿರುದ್ಧ ಸದ್ಯ ಕುಕ್ಕರ್ ಪಡೆದುಕೊಂಡವರೂ ಕೂಡಾ ಗರಂ ಆಗಿದ್ದಾರೆ. ಕುಕ್ಕರ್ ಕೊಟ್ಟು ಮತ ಪಡೆಯೋಕೆ ಪ್ಲ್ಯಾನ್ ಮಾಡಿದ ರಾಮಲಿಂಗಾ ರೆಡ್ಡಿ ಅವರ ಸ್ಥಿತಿ ‘ದೊಣ್ಣೆ ಕೊಟ್ಟು ಹೊಡೆಸಿಕೊಂಡಂತಾಗಿದೆ’.

ಕೆಲ ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೂಡಾ ಮತ ಪಡೆಯೋದಿಕ್ಕೆ ಜನರಿಗೆ ಕುಕ್ಕರ್ ಹಂಚಿ ಸುದ್ದಿಯಾಗಿದ್ದರು. ಈಗ ಕಾಂಗ್ರೆಸ್ ಪಕ್ಷದ ರಾಮಲಿಂಗಾ ರೆಡ್ಡಿ ಕೂಡಾ ಹೆಬ್ಬಾಳ್ಕರ್ ದಾರಿಯನ್ನೇ ಆಯ್ಕೆ ಮಾಡಿಕೊಂಡು, ಓಟರ್ಸ್ ಅನ್ನು ಆಮಿಷಕ್ಕೆ ತುತ್ತಾಗಿಸಿ ಮತ ಪಡೆಯೋಕೆ ಹೊರಟು, ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡಿದ್ದಾರೆ. ಕುಕ್ಕರ್ ಪಡೆದುಕೊಂಡವರು, ಕೊಡೋದೇನೋ ಕೊಟ್ಟರು, ಆದ್ರೆ ಒಳ್ಳೆದು ಕೊಡ್ಬಾರ್ದಿತ್ತೇ. ಕೊನೇ ಪಕ್ಷ ಚುನಾವಣೆ ಮುಗಿಯೋವರೆಗಾದ್ರೂ ಬಾಳಿಕೆ ಬರುವ ಕುಕ್ಕರ್ ಕೊಡ್ಬಾರ್ದಿತ್ತೇ? ಅಂತ ಹಿಡಿಶಾಪ ಹಾಕುತ್ತಿದ್ದಾರೆ.

ಕುಕ್ಕರ್ ವಿಷಯಕ್ಕೆ ಬಂದಾಗ ನೆರವಾಗುವ ಇನ್ನೊಂದು ಬಹಳ ಮುಖ್ಯವಾದ ಮತ್ತು ಅಪಾಯಕಾರಿ ಸಂಗತಿಯನ್ನು ಕೂಡಾ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇ ಬೇಕು. ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದಕ ಶಾರಿಕ್ ಕುಕ್ಕರಿನಲ್ಲಿ ಬಾಂಬ್ ಇರಿಸಿ ಸ್ಪೋಟಿಸಿದ ಕಥೆ ಗೊತ್ತಲ್ಲಾ. ಈತನನ್ನು ಉಗ್ರ ಎಂದು ಕರೆದಿದ್ದಕ್ಕೆ ಅಶಾಂತಿ ಪ್ರಿಯರ ಸಹೋದರ, ಕಾಂಗ್ರೆಸ್ ಪಕ್ಷದ ನಾಯಕ ಡಿ. ಕೆ. ಶಿವಕುಮಾರ್ ಅವರು ಕೆಂಡಾಮಂಡಲವಾಗಿದ್ದು, ಅದು ಹೇಗೆ ಅವನನ್ನು ಉಗ್ರ ಎಂದು ಹೇಳಿದಿರಿ ಎಂದು ಕರ್ನಾಟಕದ ದೇಶಭಕ್ತ ಜನರ ವಿರುದ್ಧ ಕಿಡಿ ಕಾರಿದ್ದು ನೆನಪಿರಬಹುದು. ಈ ಕುಕ್ಕರ್ ಬಾಂಬ್ ಉಗ್ರನ ಲಿಂಕ್ ಹೊಂದಿದ್ದ ಮತ್ತೊಬ್ಬ ಉಗ್ರ, ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕನೊಬ್ಬನ ಮಗನನ್ನು ಸಹ ಎನ್‌ಐಎ ಬಂಧಿಸಿತ್ತು. ಹೀಗೆ ಉಗ್ರಗಾಮಿಗಳ ಲಿಂಕ್ ಅನ್ನು ನೋಡಿದರೂ ಸಹ ಕಾಂಗ್ರೆಸ್ ಪಕ್ಷದ ಕುಕ್ಕರ್ ಪ್ರೀತಿ ಗೊತ್ತಾಗುತ್ತದೆ.

ಒಟ್ಟಿನಲ್ಲಿ ಡಿಕಿಶಿ ಸಹೋದರರಾದ ಅಶಾಂತಿಧೂತ ಜಿಹಾದಿ ಉಗ್ರರು ಕುಕ್ಕರ್ನಲ್ಲಿ ಬಾಂಬ್ ಸ್ಫೋಟಿಸಿ ಜನರ ಜೀವ ತೆಗೆಯೋಕೆ ನೋಡಿದರೆ, ಕಾಂಗ್ರೆಸ್ ನಾಯಕರು ಕಳಪೆ ಗುಣಮಟ್ಟದ ಕುಕ್ಕರ್ ನೀಡಿ, ಅದು ಬ್ಲಾಸ್ಟ್ ಮಾಡಿ ಜನರ ಜೀವದ ಜೊತೆಗೆ ಆಟ ಆಡ್ತಿರೋದು ದುರಾದೃಷ್ಟಕರ. ಇನ್ನಾದರೂ ಕಾಂಗ್ರೆಸ್ ಪಕ್ಷದವರ ಇಂತಹ ಮೋಸಕ್ಕೆ ಬಲಿಯಾಗದೆ ಮತದಾರರು ಕಾಂಗ್ರೆಸ್ ಪಕ್ಷವನ್ನು ಮನೆ ಕಟ್ಟುವ ಕೆಲಸ ಮಾಡಬೇಕಿದೆ.

Post Card Balaga:
Related Post