X

ಬ್ರೇಕಿಂಗ್: ಶರಣಾಗುತ್ತಾನಂತೆ ಭೂಗತ ಪಾತಕಿ!! ಮೋದಿ ಭಯವನ್ನು ದಾವುದ್ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ?!

ಭೂಗತ ಪಾತಕಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮುಂಬೈ ಸರಣಿ ಬಾಂಬ್ ಸ್ಫೋಟದ ರುವಾರಿ ದಾವೂದ್ ಇಬ್ರಾಹಿಂ ಸೆರೆಯಾಗುವ ಲಕ್ಷಣ ಗೋಚರಿಸುತ್ತಿದೆ.. ಪಾಕಿಸ್ತಾನದಲ್ಲಿದ್ದುಕೊಂಡು ಇಸ್ಲಾಂ ಮತೀಯವಾದವನ್ನು ಬೆಳೆಸಿಕೊಂಡು ನರಹತ್ಯೆಯಲ್ಲಿ ತೊಡಗಿಕೊಂಡಿರುವ ದಾವೂದ್ ಇಬ್ರಾಹಿಂ ವಿಶ್ವದ ಶ್ರೀಮಂತ ಭಯೋತ್ಪಾದಕ!! ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂ 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದು, ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ.. ಭಾರತಕ್ಕೆ ಬೇಕಾಗಿರುವ  ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ದಾವೂದ್ ಇಬ್ರಾಹಿಂನ ಮೇಲೆ ಅಮೆರಿಕಾ ಸೇರಿ ಹಲವು ರಾಷ್ಟ್ರಗಳು ಕೆಂಗಣ್ಣು ಬೀರಿತ್ತು..

ಕೊಲಂಬಿಯಾದಲ್ಲಿ ಮಾದಕ ದ್ರವ್ಯ ಚಟುವಟಿಕೆ ನಡೆಸಿ ಮಾದಕ ದ್ರವ್ಯ ಸಾಮ್ರಾಜ್ಯದ ಅಧಿಪತಿ ಎಂದೇ ಕರೆಯಲ್ಪಡುವ ಪಬ್ಲೊ ಎಸ್ಕೊಬರ್ ನಂತರ ದಾವುದ್ ಇಬ್ರಾಹಿಂ ವಿಶ್ವದ ಎರಡನೇ ಅತಿ ದೊಡ್ಡ ಶ್ರೀಮಂತ ಕ್ರಿಮಿನಲ್ ಎಂಬ ಅಂಶ ಬೆಳಕಿಗೆ ಬಂದಿದೆ. ಸದ್ಯ ಪಾಕಿಸ್ತಾನದಲ್ಲಿ ತಲೆಮರಸಿಕೊಂಡಿರುವ ದಾವೂದ್‍ಗೆ ಐಎಸ್‍ಐ ಕೂಡಾ ನೆರವು ನೀಡಿದೆ. ಪಾಕಿಸ್ತಾನ ಈತನಿಗೆ ಸೆರೆ ನೀಡಿದ್ದರೂ ಈತ ತಮ್ಮ ಬಳಿ ಇಲ್ಲ ಎಂದು ನಾಟಕ ಆಡುತ್ತಲೇ ಬಂದಿದೆ. ಆದರೆ ಇದೀಗ ಈ ನಾಟಕಕ್ಕೆ ತೆರೆ ಬೀಳುವ ಎಲ್ಲಾ ಸಾಧ್ಯತೆಗಳಿವೆ… ಕೊನೆಗೂ ಮೋದಿ ಸರಕಾರಕ್ಕೆ ಹೆದರಿ ಶರಣಾಗಲು ಒಪ್ಪಿದ್ದಾನೆ ದಾವುದ್ ಇಬ್ರಾಹಿಂ.. ಇದರ ಎಲ್ಲಾ ಕ್ರೆಡಿಟ್ ಮೋದಿ ಸರಕಾರಕ್ಕೆ ಸಲ್ಲಬೇಕಾಗಿದೆ..

 


ಪಾಕಿಸ್ತಾನದಲ್ಲಿರುವ ದಾವೂದ್ ಇಬ್ರಾಹಿಂಗೆ ಮೋದಿ ಭಯ!!

ಈತನನ್ನು ಬಂಧಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ನರೇಂದ್ರ ಮೋದಿ ಸರಕಾರ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು 2015ರಲ್ಲಿಯೇ ಬ್ರಿಟನ್ ಸರ್ಕಾರಕ್ಕೆ ದಾವುದ್ ಗೆ ಸೇರಿದ ಆಸ್ತಿಪಾಸ್ತಿಗಳ ವಿವರವನ್ನು ಸಲ್ಲಿಸಿತ್ತು. ಅಲ್ಲದೆ ಇತ್ತೀಚೆಗೆ ಬ್ರಿಟನ್ ಸರ್ಕಾರ ಸಿದ್ಧಪಡಿಸಿದ ಹಣಕಾಸು ನಿಷೇಧಗಳ ಪಟ್ಟಿಯಲ್ಲಿಯೂ ದಾವೂದ್ ಹೆಸರೂ ಇತ್ತು. ಹೀಗಾಗಿ ಬ್ರಿಟನ್ ಸರ್ಕಾರ ಈತನ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಬ್ರಿಟನ್ ಅಧಿಕಾರಿಗಳ ಪ್ರಕಾರ ದಾವುದ್ 21 ಬೇರೆ ಬೆರೆ (ಅಲಿಯಾಸ್) ಹೆಸರುಗಳಿವೆ ಅವುಗಳ ಮೂಲಕ ಬ್ರಿಟನ್ ನಲ್ಲಿ ಆಸ್ತಿ ಹೊಂದಿದ್ದಾನೆ. ಅಲ್ ಖೈದಾ ಜತೆ ನಂಟು ಹೊಂದಿರುವ ದಾವುದ್ ವಾರ್ವಿಕ್ ಶೈರ್ ನಲ್ಲಿ ಐಶಾರಾಮಿ ಹೊಟೇಲ್, ಮಿಡ್ ಲ್ಯಾಡ್ಸ್ ನಲ್ಲಿ ಅನೇಕ ಮನೆಗಳನ್ನು ಹೊಂದಿದ್ದು, ಈಗ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು..

ಈತನನ್ನು ಸೆರೆ ಹಿಡಿಯಲು ಭಾರತದ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತನೇ ಬಂದಿದ್ದಾರೆ… ಆದರೆ ಪಾಕಿಸ್ತಾನದ ಕೃಪೆಯಿಂದ ಈತ ಸಿಕ್ಕಿಬೀಳುತ್ತಿಲ್ಲ. ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು.. ಹಾಗಾಗಿ ಬೆಚ್ಚಗೆ ಪಾಕಿಸ್ತಾನದಲ್ಲಿ ಇಲ್ಲಿಯವರೆಗೆ ಆರಾಮಾಗೆ ಮಲಗಿದ್ದ.. ಆದರೆ ಈಗ ಮೋದಿ ಯುಗ!! ಎಲ್ಲಿ ಅಡಗಿದ್ದರೂ ಮೋದಿ ಎಂಬ ಹೆಸರನ್ನು ಕೇಳುತ್ತಿದ್ದಂತೆಯೇ ತಾನೆ ಶರಣಾಗುತ್ತೇನೆ ಎಂಬ ಮಾಹಿತಿ ಈಗ ಹೊರ ಬಿದ್ದಿದೆ…

ಸರ್ಜಿಕಲ್ ದಾಳಿಯ ಭಯದಲ್ಲಿರುವ ದಾವೂದ್!!

ಇನ್ನು ಯಾವ ಪಾತಾಳದಲ್ಲಿ ಅಡಗಿದರೂ ಮೋದಿ ಸರಕಾರ ನನ್ನನ್ನು ಖಂಡಿತಾ ಬಿಡುವುದಿಲ್ಲ ಎಂಬುವುದು ಯಾವಾಗ ಮನದಟ್ಟಾಯಿತೋ ಹಾಗಾಗಿ ನಾನೇ ಶರಣಾಗುತ್ತೇನೆ ಎಂದು ಹೇಳಿದ್ದಾನೆ.. ಆದರೆ ಶರಾಣಾಗತಿ ಆದರೂ ಕೆಲವೊಂದು ಷರತ್ತುಗಳನ್ನು ಹಾಕುವುದರ ಮುಖಾಂತರ ನಾನು ಶರಣಾಗುತ್ತೇನೆ ಎಂಬುವುದನ್ನು ಹೇಳಿದ್ದಾನೆ…ಒಂದು ವೇಳೆ ಶರಣಾಗತಿ ಆದಲ್ಲಿ ನಾನು ಹೇಳಿರುವ ಜೈಲಿನಲ್ಲಿಯೇ ನನ್ನನ್ನು ಹಾಕಬೇಕು ಎಂಬಿತ್ಯಾದಿ ಷರತ್ತುಗಳ ಮೂಲಕ ಸರೆಂಡರ್ ಆಗುತ್ತೇನೆ ಎಂದು ಹೇಳಿದ್ದಾನೆ…

ಯಾವ ಶತ್ರುವಿಗೂ ಮೋದಿ ಹೆಸರು ಕೇಳಿದರೆ ಸಾಕು ಗಢಗಢ ನಡುಗಲು ಆರಂಭಿಸುತ್ತಾರೆ… ಯಾಕೆಂದರೆ ಮೋದಿ ಹವಾನೇ ಹಾಗೆ!! ಒಂದು ವೇಳೆ ಮೋದಿ ಸರಕಾರಕ್ಕೆ ಮಣಿಯದಿದ್ದಲ್ಲಿ ಎಲ್ಲಿ ಆತ ಸಾವಿಗೀಡಾಗುತ್ತಾನೆಯೋ ಎಂಬ ಭಯದಲ್ಲಿ ದಾವುದ್ ಇಬ್ರಾಹಿಂ ಶರಣಾಗಲು ತಯಾರಾಗಿದ್ದಾನೆ ಅಂತಾನೇ ಹೇಳಬಹುದು!! ಹಾಗಾಗಿ ಇಷ್ಟು ವರ್ಷಗಳ ಕಾಲ ಪಾಪದ ಕೃತ್ಯಗಳನ್ನು ಮಾಡುತ್ತಾ ಅದೆಷ್ಟೋ ಜೀವಗಳ ಜೊತೆ ಆಟವಾಡಿ ಅವರನ್ನು ಕೊಂದ ಪಾಪಕ್ಕೆ ಕೊನೆಗೂ ಮೋದಿ ಸರಕಾರದಿಂದ ಮುಕ್ತಿ ದೊರೆಯಲಿದೆ..

ಪವಿತ್ರ

Editor Postcard Kannada:
Related Post