X

ಉಚಿತ ಆಮಿಷಕ್ಕೆ ಒಳಗಾಗಿ ನಮ್ಮವರ ಸಾವಿಗೆ ಕಾರಣರಾಗಬೇಡಿ!


ಪವರ್ ಇದ್ದಾಗ ಹಣ ಕಿತ್ತವರು, ಅಧಿಕಾರ ‘ಕೈ’ ಲಿದ್ರೆ ಉಚಿತ ಕೊಡ್ತಾರಾ..?

ಕಾಂಗ್ರೆಸ್ ನಾಯಕ ಡಿ. ಕೆ. ಶಿವಕುಮಾರ್ ಅವರು ಪವರ್ ಮಿನಿಸ್ಟರ್ ಆಗಿದ್ದ ಸಮಯದಲ್ಲಿಯೇ ಈ ರಾಜ್ಯದ ಬಡ ಜನರಿಗೆ ಉಚಿತ ವಿದ್ಯುತ್ ನೀಡಲಾಗಿಲ್ಲ. ಇದೀಗ ಕಾಂಗ್ರೆಸ್ ಪಕ್ಷದ ನಾಯಕರ ಒಂದು ಹೇಳಿಕೆ ಸಾಮಾಜಿಕ ವಲಯದಲ್ಲಿ ನಗೆಪಾಟಿಲಿಗೀಡಾಗಿದೆ.

ಮುಂದಿನ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದಲ್ಲಿ, ಕರ್ನಾಟಕದ ಜನರಿಗೆ ೨೦೦ ಯೂನಿಟ್ ಕರೆಂಟ್ ಮತ್ತು ೧೦ ಕೆಜಿಗಳಷ್ಟು ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ನಾಯಕರು ಈ ಹೇಳಿಕೆ ನೀಡಿದ್ದು, ಕರ್ನಾಟಕವನ್ನು ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಗುರಿ.

ಅಂದ ಹಾಗೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಸಹ ಇದ್ದು, ಈ ಹಿಂದೆ ಡಿಕೆಶಿ ಅವರು ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಪವರ್ ಮಿನಿಸ್ಟರ್ ಆಗಿದ್ದರು. ಆ ಸಮಯದಲ್ಲಿಯೇ ಬಡ ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಲಾಗಿಲ್ಲ. ಬಡ ಜನರಿಗೆ ಉಚಿತ ವಿದ್ಯುತ್ ನೀಡಿಲ್ಲ. ಅಧಿಕಾರ ದಲ್ಲಿ ರು ವಾದ ಬಡ ಜನರಿಗೆ ಅವರ ಅವಶ್ಯಕತೆಗಳನ್ನು ಪೂರೈಸಿಕೊಡದ ಕಾಂಗ್ರೆಸ್, ಓಟು ಪಡೆಯಲು ಸಾವು ಸಾಲು ಭರವಸೆಗಳನ್ನು ಉಚಿತವಾಗಿಯೇ ನೀಡುತ್ತಿದೆ ಎಂದು ಜನನಾಮಾನ್ಯರು ಆಡಿಕೊಂಡು ನಗುವಂತಾಗಿದೆ.

ತಿಂಗಳಿಗೆ ೨೦೦ ಯೂನಿಟ್ ಉಚಿತ ವಿದ್ಯುತ್ ನೀಡಿದಲ್ಲಿ, ಜನರಿಗೆ ಮಾಸಿಕ ೧೦೦೦ ರೂ. ಉಳಿತಾಯವಾಗುತ್ತದೆ ಎಂದು ಪುಂಗಿ ಊದಿರುವ ಡಿಕೆಶಿ, ಆ ಮೂಲಕ ಜನರನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ ಪ್ರಯತ್ನ ನಡೆಸಿದೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಮೂಲಕ ಭಾರತೀಯರನ್ನು ಮರಳು ಮಾಡಿ, ಕಾಂಗ್ರೆಸ್ ‌ನ ಭ್ರಷ್ಟಾಚಾರವನ್ನು ಮರೆಮಾಚಲು, ಒಗ್ಗೂಡಿಸುವ ಹೆಸರಲ್ಲಿ ಒಡೆದು ಆಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇತ್ತ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿಕೆಶಿ ಪೊಳ್ಳು ಭರವಸೆ ಗಳ ಮೂಲಕ ಜನರನ್ನು ಓಲೈಸುವುದಕ್ಕೆ ತೊಡಗಿಸಿಕೊಂಡಿದ್ದಾಕೆ.

ಕಾಂಗ್ರೆಸ್‌ನ ಈ ಬಣ್ಣದ ಮಾತುಗಳಿಗೆ ಬಗ್ಗದ ಜನತೆ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಮೂಲಕ ಕಾಂಗ್ರೆಸ್ ಅನ್ನು ಮನೆಗಟ್ಟವಿದೆ.

Post Card Balaga:
Related Post