X

ಕರ್ನಾಟಕದತ್ತ ಬಂತು ಕೇಂದ್ರದ ಲೇಡಿ ಸೈನ್ಯ..! ಫೈರ್ ಬ್ರಾಂಡ್ ಆರ್ಭಟಕ್ಕೆ ತತ್ತರಿಸುತ್ತಾ ಕಾಂಗ್ರೆಸ್..?!

ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳ ತಯಾರಿಯೂ ಭರ್ಜರಿಯಾಗಿ ನಡೆಯುತ್ತಿದ್ದಂತೆ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕದತ್ತ ನುಗ್ಗಿ ಬರುತ್ತಿದ್ದು, ಶಥಾಯ ಗಥಾಯ ಕರ್ನಾಟಕವನ್ನು ತಮ್ಮ ವಶಕ್ಕೆ ತಂದುಕೊಳ್ಳಲು ಪಣತೊಟ್ಟಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಹಣಾಹಣಿಗೆ ಬಿದ್ದಿರುವುದರಿಂದ ಊಪೀ ಎರಡೂ ಪಕ್ಷಗಳ ರಾಷ್ಟ್ರೀಯ ನಾಯಕರು ಪದೇ ಪದೇ ಕರ್ನಾಟಕದತ್ತ ಬಂದು ಇಲ್ಲಿನ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಒಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಸಮಾವೇಶಗಳಲ್ಲಿ ಭಾಗವಹಿಸುತ್ತಿದ್ದರೆ, ಇತ್ತ ಅಮಿತ್ ಷಾ ಇನ್ನು ಚುನಾವಣೆ ಮುಗಿಯುವವರೆಗೂ ಕರ್ನಾಟಕದಲ್ಲೇ ವಾಸ್ತವ ಹೂಡಲು ನಿರ್ಧರಿಸಿದ್ದಾರೆ. ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಆರಂಭಿಸಲಿದ್ದು , ಸಾಲು ಸಾಲು ಸಮಾವೇಶಗಳಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ಅನೇಕ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ಬಂದಿದ್ದು, ಇದೀಗ ಮೋದಿ ಟೀಂ ನ ಫೈರ್ ಬ್ರಾಂಡ್ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದ್ದಾರೆ..!

ಕರ್ನಾಟಕದತ್ತ ಬಂತು ಕೇಂದ್ರದ ಲೇಡಿ ಟೀಂ..!

ಕಾಂಗ್ರೆಸ್ ಗೆ ಲೋಕಸಭೆಯಲ್ಲೇ ಛಳಿ ಬಿಡಿಸಿ , ನಡುಕ ಹುಟ್ಟಿಸಿದ್ದ ಮೋದಿ ಸರಕಾರದ ಲೇಡಿ ಫೈರ್ ಬ್ರಾಂಡ್ , ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸೃತಿ ಇರಾನಿ ಅವರು ಇಂದು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಸೃತಿ ಇರಾನಿ ಮೋದಿ ಸರಕಾರದ ಲೇಡಿ ಫೈರ್ ಬ್ರಾಂಡ್ ಎಂದೇ ಹೆಸರುವಾಸಿಯಾಗಿರುವ ಸಚಿವೆ. ಇಂದು ಕರ್ನಾಟಕದಲ್ಲಿ ಬಿಜೆಪಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವ ಇವರು ಬಿಜೆಪಿ ಪರ ಪ್ರಚಾರವನ್ನೂ ಮಾಡಲಿದ್ದಾರೆ.!

ಶಾಸಕ ವಿಶ್ವನಾಥ್ ಪಾಟೀಲ್ ಪರ ಸೃತಿ ಇರಾನಿ ಅವರು ಇಂದು ಪ್ರಚಾರ ಮಾಡಲಿರುವುದರಿಂದ ಈ ಭಾಗದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿ ಪರ ಅಲೆ ಇರುವುದರಿಂದ ಅದನ್ನೇ ಮುಂದುವರಿಸಿಕೊಂಡು ಹೋಗಲು ಅಮಿತ್ ಷಾ ತಂತ್ರ ರೂಪಿಸಿದ್ದು, ಕೇಂದ್ರದ ನಾಯಕರ ದಂಡೇ ಕರ್ನಾಟಕದತ್ತ ಬಂದು ಇಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ತಯಾರಿ ನಡೆಸುತ್ತಿದ್ದಾರೆ.!

ಅದೇನೇ ಆದರೂ ಕರ್ನಾಟಕದಲ್ಲಿ ಕೇಸರಿ ಪತಾಕೆ ಹಾರಿಸಿಯೇ ಸಿದ್ಧ ಎಂದು ಪಣತೊಟ್ಟಿರುವ ಅಮಿತ್ ಷಾ , ತಮ್ಮ ಸ್ಟಾಟರ್ಜಿಯಿಂದಲೇ ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸಿ , ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಶ್ರಮಿಸುತ್ತಿದ್ದಾರೆ. ಇದೀಗ ಸೃತಿ ಇರಾನಿ ಅವರು ಕೂಡಾ ಕರ್ನಾಟಕದತ್ತ ಬರುತ್ತಿದ್ದು , ಮತ್ತಷ್ಟು ಕುತೂಹಲ ಉಂಟು ಮಾಡಿದೆ.!

–ಅರ್ಜುನ್

 

Editor Postcard Kannada:
Related Post