X

ಪೊಲೀಸ್ ಆಯುಕ್ತರೇ ಕಾಂಗ್ರೆಸ್ ಗೂಂಡಾನ ಅಹಂಕಾರ ಮೆರೆಯಲು ವಿಫಲರಾದ ನಿಮಗಿದೋ ಬಹಿರಂಗ ಪತ್ರ!!

ಸಾಮಾನ್ಯ ಜನತೆ ತಪ್ಪು ಮಾಡಿದರೆ ಅವರಿಗೆ ಕೇಸ್ ಮೇಲೆ ಕೇಸ್. ಆದರೆ ಉಳ್ಳವರು ಮಾಡಿದ್ರೆ ಮಾತ್ರ ರಾಜಾತಿಥ್ಯ. ಈಗ ಆಗಿರೋದೂ ಅದೇ. ಕಾಂಗ್ರೆಸ್‍ನ ಶಾಸಕ ಹ್ಯಾರೀಸ್ ಅವರ ಮಗ ಗೂಂಡಾ ನಲಪಾಡ್, ವಿದ್ವತ್ ಎಂಬಾತನನ್ನು ಮನಬಂದಂತೆ ಥಳಿಸಿ ತನ್ನ ಅಧಿಕಾರದ ದರ್ಪವನ್ನು ಮೆರೆದಿದ್ದಾನೆ. ಆದರೆ ಪೊಲೀಸ್ ಇಲಾಖೆ ಮಾತ್ರ ಈ ಬಗ್ಗೆ ಖ್ಯಾರೇ ಎನ್ನದೆ ಕಾಂಗ್ರೆಸ್ ಶಾಸಕ ಹ್ಯಾರೀಸ್ ಅವರ ಮಗ ನಲಪಾಡ್‍ಗೆ ನೀಡುತ್ತಿರುವ ಭಾರೀ ರಾಜಾತಿಥ್ಯದ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಆಯುಕ್ತರಿಗೆ ಬರೆಯುವ ಬಹಿರಂಗ ಪತ್ರ

* ಶಾಸಕ ಹ್ಯಾರಿಸ್ ನಲಪಾಡ್‍ನ ಪುತ್ರ ಗೂಂಡಾ ಮೊಹಮ್ಮದ್ ನಲಪಾಡ್ ಶನಿವಾರದಂದು ವಿದ್ವತ್ ವಿರುದ್ಧ ನಡೆಸಿದ ಹಲ್ಲೆಯಿಂದಾಗಿ ವಿದ್ವತ್‍ನ ಸ್ಥಿತಿ ಗಂಭೀರವಾಗಿದ್ದರೂ ಸಹ ಪೊಲೀಸ್ ಆಯುಕ್ತರು ಸರಿಯಾದ ಯಾವುದೇ ಕ್ರಮವನ್ನು ಕೈಗೊಳ್ಳದಿರುವುದು ನಿಜವಾಗಿಯೂ ವಿಷಾದನಿಯ!!… ಹಲ್ಲೆ ನಡೆದು ಇಷ್ಟು ದಿನವಾದರೂ ಸಹ ಆತನ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳದೆ ಮೀನಾಮೇಷ ಎನಿಸುತ್ತೀರಲ್ಲೇ ಇದು ನಮಗೆ ಸರಿ ಎನಿಸುತ್ತಿದೆಯೇ… ನಿಮಗೆ ನ್ಯಾಯಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ನಾಯಕರ ಬಾಗಿಲು ಕಾಯುವುದೇ ಹೆಚ್ಚಾಯಿತೇ..?

* ಸಿಸಿಟಿವಿ ದೃಶ್ಯ ಕಣ್ಣೆದುರು ಇದ್ದರು ಸಹ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಯಾರು ಮೊದಲು ಹೊಡೆದಿದ್ದಾರೆ ಎಂಬುವುದು ನೋಡಿ ತದ ನಂತರ ಏನು ಮಾಡಬೇಕು ಎಂದು ಯೋಚಿಸುತ್ತೇವೆ ಎಂದು ಹೇಳುತ್ತಿದ್ದೀರಲ್ಲವೇ ಇದೇ ಘಟನೆ ವಿದ್ವತ್ ಬದಲು ಮೊಹಮ್ಮದ್‍ಗೆ ಆಗುತ್ತಿದ್ದರೆ ಏನು ಮಾಡುತ್ತಿದ್ದಿರಿ? ಆ ಸಮದಲ್ಲೂ ನೀವು ಇದೇ ರೀತಿಯ ಉದಾಸಿನತೆಯನ್ನು ತೋರುತ್ತಿದ್ದಿರಾ?

* ಅಷ್ಟು ಕ್ರೂರವಾಗಿ ಹಲ್ಲೆ ನಡೆಸಿದ್ದರೂ ಸಹ ತನ್ನ ಮನೆಯಲ್ಲಿ ತಾನೇ ಬಚ್ಚಿಕೊಂಡಾಗಲೂ ಶಾಸಕನ ಜೊತೆ ಪೊಲೀಸರೂ ಕೈ ಜೊಡಿಸಿ ತಮಗೂ ಗೊತ್ತಿಲ್ಲವೆಂದು ನಾಟಕವಾಡಿದಿರಲ್ಲವೇ ಇದು ನಿಮಗೆ ನ್ಯಾಯವೆನಿಸುವುದೇ?

* ಆ ಡ್ರಾಮಾ ಮುಗಿದ ಬಳಿಕ ಮೊಹಮ್ಮದ್ ನಲಪಾಡ್ ಸಿಕ್ಕ ನಂತರವೂ ಆತನ್ನನು ಇಡೀ ಕಬ್ಬನ್ ಪಾರ್ಕ್ ಪೊಲೀಸರು ರಾಜಾತಿಥ್ಯ ನೀಡಿ ಆತನ್ನು ಕರೆದುಕೊಂಡು ಬರುತ್ತೀರಾ.. ತದ ನಂತರ ಆನನ್ನು ಸೆಲ್‍ಗೆ ಹಾಕುವ ಬದಲು ಪೊಲೀಸ್ ಇನ್ಸ್‍ಪೆಕ್ಟರ್ ಚೇಂಬರ್‍ನಲ್ಲಿ ಜ್ಯೂಸ್, ಟಿವಿ ವ್ಯವಸ್ಥೆ ಮಾಡಿ ಆತನಿಗೆ ರಾಜಾತಿಥ್ಯ ನೀಡುತ್ತೀರಾ… ದೇಶ ರಕ್ಷಣೆ ಮಾಡುವ ಪೊಲಿಸರೇ ಒಬ್ಬ ಶಾಸಕನ ಮಗ ಎನ್ನುವ ಉದ್ಧೇಶವನ್ನಿಟ್ಟುಕೊಂಡು ಗೂಂಡಾಗಿರಿ ಮಾಡಿದ ಮೊಹಮ್ಮದ್ ನಲಪಾಡ್‍ನನ್ನು ಈ ರೀತಿಯಾಗಿ ಸತ್ಕಾರ ಮಾಡುತ್ತೀರಲ್ಲವೇ ನಿಮ್ಮ ಈ ನ್ಯಾಯವನ್ನು ಜನರು ಒಪ್ಪುತ್ತಾರೆಯೇ?

* ಸ್ವತಃ ಮೊಹಮ್ಮದ್ ನಲಪಾಡ್ ತಾನೆ ತಪ್ಪಿತಸ್ಥ ಎಂದು ಬಾಯಿಬಿಟ್ಟರೂ… ನೀವು ಇನ್ನೂ ಸಿಸಿಟಿವಿ ದೃಶ್ಯವನ್ನು ನೋಡಿ ಯಾರು ತಪ್ಪಿತಸ್ಥರು ಎಂದು ನಾವು ನೋಡ ಬೇಕು ಆನಂತರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರಲ್ಲವೇ?

* ಕೇವಲ ಈತನ ವಿರುದ್ಧ ಈ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣಗಳು ಈ ಮೊದಲು ಕೂಡಾ ಅನೇಕ ಬಾರಿ ನಡೆದಿತ್ತು…ಆತನ ಕಾರಿನಲ್ಲಿ ಅದೆಷ್ಟೋ ಬಾರಿ ಗನ್‍ಗಳು ಪಿಸ್ತೂಲ್‍ಗಳು ಪತ್ತೆಯಾಗಿವೆ ಆದರೂ ಈತನ ಬಗ್ಗೆ ಯಾವುದೇ ಕೇಸ್‍ಗಳು ನಡೆದಿಲ್ಲ.. ಹಾಗಾದರೆ ದೇಶ ಕಾಯುವ ಪೊಲೀಸರು ಶಾಸಕನ ಮಗನೆನ್ನುವ ಉದ್ಧೇಶವನ್ನಿಟ್ಟುಕೊಂಡು ಯಾವ ಪ್ರಕರಣವನ್ನೂ ದಾಖಲು ಮಾಡದೆ ಸುಮ್ಮನೆ ಕುಳಿತಿದ್ದೀರಲ್ಲವೇ ಇದು ನ್ಯಾಯವೇ?

* ಇದು ಮಾತ್ರವಲ್ಲದೆ ಇದೇ ಮಹಮ್ಮದ್ ನಲಪಾಡ್ ಮೂರು ವರ್ಷಗಳ ಹಿಂದೆ ಒರ್ವ ಮಹಿಳೆಯನ್ನು ಅಟ್ಟಾಡಿಕೊಂಡು ಗೂಂಡಾಗಿರಿ ಮೆರೆದಿದ್ದ…ಈಗ ಆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪೆÇ್ಲೀಡ್ ಮಾಡಿದ್ದಾರೆ. ಹ್ಯಾರಿಸ್ ಪುತ್ರನ ಗುಂಡಾವರ್ತನೆ ಕುರಿತು ಪೆÇಲೀಸ ರಿಗೆ ದೂರು ನೀಡಲು ಹೋಗಿದ್ದರು.. ಆಗ ಯಾವ ಪೆÇಲೀಸರು ದೂರು ಸ್ವೀಕರಿಸದೇ ಅಲೆದಾಡಿಸಿದ್ದರು ಎಂದು ನೊಂದ ಪೂರ್ಣಿಮಾ ದಾಸ್ ಆಕ್ರೋಶ ವ್ಯಕ್ತ ಪಡಿಸಿದ್ದರು.. ಇಂತಹ ದೂರುಗಳು ಆತನ ವಿರುದ್ಧ ಬರುತ್ತಿದ್ದರು ಸಹ ಯಾರೂ ಇತನ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳದೆ ಇರುವುದು ವಿಷಾದನೀಯ!!

* ಈ ಮೊದಲು ಉತ್ತರ ಪ್ರದೇಶದಲ್ಲಿ ಇದೇ ರೀತಿಯಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.. ಅಲ್ಲಿಗೆ ಹೋಗುವುದಕ್ಕೂ ಭಯ ಪಡುತ್ತಿದ್ದರು ಆದರೆ.. ಯೊಗಿ ಆದಿತ್ಯನಾಥ ಸರಕಾರ ಬಂದ ಮೇಲೆ ಇಡೀ ಉತ್ತರ ಪ್ರದೇಶವೇ ಬದಲಾಗಿದೆ!!

* ಉತ್ತರ ಪ್ರದೇಶ ಎಂಬ ರಾಜ್ಯದಲ್ಲಿ ಗೂಂಡಾಗಳನ್ನು ಹುಡುಕಿ ಹುಡುಕಿ ಎನ್ ಕೌಂಟರ್ ಮಾಡಲಾಗುತ್ತಿದೆ. ಈಗ ಅಲ್ಲಿ ಇಲ್ಲಿ ಉಳಿದ ಸ್ವಲ್ಪ ಪುಡಿ ರೌಡಿಗಳು ಹೇಗಾದರೂ ಜೀವನ ನಡೆಸಿದರೆ ಸಾಕು ಎಂಬ ಕಾರಣಕ್ಕೆ ಹೊಟೇಲ್‍ಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ.

* ಈ ರೀತಿಯ ಕೆಲಸಗಳು ಕರ್ನಾಟಕದಲ್ಲಿ ನಿಮ್ಮ ಅಧಿಕಾರದಲ್ಲಿ ಯಾರೂ ಊಹಿಸಲೂ ಸಾಧ್ಯವಗುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೆದರಿ ಕೈಕಟ್ಟಿ ಕೂರುವುದು ಎಷ್ಟು ಸರಿ? ಇದು ನೀವು ಧರಿಸಿದ ಖಾಕಿ ಧಿರಿಸಿಗೆ ಸೂಕ್ತವೆನಿಸುತ್ತಿದಿಯೇ..?

* ವಿದ್ವತ್ ಮೇಲೆ ಹಲ್ಲೆಯಾದ ರೆಸ್ಟೋರೆಂಟ್‍ನ ಮಾಲಕರನ್ನು ಪೆÇಲೀಸ್ ಠಾಣೆಗೆ ಕರೆದೊಯ್ದು ರಾತಿಯಡೀ ವಿಚಾರಣೆ ನಡೆಸಿ, ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡಿದ ನೀವು ಅದೇ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ ರೌಡಿ ನಲಪಾಡ್‍ನನ್ನು ರಾಜಾರೋಷವಾಗಿ ಬೆಳೆಯಲು ಬಿಟ್ಟಿದ್ದೀರಲ್ಲಾ… ಇದು ನಿಮಗೆ ಶೋಭೆ ತರುವುದೇ?

* ನಲಪಾಡ್‍ನ ಈ ರೀತಿಯ ಗೂಂಡಾಗಿರಿ ಮುಗಿಲು ಮುಟ್ಟುತ್ತಿದ್ದಂತೆಯೇ ಮಾಧ್ಯಮಗಳು ಅಲರ್ಟ್ ಆಗಿ ಕೆಲಸ ಮಾಡಿ ಆತನ ಬಂಧನಕ್ಕೆ ಭಾರೀ ಒತ್ತಡವನ್ನೇ ಹೇರಿದ್ದವು. ಈ ಕಾರಣದಿಂದಾಗಿ ಆತನನ್ನು ಬಂಧಿಸಿದ್ದೀರಿ. ಆದರೆ ಆತ ಭಾರತದಿಂದ ಸೌಧಿಗೆ ಹಾರಲು ಸಲಕ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದ. ಒಂದು ವೇಳೆ ಆತ ಸೌಧಿಗೆ ಹಾರಿಬಿಟ್ಟಿದ್ದಿದ್ದರೆ ನೀವು ಏನು ಮಾಡುತ್ತಿದ್ದಿರಿ? ಇದು ನಿಮ್ಮ ಬೇಜವ್ಧಾರಿ ಧೋರಣೆ ಅಂತ ಅನ್ನಿಸುವುದಿಲ್ವಾ..?

* ಸಾಮಾನ್ಯ ಜನರು ಮಾಡಿರುವ ಸಣ್ಣ ತಪ್ಪುಗಳನ್ನೂ ಎತ್ತಿ ತೋರಿಸಿ ಅವರಿಗೆ ಕಾನೂನಿನ ವ್ಯಾಪ್ತಿಗಿಂತಲೂ ಹೆಚ್ಚಾಗಿ ಶಿಕ್ಷೆ ನೀಡಿ, ತಮ್ಮ ಬೂಟಿನ ರುಚಿಯನ್ನು ತೋರಿಸುತ್ತೀರಲ್ಲಾ..? ನಲಪಾಡ್ ಮೇಲಿನ ಶಿಕ್ಷೆಯನ್ನು ಕಡಿಯತಗೊಳಿಸಿ ನೀವು ಉಳ್ಳವರ ಪರ ಎಂದು ಸಾಭೀತುಪಡಿಸಿದ್ದೀರಿ..!

* ವಿದ್ವತ್ ಪ್ರಕರಣ ದಾಖಲಿಸಿದರೂ ಪ್ರಕರಣ ಕೈಗೊಳ್ಳಲು ಅಷ್ಟು ಸಮಯ ಬೇಕಾಗಿತ್ತು. ಆದರೆ ಅದೇ ವಿದ್ವತ್ ಮೇಲೆ ನಲಪಾಡ್ ದಾಖಲಿಸಿದ ಕೇಸ್ ಬಗ್ಗೆ ತರಾತುರಿಯಲ್ಲಿ ಪ್ರಕರಣವನ್ನು ದಾಖಲಿಸಿ ಶಾಸಕರ ಅಪ್ಪಣೆಯಂತೆ ನಡೆಯುವ ಹಿಂಬಾಲಕರು ಎಂಬ ನೀತಿಯನ್ನು ದೃಢಗೊಳಿಸಿದ್ದೀರಿ ಅಲ್ವೇ..?

* ಸಾಮಾನ್ಯ ಆರೋಪಿಗಳು ಪೆÇಲೀಸ್ ಠಾಣೆಗೆ ಅವರನ್ನು ಒಳಉಡುಪಿನಲ್ಲಿ ನಿಲ್ಲಿಸುತ್ತೀರಿ. ಅವರಿಗೆ ಮನಬಂದಂತೆ ಬಾರಿಸುತ್ತೀರಿ. ಆದರೆ ನಲಪಾಡ್ ಎಂಬ ಗೂಂಡಾನನ್ನು ಪೆÇಲೀಸ್ ಠಾಣೆಗೆ ಕರೆತಂದು ಆತನಿಗೆ ಜ್ಯೂಸ್ ಕೊಟ್ಟು, ಟಿವಿ ನೋಡಲು ಅವಕಾಶ ಮನಾಡಿಕೊಟ್ಟು ರಾಜಾತಿಥ್ಯವನ್ನೇ ನೀಡಿದ್ದೀರಿ… ಇದು ನಿಮಗೆ ಶೋಭೆ ತರುವುದೇ..?

* ಸಾಮಾನ್ಯ ಆರೋಪಿಗಳಿಗೆ ದಿನ ಪತ್ರಿಕೆಯನ್ನೂ ಓದಲು ಬಿಡದ ನೀವುಗಳು ನಲಪಾಡ್ ಎಂಬ ಗೂಂಡಾನಿಗೆ ನಿಮ್ಮ ಇಲಾಖೆಯ ಪೊಲೀಸ್ ರೇ 1100 ಮೋಬೈಲ್ ನೀಡಿ ಮತ್ತೆ ರಾಜ ಮರ್ಯಾದೆಯನ್ನು ನೀಡಿ ಆತನನ್ನು ವಿಜೃಂಭಿಸಿದ್ದೀರಿ… ಇದು ಯಾವ ನ್ಯಾಯ ಸ್ವಾಮಿ..?

* ಆತ ಡ್ರಗ್ಸ್ ಮಾದಕ ವ್ಯಸನಿ ಎಂಬುವುದು ಜಗತ್ತಿಗೆ ಗೊತ್ತಿರುವ ವಿಚಾರ. ಆದರೆ ಆತನನ್ನು ತಕ್ಷಣ ಯಾವುದೇ ವೈದ್ಯಕೀಯ ತನಿಖೆಗೆ ಒಳಪಡಿಸದೆ ಪೆÇಲೀಸ್ ಠಾಣೆಯಲ್ಲೇ ಬೆಳೆಯಲು ಬಿಟ್ಟು ನಂತರ ಆತನ ಮದ ಇಳಿದ ನಂತರ ಆತನನ್ನು ಆಸ್ಪತ್ರೆಯ ತಪಾಸಣೆಗೆಂದು ಕರೆದುಕೊಂಡು ಹೋಗುವ ನಾಟಕವನ್ನು ಮಾಡಿದ್ದೀರಿ..!! ಇದು ರಾಜ್ಯದ ಜನತೆಗೆ ಅರ್ಥವಾಗೋದಿಲ್ಲ ಎಂದು ಅಂದುಕೊಂಡಿದ್ದೀರಾ..?

ಒಟ್ಟಾರೆಯಾಗಿ ಹೇಳುವುದಾದಾರೆ ನಮ್ಮ ರಾಜ್ಯದಲ್ಲಿ ಅದೆಷ್ಟೋ ಹಿಂದೂಗಳ ಮಾರಣ ಹೋಮವೇ ಆಗುತ್ತದೆ.. ಯಾರೂ ಇದರ ಬಗ್ಗೆ ಕೇಳುವವರೇ ಇಲ್ಲ… ಹಾಗಾದರೆ ಹಣ ಇದ್ದವರಿಗೆ ಮಾತ್ರ ನೀವು ಸಹಕರಿಸುತ್ತೀರಾ ಪೊಲೀಸರೇ?.. ಇದೇ ರೀತಿ ಕಾಂಗ್ರೆಸ್‍ನ ಅಡಿಯಾಳಾಗಿ ಕೆಲಸ ಮಾಡಿದರೆ ಮುಂದೊಂದು ದಿನ ಇಡೀ ರಾಜ್ಯ ಯಾವ ಪರಿಸ್ಥಿತಿಗೆ ಬಂದಿಳಿಯುತ್ತದೆ ಎಂಬುವುದನ್ನು ಊಹಿಸಲೂ ಅಸಾಧ್ಯ!!

-ಪವಿತ್ರ

Editor Postcard Kannada:
Related Post