ದೇಶದಲ್ಲೇ ಎಗ್ಗಿಲ್ಲದೆ ನಡೆಯುತ್ತಿರುವ ಹಿಂದೂ ಹೆಣ್ಣು ಮಕ್ಕಳ ಮತಾಂತರದ ಜಾಲ ಯಾವ ರೀತಿ ಮುಂದುವರಿಯುತ್ತಿದೆ ಎಂದರೆ ಇಡೀ ದೇಶವನ್ನೇ ಇಸ್ಲಾಂ ಧರ್ಮವನ್ನಾಗಿ ಪರಿವರ್ತನೆ ಮಾಡಲು ಜಿಹಾದಿಗಳು ಪ್ರಯತ್ನಿಸುತ್ತಿದ್ದಾರೆ. ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣ ಕರ್ನಾಟಕದಲ್ಲೂ ಕಡಿಮೆ ಏನಿಲ್ಲ. ಆದರೆ ಈ ಲವ್ ಜಿಹಾದ್ ದಂಧೆಯ ಹಿಂದೆ ಕರ್ನಾಟಕದ ಜಿಲ್ಲಾಧಿಕಾರಿ ಒಬ್ಬ ಭಾಗಿಯಾಗಿದ್ದಾನೆ ಎಂಬ ಆಘಾತಕಾರಿ ಮಾಹಿತಿಯನ್ನು ತನಿಖೆಯ ವೇಳೆ ಎನ್ಐಎ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿಸಿ ತಮ್ಮ ಬಲೆಗೆ ಹಾಕಿಕೊಳ್ಳುವ ಜಿಹಾದಿ ಮುಸ್ಲೀಮರು ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ ಎಸಗಿ ಹೆಣ್ಣಿನ ಇಡೀ ಜೀವನವನ್ನೇ ಹಾಳು ಮಾಡುತ್ತಾರೆ. ಈ ವಿಚಾರವಾಗಿ ದೇಶಾದ್ಯಂತ ಹೋರಾಟ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದೀಗ ನಡೆದಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಯಾಕೆಂದರೆ ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ ಪ್ರಕರಣದಲ್ಲಿ ಇದೀಗ ಕರ್ನಾಟಕದ ಜಿಲ್ಲಾಧಿಕಾರಿ ಭಾಗಿಯಾದ ಮಾಹಿತಿಯನ್ನು ತನಿಖೆಯ ವೇಳೆ ಬಹಿರಂಗಪಡಿಸಿದ್ದಾರೆ.!
ಹಿಂದೂ ಯುವತಿಯರೇ ಜಿಹಾದಿಗಳ ಟಾರ್ಗೆಟ್..!
ಹಿಂದೂ ಧರ್ಮದ ವಿರುದ್ಧ ಸದಾ ಕತ್ತಿ ಮಸಿಯುತ್ತಿರುವ ಜಿಹಾದಿ ಮುಸ್ಲೀಮರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ. ಪ್ರೀತಿಸುವ ನಾಟಕವಾಡಿ ಯುವತಿರನ್ನು ಮೋಸ ಮಾಡುವ ಲವ್ ಜಿಹಾದ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಸರಕಾರಿ ಅಧಿಕಾರಿಗಳೇ ಈ ದಂಧೆಯಲ್ಲಿ ಭಾಗಿಯಾಗಿರುವುದು ಸರಕಾರ ಕೂಡ ನೆರವು ನೀಡುತ್ತಿದೆಯೇ ಎಂಬ ಸಂಶಯ ವ್ಯಕ್ತವಾಗಿದ್ದು, ಎನ್ಐಎ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಕೇರಳ ಸರಕಾರ ಕೂಡ ಲವ್ ಜಿಹಾದ್ ಪ್ರಕರಣವನ್ನು ಮಟ್ಟಹಾಕಲು ಯಾವುದೇ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಕೇರಳದಲ್ಲಿ ಭಾರೀ ಸಂಖ್ಯೆಯಲ್ಲಿ ಮತಾಂತರಗಳು ನಡೆಯುತ್ತಿದೆ. ಹಿಂದೂ ಯುವತಿಯರನ್ನು ಮತಾಂತರ ಮಾಡಿದ ಬಳಿಕ ತಾವು ಅತ್ಯಾಚಾರ ಮಾಡುವುದಲ್ಲದೆ, ವಿದೇಶಗಳಿಗೆ ಈ ಯುವತಿಯರನ್ನು ಸಾಗಿಸುತ್ತಿದ್ದಾರೆ ಎಂಬ ಅಂಶವನ್ನೂ ಎನ್ಐಎ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ.!
ಜಿಲ್ಲಾಧಿಕಾರಿ ಇರ್ಷಾದುಲ್ಲಾ ಖಾನ್ ಕುಟುಂಬ ಭಾಗಿ..!
ಬೆಂಗಳೂರಿನ ದೊಮ್ಮಲೂರು ಬಳಿಯ ಡೈಮಂಡ್ ಡಿಸ್ಟ್ರಿಕ್ಟ್ ಪ್ಲಾಟ್ ಮೇಲೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಭಾರೀ ಮಾಹಿತಿ ಕಲೆ ಹಾಕಿದ್ದಾರೆ.ಕಲಬುರಗಿಯ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆಗಿರುವಂತಹ ಇರ್ಷಾದುಲ್ಲಾ ಖಾನ್ ಅವರು ಲವ್ ಜಿಹಾದ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಲವ್ ಜಿಹಾದ್ಗೆ ಒಳಗಾದ ಕೇರಳ ಮೂಲದ ಯುವತಿ ನೀಡಿದ ಮಾಹಿತಿಯ ಮೇರೆಗೆ ಯುವತಿಯ ಮನೆಯವರು ಪ್ರಕರಣ ದಾಖಲಿಸಿದ್ದರು. ಈ ತನಿಖೆಯನ್ನು ನಡೆಸುತ್ತಿದ್ದ ವೇಳೆ ಡಿಸಿ ಕುಟುಂಬ ಭಾಗಿಯಾಗಿರುವ ಸತ್ಯಾಂಶ ಹೊರ ಬಿದ್ದಿದೆ. ಯುವತಿಯನ್ನು ೧೫ ದಿನಗಳ ಕಾಲ ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದ ಇರ್ಷಾದುಲ್ಲಾ ಖಾನ್ ಮತ್ತು ಆತನ ಪತ್ನಿ , ಯುವತಿಯನ್ನು ದುಬೈ ದೇಶಕ್ಕೆ ಸಾಗಿಸುವ ತಯಾರಿ ನಡೆಸುತ್ತಿದ್ದರು. ಭಾರತದಲ್ಲಿ ಮತಾಂತರಗೊಳಿಸಿದ ಹಿಂದೂ ಯುವತಿಯರನ್ನು ತಾವು ಬಳಸಿಕೊಂಡು ನಂತರದಲ್ಲಿ ದುಬೈ ದೇಶದ ಶೇಖ್ಗಳಿಗೆ ಸಾಗಿಸುತ್ತಾರೆ ಎಂದಿರುವ ಅಧಿಕಾರಿಗಳು , ಲವ್ ಜಿಹಾದ್ಗೆ ಒಳಗಾದ ಯುವತಿ ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಲೇ ಇರುತ್ತಾರೆ ಎಂಬ ಸ್ಫೋಟಕ ಮಾಹಿತಿ ಕಲೆ ಹಾಕಿದ್ದಾರೆ.!
ಈಗಾಗಲೇ ಎನ್ಐಎ ಅಧಿಕಾರಿಗಳು ಡಿಸಿ ಇರ್ಷಾದುಲ್ಲಾ ಖಾನ್ ಮನೆಗೆ ದಾಳಿ ನಡೆಸಿದ್ದು, ಈ ವೇಳೆ ೮ ಲ್ಯಾಪ್ ಟಾಪ್ ಮತ್ತು ೧೨ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇರ್ಷಾದುಲ್ಲಾ ಖಾನ್ ಅವನ ಪತ್ನಿ ಹಿಂದೂ ಯುವತಿಯರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಮತ್ತು ಇನ್ಸ್ಟಾಗ್ರಾಮ್ ಖಾತೆಗಳನ್ನು ತೆರೆದು ವಂಚಿಸುತ್ತಿದ್ದರು ಎಂಬ ಮಾಹಿತಿಯನ್ನೂ ಅಧಿಕಾರಿಗಳು ತಿಳಿಸಿದ್ದಾರೆ.!
ಈಗಾಗಲೇ ಡಿಸಿ ಕುಟುಂಬದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಎನ್ಐಎ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಬೆಂಗಳೂರಿನ ಯುವಕ ನಜೀರ್ ಖಾನ್ನನ್ನು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಾಯಿ ಬಿಟ್ಟಿದ್ದಾನೆ. ತಾನು ಪ್ರೀತೀಸಿದ ಯುವತಿಯನ್ನು ಅತ್ಯಾಚಾರ ಕೂಡ ನಡೆಸಿರುವುದಾಗಿ ಒಪ್ಪಿಕೊಂಡ ನಜೀರ್, ಯುವತಿಯನ್ನು ೧೫ ದಿನಗಳ ಕಾಲ ಇರ್ಷಾದುಲ್ಲಾ ಖಾನ್ ಅವರ ಮನೆಯಲ್ಲಿ ಇರಿಸಿದ್ದಾಗಿ ಹೇಳಿಕೊಂಡಿದ್ದಾನೆ. ಇತ್ತ ಡಿಸಿ ಇರ್ಷದುಲ್ಲಾ ಖಾನ್ ಕೂಡ ತಪ್ಪು ಒಪ್ಪಿಕೊಂಡಿದ್ದು, ಪತ್ನಿಯ ಬಳಿ ಇಂತಹ ಕೆಲಸಗಳಿಗೆ ಹೋಗಬೇಡ ಎಂದಿದ್ದೇನೆ ಎಂದು ತಪ್ಪಿನಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ಎನ್ಐಎ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನಷ್ಟು ಮಾಹಿತಿಗಾಗಿ ತನಿಖೆ ಮುಂದುವರಿಸಿದ್ದಾರೆ..!
–ಅರ್ಜುನ್