X

ಭಾರತದ ನೆಲದಲ್ಲಿ ಪಾಕಿಸ್ತಾನದ ಬಾವುಟವನ್ನು ಹಾರಿಸಿರುವ ದೇಶದ್ರೋಹಿಗಳ ವಿಡಿಯೋ ವೈರಲ್!! ಪ್ರತ್ಯೇಕತಾವಾದಿಗಳ ಪಾಕಿಸ್ಥಾನಿ ದಿನದ ವಿಜೃಂಭಣೆ!

ಭಾರತ ಅದೆಷ್ಟು ಸುರಕ್ಷಿತವಾದ ದೇಶ ಎಂದರೆ ದೇಶದ್ರೋಹಿಗಳಿಗೂ ಕೂಡ ಇಲ್ಲಿ ಬುದ್ದಿಜೀವಿಗಳ ಕೃಪಾ ಕಟಾಕ್ಷದಿಂದಲೇ ರಾಜಾ ರೋಷವಾಗಿಯೇ ಮೆರೆಯುವ ಒಂದು ಭಾಗ್ಯ ಇದೆ ಎನ್ನುವುದನ್ನು ಪದೇ ಪದೇ ನಿರೂಪಿಸುತ್ತಲೇ ಬಂದಿದ್ದಾರೆ !! ಹೌದು… ಭಾರತದಲ್ಲಿ ಅಸುರಕ್ಷಿತೆ ಕಾಡುತ್ತಿದೆ ಎಂದು ಬೊಬ್ಬಿಡುವ ಜನರು ಒಂದು ಕ್ಷಣ ಅಲೋಚಿಸಲೇ ಬೇಕಾದ ಸಂಗತಿಯೊಂದಿದೆ!! ಅದೇನಪ್ಪಾ ಅಂದರೆ, ಪಾಕಿಸ್ತಾನವನ್ನು ಪ್ರೀತಿಸುವ ಪ್ರತ್ಯೇಕವಾದಿಗಳು ಭಾರತದ ಒಂದೇ ಒಂದು ತ್ರಿವರ್ಣ ಧ್ವಜ ವನ್ನು ಪಾಕಿಸ್ತಾನದಲ್ಲಿ ಹಾರಿಸಿದರೆ ಅದೆಷ್ಟೂ ಜನ ನಿಮ್ಮನ್ನು ಬೆಂಬಲಿಸುತ್ತಾರೆ ಅನ್ನೋದನ್ನು ನೋಡಬೇಕಾಗಿದೆ!!

ಆದರೆ ನರೇಂದ್ರ ಮೋದಿಯವರು ಯಾವಾಗ ಅಧಿಕಾರದ ಗದ್ದುಗೆಯನ್ನು ಏರಿದರೋ ಅಂದಿನಿಂದ ಹಲ್ಲು ಕಿತ್ತ ಹಾವಿನಂತಾಗಿರುವ ಈ ಪ್ರತ್ಯೇಕವಾದಿಗಳಿಗೆ ನರೇಂದ್ರ ಮೋದಿಯವರ ದಿಟ್ಟ ಹೆಜ್ಜೆ ಗಡಗಡನೇ ನಡುಗಿಸಿದ್ದಂತೂ ಅಕ್ಷರಶಃ ನಿಜ!! ಅಷ್ಟೇ ಅಲ್ಲದೇ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಇಕ್ಕಟ್ಟಿಗೆ ಸಿಲುಕಿರುವ ಪ್ರತ್ಯೇಕವಾದಿಗಳು ಗೌಪ್ಯವಾಗಿ ತಮ್ಮ ದೇಶವಿರೋಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯೇಕವಾದಿಗಳು ಭಾರತದ ನೆಲದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ಇದೀಗ ದೊರಕಿದೆ.

ಹೌದು… ಈಗಾಗಲೇ ಕಾಶ್ಮೀರದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಕಾರಣಕ್ಕಾಗಿ ಪ್ರತ್ಯೇಕತಾವಾದಿ ನಾಯಕಿ ಹಾಗೂ ಮೂಲಭೂತವಾದಿ ಸಂಘಟನೆ ದಖ್ತರನ್ ಎ ಮಿಲ್ಲತ್ ಮುಖ್ಯಸ್ಥೆ ಆಸಿಯಾ ಅಂದ್ರಾಬಿ ಅವರನ್ನು ದೇಶದ್ರೋಹಿ ಕೃತ್ಯದ ಆರೋಪಕ್ಕಾಗಿ ಬಂಧಿಸಲಾಗಿರುವ ವಿಚಾರ ತಿಳಿದೇ ಇದೆ!! ಪಾಕಿಸ್ತಾನ ಧ್ವಜ ಹಾರಿಸುವುದು, ಪಾಕ್ ಸ್ವಾತಂತ್ರ್ಯ ದಿನ ಆಚರಿಸುವುದು, ಹಿಂಸೆಗೆ ಕುಮ್ಮಕ್ಕು ನೀಡುವುದು ಸೇರಿ ಅನೇಕ ದೇಶದ್ರೋಹ ಚಟುವಟಿಕೆ ಆರೋಪಗಳಿರುವ ಈಕೆ ಪೊಲೀಸರ ಅಥಿತಿಯಾಗಿದ್ದಂತೂ ಅಕ್ಷರಶಃ ನಿಜ. ಆದರೆ ಇದೀಗ ಈಕೆ ಹಾಗೂ ಈಕೆಯ ಬೆಂಬಲಗರು ಸೇರಿ ಇದೀಗ ಭಾರತದ ನೆಲದಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ತಮ್ಮಅಟ್ಟಹಾಸವನ್ನು ಮೆರೆದಿದ್ದಾರೆ!!

ಭಾರತ ದೇಶದ ಅನ್ನ, ನೀರು, ಗಾಳಿ ತಿಂದೂ ದೇಶದ್ರೋಹದ ಕಾರ್ಯದಲ್ಲಿ ತೊಡಗುವ ಕ್ರೂರಿಗಳನ್ನು ಬೆಂಬಲಿಸುವ ಅದೆಷ್ಟೋ ಮಂದಿ ಇಂದು ತನ್ನ ದೇಶವನ್ನೇ ಧಿಕ್ಕರಿಸಿ ಭಯೋತ್ಪಾದನಾ ರಾಷ್ಟ್ರ ಎಂದು ವಿಶ್ವ ವಿಖ್ಯಾತಿಯಾದ ರಾಷ್ಟ್ರವನ್ನೇ ಅಪ್ಪಿ ಹಿಡಿಯುತ್ತಾರೆ ಎಂದರೆ ಇದಕ್ಕಿಂತಲೂ ಬೇಸರದ ಸಂಗತಿ ಮತ್ತೊಂದಿಯೇ?? ಹೌದು.. ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳ ಧರ್ಪ ದಿನೇ ದಿನೇ ಮುಂದುವರೆಯುತ್ತಿದ್ದು, ಇದೀಗ ಭಾರತದ ನೆಲದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿಪಾಕಿಸ್ತಾನದ ಬಾವುಟವನ್ನು ಹಾರಿಸಿದ್ದಾರೆ ಎಂದರೆ ಇವರ ಭಂಡ ಧೈರ್ಯಕ್ಕೆ ಅದೇನೆನ್ನ ಬೇಕೋ ನಾ ಕಾಣೆ!!

ಕಾಶ್ಮೀರದಲ್ಲಿ ನಡೆಯುತ್ತಿರುವ ದಿನ ನಿತ್ಯದ ದಳ್ಳುರಿಗೆ ಪಾಕಿಸ್ತಾನದ ಎಂಜಲು ಕಾಸು ಬಳಕೆಯಾಗುತ್ತಿದೆ ಎಂಬ ಹಲವು ವರ್ಷಗಳ ಅನುಮಾನಕ್ಕೆ ಈಗಾಗಲೇ ಅಧಿಕೃತ ಮುದ್ರೆ ಸಿಕ್ಕಿದೆ. ಹಾಗಾಗಿ ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳು ಎಂಬ ಸೋಗು ಹಾಕಿಕೊಂಡು ಸ್ವಾತಂತ್ರ್ಯ ಹೋರಾಟಗಾರರ ಪೆÇೀಸು ಕೊಡುತ್ತಿರುವ ಹುರಿಯತ್ ಕಾಂಗ್ರೆಸ್ ಮುಖಂಡರು ತಿನ್ನುತ್ತಿರುವುದು ಪಾಕಿಸ್ತಾನದ ಎಂಜಲು ಎಂಬುವುದನ್ನು ಸಾಬೀತಾಗಿತ್ತು!! ಅಷ್ಟೇ ಅಲ್ಲದೇ ಪಾಕ್ ನಿಂದ ಪಡೆದ ಚಿಲ್ಲರೆ ಕಾಸು ಪಡೆದು ಕಾಶ್ಮೀರಿ ಯುವಕರನ್ನು ದೇಶ ವಿರೋಧಿ ಕೃತ್ಯಕ್ಕೆ ಎತ್ತಿ ಕಟ್ಟುತ್ತಿದ್ದಾರೆ ಎನ್ನುವ ಆರೋಪವೂ ಈಗಾಗಲೇ ಕೇಳಿ ಬಂದಿದೆ.

ಆದರೆ ಪಾಕಿಸ್ತಾನದ ಕೃಪಾಕಟಾಕ್ಷವನ್ನು ಹೊಂದಿರುವ ಜಮ್ಮು ಕಾಶ್ಮೀರ ಪ್ರತ್ಯೇಕವಾದಿಗಳು ತಮ್ಮ ದರ್ಪವನ್ನು ಮುಂದುವರಿಸಿದ್ದು, ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ನಲುಗಿ ಹೋಗಿರುವಂತಹ ಪ್ರತ್ಯೇಕವಾದಿಗಳು ಗೌಪ್ಯವಾಗಿ ತಮ್ಮ ದೇಶ ವಿರೋಧಿ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯೇಕವಾದಿ ಅಸಿಯಾ ಅಂದ್ರಾಬಿ ಹಾಗೂ ಆಕೆಯ ಬೆಂಬಲಿಗರು ಭಾರತದ ನೆಲದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ವೈರಲ್ ಆಗಿದೆ!!

ಸದಾ ದೇಶವಿರೋಧಿ ಕಾರ್ಯಚಟುವಟಿಕೆಗಳ ಮೂಲಕ ಹೊಡೆತ ತಿನ್ನುತ್ತ, ಕಾಶ್ಮೀರದ ನೆಮ್ಮದಿಗೆ ಭಂಗ ತರುತ್ತಿರುವ ಪ್ರತ್ಯೇಕವಾದಿಗಳು ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ. ಆಸಿಯಾ ಅಂದ್ರಾಬಿಯ ಭಯೋತ್ಪಾದಕ ಸಂಘಟನೆ ದುಕ್ರತೇನ್ ಈ ಮಿಲತ್ ನೇತೃತ್ವದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಭಾರತದ ನೆಲದ ದೇಶದ್ರೋಹಿ ಆಸಿಯಾ ಇಂದ್ರಾಬಿ ಸೇರಿ ಹಲವಾರು ಮಂದಿ ಭಾರತ ವಿರೋಧಿ ಘೋಷಣೆ ಕೂಗಿದಲ್ಲದೇ, ಪಾಪಿ ಪಾಕಿಸ್ತಾನಕ್ಕೆ ಜೈ ಕಾರ ಹಾಕಿರುವುದು ಬಹಿರಂಗವಾಗಿದೆ.

ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ಯುವ ಪೀಳಿಗೆಯನ್ನು ಪ್ರತ್ಯೇಕತಾ ವಾದದತ್ತ ಪ್ರಚೋದಿಸುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಪೆÇಲೀಸರು ಈಗಾಗಲೇ ಬಂಧಿಸಿದ್ದರು!! ಅಂದ್ರಾಬಿ ಇಸ್ಲಾಮಿಕ್ ಪ್ರತ್ಯೇಕತಾವಾದಿ ಸಂಸ್ಥೆ ದುಕ್ಮಾನ್ ಇ ಮಿಲ್ಲಾಟ್ ನಾಯಕಿಯಾಗಿದ್ದು, ಹುರಿಯತ್ ಕಾನ್ಫರೆನ್ಸ್‍ನ ಸದಸ್ಯೆಯೂ ಹೌದು!! ಅಂದ್ರಾಬಿ ಕಾಶ್ಮೀರ ಕಣಿವೆಯಲ್ಲಿ ಯುವ ಪೀಳಿಗೆಯನ್ನು ಪ್ರತ್ಯೇಕತಾವಾದಿ ಹೋರಾಟದತ್ತ ಪ್ರಚೋದಿಸುವ ನಿಟ್ಟಿನಲ್ಲಿ ಭಾಷಣ ಮಾಡುತ್ತಿದ್ದಳಲ್ಲದೇ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟದ ಹಿಂದೆಯೂ ಅಂದ್ರಾಬಿ ಇದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಕೆ ಮೇಲೆ ನಿಗಾ ಇರಿಸಿದ್ದರಲ್ಲದೇ ಕೇಂದ್ರ ಸರ್ಕಾರ ಕೂಡ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಯೋಜಿಸಿತ್ತು. ಅಂದ್ರಾಬಿ ಪತಿ ಆಷಿಖ್ ಹುಸ್ಸೇನ್ ಫಖ್ತು ಕೂಡಾ ಪ್ರತ್ಯೇಕತಾವಾದಿಯಾಗಿದ್ದು, ಆತ ಹಿಜ್ಬುಲ್ ಮುಜಾಹಿದ್ದೀನ್ ನಾಯಕನಾಗಿದ್ದನಲ್ಲದೇ ಸದ್ಯ ಹುಸ್ಸೇನ್ ಕೂಡ ಜೈಲಿನಲ್ಲಿದ್ದಾರೆ. ಆದರೆ ಇದೀಗ ಪ್ರತ್ಯೇಕವಾದಿ ಅಸಿಯಾ ಅಂದ್ರಾಬಿ ಸೇರಿ ಆಕೆಯ ಬೆಂಬಲಿಗರು ಭಾರತದ ನೆಲದಲ್ಲಿ ಪಾಕಿಸ್ತಾನದ ದಿನವನ್ನು ಆಚರಿಸಿರುವ ವಿಡಿಯೋ ವೈರಲ್ ಆಗಿದೆ.

ಅಷ್ಟೇ ಅಲ್ಲದೇ ಈ ಹಿಂದೆ ಭಾರತದ ಸರ್ಕಾರದಿಂದ ರಕ್ಷಣೆ ಪಡೆಯುತ್ತಿರುವ ಅಂದ್ರಾಬಿಗೆ ಗೃಹ ಬಂಧನ ವಿಧಿಸಿದ್ದರಿಂದ ಅವಳ ಬೆಂಬಲಿಗರು ಸೇರಿ ಇತರರು ಪಾಕಿಸ್ತಾನದ ದಿನವನ್ನು ಆಚರಿಸಿದಲ್ಲದೇ, ಪಾಕ್ ಪರ ಘೋಷಣೆಗಳನ್ನೂ ಕೂಗಿದ್ದಾರೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ಧ್ವಜಗಳನ್ನು ಭಾರತದ ನೆಲದಲ್ಲಿ ಹಾರಿಸಿರುವ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಂತೂ ಅಕ್ಷರಶಃ ನಿಜ!!

ಒಟ್ಟಾರೆಯಾಗಿ, ನರೇಂದ್ರ ಮೋದಿ ಅಧಿಕಾರವನ್ನೇರಿದ ನಂತರ ಪರೋಕ್ಷವಾಗಿ ದೇಶದ್ರೋಹದ ಚಟುವಟಿಕೆಗಳನ್ನು ನಡೆಸುವ ಇಂತಹ ದೇಶ ದ್ರೋಹಿಗಳ
ಕ್ರೌರ್ಯಗಳು ಭಾರತದಲ್ಲಿ ಅದ್ಯಾವಾಗ ಕೊನೆಗೊಳ್ಳುತ್ತೋ ಅನ್ನೋದನ್ನು ಕಾದು ನೋಡಬೇಕಾಗಿದೆ!!

– ಅಲೋಖಾ

Editor Postcard Kannada:
Related Post