ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ತಾವು ಬೆಂಬಲಿಸುವ ಅಭ್ಯರ್ಥಿಗಳ ಪ್ರಚಾರಕ್ಕೆ ಈಗಾಗಲೇ ಕಣಕ್ಕಿಳಿದಿರುವ ಚಿತ್ರನಟ ಕಿಚ್ಚ ಸುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಬಾದಾಮಿಯಲ್ಲಿ ಭರ್ಜರಿ ಪ್ರಚಾರ ಮಾಡಲು ಸಜ್ಜಾಗಿದ್ದರು. ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿಯಿಂದ ಶ್ರೀರಾಮುಲು ತೊಡೆತಟ್ಟಿದರೆ , ಸಿದ್ದರಾಮಯ್ಯನವರು ತಮ್ಮ ಪರವಾಗಿ ಪ್ರಚಾರಕ್ಕೆ ನಟ ಸುದೀಪ್ ಅವರನ್ನು ಬಳಸಿಕೊಂಡಿದ್ದಾರೆ..! ಸಿದ್ದರಾಮಯ್ಯನವರು ಆತ್ಮೀಯವಾಗಿ ವಿನಂತಿಸಿರುವುದರಿಂದ ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದ ಕಿಚ್ಚನಿಗೆ ಇದೀಗ ಭಾರೀ ಮುಖಭಂಗ ಉಂಟಾಗಿದೆ..!
ಗ್ರಾಮಸ್ಥರಿಂದಲೇ ಸುದೀಪ್ಗೆ ಘೇರಾವ್..!
ಬಾದಾಮಿಯಲ್ಲಿ ಸಿದ್ದರಾಮಯ್ಯನವರ ಪರವಾಗಿ ಇಂದು ಸುದೀಪ್ ಪ್ರಚಾರ ಕಾರ್ಯ ಆರಂಭಿಸಿದ್ದರು. ಇತ್ತ ಶ್ರೀರಾಮುಲು ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರಕ್ಕೆ ಇಳಿದಿದ್ದಾರೆ. ಬಾದಾಮಿಯಲ್ಲಿ ಈಗಾಗಲೇ ಸಿದ್ದರಾಮಯ್ಯ ಮತ್ತು ಶ್ರೀರಾಮುಲುಅವರ ಪೈಪೋಟಿಯೇ ಹೆಚ್ಚಾಗುತ್ತಿದ್ದು, ಇದೀಗ ನಟ ಯಶ್ ಮತ್ತು ಸುದೀಪ್ ಮಧ್ಯೆ ಹೊಸ ಸ್ಪರ್ಧೆ ಏರ್ಪಡಿಸಿದಂತಾಗಿದೆ. ಯಶ್ ಮತ್ತು ಸುದೀಪ್ ಮಧ್ಯೆಯೇ ನೇರ ಹಣಾಹಣಿ ಉಂಟಾಗಿದೆ.
ಸುದೀಪ್ ಇದೀಗ ಸಿದ್ದರಾಮಯ್ಯನವರ ಪರವಾಗಿ ಪ್ರಚಾರಕ್ಕೆ ಬಾದಾಮಿಗೆ ತೆರಳುತ್ತಿದ್ದಂತೆ ಈ ಭಾಗದ ಜನರು ಸುದೀಪ್ ಗೆ ಘೇರಾವ್ ಹಾಕಿದ್ದಾರೆ. ಸುದೀಪ್ ಯಾವುದೇ ಕಾರಣಕ್ಕೂ ಈ ನಮ್ಮ ಪ್ರದೇಶಕ್ಕೆ ಕಾಲಿಡಬಾರದು ಎಂದು ದಿಕ್ಕಾರ ಕೂಗಿದ್ದಾರೆ.
ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಯುವಸೇನೆ ಸಂಘಟನೆಯ ಕಾರ್ಯಕರ್ತರು ನಟ ಸುದೀಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಚಾರಕ್ಕೆ ಆಗಮಿಸಿದ ಸುದೀಪ್ ಭಾರೀ ಮುಖಭಂಗವಾಗಿದೆ.!
ಸಿದ್ದರಾಮಯ್ಯನವರ ಪ್ರಚಾರಕ್ಕೆ ವಿಘ್ನ..!
ಸಿದ್ದರಾಮಯ್ಯನವರು ಸೋಲಿನ ಭೀತಿಯಿಂದ ಚಾಮುಂಡೇಶ್ವರಿ ಮತ್ತು ಬಾದಾಮಿಯಿಂದ ಎರಡೂ ಕಡೆಗಳಲ್ಲಿ ಸ್ಪರ್ಧಿಸುತ್ತಿರುವುದರಿಂದ ಸ್ಟಾರ್ ಪ್ರಚಾರರನ್ನು ಬಳಸಿಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸಿಎಂ ಪರ ಪ್ರಚಾರಕ್ಕೆ ತೆರಳಿದ ಸುದೀಪ್ ಗೆ ಸಾಮಾಜಿಕ ಜಾಲತಾಣಗಳಲ್ಲೂ ‘ಗೋ ಬ್ಯಾಕ್ ಸುದೀಪ್’ ಎಂಬ ಮೆಸೇಜ್ ಗಳ ಹರಿದಾಡುತ್ತಿದ್ದು, ಪ್ರಚಾರಕ್ಕೆ ಆಗಮಿಸಿದ ಮೊದಲ ದಿನವೇ ಸುದೀಪ್ ಗೆ ಭಾರೀ ಹೊಡೆತ ಬಿದ್ದಿದೆ. ಇದರಿಂದಾಗಿ ಮೊದಲೇ ಸೋಲಿನ ಭೀತಿ ಎದುರಿಸುತ್ತಿರುವ ಸಿದ್ದರಾಮಯ್ಯನವರಿಗೆ ಇದೀಗ ಮತ್ತಷ್ಟು ಕಂಟಕ ಎದುರಾಗಿದೆ..!
ರಾಜಕೀಯ ಪಕ್ಷಗಳ ಜೊತೆಗೆ ಚಿತ್ರರಂಗದ ಸ್ಟಾರ್ಗಳಿಗೂ ರಾಜಕೀಯ ಹುಚ್ಚು ಹೆಚ್ಚಾಗಿದ್ದು, ತಾವೂ ರಾಜಕೀಯಕ್ಕೆ ಧುಮುಕುತ್ತಿದ್ದಾರೆ.ಆದರೆ ಮತದಾರರ ಮುಂದೆ ಯಾವುದೇ ಸ್ಟಾರ್ ಗಿರಿ ನಡೆಯುವುದಿಲ್ಲ ಎಂಬುದು ಸದ್ಯ ಅರಿವಾಗಿರಬಹುದು..!
–ಅರ್ಜುನ್