X

ಎದುರಾಳಿಯಾದ ಯೋಗೇಶ್ವರ ರವರನ್ನು ರಾಜಕೀಯವಾಗಿ ಸಂಹರಿಸಲು ಡಿಕೆ ಶಿವಕುಮಾರ್ ಮಾಡುತ್ತಿರುವ ತಂತ್ರವೇನು ಗೊತ್ತಾ?!

ಚುನಾವಣೆ ಸಮೀಪಿಸುತ್ತಿದೆ! ಒಂದಲ್ಲ ಒಂದು ಹಗರಣದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಹೆಸರು ಬಟಾಬಯಲಾಗುತ್ತಿದೆ! ಒಟ್ಟರೆಯಾಗಿ, ಬೌದ್ಧಿಕ ಹೋರಾಟದಲ್ಲಿ ಕಳೆದುಕೊಳ್ಳುತ್ತಿರುವುದು ಕಾಂಗ್ರೆಸ್ ಆದರೂ, ಐಟಿ ದಾಳಿಯಿಂದ ಬೇಸತ್ತಿರುವ ಇಂಧನ ಸಚಿವ ಡಿಕೆಶಿ ಶತ್ರು ಸಂಹಾರಕ್ಕೆ ಮುಂದಾಗಿದ್ದಾರೆ!

ಈ ಹಿಂದೆಯೂ ಐಟಿ ದಾಳಿಯಾದಾಗ ಸಚಿವರಾಗಿದ್ದಾಗ ಕೂಡಿಟ್ಟಿದ್ದ ಹಣವೆಲ್ಲ ತೆರಿಗೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದರು! ಅಾಗಲೂ ಸಹ, ದೇವಸ್ಥಾನಗಳಿಗೆ ಅಲೆದಿದ್ದ ಡಿಕೆಶಿ ಹೋಮಗಳ ಹೋಮ ಮಾಡಿಸಿದ್ದು, ಬೆಳ್ಳಿ ಆನೆಗಳ ದಾನ ಕೊಟ್ಟಿದ್ದು ಗೊತ್ತೇ ಇದೆ!

ಈಗ ಮತ್ತದೇ ಶತ್ರು ಸಂಹಾರಕ್ಕೆ ನಾಂದಿ!!

ಡಿಕೆಶಿಯ ಬದ್ಧ ವೈರಿಯಾಗಿರುವ ಯೋಗೇಶ್ವರ್ ರವರನ್ನು ಹಣಿಯಲು ಹೋಮ ಹವನಕ್ಕೆ ಮುಂದಾಗಿರುವ ಡಿಕೆಶಿ, ಈ ಯಾಗದಿಂದ ಗೆಲುವು ಸಾಧಿಸಬಲ್ಲರೇ ಎಂಬುದು ಯಕ್ಷ ಪ್ರಶ್ನೆಯಾಗಿದೆ! ಅರ್ಚಕ ನರಸಿಂಹ ಅಡಿಗರ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ಶತಚಂಡಿಕಾ ಯಾಗ ಮಾಡಿಸುತ್ತಿರುವ ಡಿಕೆಶಿ ಮುಖ್ಯಮಂತ್ರಿಯಾಗುವ ಕನಸನ್ನೂ ಕಾಣುತ್ತಿದ್ದಾರೆ!

ಜನವರಿ ಎಂಟಕ್ಕೆ ಪೂರ್ಣಾಹುತಿ ನಡೆಯಲಿದ್ದು, ಇಷ್ಟಾರ್ಥ ಸಿದ್ಧಿ, ಶತ್ರುನಾಶ, ದೋಷ ನಿವಾರಣೆಗಾಗಿ ಯಾಗ ಮಾಡುತ್ತಿರುವ ಡಿಕೆಶಿ, ಮೂರು ದಿನವೂ ಯಾಗದಲ್ಲಿ ಪಾಲ್ಗೊಳ್ಳಲಿದ್ದಾರೆ

ಮುಂಚೆ ಇಂದಲೂ ಸಹ, ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ ಯಾಗದ ಮೇಲೆ ಯಾಗಗನ್ನು ಮಾಡುತ್ತಿರುವ ಡಿಕೆಶಿ ಇಂಧನ ಸಚಿವರಾಗುವುದಕ್ಕಿಂತಲೂ ಮುಂಚೆಯೇ, ದೈವಶಕ್ತಿಯಿಂದಲೇ ರಾಜಕೀಯಕ್ಕಿಳಿದಿದ್ದರಷ್ಟೇ! ಈ ಸಲವೂ ಕೂಡ, ತಮ್ಮ ಆರಾಧ್ಯ ದೈವ ಅಜ್ಜಯ್ಯನ ಮಾತಿನಂತೆ ಶಕ್ತಿ ದೇವತೆ ಮೊರೆ ಹೋಗಿರುವ ಡಿಕೆಶಿ, ಶತಚಂಡಿಕಾ ಹೋಮದ ಜೊತೆ, ಶತ್ರು ಸಂಹಾರದ ಸಂಕಲ್ಪವನ್ನೂ ತೊಟ್ಟಿದ್ದಾರೆ!

ಡಿಕೆ ಸಹೋದರರ ಹಿಂಸೆ ತಾಳಲಾರೆ ಎಂದಿದ್ದ ಸಿ ಪಿ ಯೋಗೇಶ್ವರ್!

ಡಿಕೆಶಿ ಹಾಗೂ, ಲೋಕಸಭಾ ಸದಸ್ಯ ಡಿಕೆ ಸುರೇಶ್ ರವರು ಕೊಡುವ ಮಾನಸಿಕ ಹಿಂಸೆಯನ್ನು ಅನುಭವಿಸಲಿಕ್ಕೆ ಸಾಧ್ಯವಾಗುತ್ತಿಲ್ಲ. ಹಗರಣಗಳ ಮೇಲೆ ಹಗರಣಗಳ ಮಾಡುತ್ತಿರುವ ಇವರಿಬ್ಬರೂ ಕೊಡುವ ಹಿಂಸೆ ಮಾತ್ರ ಸಹಿಸಲಾಗುತ್ತಿಲ್ಲ.” ಎಂದು ಸಿ ಪಿ ಯೋಗೇಶ್ವರ್ ಗಂಭೀರ ಆರೋಪ ಮಾಡಿದ್ದಲ್ಲದೇ.. ‘ತನ್ನ ಕ್ಷೇತ್ರದಲ್ಲಿ ಅಕ್ರಮವಾಗಿ ಅನುದಾನ ನೀಡಲಾಗುವಂತೆ ಒತ್ತಡ ಹೇರುತ್ತಿದ್ದಾರೆ’ ಎಂದು ಆರೋಪಿಸಿದ್ದರಷ್ಟೇ!

ಅಷ್ಟಾದ ಮೇಲೆ, ಹಾವು ಮುಂಗುಸಿಯಾಗಿದ್ದ ಡಿಕೆಶಿ ಹಾಗೂ ಯೋಗೇಶ್ವರ್ ಮಧ್ಯೆ ಈಗ ಗದ್ದುಗೆಯ ಜಟಾಪಟಿ ಬಿದ್ದಿದೆ! ಬೇರೇನೂ ದಾರಿ ಕಾಣದ ಡಿಕೆಶಿ ಮತ್ತೆ ಶಕ್ತಿದೇವತೆಯ ಮೊರೆ ಹೋಗಿದ್ದಾರೆ! ಇಷ್ಟು ಹಗರಣಗಳು ಬೆಳಕಿಗೆ ಬಿ‌ದ್ದರೂ ಸಹ ಇನ್ಯಾವ ಹೋಮ ಹವನಗಳು ಭ್ರಷ್ಟರನ್ನು ರಕ್ಷಿಸುತ್ತವೆಯೋ ಆ ಕೊಲ್ಲೂರು ಮೂಕಾಂಬಿಕೆಗೇ ಗೊತ್ತು ಬಿಡಿ!

– ಪೃಥು ಅಗ್ನಿಹೋತ್ರಿ

Editor Postcard Kannada:
Related Post