X

ಡಿಕೆಶಿ-ಕುಮಾರಸ್ವಾಮಿ ಅಡ್ಡಾಕ್ಕೆ ಕಾಲಿಟ್ಟ ಸಿಂಗಂ ಅಣ್ಣಾಮಲೈ..! ಬಿಎಸ್‌ವೈ ತಂತ್ರಕ್ಕೆ ಛಿದ್ರವಾಗುತ್ತಾ ರಾಮನಗರ ಕೋಟೆ..?!

ಯಡಿಯೂರಪ್ಪ ನವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಿದ್ದಂತೆ ಇಡೀ ರಾಜ್ಯವೇ ಸಂತಸ ಪಡುವಂತಹ ಒಂದು ನಿರ್ಧಾರಕ್ಕೆ ಬಂದೇ ಬಿಟ್ಟರು. ಚುನಾವಣೆಗೂ ಮೊದಲು ನೀಡಿದ್ದ ಭರವಸೆಯನ್ನು ಕೇವಲ ಅಧಿಕಾರ ವಹಿಸಿಕೊಂಡ ಒಂದು ತಾಸಿನೊಳಗೆ ಈಡೇರಿಸಿಬಿಟ್ಟರು. ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಹೊಸ ಪರ್ವಕ್ಕೆ ಕಾಲಿಟ್ಟ ಯಡಿಯೂರಪ್ಪ ನವರು ಕಾಂಗ್ರೆಸ್ ಆಡಳಿತದಲ್ಲಿ ಗುಲಾಮರಂತೆ ವರ್ತಿಸುತ್ತಿದ್ದ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡರು. ಇದೀಗ ಕಾಂಗ್ರೆಸ್ ನ ಭ್ರಷ್ಟರಿಗೆ ನಡುಕ ಉಂಟಾಗುವಂತೆ ಮಾಡಿದ ಯಡಿಯೂರಪ್ಪ ನವರು ದೊಡ್ಡ ದೊಡ್ಡ ತಿಮಿಂಗಿಲಗಳ ಬೇಟೆಗೆ ಸಜ್ಜಾಗಿದ್ದಾರೆ..!

ಡಿಕೆಶಿ ಕೋಟೆಗೆ ಎಂಟ್ರಿ ಕೊಟ್ಟ ಕರುನಾಡ ಸಿಂಗಂ..!

ಇಡೀ ರಾಜ್ಯದಲ್ಲೇ ಪೊಲೀಸರಿಗೆ ಮಾದರಿಯಾಗುವಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಪಿ ಅಣ್ಣಾಮಲೈ ಅವರು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದವರು. ಯಾವುದೇ ರಾಜಕಾರಣಿಗಳ ಅಧಿಕಾರದ ಬಲಕ್ಕೆ ಜಗ್ಗದ ಅಣ್ಣಾಮಲೈ ತಮ್ಮದೇ ಶೈಲಿಯಲ್ಲಿ ಒಂದೊಂದು ನಿರ್ಧಾರ ಕೈಗೊಂಡು ಅಪರಾಧಿಗಳನ್ನು ಬೇಟೆ ಆಡಿದವರು. ಇದೀಗ ಇದೇ ಅಣ್ಣಾಮಲೈ ಕಾಂಗ್ರೆಸ್ ದಿಗ್ಗಜ , ಕಾಂಗ್ರೆಸ್ ನ ಪವರ್‌ಫುಲ್ ಮಿನಿಸ್ಟರ್ ಆಗಿದ್ದ ಡಿಕೆ ಶಿವಕುಮಾರ್ ಅವರ ಕ್ಷೇತ್ರವಾದ ರಾಮನಗರಕ್ಕೆ ಎಂಟ್ರಿ ಕೊಡಲಿದ್ದಾರೆ.

ಇತ್ತ ಕಾಂಗ್ರೆಸ್ ತನ್ನ ಬಳಿ ಇರುವ ಶಾಸಕರ ರಕ್ಷಣೆಯ ಹೊಣೆಯನ್ನು ಡಿಕೆಶಿ ಕೈಗೆ ನೀಡಿದ್ದು, ಶಾಸಕರನ್ನು ಕಾಪಾಡಲು ಶಿವಕುಮಾರ್ ಪರದಾಡುತ್ತಿದ್ದಾರೆ. ಸರಕಾರದ ವತಿಯಿಂದ ನೀಡಿದ್ದ ಭದ್ರತೆಯನ್ನೂ ವಾಪಾಸ್ ಪಡೆದಿರುವ ಬಿಜೆಪಿ ಸರಕಾರ ಡಿಕೆಶಿ ಗೆ ದೊಡ್ಡ ಹೊಡೆತವನ್ನೇ ನೀಡಿದೆ. ಅದೇ ರೀತಿ ಇದೀಗ ಕರುನಾಡ ಸಿಂಗಂ ಅಣ್ಣಾಮಲೈ ಅವರನ್ನು ಇದೇ ಡಿಕೆಶಿ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ ಯಡಿಯೂರಪ್ಪ ಸರಕಾರ ಕಾಂಗ್ರೆಸ್ ಗೆ ಮತ್ತೊಂದು ಶಾಕ್ ನೀಡಿದ್ದಾರೆ..!

ರಾಮನಗರ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಕೂಡಾ ಕ್ಷೇತ್ರವಾಗಿದ್ದು, ಒಂದೇ ಬೇಟೆಗೆ ಎರಡು ಬಲಿ ಪಡೆಯಲು ಯಡಿಯೂರಪ್ಪ ಸರಕಾರ ನಿರ್ಧರಿಸಿದೆ. ಆದ್ದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ವಿರೋಧಿಸುತ್ತಿದ್ದರೆ, ಇತ್ತ ಬಿಜೆಪಿ ಭಾರೀ ತಂತ್ರದೊಂದಿಗೆ ಅಖಾಡಕ್ಕೆ ಇಳಿದಿದೆ..!

ಈಗಲ್‌ಟನ್ ರೆಸಾರ್ಟ್ ಮೇಲೆ ಅಣ್ಣಾಮಲೈ ಹದ್ದಿನ ಕಣ್ಣು..!

ಡಿಕೆಶಿ ಹೆಗಲಮೇಲಿರುವ ಭಾರೀ ಜವಾಬ್ದಾರಿಯೊಂದು ರಾಮನಗರದ ಈಗಲ್‌ಟನ್ ರೆಸಾರ್ಟ್ ನಲ್ಲಿ ಇರುವ ಕಾಂಗ್ರೆಸ್ ಶಾಸಕರನ್ನು ಡಿಕೆಶಿ ಕಾಯುತ್ತಿದ್ದರೆ , ಇತ್ತ ಅಣ್ಣಾಮಲೈ ಅವರು ಇದೇ ರಾಮನಗರಕ್ಕೆ ವರ್ಗಾವಣೆ ಆಗಿರುವುದರಿಂದ ಈ ರೆಸಾರ್ಟ್ ಮೇಲೂ ಅಣ್ಣಾಮಲೈ ಟೀಂ ಹದ್ದಿನ ಕಣ್ಣಿಡಲಿದೆ. ಕಾಂಗ್ರೆಸ್ ಆಡಳಿತದಲ್ಲಿ ಸರಕಾರಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ ಅಣ್ಣಾಮಲೈ ಎಂಟ್ರಿಯಿಂದಾಗಿ ನಡುಕ ಉಂಟಾಗಿದೆ..!

ಬಯಲಿಗೆಳೆಯಲಿದ್ದಾರೆ ಅಪರಾಧಗಳ ಪಟ್ಟಿ..!

ಡಿಕೆಶಿ ಕಾಂಗ್ರೆಸ್ ಅಧಿಕಾರದಲ್ಲಿ ಮಾಡಿದ ಹಗರಣಗಳಿಗೆ ಲೆಕ್ಕವೇ ಇಲ್ಲ. ಕೋಟಿ ಕೋಟಿ ಕಪ್ಪು ಹಣ ಹೊಂದಿದ್ದ ಡಿಕೆ ಶಿವಕುಮಾರ್ ಮೇಲೆ ಐಟಿ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದರು. ಆದರೆ ಸ್ವತಃ ಸಿದ್ದರಾಮಯ್ಯ ಸರಕಾರವೇ ಭ್ರಷ್ಟನ ಬೆಂಬಲಕ್ಕೆ ನಿಂತಿದ್ದು , ಬೀಸುವ ದೊಣ್ಣೆಯಿಂದ ಡಿಕೆಶಿ ಪಾರಾಗಿದಗದರು. ಆದರೆ ಈಗ ಹಾಗಲ್ಲ, ಸರಕಾರ ಬದಲಾಗಿದೆ , ಮೇಲೆ ಕೂತಿರುವವರು ಕಪ್ಪು ಹುಳಗಳನ್ನು ಬುಡ ಸಮೇಯ ಕೀಳುವ ಪ್ರಧಾನಿ ನರೇಂದ್ರ ಮೋದಿ. ಆದ್ದರಿಂದ ಯಡಿಯೂರಪ್ಪ ನವರು ಮುಖ್ಯಮಂತ್ರಿ ಆಗುತ್ತಲೇ ಇದೀಗ ಡಿಕೆಶಿ ಮೇಲೆ ಕಣ್ಣಿಟ್ಟಿದ್ದು, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಅಣ್ಣಾಮಲೈ ಅವರನ್ನೇ ಇಲ್ಲಿಗೆ ಕರೆಸಿಕೊಂಡಿದ್ದಾರೆ.! ಆದ್ದರಿಂದ ಇದೀಗ ಕಾಂಗ್ರೆಸ್ ಶಾಸಕರ ರಕ್ಷಣೆಯ ಹೊಣೆ ಹೊತ್ತು ಕಂಗಾಲಾಗಿರುವ ಡಿಕೆಶಿಯನ್ನೇ ರಕ್ಷಿಸುವಂತಹ ಸ್ಥಿತಿ ಬಂದಿದೆ..!

ಬಿಜೆಪಿ ಆಡಳಿತದಲ್ಲಿ ಯಾವುದೇ ಮುಲಾಜಿಲ್ಲದೆ ಭ್ರಷ್ಟರನ್ನು ಕಿತ್ತೆಸೆಯಲಾಗುತ್ತದೆ. ಆದ್ದರಿಂದಲೇ ಇದೀಗ ಕಾಂಗ್ರೆಸ್ ಅಧಿಕಾರದಲ್ಲಿ ನಡೆಸಿದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಸಜ್ಜಾದ ಯಡಿಯೂರಪ್ಪ ಸರಕಾರ ಮೊದಲ ದಿನವೇ ಭಾರೀ ಸಿದ್ದತೆ ನಡೆಸಿದ್ದಾರೆ..!

–ಅರ್ಜುನ್

Editor Postcard Kannada:
Related Post