ವಾಸ್ತವವಾಗಿ ಕಾಂಗ್ರೆಸ್ ಗೆ ಹೆದರಿಕೆ ಪ್ರಾರಂಭವಾಗಿದೆ! ಅದರಲ್ಲೂ, ಎಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಆಗಮಿಸಿದರೋ, ಕಾಂಗ್ರೆಸ್ ಸಣ್ಣಗೆ ಬೆವರಲು ಆರಂಭಿಸಿದೆ! ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲು ತೊಡಗಿದ ಯೋಗಿ ಆದಿತ್ಯನಾಥ್ ಕರ್ನಾಟಕದ ಮುಖ್ಯಮಂತ್ರಿಯ ಬೆವರಿಳಿಸುತ್ತಿರುವುದು ಗೊತ್ತಿರುವ ವಿಚಾರವೇ! ಅಭಿವೃದ್ಧಿ ರಾಜ್ಯವನ್ನಾಗಿ ಮಾಡದೇ, ಕೇವಲ ನಿದ್ರೆ, ಊಟ, ತುಷ್ಟೀಕರಣದಲ್ಲಿ ತೊಡಗುವ ಮುಖ್ಯಮಂತ್ರಿಯವರಿಗೆ ಯೋಗಿ ಆದಿತ್ಯನಾಥ್ ಸರಿಯಾಗಿಯೇ ತರಾಟೆ ತೆಗೆದುಕೊಳ್ಳುತ್ತಿದ್ದರೆ, ಅತ್ತ ರಾಷ್ಟ್ರೀಯ ಕಾಂಗ್ರೆಸ್ ಕಚೇರಿಯಲ್ಲಿ ‘ಕರ್ನಾಟಕವೂ ಕೈ ತಪ್ಪಿದರೇನು’ ಗತಿ ಎಂಬ ಬಿಸಿಬಿಸಿ ಚರ್ಚೆ ನಡೆಯುತ್ತ ಸಾಗಿದೆ!
“ಹೀಗೇ ನಡೆದರೆ, ಪರಿಸ್ಥಿತಿ ಹದಗೆಡುತ್ತದೆ” ಎಂದು ಅನ್ನಿಸಿದ್ದೇ, ಕಾಂಗ್ರೆಸ್ ತನ್ನ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿ ಯೋಗಿ ಆದಿತ್ಯನಾಥ್ ರವರ ಮೇಲೆ ಒಂದು ವೀಡಿಯೋ ಬಿಡುಗಡೆ ಮಾಡಿದೆ!
ಶೀರ್ಷಿಕೆ ಏನು ಗೊತ್ತಾ?!
‘ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ” ಗೆ ಇಲ್ಲಿದೆ ರೆಸಿಪಿ! ಎಂಬ ಶೀರ್ಷಿಕೆಯಡಿ ಮಾಡಿದ ವೀಡಿಯೋದಲ್ಲಿ ಯೋಗಿ ಆದಿತ್ಯನಾಥ್ ರನ್ನು ಅಪರಾಧಿ ಎಂದು ಬಿಂಬಿಸಿದಲ್ಲದೇ, ಕೋಮು ಗಲಭೆಯನ್ನೂ ಹುಟ್ಟುಹಾಕುವಂತೆ ಮಾಡಿದೆ! ಅಷ್ಟೇ ಅಲ್ಪ! ಯೋಗಿ ಆದಿತ್ಯನಾಥ್ ರ ಕೇಸರೀ ಕಾವಿಯ ಬಗೆಗೂ ಅವಹೇಳನಗೈದು ಅವಮಾನಿಸಿದೆ!
ಆಗಿದ್ದಿಷ್ಟೇ! ಆದರೆ, ಬಿಜೆಪಿ ಯ ಪ್ರತಿಕ್ರಿಯೆ ಮಾತ್ರ ಕಾಂಗ್ರೆಸ್ ಗೆ ಸಾರ್ವಜನಿಕವಾಗಿಯೇ ಕಪಾಳ ಮೋಕ್ಷ ಮಾಡಿದಂತಾಗಿದೆ!
ಉತ್ತರ ಪ್ರದೇಶದ ಬಿಜೆಪಿ ಸಿದ್ಧರಾಮಯ್ಯನ ಸರಕಾರದ ಮೈ ಚಳಿ ಬಿಡಿಸಿದ್ದು ಹೀಗೆ!
1. ಹಾಡಹಗಲೇ ಹಿಂದೂಗಳು ಹತ್ಯೆಗೈಯ್ಯಲ್ಪಡುತ್ತಿದ್ದಾರೆ!
2. ದೇಶದ ಬೆನ್ನೆಲುಬಾದ ರೈತರನ್ನು ಸಿದ್ಧರಾಮಯ್ಯ ಸರಕಾರ ಕಡೆಗಣಿಸಿದೆ! ನಾಲ್ಕೂವರೆ ವರ್ಷಗಳಲ್ಲಿ 1002 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
3. ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಮೇಲೆ ಅದೆಷ್ಟೋ ಮೊಕದ್ದಮೆಗಳು ದಾಖಲಾಗಿವೆ! ಜೊತೆಗೆ ಸಿದ್ಧರಾಮಯ್ಯ ಸರಕಾರದ 27 ಸಚಿವರ ಮೇಲೂ ಭ್ರಷ್ಟಾಚಾರದ ಮೊಕದ್ದಮೆಗಳಿವೆ!
4. ಚುನಾವಣಾ ನಿಮಿತ್ತ ಮಾತ್ರ ಕಾಂಗ್ರೆಸ್ ಹಿಂದುತ್ವವನ್ನು ಅನುಸರಿಸತೊಡಗಿದೆ! ಸ್ವತಃ ಸಿದ್ಧರಾಮಯ್ಯರವರೇ ಇದನ್ನು, “ನನ್ನ ಹೆಸರು ಸಿದ್ದ ರಾಮ! ನಾನೂ ಕೂಡ ಹಿಂದೂವೇ! ಬಿಜೆಪಿ ಕಾರ್ಯಕರ್ತರು ಮಾತ್ರ ಹಿಂದೂಗಳಲ್ಲ” ಎಂದು ಹೇಳುವ ಮೂಲಕ ಸಾಬೀತು ಪಡಿಸಿದ್ದಾರೆ! ಯಾಕೆಂದರೆ ಹೀಗೆ ಹೇಳುತ್ತಲೇ, ಇನ್ನೊಂದು ಕಡೆ ಹಾಡಹಗಲೇ ಹಿಂದೂಗಳ ಬರ್ಬರ ಹತ್ಯೆಯಾಗುತ್ತಿದೆ!
5. ಧರ್ಮಗಳಲಿ ಜಾತಿಯ ವಿಷಬೀಜ ಬಿತ್ತಿದ ನಂತರ, ಈಗ ರಾಹುಲ್ ಗಾಂಧಿ ದೇವಸ್ಥಾನಗಳ ಗಂಟೆಯನ್ನು ಬಾರಿಸುತ್ತಿದ್ದಾನೆ! ದೇವಸ್ಥಾನದಲ್ಲಿದ್ದ ಕೇಸರೀ ವಸ್ತ್ರವನ್ನೂ ಸಹ ಕದ್ದೊಯ್ದಿದ್ದಾನೆ!
ಯಾವಾಗ ಉತ್ತರ ಪ್ರದೇಶ ಬಿಜೆಪಿ ಸಿದ್ಧರಾಮಯ್ಯರವರನ್ನು ತರಾಟೆಗೆ ತೆಗೆದುಕೊಂಡಿತೋ, ಟ್ವಿಟ್ಟರಾಯಿಗಳೂ ಸಹ ಸಿದ್ಧರಾಮಯ್ಯನವರನ್ನು ಹಾಗೂ ಕಾಂಗ್ರೆಸ್ ಸರಕಾರವನ್ನು ಬಾಯಿಗೆ ಬಂದ ಹಾಗೆ ಉಗಿದು ಉಪ್ಪಿನಕಾಯಿ ಹಾಕಿಬಿಟ್ಟಿದ್ದಾರೆ! ನೋಡಿ!
– ಪೃಥು ಅಗ್ನಿಹೋತ್ರಿ