ಪ್ರಚಲಿತ

ಪೋರ್ಚುಗೀಸರು, ಡಚ್ಚರು, ಬ್ರಿಟಿಷರ ನಂತರ ಭಾರತಕ್ಕೆ ಆಗಮಿಸಿದ ವಿದೇಶಿ ಶನಿಯೊಂದು ಭಾರತ ನೆಲವನ್ನೇ ಅಲುಗಾಡಿಸಿಬಿಟ್ಟಿತು! ಯಾರದು?!

ಈ ಶನಿ ಭಾರತಕ್ಕೆ ವಕ್ಕರಿಸಿತೋ ಆ ಬಳಿಕ ಭಾರತೀಯರ ಗ್ರಹಾಚಾರವೇ ಕೆಟ್ಟಿತು. ಸ್ವಾತಂತ್ರ್ಯ ಸಿಕ್ಕ ಬಳಿಕ ಯಾರೆಲ್ಲಾ ಭವ್ಯ ಭಾರತದ ಕನಸು ಕಾಣುತ್ತಿದ್ದರೋ ಅವರೆಲ್ಲರ ಕನಸಿಗೆ ಈ ಶನಿ ತಣ್ಣೀರೆರಚಿಬಿಟ್ಟಿತು. ಸ್ವಾತಂತ್ರ್ಯ ಬಳಿಕ ಗುಲಾಮಗಿರಿಯಿಂದ ಭಾರತೀಯರು ಮುಕ್ತರಾಗುತ್ತಾರೆ ಎಂದು ಭಾವಿಸುತ್ತಿದ್ದಂತೆ ಎಲ್ಲರ ಯೋಚನೆಯನ್ನೇ ಬುಡಮೇಲುಗೊಳಿಸುವಂಥಾಯ್ತು…

ಸ್ವಾತಂತ್ರ್ಯ ಸಿಕ್ಕ ಬಳಿಕ ಕೆಲವೇ ವರ್ಷಗಳ ಅಂತರದಲ್ಲಿ ವ್ಯಾಟಿಕನ್ ಸಿಟಿಯ ನಿಯಂತ್ರಣಕ್ಕೊಳಪಟ್ಟಿತು. ಈಕೆ ಕೈ ಕೆಳಗಿದ್ದವರೆಲ್ಲಾ ಗುಲಾಮರಂತೆ ವರ್ತಿಸಿ ತನ್ನ ಅಂತಃಸತ್ವವನ್ನೇ ಹರಾಜಿಗಿಟ್ಟುಬಿಟ್ಟರು.. ಭವ್ಯಭಾರತವಾಗಬೇಕಾಗಿದ್ದ ದೇಶ ಬಡರಾಷ್ಟ್ರ ಎಂಬ ಹಣೆಪಟ್ಟಿ ಪಡೆದುಕೊಂಡಿತು..

ಬಹುಷಃ ನೆಹರೂ ಫ್ಯಾಮಿಲಿ ಇಲ್ಲದೇ ಹೋಗಿದ್ದರೆ ಆಡಳಿತದಲ್ಲಿ ಯಾವ ಅನುಭವವೂ ಇಲ್ಲದ ಬಾರ್ ಡ್ಯಾನ್ಸರ್ ಆಗಿದ್ದ ಸಾಮಾನ್ಯ ಮಹಿಳೆಯೊಬ್ಬಳು ಇಡೀ ದೇಶವನ್ನೇ ಅಂಕುಶಕ್ಕೆ ತೆಗೆದುಕೊಳ್ಳುತ್ತಿರಲಿಲ್ಲ.

ಎಡ್ವಿಗ್ ಆಂಟೊನಿಯಾ ಅಲ್ಬಿನಾ ಮೈನೋ… ಎಂಬ ಬಾರ್ ಡ್ಯಾನ್ಸರ್ ಆಗಿದ್ದ ಇಟಲಿಯ ಮಹಿಳೆ, ವ್ಯಾಟಿಕನ್ ಸಿಟಿಯ ಸಮ್ಮೋಹಿನಿಗೊಳಪಟ್ಟಿದ್ದ ರಾಜೀವ್ ಗಾಂಧಿ ಎಂಬ ನೆಹರೂ ಸಂತಾನವನ್ನು ಕಟ್ಟಿಕೊಂಡ ಪರಿಣಾಮ ತನ್ನ ನಿಜನಾಮಧೇಯವನ್ನು ಮರೆಮಾಚಿ `ಗಾಂಧಿ’ ಎಂಬ ಹೆಸರನ್ನು ತಗಲಾಕಿಕೊಂಡು ಸೋನಿಯಾ ಗಾಂಧಿಯಾಗಿಬಿಟ್ಟಳು. ಬಾರ್‍ನಲ್ಲಿ ಕ್ಯಾಬರೆ ಡ್ಯಾನ್ಸರ್ ಆಗಿದ್ದ ಮಹಿಳೆ ನೆಹರೂ ವಂಶದ ದರ್ಪ, ಆಡಳಿತದ ಗರ್ವದಿಂದ ತಾನೂ ಕೂಡಾ ಯಾರಿಗೂ ಕಮ್ಮಿ ಇಲ್ಲದಂತೆ ವರ್ತಿಸಿ ನೆಹರೂ ವಂಶದ ಕೈಕೆಳಗೆ ಸೇವೆ ಮಾಡುತ್ತಿದ್ದ ಕಾಂಗ್ರೆಸಿಗರೆಲ್ಲರೂ ಗುಲಾಮರಂತೆ ಬದಲಾಗಿಬಿಟ್ಟರು.

ಸೋನಿಯಾ ಗಾಂಧಿ ಎಂಬ ಬಾರ್ ಡ್ಯಾನ್ಸರ್ ಅದುಹೇಗೆ ಭಾರತೀಯರಿಗೆಲ್ಲಾ ವಿಷವಾಗಿಬಿಟ್ಟಳು ಎನ್ನುವುದೇ ಈ ಲೇಖನದ ತಿರುಳು. ಅಸಲಿ ರಹಸ್ಯ ಇನ್ನೂ ನಿಗೂಢವಾಗಿರುತ್ತದೆ. ಈ ನಿಗೂಢ ರಹಸ್ಯ ಬಯಲಾದಾಗ ಮಾತ್ರ ಇಡೀ ದೇಶದಲ್ಲಿ ಸ್ಫೋಟಕ ಸಂಚಲನ ಸೃಷ್ಟಿಸುತ್ತದೆ. ಅದೇ ರೀತಿ ಈ ಸೋನಿಯಾ ಕೂಡಾ…

ಅದೊಂದು ಅಪ್ಪಟ ಸುಳ್ಳು….

ತಾನು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿದ್ದೆ ಎಂದು ಸೋನಿಯಾ ಹೇಳಿದ್ದ ಅಪ್ಪಟ ಸುಳ್ಳೊಂದನ್ನು ಎಲ್ಲರೂ ನಿಜ ಎಂದು ನಂಬಿಬಿಟ್ಟರು. ನಿರುದ್ಯೋಗಿಯಾಗಿದ್ದ ಸೋನಿಯಾ ಕೆಲಸಕ್ಕೆಂದು ಇಂಗ್ಲೆಂಡ್‍ಗೆ ವಕ್ಕರಿಸಿದ್ದಳು. ಅದೆಷ್ಟೋ ಮಂದಿ ಉದ್ಯೋಗಕ್ಕಾಗಿ ಇಂಗ್ಲೆಂಡ್‍ಗೆ ನುಗ್ಗುತ್ತಿದ್ದರು. ಅದೇ ರೀತಿ ಸೋನಿಯಾ ಕೂಡಾ. ಪದವಿಯನ್ನೂ ಮುಗಿಸಿರದಿದ್ದ ಆಕೆ ಅದ್ಯಾವ ಗ್ರಹಚಾರಕ್ಕೆ ರಾಜೀವ್ ಗಾಂಧಿ ಭೇಟಿಯಾದನೋ ಅದಕ್ಕಿಂತ ಮುಂಚೆ ಬಾರ್‍ನಲ್ಲಿ ಥಕಥೈ ಎಂದು ಕುಣಿಯುವ ಸಾಮಾನ್ಯ ನರ್ತಕಿಯಾಗಿದ್ದಳು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಈಕೆ ಪದವಿ ಮಾಡುತ್ತಿರುವುದೇ ಹೌದಾಗಿದ್ದರೆ ಅದ್ಯಾವ ಪುರುಷಾರ್ಥಕ್ಕೆ ಬಾರ್‍ನಲ್ಲಿ ನರ್ತಕಿಯಾಗಿರಬೇಕಿತ್ತು? ಇಂಥದೊಂದು ಲಾಜಿಕ್ ಹೊಳೆದಾಗಲೇ ಸೋನಿಯಾ ಹೇಳಿದ್ದು ಅಪ್ಪಟ ಸುಳ್ಳು ಎಂದು ಅರ್ಥ ಮಾಡಿಕೊಳ್ಳಬಹುದು.

ಸೋನಿಯಾಳ ಬಗ್ಗೆ ಸಂಶಯ ಮೂಡುವುದೇ ಇದೇ ಉದ್ದೇಶಕ್ಕೆ…

ಎಡ್ವಿಗ್ ಆಂಟೊನಿಯಾ ಅಲ್ಬಿನಾ ಮೈನೋ ಎಂಬ ಬಾರ್ ಡ್ಯಾನ್ಸರ್ 1968ರಲ್ಲಿ ರಾಜೀವ್ ಗಾಂಧಿಯನ್ನು ಮದುವೆಯಾಗಿ ಭಾರತಕ್ಕೆ ಬಂದು ಸಂಸಾರ ಹೂಡಿದ್ದರೂ ಬರೋಬ್ಬರಿ 15 ವರ್ಷಗಳ ಕಾಲ ಆಕೆ ಭಾರತದ ಪೌರತ್ವವನ್ನೇ ಸ್ವೀಕರಿಸಲಿಲ್ಲ. ಇದು ಆಕೆಯ ಅಪ್ಪಟ ಇಂಗ್ಲೆಡ್ ದೇಶಭಕ್ತಿಯನ್ನು ತೋರಿಸುತ್ತದೆ. ನೆಹರೂ ಫ್ಯಾಮಿಲಿಯ ವರ್ಚಸ್ಸಿನಿಂದ ಇಡೀ ದೇಶವನ್ನೇ ಕಂಟ್ರೋಲ್ ಮಾಡಬಹುದು ಎಂಬ ಸೂಚನೆ ಸಿಕ್ಕ ಬಳಿಕವೇ ಆಕೆ ಭಾರತದ ಪೌರತ್ವವನ್ನು ಪಡೆದಿದ್ದು…

ಈಕೆ 2018ಕ್ಕೆ ಭಾರತಕ್ಕೆ ಬಂದು ಬರೋಬ್ಬರಿ ಐವತ್ತು ವರ್ಷಗಳಾಗುತ್ತದೆ. ನೀವು ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ. ಯಾಕೆಂದರೆ ಈಕೆ ಭಾರತದಲ್ಲಿ 25 ವರ್ಷಗಳ ಕಾಲ ಇದ್ದರೂ ಸಹ ಭಾರತದ ಯಾವೊಂದೂ ಭಾಷೆಯನ್ನು ಮಾತಾಡಲೂ ಈಕೆಗೆ ಸಾಧ್ಯವಾಗುತ್ತಿರಲಿಲ್ಲ. ಮುಖ್ಯವಾಗಿ ಹಿಂದಿಯೂ ಆಕೆಗೆ ಬರುತ್ತಿರಲಿಲ್ಲ. ಭಾರತದ ಸಂಸ್ಕøತಿ, ಪರಂಪರೆ, ಇತಿಹಾಸ ಇದರ ಎಳ್ಳಷ್ಟೂ ಮಾಹಿತಿ ಇರದ ಸೋನಿಯಾ ತನ್ನ ಹೆಸರಿನ ಮುಂದೆ ಯಾವಾಗ ಗಾಂಧಿ ಎಂಬ ಸರ್‍ನೇಮ್ ಇಟ್ಟುಕೊಂಡಳೋ ಆವಾಗಲೇ ಅವಳ ಭವಿಷ್ಯ ಬದಲಾಗಿತ್ತು. ಗಾಂಧಿ ಗಾಂಧಿ ಎಂದು ಕನವರಿಸುತ್ತಿದ್ದ ಭಾರತೀಯರಿಗೆ ಈ ಸೋನಿಯಾ ಗಾಂಧಿ ಸಾಕ್ಷಾತ್ ಮಹಾತ್ಮಾ ಗಾಂಧಿಯಾಗಿಬಿಟ್ಟಳು.

ಈ ಹೆಸರಿಗೆ ಮೋಸ ಹೋದ ಭಾರತೀಯರೆಲ್ಲಾ ಆಕೆಯ ಮುಂದಿನ ಗಾಂಧಿ ಹೆಸರಿಗೆ ಇಡೀ ಭಾರತವನ್ನೇ ಧಾರೆ ಎರೆದುಕೊಟ್ಟರು. ರಾಜಕೀಯದಲ್ಲಿ ಸ್ಪಷ್ಟವಾಗಿ ಸಂವಹನ ಮಾಡಲೂ ಬಾರದಿದ್ದ ಈ ಮಹಿಳೆಗೆ ಕಾಂಗ್ರೆಸ್‍ನ ಅಧ್ಯಕ್ಷ ಭಾಗ್ಯವನ್ನು ಕರುಣಿಸಿದ ಈಕೆಯ ಗುಲಾಮರು ಆಕೆ ಹೇಳಿದ್ದಕ್ಕೆಲ್ಲಾ ಥಕಥೈ ಎಂದು ಕುಣಿದುಬಿಟ್ಟರು. ಆ ಬಳಿಕ ಇಡೀ ದೇಶವನ್ನೇ ನಿಯಂತ್ರಣ ಪಡೆದುಕೊಂಡು ತನ್ನ ಮಾತು ಕೇಳುವವರನ್ನೆಲ್ಲಾ ತನ್ನ ಮಂತ್ರಿಗಳನ್ನಾಗಿ ನೇಮಿಸಿ ತಾನೂ ಭ್ರಷ್ಟಾಚಾರ ನಡೆಸಿದ್ದಲ್ಲದೆ ತನ್ನ ಕೈಕೆಳಗಿನವರಿಗೂ ಭ್ರಷ್ಟಾಚಾರ ನಡೆಸಲು ಮುಕ್ತ ಅವಕಾಶ ಮಾಡಿಕೊಟ್ಟಳು. ಭವ್ಯ ಭಾರತವಾಗಬೇಕಿದ್ದ ದೇಶ ಪಾತಾಳಕ್ಕೆ ಕುಸಿಯಿತು.

ಅಮೆರಿಕಾದಂಥಾ ರಾಷ್ಟ್ರಗಳಲ್ಲಿ ಅಲ್ಲಿನ ಭಾಷೆಯನ್ನು ಕಲಿಯದೇ ಆಡಳಿತ ನಡೆಸಲು ಸಾಧ್ಯವೇ ಇಲ್ಲ. ಆದರೆ ಭಾರತದಲ್ಲಿ ನಡೆಯಿತು. ಐರೋಪ್ಯ ಅಥವಾ ಅಮೆರಿಕಾದಂಥಾ ರಾಷ್ಟ್ರಗಳಿಗೆ ಕಾಲಿಡಬೇಕಾದರೆ ಅಲ್ಲಿನ ಭಾಷೆಯ ಬಗ್ಗೆ ಸಾಮಾನ್ಯ ಜ್ಞಾನವಾದರೂ ಇರಬೇಕು. ಆದರೆ ಭಾರತದಲ್ಲಿ ಮಾತ್ರ ಇದು ಸಾಧ್ಯವಾಯಿತು. ತನ್ನ ಹೆಸರಿನ ಮುಂದಿನ ಗಾಂಧಿ ಹೆಸರಿನಿಂದಲೋ ಅಥವಾ ಆಕೆಯ ಮೈಯಲ್ಲಿದ್ದ ಬಳಿ ಚರ್ಮವೋ ಏನೋ ಭಾರತೀಯರಿಗೆ ಮಂಕುಬೂದಿ ಎರಚಿಬಿಟ್ಟಿತು. ಇದನ್ನು ಮನಗಂಡೋ ಏನೋ ನರೇಂದ್ರ ಮೋದಿಯವರೊಮ್ಮೆ, `ಕುಚ್ ಲೋಗ್ ಅಭೀ ಬಿ ಗೋರೆ ರಂಗ್ ಕೆ ಗುಲಾಮ್ ಹೈ’ ಎಂದಿದ್ದರು.

ಯುಪಿಎ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳೆಷ್ಟು ಎಂದು ಎಲ್ಲರಿಗೂ ಚೆನ್ನಾಗಿ ತಿಳಿದಿದೆ. ಭಾರತದಲ್ಲಿ ನಡೆದ ಸಾವಿರಾರು ಕೋಟಿಗಟ್ಟಲೆ ಹಗರಣಗಳಿಗೆಲ್ಲಾ ಕಾರಣ ಯಾರು ಎಂದು ಕೂಡಾ ಚೆನ್ನಾಗಿ ಗೊತ್ತಿರುವಂಥದ್ದೇ. ಸೋನಿಯಾ ಗಾಂಧಿ ರಾಜಕಾರಣದ ಉತ್ತುಂಗ ಸ್ಥಿತಿಯಲ್ಲಿದ್ದಾಗ ನಡೆದಷ್ಟು ಹಗರಣಗಳು ಬೇರ್ಯಾರ ಕಾಲದಲ್ಲೂ ನಡೆದಿಲ್ಲ. ಈ ಕುಟುಂಬಕ್ಕೆ ಕಾಂಗ್ರೆಸ್ ಎನ್ನುವುದು ಬಿಸ್‍ನೆಸ್. ಪಕ್ಷವನ್ನೇ ಬಿಸ್‍ನೆಸ್ ಮಾಡಿಕೊಂಡು ಅದರಿಂದಲೇ ಕೋಟಿಗಟ್ಟಲೆ ಲೂಟಿ ಹೊಡೆದರು.

ರಾಜೀವ್ ಗಾಂಧಿಗೂ ಪ್ರಧಾನಿಯಾಗಿದ್ದೂ ಭ್ರಷ್ಟಾಚಾರದ ಮೂಲಕ ಹರಿದುಬರುವ ಕೋಟಿಗಟ್ಟಲೆ ದುಡ್ಡಿನಾಸೆಗಾಗಿಯೇ.. ರಾಜೀವ್ ಗಾಂಧಿಯ ಹತ್ಯೆಯ ಹಿಂದೆ ಯಾರ ಕೈವಾಡ ಇದೆ ಎನ್ನುವುದೂ ಇಂದಿಗೂ ಸಂಶಯಕ್ಕೆ ಗುರಿಯಾಗುತ್ತಲೇ ಇದೆ.

ರಾಜೀವ್ ಗಾಂಧಿ ಹತ್ಯೆಯಾದ ಬಳಿಕ ಸ್ವಿಸ್ ಬ್ಯಾಂಕ್‍ನಲ್ಲಿದ್ದ ರಾಜೀವ್‍ನ ಬರೋಬ್ಬರಿ 2 ಬಿಲಿಯನ್ ಹಣ ಹೆಂಡತಿ ಸೋನಿಯಾಳ ಖಾತೆಗೆ ವರ್ಗಾವಣೆಯಾದ ಬಳಿಕ ಇದ್ದಕ್ಕಿದ್ದಂತೆ ಸೋನಿಯಾ ಇಂಗ್ಲೆಡಿನ ರಾಣಿ ಎಲಿಜಬೆತ್-2 ಗಿಂತಲೂ ಶ್ರೀಮಂತಳಾಗಿಬಿಟ್ಟಿದ್ದಳು. ಸಿರಿಯಾದ ಪ್ರಧಾನಿ ಬಷರ್-ಅಲ್-ಅಸ್ಸದ್‍ಗಿಂತಲೂ ಶ್ರೀಮಂತ ರಾಜಕಾರಣಿಯಾಗಿಬಿಟ್ಟಳು. ಇಷ್ಟೆಲ್ಲಾ ಹಣ ಎಲ್ಲಿಂದ ಬಂತು ಎಂದು ಯೋಚಿಸಿದಾಗ ದಂಗಾಗುತ್ತದೆ..

ದುರಂತವೆಂದರೆ ಇದೇ ಅಲ್ಲವೇ…

ನರೇಂದ್ರ ಮೋದಿ ಬ್ಯಾಂಕ್ ಖಾತೆಯಲ್ಲಿ 7 ಸಾವಿರ ಹಣವಿಟ್ಟರೂ ಅದನ್ನೇ ಪ್ರಶ್ನಿಸುವವರೆಲ್ಲಾ ಸೋನಿಯಾ ಪೇರಿಸಿಟ್ಟ ಬಿಲಿಯನ್‍ಗಟ್ಟಲೆ ಹಣದ ಬಗ್ಗೆ ಮಾತನ್ನೇ ಆಡುವುದಿಲ್ಲ. ಮೋದಿ ಖಾದಿ ವಸ್ತ್ರ ಉಟ್ಟರೂ ಅವರನ್ನು ಶೋಕಿವಾಲ ಎಂದೆಲ್ಲಾ ಕರೆಯುವವರು ಸೋನಿಯಾ ಸೀರೆ ಉಟ್ಟರೂ ಆಕೆಯ ಕೋಟಿಗಟ್ಟಲೆ ಆಸ್ತಿಯ ಆದಾಯದ ಮೂಲವೆಲ್ಲಿ ಎಂದು ಪ್ರಶ್ನಿಸುವುದಿಲ್ಲ. ದೇಶಕ್ಕಾಗಿ ಇಡೀ ಜೀವನವನ್ನೇ ತ್ಯಾಗ ಮಾಡುವ ಜನರನ್ನು ಟೀಕಿಸುವವರೆಲ್ಲಾ ಇಡೀ ದೇಶವನ್ನು ಕೊಳ್ಳೆ ಹೊಡೆದವರ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಅಲ್ಲ.

ಸರಿಯಾದ ಅಕ್ಷರ ಜ್ಞಾನವಿಲ್ಲ, ಮಾತಾಡಲು ಸರಿಯಾದ ಭಾಷೆ ಬರುವುದಿಲ್ಲ, ಒಂದು ದೂರದೃಷ್ಟಿಯೂ ಇಲ್ಲ, ಭಾರತದ ಬಗ್ಗೆ ಕಲ್ಪನೆಯೂ ಇಲ್ಲ. ಇಂಥವಳ ಕೈಗೆ ನಮ್ಮ ದೇಶವನ್ನು ಹತ್ತುವರ್ಷಗಳ ಕಾಲ ಕೊಟ್ಟುಬಿಟ್ಟೆವಲ್ಲಾ… ಆಕೆ ಆಳಿದ ಹತ್ತು ವರ್ಷಗಳೂ ಭಾರತೀಯರನ್ನು ನರಕಯಾತನೆಗೆ ತಳ್ಳಿಬಿಟ್ಟಿತು. ಇದೆಲ್ಲಾ ದೌರ್ಭಾಗ್ಯ ಎಂದು ಭಾವಿಸುವಷ್ಟೂ ನಾವು ಮೂರ್ಖರಾಗಿಬಿಟ್ಟೆವು. ದೇಶವನ್ನು ಹಿಂಡಿ ಹಿಪ್ಪೆ ಮಾಡಿದ್ದವರ ಕೈಯಿಂದ ಕೈತಪ್ಪಿಸಿ ಇಂದು ಭಾರತವನ್ನು ಎತ್ತರಕ್ಕೆ ಬೆಳೆಸಬೇಕಾದರೆ ಮೋದಿಗೆ ಅದೆಷ್ಟು ಪ್ರಾಯಾಸದ ಕೆಲಸವೆಂದು ನಾವು ಕೊಂಚವೂ ಆಲೋಚಿಸುವುದಿಲ್ಲ.

ನರೇಂದ್ರ ಮೋದಿಯವರು ಈಗ ಮಾಡುತ್ತಿರುವ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಮಾರ್ಟ್ ಸಿಟಿ, ಡಿಜಿಟಲೈಸೇಷನ್, ಬುಲೆಟ್ ಟ್ರೈನ್ ಎಂಬೆಲ್ಲಾ ಹಲವಾರು ಯೋಜನೆಗಳನ್ನು ಭಾರತದಲ್ಲಿ 20 ವರ್ಷಗಳ ಮುಂಚೆಯೇ ಮಾಡಿದ್ದರೆ ನಾವೆಲ್ಲಾ ಇಂದು 20 ರೂಪಾಯಿಯ ಚಾ ಕುಡಿಯಲೂ ಪರದಾಟಬೇಕಾದ ಸ್ಥಿತಿ ಬರುತ್ತಿರಲಿಲ್ಲ.. ಯಾವತ್ತೋ ಆಗಬೇಕಾಗಿದ್ದ ಕೆಲಸವನ್ನು ದೂರದೃಷ್ಟಿಯಿಂದ ಮೋದಿ ಇಂದು ಮಾಡುತ್ತಿದ್ದಾರೆ.

ಆಕೆಗೆ ಭಾರತವೊಂದು ಬಂಗಾರದ ಮೊಟ್ಟೆ ಇಡುವ ಪಕ್ಷಿಯಷ್ಟೆ. ಆಕೆಗೆ ಅದೊಂದು ದುಡ್ಡು ಮಾಡುವ ಕ್ಯಾಸಿನೋ ಆಟದ ಭಾಗವಷ್ಟೇ. ಹತ್ತು ವರ್ಷಗಳ ಕಾಲ ಭಾರತವನ್ನು ಆಳಿದ ಆಕೆಗೆ ಯಾವ ದೂರದೃಷ್ಟಿಯೂ ಇರಲಿಲ್ಲ. ಅಪ್ಪಟ ವಿದೇಶಿಯಾಳದ ಆಕೆಗೆ ಭಾರತದ ಮೇಲೆ ಅದ್ಯಾಕೆ ಆಸಕ್ತಿ ಇರಬೇಕು ಅಲ್ಲವೇ? ಆಂಟೋನಿಯೋವಿನ ಆಡಳಿತವೆನ್ನುವುದು ಭಾರತದ ಪಾಲಿಗೆ ಒಂದು ಕರಾಳ ಇತಿಹಾಸ ಅಷ್ಟೆ.

ಈ ರೀತಿ ಜರ್ಜರಿತಗೊಂಡಿದ್ದ ದೇಶವನ್ನು ಇಂದು ಮೋದಿ ಅಭಿವೃದ್ಧಿ ಪಥದಲ್ಲಿ ಮುಂದುವರಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಇಂದು ನಾವು ಚೈನಾ ಸರಕುಗಳನ್ನು ಯಾವ ರೀತಿ ಒದ್ದು ಹೊರಹಾಕುತ್ತೇವೆಯೋ ಅದೇ ರೀತಿ ಇಂಥಾ ಹಳೆ ಸರಕುಗಳನ್ನೂ ದೇಶದಿಂದ ಹೊರಹಾಕಬೇಕು.. ಈ ಸಮಯವೂ ಒಂದು ದಿನ ಬಂದೇ ಬರುತ್ತದೆ.

-ಚೇಕಿತಾನ

Tags

Related Articles

Close