ಯೋಗಿ ಆದಿತ್ಯನಾಥ್ ಎಂದರೆ ಸಾಕು ಕೆಲವು ವಿರೋಧಿಗಳು ಆತ ಒಬ್ಬರು ಕಾವಿ ತೊಟ್ಟ ಸನ್ಯಾಸಿ ಎಂದು ಆಲಸ್ಯದ ಮಾತುಗಳನ್ನು ಆಡುತ್ತಾರೆ… ಆದರೆ ನಿಜವಾಗಿಯೂ ಯೋಗಿ ಆದಿತ್ಯನಾಥ್ ಎಂದರೆ ಓರ್ವ ಸ್ವಾಭಿಮಾನಿ ಕಾವಿ ತೊಟ್ಟ ಸನ್ಯಾಸಿ ಮಾತ್ರವೇ ಅಲ್ಲ! ಬದಲಾಗಿ, ರಾಜಕೀಯ ಸಂತ! ಹಿಂದುತ್ವವೊಂದೇ ನನ್ನ ಸಿದ್ಧಾಂತ ಎಂದು ಘರ್ಜಿಸಿದ್ದರು ಯೋಗಿ ಆದಿತ್ಯನಾಥ್!!
ಕರ್ತವ್ಯದ ಮೇಲಿನ ಬದ್ಧತೆ, ರಾಜಕೀಯ ನಿಷ್ಠೆ ಹಾಗೂ ಧರ್ಮದ ಪರಿಪಾಲನೆ! ಈ ಮೂರು ಗುಣಗಳನ್ನು ಹೊಂದಿದ ಯಾವುದೇ ವ್ಯಕ್ತಿಯಾದರೂ ಯಶಸ್ಸು ಸಾಧಿಸುತ್ತಾನೆ ಎಂಬುದಕ್ಕೆ ಉತ್ತರ ಪ್ರದೇಶದ ಯೋಗಿ ಉದಾಯರಣೆಯಷ್ಟೇ! ಮೊದಮೊದಲು ಯೋಗಿ ಆದಿತ್ಯನಾಥ್ ರವರನ್ನು ‘ಯುಪಿ ಮೇ ರೆಹನಾ ಹೋಗಾ ತೋ ಯೋಗಿ ಯೋಗಿ ಕೆಹನಾ ಹೋಗಾ’ ಎಂಬ ಧ್ಯೇಯವಾಕ್ಯವನ್ನಿಟ್ಟು ಪರಿಚಯಿಸಿದಾಗ ಸಮಾಜಕ್ಕೆ ಯೋಗಿಯೊಬ್ಬರು ಕ್ರೂರ ಸಂತನಂತೆ ಕಂಡು ಬಂದಿದ್ದರಷ್ಟೇ! ಆದರೆ, ಸತ್ಯವಿಷಯವನ್ನರಿಯದೇ ಕೇವಲ ಕಾವಿ ಧರಿಸಿದ ವ್ಯಕ್ತಿತ್ವವೆಂಬುದನ್ನೇ ಗುರಿಯಾಗಿಸಿದ ಮಾಧ್ಯಮಗಳಿಗೆ ಕಳೆದ 25 ವರ್ಷಗಳ ಯೋಗಿಯ ಗೆಲುವನ್ನು ಅರಗಿಸಿಕೊಳ್ಳಲಾಗದೇ ಒದ್ದಾಡಿ ಹೋಗಿದ್ದವೆಂಬುದೂ ಅಷ್ಟೇ ಸತ್ಯ!!
ಉತ್ತರ ಪ್ರದೇಶದ ಕೈರಾನದಲ್ಲಿ ಮುಸಲ್ಮಾನರ ದೌರ್ಜನ್ಯ ಮತ್ತು ಹಿಂಸೆಯನ್ನು ತಾಳಲಾರದೆ ವಲಸೆ ಹೋಗಿದ್ದ ಹಿಂದೂಗಳು ಮತ್ತೆ ತಮ್ಮ ಗೂಡಿಗೆ ಮರಳಿಸುವಲ್ಲಿ ಯೋಗಿ ಆದಿತ್ಯನಾಥರು ಕಳೆದ ವರ್ಷ ದೇಶದಲ್ಲಿ ಭಾರೀ ಸುದ್ದಿಯಾಗಿದ್ದ ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಮುಸ್ಲಿಂ ಬಾಹುಳ್ಯವುಳ್ಳ ಕೈರಾನ ಗ್ರಾಮದಿಂದ ಹಿಂದೂ ಕುಟುಂಬಗಳು ಸಾಮೂಹಿಕವಾಗಿ ವಲಸೆ ಹೋಗಿದ್ದ ವಿಷಯ ಇಡೀ ದೇಶವನ್ನೇ ಬೆಚ್ಚಿಬೀಳುವಂತೆ ಮಾಡಿತ್ತು.
2001 ರಲ್ಲಿ ಸುಮಾರು 50% ಆಸುಪಾಸಿನಲ್ಲಿದ್ದ ಹಿಂದೂಗಳ ಜನಸಂಖ್ಯೆ ಕಾಲಕ್ರಮೇಣ ಮುಸ್ಲಿಂ ಜನಸಂಖ್ಯೆ 90% ದಾಟುತ್ತಿದ್ದ ಹಾಗೆಯೇ ಅಲ್ಲಿನ ಹಿಂದೂಗಳ ಜನಸಂಖ್ಯೆ 10% ಮುಟ್ಟಿತ್ತು. ನಂತರ ಅಲ್ಲಿ ಬಹುಸಂಖ್ಯಾತರಾದವರಿಂದ ಅಲ್ಲಿನ ಅಲ್ಪಸಂಖ್ಯಾತರಿಗೆ ತಮ್ಮ ಆಸ್ತಿಯನ್ನು ,ತಮ್ಮ ಹಕ್ಕನ್ನು ಕೊಡಲು ಅಲ್ಲಿನ ಗೂಂಡಾಗಳಿಂದ ಬೆದರಿಕೆಯಾಗುತಿದ್ದು ಕಾಲಕ್ರಮೇಣ ಅಲ್ಲಿನ ಎಲ್ಲಾ ಹಿಂದೂಗಳು ಪಲಾಯನಕ್ಕೆ ಮುಂದಾಗಿದ್ದರು.
ಇದೇ ಕಾರಣದ ಸಂಬಂಧ ಯೋಗಿ ಆದಿತ್ಯನಾಥರು ಹೆಣೆದ ಬಲೆಯಲ್ಲಿ ಹಾಗು ಕಳೆದ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಸರಣಿ ಎನ್ಕೌಂಟರ್ ಗಳಿಂದ ತಮ್ಮ ಜೀವ ಎಲ್ಲಿ ಹೋಗುವುದೋ ಎಂಬ ಭಯದಿಂದ ಕೈರಾನದಲ್ಲಿದ್ದ ಶೀಟರ್ಗಳು ಪೆÇೀಲೀಸರಿಗೆ ಶರಣಾಗತಿಯಾಗುತ್ತಿದ್ದು ಗೂಡು ಬಿಟ್ಟ ಹಿಂದೂಗಳಿಗೆ ಮತ್ತೆ ಆತ್ಮವಿಶ್ವಾಸ ಬಂದಂತಾಗಿದ್ದ ತಮ್ಮ ಗೂಡಿಗೆ ಮರಳುತ್ತಿದ್ದಾರೆ ಎಂಬ ವಿಷಯ ಕೇಳಿ ಬಂದಿದೆ.
ಮುಸ್ಲಿಮರ ದೌರ್ಜನ್ಯ ಮತ್ತು ಹಿಂಸೆಯನ್ನು ತಾಳಲಾರದೆ ಹಲವಾರು ಹಿಂದೂ ಕುಟುಂಬಗಳು ಇಲ್ಲಿಂದ ವಲಸೆ ಹೋಗುತ್ತಿವೆ ಎಂಬ ಆರೋಪಗಳೂ ಸಹ ಕೇಳಿ ಬಂದಿದ್ದವು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಆರ್.ಎಸ್.ಎಸ್ ವಕ್ತಾರ ರಾಕೇಶ್ ಸಿನ್ಹಾ, ‘ 1947ರಲ್ಲಿ ದೇಶವನ್ನು ವಿಭಜಿಸಿದ ಹಿಂದೂ ವಿರೋಧಿ ಮನಃಸ್ಥಿತಿ ಇಂದು ಕೈರಾನದಲ್ಲಿ ಹಿಂದುಗಳು ಸಾಮೂಹಿಕವಾಗಿ ಪಲಾಯನ ಮಾಡುವಂತೆ ಮಾಡಿದೆ. ಪಾಕ್ ಸಂಸ್ಥಾಪಕ ಮಹಮ್ಮದ್ ಅಲಿ ಜಿನ್ನಾನ ಸಿದ್ಧಾಂತ ಇದು’. ಕೈರಾನದ ಹಿಂದೂಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಮತ್ತು ಜಿನ್ನಾ ಮನಸ್ಥಿತಿಯ ಬಗ್ಗೆ ಹೋರಾಡುವ ಅವಶ್ಯಕತೆ ಇದೆ ಎಂದು ಈ ಹಿಂದೆ ಹೇಳಿದ್ದರು. ಕೈರಾನ ಮತ್ತೊಂದು ಕಾಶ್ಮೀರವಾಗುತ್ತಿದೆ, ಹಿಂದೂಗಳ ವಲಸೆಯನ್ನು ಸಹಿಸಲು ಸಾಧ್ಯವಿಲ್ಲ, ಇಲ್ಲಿನ 346 ಹಿಂದೂ ಕುಟುಂಬಗಳು ಪಲಾಯನ ಮಾಡಿ ನಿರ್ಗತಿಕರಾಗಿ ಬದುಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಹುಕುಂ ಸಿಂಗ್ರವರೂ ಸಹ ಆರೋಪಿಸಿದ್ದರು.
ಉತ್ತರ ಪ್ರದೇಶದಲ್ಲಿ ಯಾವಾಗ ಯೋಗಿ ಆದಿತ್ಯನಾಥ್ರ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತೋ, ಅಲ್ಲಿಂದಲೇ ರಾಜ್ಯದಲ್ಲಿ ಅಪರಾಧಗಳನ್ನು ಹತ್ತಿಕ್ಕುತ್ತ ಬಂದಿದೆಯಷ್ಟೇ! ಯೋಗಿ ಆದಿತ್ಯನಾಥ್ ರ ಸರಕಾರದಿಂದ ಇಡೀ ಉತ್ತರ ಪ್ರದೇಶವೇ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳುತ್ತಿದೆ..
ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುವುದು, ಆತಂಕವಾದಿಗಳ ಮಧ್ಯಸ್ಥಿಕೆ, ಸರಕಾರಿ ಸೌಲಭ್ಯಗಳಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಕೊಲೆ ದರೋಡೆಗಳಂತಹ ಚಟುವಟಿಕೆಗಳಿಗೆಲ್ಲಾ ಈಗ ಕಡಿವಾಣ ಬಿದ್ದಿದ್ದು ಯೋಗಿ ಆದಿತ್ಯನಾಥ್ ಸರಕಾರದಿಂದಲೇ!
ಅಭಿವೃದ್ಧಿಯಲ್ಲಿಯೂ ಮುಂದಿರುವ ಯೋಗಿ ಸರಕಾರ, ಯಾವುದೇ ಸಿದ್ಧಾಂತಗಳ ಜೊತೆಗೂ ರಾಜಿ ಮಾಡಿಕೊಂಡ ದಾಖಲೆಗಳೇ ಇಲ್ಲ! ಅದರಲ್ಲಿಯೂ, ಹಿಂದುತ್ವದ ಸಿದ್ಧಾಂತಗಳನ್ನು ಒಪ್ಪಿಕೊಂಡು ರಾಮ ರಾಜ್ಯ ಸ್ಥಾಪನೆ ಮಾಡಲೇ ಬೇಕೆಂದು ಹೊರಟಿರುವ ಯೋಗಿ ಆದಿತ್ಯನಾಥ್ಗೆ ಜಾತೀವಾದಿಗಳೇ ಅಡ್ಡಗೋಡೆಯಾಗಿ ನಿಂತದ್ದು ಹಲವಾರು ಜನ!! ಆದರೆ, ಯಾವುದೂ ಕೂಡ, ಹಿಂದುತ್ವದಿಂದ ಯೋಗಿಯನ್ನು ಹಿಂದೆ ಸರಿಯುವಂತೆ ಮಾಡಲೇ ಇಲ್ಲ!! ಯಾರೂ ಯೋಗಿ ಆದಿತ್ಯನಾಥರನ್ನು ದೂರಿದರೂ ಅದಕ್ಕೆ ಕ್ಯಾರೇ ಎನ್ನಲ್ಲ ಯೋಗಿ ಆದಿತ್ಯನಾಥರು!!
ಪವಿತ್ರ