ಪ್ರಚಲಿತ

ಮೋದಿ ಸರಕಾರದ ಸಚಿವ ಸಂಪುಟದಲ್ಲಿ ಓರ್ವ ಪ್ರಭಾವಿ ರಾಜಕಾರಣಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಂತ್ ಕುಮಾರ್ ಬಗ್ಗೆ ನೀವು ತಿಳಿಯಲೇಬೇಕು!!

“ದೇಶಕ್ಕೆ ಬೆದರಿಕೆ ಇದ್ದರೆ ಅದು ಡೋಂಗಿ ಜಾತ್ಯತೀತವಾದಿಗಳಿಂದಲೇ ಇದೆ. ಈ ಡೊಂಗಿಗಳು ಅಫ್ಜಲ್ ಗುರುವಿನ ಗಲ್ಲು ಶಿಕ್ಷೆಯನ್ನು ವಿರೋಧಿಸುತ್ತಾರೆ. ಕಾಶ್ಮೀರ ಪ್ರತ್ಯೇಕತಾವಾದಿ ಗಳಿಗೆ ಬೆಂಬಲ ನೀಡುತ್ತಾರೆ” ಎಂದು ಹೇಳಿರುವ ಸಚಿವ ಅನಂತ್ ಕುಮಾರ್, ಮೋದಿ ಸರಕಾರದ ಸಚಿವ ಸಂಪುಟದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ನಿರ್ವಹಿಸುತ್ತಿರುವಂತಹ ಓರ್ವ ಪ್ರಭಾವಿ ರಾಜಕಾರಣಿಯಾಗಿದ್ದಾರೆ!!

2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ಏಳು ಅಂಶದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕೇಂದ್ರ ಸರ್ಕಾರವು ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಖಚಿತ ಆದಾಯಕ್ಕಾಗಿ ಎಲ್ಲರೂ ಬೆಳೆ ವಿಮೆ ಮಾಡಿಸುವಂತೆ, ಸಾವಯುವ ಕೃಷಿಗೆ ಆದ್ಯತೆ ನೀಡಿ ಮಣ್ಣು ಆರೋಗ್ಯ ತಂತ್ರ ಪಡೆದುಕೊಳ್ಳುವಂತೆ, ಅಧಿಕ ಇಳುವರಿ ನೀಡುವ ಬಿತ್ತನೆ ಬೀಜ ಹಾಗೂ ಸಸಿಗಳನ್ನು ಬಳಸುವಂತೆ ಕೃಷಿಕರೇ ತಮ್ಮ ಬೆಳೆಗಳ ಮೌಲ್ಯವರ್ಧನೆ ಮಾಡುವುದರ ಜೊತೆಗೆ ಆಹಾರ ಧಾನ್ಯಗಳನ್ನು ಸೂಕ್ತ ರೀತಿಯಲ್ಲಿ ಶೇಖರಿಸುವಂತೆ ರೈತರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿರುವ ಅನಂತ್ ಕುಮಾರ್ 2022ರ ವೇಳೆ ಭಾರತ ಸೂಪರ್ ಫವರ್ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲದೇ, ನಮ್ಮ ಮೆಟ್ರೋ’ದ ಉದ್ಘೋಷಣೆ ಕನ್ನಡದಲ್ಲಿ ಆಗಬೇಕು, ನಾಡಭಾಷೆ ಮತ್ತು ಮಾತೃಭಾಷೆಗಳಿಗೆ ಪ್ರಾಶಸ್ತ್ಯ ನೀಡಲೇಬೇಕು. ಇನ್ನು, ರೈಲ್ವೇಯೂ ತ್ರಿಭಾಷಾ ಸೂತ್ರ ಅನುಸರಿಸುತ್ತದೆ, ಹಾಗಾಗಿ ಮೊದಲು ಕನ್ನಡ, ಬಳಿಕ ಇಂಗ್ಲಿಷ್ ತದನಂತರ ಹಿಂದಿ ಬಳಸುವುದರಲ್ಲಿ ತಪ್ಪಿಲ್ಲ ಎಂದು ಪ್ರತಿಪಾದಿಸುತ್ತದೆ ಎಂದಿರುವ ಇವರು ಯಶಸ್ವಿ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತಾನಾಡಿ ತನ್ನ ಮಾತೃಭಾಷೆಯ ಮೇಲಿರುವ ಅಭಿಮಾನವನ್ನು ಜಗತ್ತಿಗೆ ಸಾರಿದಂತಹ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ.

ಭಾರತದ 15 ನೇ ಲೋಕಸಭೆಗೆ ಸದಸ್ಯನಾಗಿ ಚುನಾಯಿತರಾದ ಶ್ರೀ.ಅನಂತ್ ಕುಮಾರ್, ಭಾರತೀಯ ಜನತಾ ಪಕ್ಷದ ಒರ್ವ ಯಶಸ್ವೀ ರಾಜಕಾರಣಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ, ಇವರು ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜಕೀಯ-ಪಟುವಾಗಿ ಪ್ರಸಿದ್ಧಿಗೊಂಡಿರುವ ಹೆಮ್ಮೆ ಇವರದ್ದು!! ಅನಂತ್ ಕುಮಾರ್ ಅವರು 22 ಜುಲೈ 1959 ರಂದು, ಶ್ರೀ ಎಚ್. ಎನ್. ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ದಂಪತಿಗಳ ಮಗನಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಇವರು ಆರ್.ಎಸ್.ಎಸ್ ಗರಡಿಯಲ್ಲಿ ಬೆಳೆದಂತಹ ವ್ಯಕ್ತಿಯಾಗಿದ್ದಾರೆ.

ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ಇಂದಿಗೂ ರಾಷ್ಟ್ರೀಯ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಇವರು ಬಿ.ಎ ಪದವಿಯನ್ನು ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜ್ (ಕರ್ನಾಟಕ ವಿಶ್ವ-ವಿದ್ಯಾಲಯ) ನಲ್ಲಿ ಪೂರ್ಣಗೊಳಿಸಿದ್ದಾರೆ. ತದನಂತರದ ತಮ್ಮ ಎಲ್. ಎಲ್. ಎಮ್ (ಲಾ) ಪದವಿಯನ್ನು ಜೆ.ಎಸ್.ಎಸ್. ಲಾ ಕಾಲೇಜ್ ನಲ್ಲಿ (ಮೈಸೂರ್ ವಿಶ್ವ-ವಿದ್ಯಾಲಯ) ಪಡೆದುಕೊಂಡಿದ್ದಾರೆ.

ಮೊದಲಿನಿಂದಲೂ ‘ರಾಷ್ಟ್ರೀಯ ಸ್ವಯಂ-ಸೇವಕಸಂಘ,’ ಕಟ್ಟ ಅಭಿಮಾನಿಯಾಗಿದ್ದ ಇವರು ಕರ್ನಾಟಕದ ಬಿಜೆಪಿ ಪಕ್ಷದ ಓರ್ವ ಸಮರ್ಥ ವ್ಯಕ್ತಿ ಎಂದೆನಿಸಿಕೊಂಡಿದ್ದಾರೆ!! ಬಾಲ್ಯದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ, ತತ್ವಗಳಿಂದ ಪ್ರೇರಿತರಾಗಿದ್ದ ಇವರು ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ ನ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಕೊಂಡಿದ್ದರು. ಆದರೆ ಇಂದಿರಾ ಗಾಂಧಿಯವರು ಹೊರಡಿಸಿದ ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅನಂತ್ ಕುಮಾರ್ ಅವರನ್ನು 40 ದಿನ ಸೆರೆಮನೆಯಲ್ಲಿಟ್ಟಿದ್ದರು. ತದನಂತರದಲ್ಲಿ, ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕರ್ನಾಟಕ ವಲಯದ ಬಿಜೆಪಿಯ ಜನರಲ್ ಸೆಕ್ರೆಟರಿಯಾಗಿ ಚುನಾಯಿತರಾಗಿದರು ಅನಂತ್ ಕುಮಾರ್!!

ತಮ್ಮ ಚಿಕ್ಕವಯಸ್ಸಿಗೇ ಭಾರತೀಯ ಜನತಾ ಪಾರ್ಟಿಗೆ ಸೇರಿಕೊಂಡ ನಂತರ, 1995 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದಂತಹ ಹಿರಿಮೆ ಇವರದ್ದಾಗಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು ಸಾಕಷ್ಟು ಜನಪ್ರಿಯ ವ್ಯಕ್ತಿಯಾಗಿದ್ದಲ್ಲದೇ, ಇವರನ್ನು ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್’, ನಿಂದ ಮುಂದೆ ‘ಜನತಾಪಾರ್ಟಿ’ ಯ ದೊಡ್ಡ ಹುದ್ದೆಗಳಿಗೆ ಅವರನ್ನು ಆರಿಸಲಾಯಿತು. ಅಷ್ಟೇ ಅಲ್ಲದೇ, ಬಿಜೆಪಿಯ ರಾಜ್ಯಮಟ್ಟದ ಅಧ್ಯಕ್ಷರಾಗಿಯೂ ನೇಮಕಗೊಂಡರು!!

ಬಿಜೆಪಿಯ ‘ಯುವ-ಮೋರ್ಚ’ದಲ್ಲಿನ ಅವರ ಕಾರ್ಯವೈಖರಿಯನ್ನು ಗಮನಿಸಿ ಅವರನ್ನು 1996 ರಲ್ಲಿ ರಾಷ್ಟ್ರಮಟ್ಟದ ರಾಜಕೀಯ ವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತು. ನಂತರ 1996 ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅವರು ಲೋಕಸಭೆಗೆ ಮೊದಲ ಬಾರಿ ಆಯ್ಕೆಯಾದರು. ಅಷ್ಟೇ ಅಲ್ಲದೇ, ಅನಂತ್ ಕುಮಾರ್ ರೈಲ್ವೆ ಮತ್ತು ಉದ್ಯಮದ ಸಚಿವಾಲಯದಲ್ಲಿ ಬರುವ ವಿವಿಧ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಇವರು ರಾಮ ಜನ್ಮಭೂಮಿಯ ಕಾರಣಕ್ಕಾಗಿ ಹೋರಾಡಿದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕದಿಂದ ಆಯ್ಕೆಯಾದ ಪ್ರತಿನಿಧಿಗಳಲ್ಲಿ ಅನಂತ್ ಕುಮಾರ್ ಕೂಡ ಒಬ್ಬ ಪ್ರಮುಖ ವ್ಯಕ್ತಿಯಾಗಿ ಮಿಂಚಿದ್ದಾರೆ. ತದ ನಂತರದ ಅಟಲ್ ಬಿಹಾರಿ ವಾಜಪೇಯಿ ರವರ ಮಂತ್ರಿಮಂಡಲದಲ್ಲಿ ‘ನಾಗರಿಕ ವಿಮಾನ ಖಾತೆಯ ಮಂತ್ರಿ’ ಗಳಾಗಿ ಸೇವೆ ಸಲ್ಲಿಸಿರುವ ಇವರು ನಾನಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಬಿಜೆಪಿಯ ಶ್ರೇಷ್ಠ ನಾಯಕರೆಂದೆನಿಸಿಕೊಂಡಿದ್ದಾರೆ.

ಅನಂತ್ ಕುಮಾರ್ ಅವರು 1999ರ ಎನ್.ಡಿ.ಎ ಸರ್ಕಾರದಲ್ಲಿ ಪ್ರಮುಖ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದ ಸಂದರ್ಭದಲ್ಲಿ ಪ್ರವಾಸೋದ್ಯಮ, ಕ್ರೀಡೆ ಮತ್ತು ಯುವ ವ್ಯವಹಾರಗಳು, ಸಂಸ್ಕೃತಿ, ನಗರಾಭಿವೃದ್ಧಿ ಮತ್ತು ಬಡತನ ನಿವಾರಣೆ ಸೇರಿದಂತೆ ವಿವಿಧ ಸಚಿವಾಲಯಗಳನ್ನು ಕಾರ್ಯ ನಿರ್ವಹಿಸಿರುವ ಹಿರಿಮೆ ಇವರದ್ದಾಗಿದೆ.

ಅಷ್ಟೇ ಅಲ್ಲದೇ, ವಿಶ್ವಸಂಸ್ಥೆಯಲ್ಲಿ ಕನ್ನಡ ಭಾಷೆಯಲ್ಲಿ ಮಾತಾನಾಡಿದ ಮೊದಲಿಗ ಎನ್ನುವ ಖ್ಯಾತಿಯನ್ನು ಪಡೆದಿರುವ ಇವರು ಬೆಂಗಳೂರು ದಕ್ಷಿಣವನ್ನು ಅಭಿವೃದ್ಧಿಗೊಳಿಸುವಲ್ಲಿ ಶ್ರಮ ವಹಿಸಿರುವ ಇವರು ಬೆಂಗಳೂರು ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಪಣತೊಟ್ಟವರಲ್ಲಿ ಇವರು ಒಬ್ಬರು. ಪ್ರಸ್ತುತ ಮೋದಿ ಸಚಿವ ಸಂಪುಟದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯನ್ನು ನಿರ್ವಹಿಸುತ್ತಿರುವಂತಹ ಇವರು ರೈತರ ಏಳಿಗಾಗಿ ಶ್ರಮ ವಹಿಸುತ್ತಿರುವಂತಹ ರಾಜಕಾರಣಿಯಾಗಿದ್ದಾರೆ.

ಅತಿ ಚಿಕ್ಕಪ್ರಾಯದಲ್ಲಿಯೇ ಮಂತ್ರಿ ಪದವಿಗೇರಿರುವ ಇವರು ಈ ಕೆಳಗೆಕಂಡ, ಮಂತ್ರಿಪದವಿಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಹಿರಿಮೆ ಇವರದ್ದಾಗಿದೆ.

Secretary, Akhil Bharatiya Vidhyarathi Parishad (A.B.V.P.), Karnataka : 1982-85
National Secretary, A.B.V.P. : 1985-87
Secretary, Bharatiya Janata Party (B.J.P.), Karnataka : 1987-88
General Secretary, B.J.P., Karnataka : 1988-95
National Secretary, B.J.P. : 1995 -98
Elected to the 11th Lok Sabha (1st term): 1996
Member of the Governing Council Indian Institute of Science, Bangalore, 1996-97
Member of the Parliamentary Consultative Committee, Ministry of Industry : 1996-97
Member of the Parliamentary Standing Committee, Ministry of Railways : 1996-97
Elected to the 12th Lok Sabha (2nd term) : 1998
Union Cabinet Minister, Civil Aviation : March 1998- October 1999
Additional charge, Ministry of Tourism : January 1999 -October 1999
Elected to the 13th Lok Sabha (3rd term) : 1999
Union Cabinet Minister, Culture, Youth Affairs and Sports : October 1999- 2 February 2000
Union Cabinet Minister, Tourism and Culture : February 2000 -September 2001
Union Cabinet Minister, Urban Development & Poverty Alleviation with additional charge of Rural Development : September 2001- July
Elected to the 14th Lok Sabha (4th term) : 2004
Chairman, Committee on Coal & Steel : August 2004
Member of the Parliamentary General Purposes Committee : 2004
National General Secretary, Bharatiya Janata Party : Since 2004
Chairman, Parliamentary standing committee on Finance: 2007
Member, Business advisory committee: 2007
Elected to the 15th Lok Sabha (5th term) : 2009

-ಅಲೋಖಾ

Tags

Related Articles

Close