ಪ್ರಚಲಿತ

ಮತ್ತೆ ಮರುಕಳಿಸಿತೇ ಮೊಘಲರ ಅಟ್ಟಹಾಸ!! ಮುಷರ್ರಫ್ ಸಮ್ಮುಖದಲ್ಲಿಯೇ ನಡೆದೇ ಹೋಯಿತು 500 ಹಿಂದೂಗಳ ಮತಾಂತರ!!

ಇತಿಹಾಸದ ಪುಟಗಳನ್ನು ಕೆದಕುತ್ತಾ ಹೋದರೆ ಹಿಂದೂ ರಾಷ್ಟ್ರವಾಗಿದ್ದ ಭಾರತವು ಮೊಘಲರ ದಾಳಿಗೆ ತುತ್ತಾಗಿ ಸಂಪತ್ಭರಿತವಾಗಿದ್ದ ಭಾರತ ಬಡರಾಷ್ಟ್ರವಾಗಿ ಹೆಸರುವಾಸಿಯಾದರೆ ಇನ್ನೊಂದು ಕಡೆ ಅದೆಷ್ಟೋ ಹಿಂದೂಗಳ ಮಾರಣ ಹೋಮಗಳೇ ನಡೆದೇ ಹೋಗಿದ್ದವು!! ಯಾಕೆಂದರೆ ಮೊಘಲರ ಕ್ರೌರ್ಯದಿಂದಾಗಿ ಭಾರತದಲ್ಲಿ ಮತಾಂತರ ಪ್ರಕ್ರಿಯೆಗಳು ಜಾಸ್ತಿಯಾಯಿತಲ್ಲದೇ ಅದೆಷ್ಟೊ ಸಂಖ್ಯೆಯ ಹಿಂದೂಗಳು ಮತಾಂತರಗೊಂಡಿರುವ ಬಗ್ಗೆ ತಿಳಿದಿದ್ದೇವೆ, ಕೇಳಿದ್ದೇವೆ!! ಆದರೆ ಭಾರತದಿಂದ ಬೇರ್ಪಟ್ಟ ದೇಶಗಳಲ್ಲಿ ಒಂದಾದ ಪಾಕಿಸ್ತಾನವು ಇದೀಗ ಬಲವಂತವಾಗಿ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದಾರೆ ಎಂದರೆ ಮೊಘಲರ ವಂಶಸ್ಥರು ಇನ್ನು ಇದ್ದಾರೆಯೇ ಎನ್ನುವ ಪ್ರಶ್ನೆ ಮೂಡುವುದು ಸಹಜ!!

ಈಗಾಗಲೇ ಮತೀಯ ಗಲಭೆಗೆ ತುತ್ತಾಗಿರುವ ಮ್ಯಾನ್ಮಾರ್ ನ ರಾಖಿನೆ ರಾಜ್ಯದ ಯೆ ಬೌ ಕ್ಯಾ ಎಂಬ ಹಳ್ಳಿಯಲ್ಲಿ ಸುಮಾರು 28 ಹಿಂದೂಗಳನ್ನು ಹತ್ಯೆ ಮಾಡಿರುವ ರೋಹಿಂಗ್ಯ ಮುಸ್ಲಿಮರು ಆ ಶವಗಳನ್ನು ಒಂದೇ ಗುಂಡಿಯಲ್ಲಿ ಹೂತು ಹಾಕಿರುವುದನ್ನು ತಾನು ಪತ್ತೆ ಮಾಡಿರುವುದಾಗಿ ಮ್ಯಾನ್ಮಾರ್ ಸೇನೆ ಪ್ರಕಟಿಸಿತ್ತು!! ಎಲ್ಲಿಂದಲೋ ಬಂದವರು, ಎಲ್ಲೂ ಇಲ್ಲವಾದ ರೋಹಿಂಗ್ಯ ಮುಸ್ಲಿಮರ ವಿರುದ್ಧ ಅಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದಾಗಿ ಕ್ಷುದ್ರಗೊಂಡಿರುವ ರೋಹಿಂಗ್ಯ ಉಗ್ರವಾದಿಗಳು (ಅರಕಾನ್ ರೋಹಿಂಗ್ಯ ಸಾಲ್ವೇಷನ್ ಆರ್ಮಿ – ಎಆರ್ ಎಸ್‍ಎ) ಈ ಹಿಂದೂಗಳನ್ನು ಹತ್ಯೆ ಮಾಡಿದೆ ಎಂದು ಸೇನೆ ಹೇಳಿತ್ತು!!

ಇದಾದ ಕೆಲವೇ ಸಮಯಗಳಲ್ಲಿ ಮ್ಯಾನ್ಮಾರ್ ನಲ್ಲಿ ಹಿಂದೂಗಳನ್ನು ಸಾಮೂಹಿಕವಾಗಿ ಕೊಂದು ಗುಂಡಿತೋಡಿ ಮುಚ್ಚಿರುವುದು ಬೆಳಕಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಭಾರತ ಆಗ್ರಹಿಸಿತ್ತು!! ಅಷ್ಟೇ ಅಲ್ಲದೇ ಕೊಂದು ಮುಚ್ಚಿಹಾಕಿದ್ದ ಎಲ್ಲ ಶವಗಳು ಕೂಡಾ ಹಿಂದೂಗಳದ್ದೆಂದು ಮ್ಯಾನ್ಮಾರ್ ಸ್ಟೇಟ್ ಕೌನ್ಸಿಲರ್ ತಿಳಿಸಿರುವ ಹಿನ್ನೆಲೆಯಲ್ಲಿ ವಿದೇಶ ವಕ್ತಾರ ರವೀಶ್ ಕುಮಾರ್ ಈ ಹೇಳಿಕೆ ನೀಡಿದ್ದರು!! ಈ ಘಟನೆಯ ಕುರಿತ ಪತ್ರಿಕಾ ವರದಿ ಮತ್ತು ಮ್ಯಾನ್ಮಾರ್ ಸರಕಾರದ ಅಧಿಕೃತ ಹೇಳಿಕೆಯ ಆಧಾರದಲ್ಲಿ ಭಾರತ ಪ್ರತಿಕ್ರಿಯಿಸಿ, “ಭಾರತ ಎಲ್ಲ ಕಾಲದಲ್ಲಿಯೂ ಭಯೋತ್ಪಾದನೆಯನ್ನು ಖಂಡಿಸಿದೆ. ಅಷ್ಟೇ ಅಲ್ಲದೇ ಗಲಭೆಯಲ್ಲಿ ಸಾಮಾನ್ಯ ಜನರನ್ನು ಗುರಿಮಾಡುವ ಪ್ರವೃತ್ತಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಈ ಅಪರಾಧ ಕೃತ್ಯವೆಸಗಿದವರನ್ನು ಶಿಕ್ಷಿಸಬೇಕೆಂದು” ಭಾರತ ಆಗ್ರಹಿಸಿತ್ತು!!

ಆದರೆ ಇದೀಗ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 500 ನಿರಾಶ್ರಿತ ಹಿಂದುಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸುವ ಬಗ್ಗೆ ರಿಪಬ್ಲಿಕ್ ಟಿವಿ ವರದಿ ಮಾಡಿದ್ದು, ಪಾಕಿಸ್ತಾನದ ಕುತಂತ್ರ ಬುದ್ದಿ ಮತ್ತೆ ಬಟಾ ಬಯಲಾಗಿದೆ!! ಇಸ್ಲಾಂ ರಾಷ್ಟ್ರದ ಹೆಸರಲ್ಲಿ ಸ್ಥಾಪಿತವಾದ ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಹೀನಾಯವಾಗಿದ್ದು, ನಿರಂತರವಾಗಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯ, ಹಿಂಸೆ, ಹಿಂದೂ ಯುವತಿಯರ ಮೇಲೆ ಮತಾಂತರ ನಿರಂತರವಾಗಿ ನಡೆಯುತ್ತಿವೆ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಮಾ.25 ರಂದು 500 ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ವಿಡಿಯೋ ಒಂದು ಹೊರ ಬಂದಿದ್ದು, ಭಾರತದ ರಾಷ್ಟ್ರೀಯ ವಾಹಿನಿ ಈ ಸ್ಫೋಟಕ ಸುದ್ದಿಯನ್ನು ಬಿಡುಗಡೆ ಮಾಡಿದೆ!!. ಇವರಲ್ಲಿ ಹೆಚ್ಚಿನ ನಿರಾಶ್ರಿತರು ಭಾರತಕ್ಕೆ ವಲಸೆ ಬಂದಿದ್ದರು ಆದರೆ ದೀರ್ಘಾವಧಿ ವೀಸಾ ದೊರೆಯದ ಕಾರಣ ಇವರು ಪಾಕಿಸ್ತಾನಕ್ಕೆ ಮರಳಿದ್ದರು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರ ಆಲ್ ಪಾಕಿಸ್ತಾನಿ ಮುಸ್ಲಿಂ ಲೀಗ್ ಹಿಂದುಗಳ ಬಲವಂತದ ಮತಾಂತರವನ್ನು ಆಯೋಜಿಸಿತ್ತು!! ಈ ಕಾರ್ಯಕ್ರಮದಲ್ಲಿ ಅಮಾಯಕ ಹಿಂದುಗಳಿಗೆ ಹಿಂಸಿಸಿ ಗನ್ ತೋರಿಸಿ ಐನೂರು ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಲಾಗಿದ್ದು, ಈ ಕುರಿತಾದ ವಿಡಿಯೋ ಒಂದನ್ನು ರಿಪಬ್ಲಿಕ್ ಟಿವಿ ವರದಿ ಮಾಡಿದೆ.

ಭಾರತದಲ್ಲಿ ಧೀರ್ಘಾವದಿ ವೀಸಾ ದೊರೆಯದೇ ಪಾಕಿಸ್ತಾನಕ್ಕೆ ಮರಳಿದ್ದ ಬಹುತೇಕ ನಿರಾಶ್ರಿತರು ಪಾಕ್ ಗೆ ಮರಳಿದ್ದರು. ಈ ಸಂದರ್ಭದಲ್ಲಿ ಎಲ್ಲರನ್ನು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಸಮ್ಮುಖದಲ್ಲೇ ಮತಾಂತರ ಮಾಡಲಾಗಿದೆ. ಮುಷರ್ರಫ್ ನೇತೃತ್ವದ ಪಾಕಿಸ್ತಾನದ ಮುಸ್ಲಿಂ ಲೀಗ್ ಹಿಂದೂಗಳನ್ನು ಹೆದರಿಸಿ, ಗನ್ ತೋರಿಸಿ 500 ಹಿಂದೂಗಳನ್ನು ಇಸ್ಲಾಂ ಧರ್ಮವನ್ನು ಒಪ್ಪುವಂತೆ ಮಾಡಿದ್ದಾರೆ ಎಂದರೆ ಅದೂ ನಿಜಕ್ಕೂ ಕೂಡ ಈಡೀ ದೇಶವೇ ಬೆಚ್ಚಿ ಬೀಳುವಂತಹ ವಿಚಾರವಾಗಿದೆ!!

ಒರ್ವ ಪಾಕಿಸ್ತಾನದ ಮಾಜಿ ಅಧ್ಯಕ್ಷನ ನೇತೃತ್ವದಲ್ಲಿಯೇ ಮತಾಂತರ ಪ್ರಕ್ರಿಯೆ ನಡೆದಿರುವುದನ್ನು ಗಮನಿಸಿದರೆ ಪಾಕಿಸ್ತಾನದಲ್ಲಿ ಹಿಂದೂಗಳ ಸ್ಥಿತಿ ಯಾವ ಮಟ್ಟಕ್ಕಿದೆ ಮತ್ತು ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಇದು ಸಾಕ್ಷಿಯಾಗಿ ನಿಂತಿರುವುದಂತೂ ಅಕ್ಷರಶಃ ನಿಜ. ಶೀಘ್ರದಲ್ಲಿ ಪಾಕಿಸ್ತಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಕಾರಣಕ್ಕಾಗಿ ಮುಷರ್ರಫ್ ತನ್ನ ಹಳೇ ಚಾಳಿ ಮುಂದುವರಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಗಾಗಿ ಮುಸ್ಲಿಮರ ಮತ ಸೆಳೆಯಲು ಹಿಂದೂಗಳ ಮೇಲೆ ಧ್ವೇಷ ಸಾಧಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ!!

ಈಗಾಗಲೇ ಲಷ್ಕರೆ ಇ ತೊಯ್ಬಾ ಹಾಗೂ ಜಮಾತ್ ಉದ್ ದಾವಾ ಉಗ್ರ ಸಂಘಟನೆಗಳಿಗೆ ‘ದೇಶ ಭಕ್ತಿ’ ಇದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರು ಉಗ್ರರನ್ನು ಹಾಡಿ ಹೊಗಳಿದ್ದ ವಿಚಾರ ತಿಳಿದೇ ಇದೆ!! ಉಗ್ರರನ್ನು ತಮ್ಮ ಒಡಹುಟ್ಟಿದವರಂತೆ ನೋಡಿಕೊಳ್ಳುತ್ತಿರುವ ಪರ್ವೇಜ್ ಮುಷರ್ರಫ್ ಎಲ್ ಇಟಿ ಮತ್ತು ಜೆಡಿಯುಡಿ ದೇಶ ಭಕ್ತಿಯನ್ನು ಹೊಂದಿದ್ದು, ಪಾಕಿಸ್ತಾನದ ರಕ್ಷಣೆ ಮತ್ತು ಭದ್ರತೆಗಾಗಿ ಅವರೊಂದಿಗೆ ಮೈತ್ರಿಮಾಡಿಕೊಳ್ಳಲು ತಾವು ಸಿದ್ಧ ಎಂದೂ ಹೇಳಿದ್ದರು!! ಹೀಗಿರಬೇಕಾದರೆ ಹಿಂದೂಗಳ ಮೇಲೆ ಅದೆಲ್ಲಿಯ ಕರುಣೆ, ಅದೆಲ್ಲಿಯ ರಕ್ಷಣೆ!! ಎಲ್ಲವೂ ಕೂಡಾ ಹಿಂದೂ ವಿರುದ್ಧದ ಸಂಚೇ ಮುಂಚೂಣಿಯಲ್ಲಿದೆ ಎಂದನಿಸುತ್ತೆ!!

ಈಗಾಗಲೇ ಭಾರತದ ರಾಜತಾಂತ್ರಿಕ ಯಶಸ್ಸಿನಿಂದಾಗಿ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಗೌರವ ಕಳೆದುಕೊಂಡಿದೆ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಹೇಳಿದ್ದರು. ಅಷ್ಟೆ ಅಲ್ಲದೇ “ಜಾಗತಿಕ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಮೋದಿ ಅವರು ಪಾಕಿಸ್ತಾನವನ್ನು ನಿಯಂತ್ರಿಸುತ್ತಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕಿಂದು ಗೌರವವಿಲ್ಲದಂತಾಗಿದೆ, ಪಾಕಿಸ್ತಾನ ಒಬ್ಬಂಟಿಯಾಗಿದೆ” ಎಂದು ಮುಷರ್ರಫ್ ಹೇಳಿದ್ದರು!! ಅಷ್ಟೇ ಅಲ್ಲದೇ ಹಿಂದೂಗಳ ವಿರುದ್ಧದ ಹೇಳಿಕೆಗಳನ್ನು ನೀಡುತ್ತಾ, ಉಗ್ರರನ್ನು ಬೆಂಬಲಿಸುವುದರಲ್ಲಿ ಫೇಮಸ್ ಆಗಿರುವ ಮುಷರ್ರಫ್ ಸಮ್ಮುಖದಲ್ಲಿಯೇ ಇದೀಗ ಹಿಂದೂಗಳನ್ನು ಹೆದರಿಸಿ ಬೆದರಿಸಿ ಮತಾಂತರ ನಡೆದಿದೆ ಎಂದರೆ ಅದೆಂತಹ ಕ್ರೂರ ಇತಿಹಾಸ ಮತ್ತೆ ಮರುಕಳಿಸಿದೆ ಎನ್ನುವ ಪ್ರಶ್ನೆಯೂ ಇದೀಗ ಮೂಡುತ್ತಿದೆ!!

ಒಂದು ಕಡೆ ನರೇಂದ್ರ ಮೋದಿಯವರ ರಾಜತಾಂತ್ರಿಕ ಯಶಸ್ಸಿಗೆ ಹೊಟ್ಟೆ ಕಿಚ್ಚು ಪಟ್ಟಿಕೊಳ್ಳುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಹಿಂದೂಗಳನ್ನು ಕ್ರೂರವಾಗಿ ಹಿಂಸಿಸಿ ಮೊಘಲರು ಬಿಟ್ಟು ಹೋದ ಮತಾಂತರ ಎನ್ನುವ ಅಸ್ತ್ರವನ್ನು ಮುಗ್ಧ ಹಿಂದೂಗಳ ಮೇಲೆ ಪ್ರಯೋಗಿಸಿ ಹೆದರಿಸಿ ಹಿಂಸಿಸುತ್ತಿದ್ದಾರೆ ಎಂದರೆ ಮತ್ತೆ ಮರುಕಳಿಸಿತೇ ಮೊಘಲರ ಅಟ್ಟಹಾಸ ಎನ್ನುವ ಪ್ರಶ್ನೆ ಮೂಡುವುದು ಸಹಜ!! ಒಟ್ಟಿನಲ್ಲಿ ಮೊಘಲರ ಸಂತತಿ ಇನ್ನೂ ಕೂಡ ಹಿಂದೂಗಳನ್ನು ನರಳಿಸುತ್ತಿದ್ದಾರೆ ಎನ್ನುವುದಕ್ಕೆ ಇದುವೇ ಜ್ವಲಂತ ಸಾಕ್ಷಿಯಾಗಿದೆ.

– ಅಲೋಖಾ

Tags

Related Articles

Close