ಪ್ರಚಲಿತ

ಮತಾಂಧರ ವಿರುದ್ಧ ಯೋಗಿ ಬ್ರಹ್ಮಾಸ್ತ್ರ!

ಬಲವಂತದ ಮತಾಂತರ ಇತ್ತೀಚೆಗೆ ಸದ್ದು ಮಾಡುತ್ತಿರುವ, ಈ ದೇಶಕ್ಕೆ ಅಂಟಿದ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕ್ರೈಸ್ತ, ಮುಸಲ್ಮಾನ ಧರ್ಮದ ಕೆಲ ಜನರು ಬಲವಂತ‌ದ ಮತಾಂತರದ ಮೂಲಕ ಹಿಂದೂಗಳನ್ನೇ ಗುರಿಯಾಗಿಸಿ ಧರ್ಮ ಭ್ರಷ್ಟ ಕೆಲಸವನ್ನು ಮಾಡುತ್ತಾರೆ ಎನ್ನುವುದು ದುರಂತ.

ಇಂತದ್ದೇ ಒಂದು ಕೃತ್ಯ‌ದಲ್ಲಿ ತೊಡಗಿದ್ದ ಪಾದ್ರಿಯೊಬ್ಬನನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ರಾಮಪುರದ ಚರ್ಚ್‌ನ ಪಾದ್ರಿಯೊಬ್ಬ ವ್ಯಕ್ತಿಯೋರ್ವನನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದ ಆರೋಪದಲ್ಲಿ ಪೊಲೀಸರ ಅತಿಥಿ‌ಯಾಗಿದ್ದಾನೆ.

ಆರೋಪಿಯನ್ನು ಪೊಲೋ ಮೆಸ್ಸಿಹ್ ಎಂದು ಗುರುತಿಸಲಾಗಿದೆ. ಕಾನೂನು ಬಾಹಿರ ಧರ್ಮ ಪರಿವರ್ತನೆ ಕಾಯ್ದೆಗಳ ಸೆಕ್ಷನ್ ಅಡಿಯಲ್ಲಿ ಈ ಪಾದ್ರಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿಯೋರ್ವರು ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸಿವಿಲ್ ಲೈನ್ಸ್ ನಿವಾಸಿ ಪೊಲೋ ಮೆಸ್ಸಿಹ್ ಎಂಬ ಫಾದರ್ ಬೇರೆ ಸಮುದಾಯದ ಜನರನ್ನು ಒಗ್ಗೂಡಿಸಿ ತನ್ನನ್ನು ಮತಾಂತರ ಮಾಡಲು ಪ್ರಯತ್ನ ನಡೆಸಿದ್ದಾರೆ ದೂರಿನಲ್ಲಿ ಸಂತ್ರಸ್ತರು ಆರೋಪಿಸಿದ್ದಾರೆ. ತಕ್ಷಣ‌ವೇ ಪೊಲೀಸರು ಪಾದ್ರಿ‌ಯನ್ನು ಬಂಧಿಸಲಾಗಿದೆ.

ಒಟ್ಟಿನಲ್ಲಿ ಮತಾಂತರ ಮಾಡುವ ಮೂಲಕ ಹಿಂದೂಗಳ ಸಂಖ್ಯೆ ಕಡಿಮೆ ಮಾಡಲು ಹೊರಟ ಪಾದ್ರಿಗೆ ತಕ್ಷಣವೇ ಸಿಕ್ಕ ಬಂಧನದ ಶಿಕ್ಷೆ, ಹಿಂದೂ ಧರ್ಮಕ್ಕೆ ಸಿಕ್ಕ ಗೆಲುವಾಗಿದೆ. ಇಂತಹ ಮತಾಂಧ ಶಕ್ತಿಗಳಿಗೆ ಶೀಘ್ರ ಶಿಕ್ಷೆಯಾಗುವ ಮೂಲಕ ಧರ್ಮಾಂದ ಕೆಲಸಗಳಿಗೆ ತಕ್ಕ ಶಾಸ್ತಿ ಆಗಬೇಕಿದೆ. ಆ ಮೂಲಕ ಮತಾಂತರಿಗಳಿಗೆ ಶಿಕ್ಷೆ ದೊರೆಯಬೇಕಿದೆ.

Tags

Related Articles

Close