ಪ್ರಚಲಿತ

ಸ್ಫೋಟಕ ಸುದ್ದಿ! ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದು ಹೇಗೆ?! ಅನಾವರಣವಾಯಿತು ರಮ್ಯಾಳ ವೀಡಿಯೋ! ಇದು ನಮ್ಮಲ್ಲೇ ಮೊದಲು!

ರಮ್ಯಾ ಅಂದರೆ ಈಗ ರಾಜ್ಯ ರಾಜಕೀಯದಲ್ಲಿಯೇ ಅತ್ಯಂತ ಕೆಳ ಮಟ್ಟದಲ್ಲಿ ಗುರುತಿಸಬಹುದಾದ ವ್ಯಕ್ತಿಯಾಗಿದ್ದಾರೆ ಎಂಬುವುದು ಜಗಜ್ಜಾಹೀರಾಗಿತ್ತು. ಪ್ರಧಾನಿ ಮೋದಿ ಆದಿತ್ಯವಾರ ಕರ್ನಾಟಕಕ್ಕೆ ಭೇಟಿ ನೀಡಿ ಲಕ್ಷ ಲಕ್ಷ ಜನ ಸಂಖ್ಯೆಯ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದ್ದರು. ಮೋದಿ ಸಮಾವೇಶ ಮುಗಿಸಿ ವಾಪಾಸ್ ತಿರುಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ ಎಲ್ಲರಿಗಿಂತ ತಾನು ಭಿನ್ನವಾಗಿರಬೇಕೆಂಬ ಹಠಕ್ಕೆ ಬಿದ್ದ ಮಾಜಿ ಸಂಸದೆ ಕಮ್ ಪಾರ್ಟ್ ಟೈಮ್ ಪೊಲಿಟಿಷಿಯನ್ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕೆಳಮಟ್ಟದ ಪ್ರಚಾರವನ್ನು ಮಾಡಿ ಭಾರೀ ಸುದ್ಧಿಯಾಗಿದ್ದರು. ಆದಿತ್ಯವಾರವಾಗಿದ್ದರಿಂದ ಪಾರ್ಟಿಯಲ್ಲಿ ಮುಳುಗಿದ್ದ ರಮ್ಯಾ, ಕುಡಿತದ ಅಮಲು ಏರಿಸಿಕೊಂಡು ಮೋದಿ ಬಗ್ಗೆ ವಾಚಾಮ ಗೋಚರವಾಗಿ ನಿಂದಿಸಿದ್ದರು. ಪ್ರಧಾನಿ ಮೋದಿ ನಶೆಯೇರಿಸಿ ಮಾತನಾಡುತ್ತಿದ್ದಾರೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡಿ ಸ್ವಪಕ್ಷದವರಿಂದಲೇ ಭಾರೀ ಟೀಕೆಗೆ ಗುರಿಯಾಗಿದ್ದರು.

ಸುಳ್ಳು ಪಾಠ ಮಾಡಿದ ನಟಿ ಮಣಿ…!!!

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ಧಿ ಮಾಡಿದ್ದ ರಮ್ಯಾ ಇದೀಗ ಅದೇ ಸಾಮಾಜಿಕ ಜಾಲತಾಣಗಳ ಕಾಂಗ್ರೆಸ್‍ನ ಜವಬ್ಧಾರಿಯನ್ನು ವಹಿಸಿಕೊಂಡು ಫೇಕ್ ಫೇಸ್‍ಗಳನ್ನು ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಬೇಕೆಂದು ಈಗಾಗಲೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಆದೇಶವನ್ನು ನೀಡಿದ್ದಾರೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ರಮ್ಯಾ ಸಮಾಜ ಘಾತುಕ ಕೆಲಸಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲದೆ. ತಾನು ವಹಿಸಿಕೊಂಡ ಸಾಮಾಜಿಕ ಜಾಲತಾಣದ ಜವಬ್ಧಾರಿಯನ್ನು ನಿರ್ವಹಿಸಲು ಹೋಗಿ ಭಾರೀ ಪ್ರಮಾದವನ್ನೇ ನಡೆಸಿದ್ದಾರೆ. ಈ ಮೂಲಕ ತಾನು ಪ್ರತಿನಿದಿಸುತ್ತಿರುವ ಕಾಂಗ್ರೆಸ್ ಪಕ್ಷದ ನಿಜಮುಖವನ್ನು ಪ್ರದರ್ಶಿಸಿದ್ದಾರೆ.

ಕಳೆದ ವಾರ ತಾನೇ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಕಾರ್ಯಾಗಾರದಲ್ಲಿ ರಮ್ಯಾ ಉಪದೇಶ ಭಾರೀ ವಿವಾದವನ್ನೇ ಸೃಷ್ಟಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಸಾಮಾಜಿಕ ಜಾಲತಾಣದ ಹೊಣೆ ಹೊತ್ತಿರುವ ರಮ್ಯಾ ಕಾರ್ಯಕರ್ತರಿಗೆ ನಕಲಿಗಳ ಉಪದೇಶ ಮಾಡಿ ದೇಶದ್ರೋಹ ಹಾಗೂ ಕರ್ತವ್ಯದ್ರೋಹವನ್ನು ಮೆರೆದಿದ್ದಾರೆ.

ಕಳೆದ ವಾರ ನಡೆದ ರಾಜ್ಯ ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ, “ನೀವೆಲ್ಲರೂ ನಕಲಿ ಫೇಸ್‍ಬುಕ್ ಅಕೌಂಟ್‍ಗಳನ್ನು ರಚಿಸಬೇಕು.
ಪ್ರತಿಯೋರ್ವರ ಬಳಿಯೂ 2-3ಕ್ಕಿಂತ ಹೆಚ್ಚು ಫೇಕ್ ಅಕೌಂಟ್‍ಗಳು ಇರಬೇಕು. ತಮ್ಮ ಹೆಸರಿನಲ್ಲಿ ಪ್ರತಿಯೊಬ್ಬರ ಬಳಿಯೂ ಫೇಸ್‍ಬುಕ್‍ನ ಖಾತೆಗಳು ಇರುತ್ತದೆ. ಆದರೆ ನೀವು ನಿಮ್ಮ ಮನೆಯವರ, ಪಕ್ಕದ ಮನೆಯವರ, ಸ್ನೇಹಿತರ ಹಾಗೂ ಗ್ರಾಮದ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಬೇಕು. ಅದರಲ್ಲಿ ರಾಜ್ಯ ಕಾಂಗ್ರೆಸ್ ಪರ ಪ್ರಚಾರ ಮಾಡಬೇಕು” ಎಂದು ಉಪದೇಶ ನೀಡಿದ್ದಾರೆ.

ನನ್ನಲ್ಲೂ ಇದೆ ನಕಲಿ ಖಾತೆ..!!!

ರಮ್ಯಾರ ಬಾಯಿಯಿಂದ ಇಂತಹ ಅಮೃತ ವಚನಗಳು ಅದ್ಯಾವಾಗ ಉದುರಿತ್ತೋ ಆವಾಗ ಸ್ವತಃ ಕಾಂಗ್ರೆಸ್‍ನ ಕಾರ್ಯಕರ್ತರೇ ಬೆಚ್ಚಿಬಿದ್ದಿದ್ದರು. ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಗೇ ಇದು ಸಹ್ಯವೆನಿಸಲ್ಲ. ಹೀಗಾಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ರಮ್ಯಾರ ಬಳಿ ಪ್ರಶ್ನೆಯೊಂದನ್ನು ಕೇಳುತ್ತಾನೆ. “ಮೇಡಂ ಇದು ನಾವು ಮಾಡುವ ತಪ್ಪಲ್ಲವೇ? ಹೀಗೆ ಮನಾಡುವುದು ಎಷ್ಟು ಸರಿ?” ಎಂದು ಪ್ರಶ್ನಿಸುತ್ತಾನೆ. ಆದರೆ ಇದಕ್ಕೆ ಉತ್ತರಿಸಿದ್ದ ರಮ್ಯಾ ಮೇಡಂ “ಅದರಲ್ಲಿ ತಪ್ಪೇನಿದೆ. ಫೇಸ್ ಬುಕ್ ಸಹಿತ ಯಾವುದೇ ಸಾಮಾಜಿಕ ಜಾಲತಾಣಗಳ ಖಾತೆಯನ್ನು ನಕಲಿಯಾಗಿ ಸೃಷ್ಟಿಸುವುದು ತಪ್ಪಲ್ಲ. ಅದು ನಮ್ಮ ಚುನಾವಣಾ ಗಿಮಿಕ್. ತಪ್ಪು ಹೇಗಾಗುತ್ತೆ? ನನ್ನಲ್ಲೂ ಹಲವಾರು ನಕಲಿ ಖಾತೆಗಳು ಇದೆ. ನನ್ನ ಒಂದು ಖಾತೆ ದಿವ್ಯ ಸ್ಪಂದನ ರಮ್ಯಾ ಅಂತ ಇದ್ದರೆ ಮತ್ತೆ ಕೆಲವು ನಕ;ಲಿ ಖಾತೆಗಳು ಇವೆ. ಅದರಲ್ಲಿ ತಪ್ಪು ಅನ್ನುವ ವಿಚಾರವೇ ಬರೋದಿಲ್ಲ” ಎಂದು ಹೇಳಿಕೊಂಡಿದ್ದಾರೆ.

ಬಹಿರಂಗವಾಗಿದೆ ವೀಡಿಯೋ..!

ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಿದ್ದ ಉಪದೇಶದ ವೀಡಿಯೋ ಒಂದು ಬಹಿರಂಗವಾಗಿದೆ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೇ ಈ ವೀಡಿಯೋವನ್ನು ಬಿಡುಗಡೆಗೊಳಿಸಿ ರಮ್ಯಾರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ರಮ್ಯಾ ಮಾಡಿದ್ದು ತಪ್ಪು ಇದು ಒಳ್ಳೆಯದಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದು ಈ ವೀಡಿಯೋವನ್ನು ನೀಡಿದ್ದಾರೆ. ನಮ್ಮ ಪೋಸ್ಟ್ ಕಾರ್ಡ್ ಮಾಧ್ಯಮಕ್ಕೆ ಕರೆ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನಮಗೆ ಈ ವೀಡಿಯೋ ನೀಡಿದ್ದಾರೆ.

ಒಟ್ಟಾರೆ ಕಾಂಗ್ರೆಸ್ ಒಳಜಗಳ ಬೀದಿಗೆ ಬಂದಿದ್ದು ಮೋದಿ ವಿರುದ್ಧ ಬೊಬ್ಬೆ ಬಿಟ್ಟ ರಮ್ಯಾರ ಅಸಲಿಯತ್ತು ಈಗ ಬಹಿರಂಗವಾಗಿದೆ. ಸಮಾಜಕ್ಕೆ ಪಾಠ ಮಾಡಬೇಕಾದ ರಮ್ಯಾನೇ ಹೀಗೆ ಮಾಡಿದ್ರೆ ಇನ್ನು ಸಾಮಾನ್ಯ ಕಾರ್ಯಕರ್ತರು ಹೇಗೆ ಎಂಬ ಪ್ರಶ್ನೆ ಮೂಡುತ್ತದೆ.

ಕಾಂಗ್ರೆಸ್ ಒಳಜಗಳ ಬಹಿರಂಗ..!!!

ನಮ್ಮ ಪೋಸ್ಟ್ ಕಾರ್ಡ್ ಮಾಧ್ಯಮ ಸಂಸ್ಥೆಗೆ ಕರೆ ಮಾಡಿ ವೀಡಿಯೋ ನೀಡಿ ಮಾಹಿತಿ ನೀಡಿದ ಸಾಮಾಜಿಕ ಜಾಲತಾಣದ ಕಾರ್ಯಗಾರದಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತನೋರ್ವ ಕಾಂಗ್ರೆಸ್ ಪಕ್ಷದಲ್ಲಿ ನಡೆದ ಒಳಜಗಳವನ್ನು ಬಹಿರಂಗಪಡಿಸಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಅಂಬರೀಶ್, ಡಿಕೆ ಶಿವಕುಮಾರ್ ಸಹಿತ ಯಾವೊಬ್ಬನಿಗೂ ರಮ್ಯಾ ಕಂಡರೆ ಆಗೋದಿಲ್ಲ. ಆದರೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಮ್ಯಾ ಬೆಂಬಲಕ್ಕೆ ನಿಂತಿದ್ದರಿಂದ ಕಾಂಗ್ರೆಸ್ ನಾಯಕರಿಗೆ ಇರಿಸು ಮುರಿಸು ಉಂಟಾಗಿದೆ ಎಂದಿದ್ದಾರೆ. ಮಾತ್ರವಲ್ಲದೆ ಇತ್ತೀಚೆಗೆ ಪ್ರಧಾನಿ ಮೋದಿಯವರ ಬಗ್ಗೆ ರಮ್ಯಾ ಟ್ವೀಟ್ ಮಾಡಿದ ದಿನ ರಮ್ಯಾ ಪಾರ್ಟಿಯೊಂದರಲ್ಲಿ ಚೆನ್ನಾಗಿ ಕುಡಿದು ಬಂದಿದ್ದರು. ಸ್ವತಃ ಕಾಂಗ್ರೆಸ್ ಕಾರ್ಯಕರ್ತರೊಂದಿಗೇ ಜಗಳ ಮಾಡಿಕೊಖಂಡಿದ್ದರು. ಇದರಿಂದ ಬೇಸತ್ತು ಹಲವರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್‍ನಿಂದ ದೂರವಾಗಿದ್ದಾರೆ ಎಂದು ಆವರು ಹೇಳಿಕೊಂಡಿದ್ದಾರೆ.

ಹಲವಾರು ದಿನಗಳಿಂದ ಮುಸುಕಿನ ಗುದ್ದಾಟದಿಂದಲೇ ಸುದ್ಧಿಯಾಗುತ್ತಿದ್ದ ಕಾಂಗ್ರೆಸ್ ಪಕ್ಷದ ಒಳಜಗಳ ಇದೀಗ ಬಹಿರಂಗವಾಗಿದೆ. “ಕಾಂಗ್ರೆಸ್‍ನಲ್ಲಿ ತಾನೇ ಎಲ್ಲಾ. ತನಗೆ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಸಂಪೂರ್ಣ ಬೆಂಬಲ ಇದೆ” ಎಂದು ಕೊಚ್ಚಿಕೊಳ್ಳುತ್ತಿದ್ದ ಮಾಜಿ ಸಂಸದೆ ರಮ್ಯಾ ಈಗ ಅಕ್ಷರಷಃ ಪೇಚಿಗೆ ಸಿಲುಕಿದ್ದಾರೆ. ಈ ಬಾರಿ ಕಾಂಗ್ರೆಸ್‍ನ ನಾಯಕರಿಗೆ ರಮ್ಯಾ ವಿರುದ್ಧ ಭಾರೀ ಅಸ್ತ್ರವೊಂದು ಸಿಕ್ಕಿದ್ದು ಸಮರ್ಥವಾಗಿ ಉಪಯೋಗಿಸಿಕೊಂಡು ರಮ್ಯಾರನ್ನು ದೂವಿಡುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

-ಸುನಿಲ್ ಪಣಪಿಲ

Tags

Related Articles

Close