ಸಿನಿಮಾದಲ್ಲಿ ನಟನೆ ಮಾಡಿ ಈ ಪುಣ್ಯಾತ್ಮನಿಗೆ ನಿಜ ಜೀವನದಲ್ಲೂ ನಟನೆಯೇ ಪರಿಪಾಠವಾಗಿ ಹೋಗಿದೆ. ಒಂದು ಕಡೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮನಬಂದಂತೆ ನಿಂದಿಸಿದರೆ ಮತ್ತೊಮ್ಮೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ವಾಚಾಮಗೋಚರವಾಗಿ ನಿಂದಿಸುತ್ತಾನೆ. ಆದರೆ ಏನೇ ಹೇಳಿದರೂ ಭಾರತೀಯ ಜನತಾ ಪಕ್ಷಕ್ಕೆ ಓಟ್ ಹಾಕಬೇಡಿ ಎಂದು ಹೇಳಲು ಮಾತ್ರ ಮರೆಯೋದಿಲ್ಲ. ಆದರೆ ಇದೀಗ ಪ್ರಕಾಶ್ ರೈ ತನ್ನ ವರಸೆಯನ್ನು ಸಣ್ಣ ಮಟ್ಟಿಗೆ ನಾಟಕೀಯ ರೂಪದಲ್ಲಿ ಬದಲಾಯಿಸಿಕೊಂಡಿದ್ದಾನೆ.
ಸಿಎಂ ಸಿದ್ದರಾಮಯ್ಯನಿಗೆ ಓಟ್ ಹಾಕಬೇಡಿ..!
ತನಗೆ ಪ್ರಶಸ್ತಿ ಹಾಗೂ ಸೈಟ್ ನೀಡಿದ್ದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೇ ಇದೀಗ ಪ್ರಕಾಶ್ ರೈ ಓಟ್ ಹಾಕಬೇಡಿ ಎಂದು ಹೇಳಿದ್ದಾನೆ. ಮಾಧ್ಯಮದವರ ಪ್ರಶ್ನೆಗೆ ಗಲಿಬಿಲಿಗೊಂಡ ಪ್ರಕಾಶ್ ರೈ ಈ ಹೇಳಿಕೆಯನ್ನು ನೀಡಿದ್ದಾನೆ. ಸದಾ ಭಾರತೀಯ ಜನತಾ ಪಕ್ಷವನ್ನು ನಿಂದಿಸುತ್ತೀರಾ. ಭಾರತೀಯ ಜನತಾ ಪಕ್ಷದವರು ಹಿಂದುತ್ವದ ಆಧಾರದ ಮೇಲೆ ಓಟ್ ಕೇಳುತ್ತಾರೆ ಎಂದು ಆರೋಪಿಸುತ್ತೀರಾ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ರಾಜಕೀಯ ಮಾಡುತ್ತಿಲ್ವೇ? ಇದಕ್ಕೆ ನಿಮ್ಮ ಉತ್ತರವೇನು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಕಾಶ್ ರೈಯನ್ನು ಝಾಡಿಸಿದ್ದರು. ಇದಕ್ಕೆ ಸಮರ್ಥನೆ ನೀಡಿದ್ದ ಪ್ರಕಾಶ್ ರೈ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಖತ್ ಐಡಿಯಾವನ್ನೇ ಮಾಡಿಕೊಂಡಿದ್ದಾನೆ.
“ಮುಖ್ಯಮಂತ್ರಿ ಸಿದ್ದರಾಮಯ್ಯ ಓರ್ವ ಜಾತಿವಾದಿ ಅಂತ ನನಗೆ ತಿಳಿದಿದೆ. ನಿಮಗೆ ಆತ ಜಾತಿವಾದಿ ಅಂತ ತಿಳಿದರೆ ಆವಯ್ಯನಿಗೆ ಓಟ್ ಹಾಕಬೇಡಿ. ಜಾತಿ ಆಧಾರದ ಮೇಲೆ ಓಟ್ ಕೇಳೋರನ್ನು ಸೋಲಿಸಿಬಿಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ನಡೆಸುವಾಗಲೂ ಜಾತಿ ರಾಜಕಾರಣ ಮಾಡಿದ್ದಾರೆ. ಹೀಗಾಗಿ ಅವರಿಗೆ ಓಟ್ ಹಾಕಬೇಡಿ” ಎಂದು ಹೇಳಿಕೊಂಡಿದ್ದಾನೆ.
2 ಕ್ಷೇತ್ರಕ್ಕೂ ಪ್ರಕಾಶ ರೈ ಲೇವಡಿ..!
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯಿಂದ 2 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡ ಬಗ್ಗೆಯೂ ನಟ ಪ್ರಕಾಶ್ ರೈ ಲೇವಡಿ ಮಾಡಿಕೊಂಡಿದ್ದಾನೆ. “ಆವಯ್ಯನಿಗೆ ಒಂದು ಕ್ಷೇತ್ರದಲ್ಲಿ ನಿಂತು ಗೆಲ್ಲೋಕ್ಕಾಗ್ತಿಲ್ವೇ..? ಮತ್ತೊಂದು ಕ್ಷೇತ್ರಕ್ಕೆ ಯಾಕೆ ಓಡಿ ಹೋಗ್ತಾನೆ..? ಇಲ್ಲೇ ನಿಂತು ಸ್ಪರ್ಧಿಸಬಹುದಿತ್ತಲ್ವಾ? ಯಾಕ್ ಓಡಿ ಹೋಗ್ಬೇಕು? ಜಾತಿ ಲೆಕ್ಕಾಚಾರದಲ್ಲಿ ಓಡಿ ಹೋಗಿದ್ದಾರೆ ಅಷ್ಟೇ. ಬಾದಾಮಿಯಲ್ಲಿ ಕುರುಬರು ಹೆಚ್ಚಾಗಿದ್ದಾರೆಂದು ಓಡಿ ಹೋಗಿದ್ದಾರೆ ಅಲ್ವಾ..? ಇಂತವರಿಗೆ ಓಟ್ ಹಾಕಬೇಡಿ” ಎಂದು ಲೇವಡಿ ಮಾಡಿದ್ದಾನೆ.
ಬೀಸೋ ದೊಣ್ಣೆಯಿಂದ ತಪ್ಪಿಸುತ್ತಿರುವ ಪ್ರಕಾಶ್ ರೈ..!
ಅಕ್ಷರಶಃ ಪ್ರಕಾಶ್ ರೈ ಇದೀಗ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ತಾ ಇರೋದು ಸ್ಪಷ್ಟವಾಗುತ್ತಿದೆ. ಈವರೆಗೂ ಪ್ರಧಾನಿ ಮೋದಿ ಹಾಗೂ ಭಾರತೀಯ ಜನತಾ ಪಕ್ಷವನ್ನು ಟೀಕಿಸಿ ಆ ಪಕ್ಷಕ್ಕೆ ಓಟ್ ಹಾಕಬೇಡಿ ಎನ್ನುತ್ತಿದ್ದ ಈ ಖಳನಟ ಇದೀಗ ತನ್ನ ವರಸೆಯನ್ನು ಸಣ್ಣ ಮಟ್ಟಿಗೆ ಬದಲಾವಣೆ ಮಾಡಿಕೊಂಡು ನಾಟಕ ಶುರುವಿಟ್ಟುಕೊಂಡಿದ್ದಾನೆ. ಸದಾ ಭಾರತೀಯ ಜನತಾ ಪಕ್ಷವನ್ನು ಟೀಕಿಸಿ ಅದಕ್ಕೆ ಓಟ್ ಹಾಕಬೇಡಿ ಎನ್ನುತ್ತಿದ್ದ ಪ್ರಕಾಶ್ ರೈಗೆ ಕಾಂಗ್ರೆಸ್ ಏಜೆಂಟ್ ಎಂಬ ಪಟ್ಟವನ್ನು ಜನತೆ ಕಟ್ಟಿದ್ದರು. ಈ ಕಾರಣಕ್ಕಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ಲಾನ್ನ್ನು ಪ್ರಕಾಶ್ ರೈ ಮಾಡಿಕೊಂಡಿದ್ದಾನೆ.
ಈ ಬಾರಿ ಭಾರತೀಯ ಜನತಾ ಪಕ್ಷ ಅಧಿಕಾರ ಬರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದೆ. ಈ ಕಾರಣಕ್ಕಾಗಿಯೇ ಪ್ರಕಾಶ್ ರೈ ತನ್ನ ವರಸೆಯನ್ನು ಸಣ್ಣ ಮಟ್ಟಿಗೆ ಬದಲಾಯಿಸಿಕೊಂಡಿದ್ದಾನೆ. ಪ್ರಧಾನಿ ಮೋದಿಗೆ ಬಾಯಿಗೆ ಬಂದ ಹಾಗೆ ನಿಂದಿಸಿ ಮೈ ಪರಚಿಕೊಳ್ಳುತ್ತಿದ್ದ ಈತ ಇದೀಗ ಮೆಲ್ಲಗೆ ಸಿಎಂ ಮೇಲೆ ಬಾಣವನ್ನು ಬಿಟ್ಟು ತಾನು ಕಾಂಗ್ರೆಸ್ ಏಜೆಂಟ್ ಅಲ್ಲ ಎಂಬುವುದನ್ನು ಜನೆತೆಯ ಮುಂದೆ ಬಿಂಬಿಸಲು ಪ್ರಯತ್ನ ಪಡುತ್ತಿದ್ದಾನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಿರೋಧಿಸಿದರೂ ಪ್ರಕಾಶ್ ರೈ ಬಂಡವಾಳ ಏನು ಎಂಬುವುದು ಜನತೆಗೆ ಗೊತ್ತಿಲ್ಲದೇನಲ್ಲ…
ಕೃಪೆ: ಪಬ್ಲಿಕ್ ಟಿವಿ
-ಸುನಿಲ್ ಪಣಪಿಲ