ಪ್ರಚಲಿತ

ಸಿದ್ದರಾಮಯ್ಯನವರಿಗೆ ಮತ್ತೊಂದು ಶಾಕ್!! ಈ ಬಾರಿ ವಂಚನೆ ಆರೋಪ ಹೊತ್ತಿರುವ ಈ ಕಾಂಗ್ರೆಸ್ ಮುಖಂಡ ಯಾರು ಗೊತ್ತಾ?!

ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಿದ್ದರಾಮಯ್ಯ ಸರಕಾರಕ್ಕೆ ಒಂದಲ್ಲ ಒಂದು ವಿಷಯದಲ್ಲಿ ಎಡವಟ್ಟು ಮಾಡಿಕೊಂಡೇ ಬರುತ್ತಿದ್ದಾರೆ.. ಇಲ್ಲಿಯವರೆಗೆ ತಾನು ಮಾಡಿದ ತಪ್ಪನ್ನೆಲ್ಲಾ ಬೇರೆಯವರ ಮೇಲೆ ಹೊರಿಸುವುದು ಇವರಿಗೆ ಖಯಾಲಿಯಾಗಿತ್ತು.. ಆದರೆ ಇದೀಗ ಕಾಂಗ್ರೆಸ್ ಮಾಡಿದ ಒಂದೊಂದೇ ಹಗರಣಗಳು ಒಂದರ ಮೇಲೊಂದರಂತೆ ಒಂದೊಂದೇ ಹೊರ ಬೀಳುತ್ತಿದೆ.. ಈ ದಿನ ಬೆಳಗಾದರೆ ಸಾಕು ಕಾಂಗ್ರೆಸ್ ಸರಕಾರದವರು ಮಾಡಿರುವ ಒಂದೊಂದೇ ಘನಾಂಧಾರಿ ಕೆಲಸಗಳು ಹೊರಬೀಳುತ್ತಿವೆ!! ಈ ಬಾರಿ ವಂಚನೆ ಆರೋಪ ಹೊತ್ತಿರುವ ಕಾಂಗ್ರೆಸ್ ಸಚಿವ ಯಾರು ಗೊತ್ತಾ?!

ಸಿಂಡಿಕೇಟ್ ಬ್ಯಾಂಕ್‍ಗೆ 193 ಕೋಟಿ ವಂಚನೆ:

ಈ ಕಾಂಗ್ರೆಸ್ ಸರಕಾರದ ಹಣೆಬರಹವೇ ಇಷ್ಟು!! ಕೋಟಿ ಕೋಟಿ ಹಣವನ್ನು ವಂಚನೆ ಮಾಡುವುದು.. ಕಾಂಗ್ರೆಸ್‍ನ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ದೂರು ದಾಖಲಾಗಿದೆ!! ಸಿಡಿಕೇಟ್ ಬ್ಯಾಂಕ್‍ಗೆ 193 ಕೋಟಿ ವಂಚನೆಯ ಆರೋಪದ ಮೇರೆಗೆ ದೂರು ದಾಖಲಾಗಿದೆ….

ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಕೇವಲ 1.01 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕಡಿಮೆ ಮೊತ್ತದ ದಾಖಲೆ ನೀಡಿ ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ ಎಂದು ದೆಹಲಿಯಲ್ಲಿರುವ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಆರ್ಟಿಐ ಕಾರ್ಯಕರ್ತ ಟಿ ಜೆ ಆಬ್ರಹಂ ದೂರು ನೀಡಿದ್ದಾರೆ. ವಂಚನೆ ಆರೋಪದಲ್ಲಿ ಬ್ಯಾಂಕ್ ಸಿಬ್ಬಂಧಿಗಳೂ ಶಾಮೀಲಾಗಿರುವ ಅನುಮಾನವಿದೆ.

ಒಂದಾದ ಮೇಲೆ ಒಂದರಂತೆ ಸಿದ್ದರಾಮಯ್ಯ ಸರಕಾರಕ್ಕೆ ಶಾಕ್‍ಗಳನ್ನು ನೀಡುತ್ತಿದೆ ಅಂತಾನೇ ಹೇಳಬಹುದು… ಹಗರಣ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ 1, ಗೂಂಡಾಗಿರಿ ಮಾಡುವುದರಲ್ಲಿ ಸಿದ್ದರಾಮಯ್ಯ ಸರಕಾರ ನಂ1 ಭ್ರಷ್ಟಾಚಾರ ಮಾಡುವುದರಲ್ಲೂ ನಂ 1 ಹೀಗಾಗಿ ಇಂತಹ ಚಟುವಟಿಕೆಗಳು ಬಿಟ್ಟು ದೇಶದ ಉದ್ಧಾರ ಮಾಡುವುದರಲ್ಲಿ ಮಾತ್ರ ಸಿದ್ದರಾಮಯ್ಯ ಸರಕಾರ ಯಾವಾಗಲೂ ಹಿಂದೆ!! ಈ ಬಾರಿ ಒಂದರ ಮೇಲೆ ಒಂದರಂತೆ ಸಿದ್ದರಾಮಯ್ಯ ಸರಕಾರಕ್ಕೆ ಶಾಕ್ ಕೊಟ್ಟಿರುವುದು ವಿಪರ್ಯಾಸವೇ ಸರಿ!!

ಪವಿತ್ರ

Tags

Related Articles

Close