ಪ್ರಚಲಿತ

ಬ್ರೇಕಿಂಗ್: ಘೋಷಣೆಯಾಯ್ತು ಬಿಜೆಪಿ ಅಂತಿಮ ಪಟ್ಟಿ.! ಕೊನೆಯಲ್ಲಿ ಕಮಲ ಹಿಡಿದವರಾರು ಗೊತ್ತಾ?

ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆ ಎಲ್ಲಾ ಪಕ್ಷಗಳ ಪ್ರಚಾರವೂ ಭರ್ಜರಿಯಾಗಿ ನಡೆದಿತ್ತು. ಟಿಕೆಟ್ ಆಕಾಂಕ್ಷೆಗಳ ಪಟ್ಟಿ ಬಹಳ ದೊಡ್ಡದಾಗಿದ್ದರೂ ರಾಷ್ಟ್ರೀಯ ರಾಷ್ಟ್ರೀಯ ನಾಯಕರ ಸರ್ವೆಯ ಪ್ರಕಾರವೇ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ನೀಡಲಾಗಿದೆ. ಬಿಜೆಪಿ , ಕಾಂಗ್ರೆಸ್, ಜೆಡಿಎಸ್ ನಿಂದ ಈಗಾಗಲೇ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದ್ದು, ಕೆಲವೊಂದು ಕ್ಷೇತ್ರಗಳ ಹೆಸರನ್ನು ಕಾಯ್ದಿರಿಸಿದ್ದರು. ಈ ಮ‌ೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದದರು ಪಕ್ಷದ ಹಿರಿಯರು. ಆದರೆ ಇದೀಗ ಬಿಜೆಪಿಯ ಅಂತಿಮ ಪಟ್ಟಿಯೂ ಬಿಡುಗಡೆಯಾಗಿದ್ದು, ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.!

ಬಿಜೆಪಿ ಕೊನೆಯ ಪಟ್ಟಿಯಲ್ಲಿ ನವರಸ ನಾಯಕನಿಗೆ ಮಣೆ..!

ಕನ್ನಡ ಚಿತ್ರರಂಗದ ನವರಸ ನಾಯಕ ಜಗ್ಗೇಶ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ‌. ಸದಾ ಹಿಂದೂ ಕಾರ್ಯಕರ್ತರ ಪರ, ಬಿಜೆಪಿಯ ಪರ ಮಾತನಾಡುತ್ತಾ , ಹಿಂದೂ ವಿರೋಧಿಗಳಿಗೆ ತನ್ನ ಮಾತಿನ ಮೂಲಕವೇ ಛಾಟಿ ಏಟು ನೀಡುತ್ತಾ ಬಂದಿರುವ ಜಗ್ಗೇಶ್ ಗೆ ಬಿಜೆಪಿ ಮಣೆ ಹಾಕಿದೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಜಗ್ಗೇಶ್ ಸ್ಪರ್ಧಿಸಲಿದ್ದಾರೆ. ಇಂದು ಪ್ರಕಟಗೊಂಡ ಬಿಜೆಪಿಯ ಅಂತಿಮ ಸುತ್ತಿನ ಪಟ್ಟಿಯಲ್ಲಿ ಜಗ್ಗೇಶ್ ಹೆಸರ ಘೋಷಣೆಯಾಗಿದ್ದು, ಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಹುರುಪು ಕಂಡುಬಂದಿದೆ.

ಯಾರಿಗೆ ದಕ್ಕಿತು ಬಿಜೆಪಿ ಟಿಕೆಟ್..!

ಈಗಾಗಲೇ ೩ ಸುತ್ತಿನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಬಿಜೆಪಿ, ಇಂದು ಅಂತಿಮ ಹಂತದ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು ೧೧ ಕ್ಷೇತ್ರಗಳ ಹೆಸರನ್ನು ಕಾಯ್ದಿರಿಸಿದ್ದ ಬಿಜೆಪಿ ಇಂದು ೭ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

 

Tags

Related Articles

Close