ಪ್ರಚಲಿತ

ಆದಿವಾಸಿಗಳ ಮೇಲೆ ನಡೆದ ಕ್ರೈಸ್ತ ಮಿಷನರಿಗಳ ದಾಳಿಗೆ ಶಿಕ್ಷೆ ಇಲ್ಲವೇ?

ನಮ್ಮ ಸನಾತನ ಹಿಂದೂ ಧರ್ಮಕ್ಕೆ ಮತಾಂತರದ ಕರಿನೆರಳು ಬಿದ್ದಿದೆ. ಒಂದು ಕಡೆಯಿಂದ ಇಸ್ಲಾಂ, ಮತ್ತೊಂದು ಕಡೆಯಿಂದ ಕ್ರೈಸ್ತ ಧರ್ಮದ ಮತಾಂತರದ ಉಪಟಳ ಹೆಚ್ಚಾಗಿದೆ. ಮತಾಂತರಕ್ಕೆ ತುತ್ತಾಗಿ ಬದುಕು ಕಳೆದುಕೊಂಡವರ ಕಥೆ ಮನಕಲಕುವಂತಿರುತ್ತದೆ.

ಸ್ವ ಇಚ್ಛೆಯಿಂದ ಮತಾಂತರ ಆದರೆ ಅದು ಅವರಿಷ್ಟ. ಆದರೆ ಯಾರನ್ನೋ ಬಲವಂತವಾಗಿ ಇನ್ನೊಂದು ಮತಕ್ಕೆ ಮತಾಂತರ ಮಾಡುವ ಕೃತ್ಯ ಗಂಭೀರ ಮತ್ತು ಖಂಡಿಸಲೇ ಬೇಕಾದ ವಿಷಯ.

ಅಂದ ಹಾಗೆ ಈ ಘಟನೆ ನಡೆದಿರುವುದು ಛತ್ತೀಸ್‍ಘಡ್‌ನ ನಾರಾಯಣಪುರದಲ್ಲಿ. ಆದಿವಾಸಿಗಳನ್ನು ಮತಾಂತರ ಮಾಡಲು ಕಾರ್ಯಾಚರಣೆ ನಡೆಸುತ್ತಿರುವ ಕ್ರೈಸ್ತ ಮಿಷನರಿಗಳು, ಅವರು ಮತ ಬದಲಾಯಿಸಿಕೊಳ್ಳಲು ಒಪ್ಪದೇ ಇದ್ದಾಗ ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತಿದೆ. ಮಿಷನರಿಗಳ ಈ ಪೈಶಾಚಿಕ ಕೃತ್ಯದ ವಿರುದ್ಧ, ಮತಾಂತರದ ವಿರುದ್ಧ ಸಂತ್ರಸ್ಥ ಆದಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕ್ರೈಸ್ತ ಧರ್ಮದ ಪ್ರಚಾರಕರ ವಿರುದ್ಧ ಈ ಆದಿವಾಸಿಗಳು ಕೆರಳಿದ್ದು, ಅವರನ್ನು ವಿರೋಧಿಸುತ್ತಿದ್ದಾರೆ.

ಆದಿವಾಸಿಗಳ ಈ ಪ್ರತಿಭಟನೆಯ ಸಂದರ್ಭದಲ್ಲಿ ಅವರು ಚರ್ಚ್ ಅನ್ನು ಸಹ ಧ್ವಂಸಗೊಳಿಸಿದ್ದಾರೆ ಎಂದು ಸುಳ್ಳುಗಳನ್ನು ಸಹ ಕೆಲ ಮಾಧ್ಯಮಗಳು ಬಿತ್ತರಿಸುವ ಕೆಲಸ ಮಾಡುತ್ತಿವೆ. ಆದರೆ ಸತ್ಯಾಂಶ ಬೇರೆಯೇ ಇದ್ದು, ಮಿಷನರಿಗಳೇ ಆದಿವಾಸಿಗಳ ಮೇಲೆ ಹಲ್ಲೆ ನಡೆಸಿರುವುದಾಗಿದೆ. ಮತಾಂತರದ ವಿರುದ್ಧ ಈ ಬುಡಕಟ್ಟು ಜನರು ಪ್ರತಿಭಟನಾ ಸಭೆಗಳನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಅವರ ಮೇಲೆ ಮತಾಂಧ ಮಿಷನರಿಗಳು ಹಲ್ಲೆ ನಡೆಸಿರುವುದಾಗಿದೆ.

ಒಟ್ಟಿನಲ್ಲಿ ಮತಾಂತರ ನಡೆಸುವ ಸಲುವಾಗಿ ಮತಾಂಧ ಶಕ್ತಿಗಳು ಜನರ ಜೀವ, ಜೀವನದ ಜೊತೆಗೆಯೇ ಆಟವಾಡುತ್ತಿರುವುದು ಖೇದಕರ. ಇಂತಹ ನೀಚರ ವಿರುದ್ಧ ದೇಶಾದ್ಯಂತ ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರವೇ ದುಷ್ಟರ ಅಟ್ಟಹಾಸ ಕೊನೆಯಾಗಬಹುದು.

Tags

Related Articles

Close