ಪ್ರಚಲಿತ

ಶ್ರಮ ಇಲ್ಲದೇ ಪಲ್ಲಂಗ ಏರಿದಳೇ ರಮ್ಯಾ ..?!

ಕೆಲವಕ್ಕೆ ಹಂಗೇ! ರಾಜಕೀಯ ಜ್ಞಾನವಿಲ್ಲದಿದ್ದರೂ, ಅದೇನೋ ಉದ್ಧಾರ ಮಾಡಿಬಿಡ್ತೇನೆ ಅಂತ ಬಾಲ ಅಲ್ಲಾಡಿಸಿಕೊಂಡು ಬಂದು ಕೊನೆ ಕೊನೆಗೆ ಮರ್ಯಾದೆಯನ್ನೇ ಕಳೆದುಕೊಂಡು ಬೀದಿಪಾಲಾಗೋ ಸಾಲಿನಲ್ಲಿ ನಮ್ಮ ಕನ್ನಡ ಚಿತ್ರರಂಗದ ರಮ್ಯಾಳ ಸಾಧನೆ ಅದ್ಭುತ ಬಿಡಿ!! ಕಂಡವರ ದುಡ್ಡಿನಲ್ಲಿ ಮಜಾ ಮಾಡಿ, ಕೊನೆ ಕೊನೆಗೆ ದೊಡ್ಡ ದೊಡ್ಡ ತಿಮಿಂಗಿಲಗಳಿಗೆ ಬಕೇಟು ಹಿಡಿದು ರಾಜಕೀಯದಲ್ಲೊಂದು ಶಾಶ್ವತ ಸ್ಥಾನ ಹಿಡಿದುಬಿಟ್ಟರೆ ಸಾಕು! ತಿಂಗಳಿಗೆ ಲಕ್ಷಾನುಗಟ್ಟಲೆ ಸಂಬಳದ ಜೊತೆಗೆ ಬಿಟ್ಟಿ ಪ್ರಚಾರವೂ ಜೊತೆಗೆ! ಬಿಟ್ಟಿ ಊಟ ಉಪಚಾರವೂ ಸಿಗುವಾಗ ರಮ್ಯ ಅಲಿಯಾಸ್ ದಿವ್ಯಸ್ಪಂದನಾ ಕೂಡಾ ಹೊರತಲ್ಲ ಬಿಡಿ!

ಸದಾ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾಗುತ್ತಿರುವ ಮಾದಕ ನಟಿ ರಮ್ಯಾ ತನ್ನ ಹೊಲಸು ಮಾತುಗಳಿಂದ ರಾಜಕೀಯ ಬೇಳೆ ಬೇಯಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಪದೇ ಪದೇ ಬಿಜೆಪಿ ಮತ್ತು ಬಿಜೆಪಿ ನಾಯಕರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ತನ್ನ ಸ್ವಭಾವವನ್ನು ದೇಶದ ಜನತೆಗೆ ಪ್ರದರ್ಶಿಸುತ್ತಿದ್ದಾಳೆ. ಭಾರತದ ಶತ್ರು ರಾಷ್ಟ್ರ ಪಾಕಿಸ್ತಾನವನ್ನು ಸ್ವರ್ಗ ಎಂದ ನಟಿ ರಮ್ಯಾ ಕಾಂಗ್ರೆಸ್ ನಲ್ಲಿ ಪಟ್ಟ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ರಮ್ಯಾಳ ಈ ನಡೆಗೆ ದೇಶದಾದ್ಯಂತ ವಿರೋಧ ವ್ಯಕ್ತವಾದರೂ ಪದೇ ಪದೇ ತನ್ನ ಪ್ರಚಾರಕ್ಕಾಗಿ ವಿವಾದಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ವಿಶ್ವನಾಯಕ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಿ ಬಿಜೆಪಿ ಸಮಾವೇಶದಲ್ಲಿ ಭಾಗಯಾಗಿ ಇಡೀ ಕರ್ನಾಟಕಕ್ಕೆ ಹೊಸ ಹುರುಪು ತಂದಿದ್ದಾರೆ‌.ನರೇಂದ್ರ ಮೋದಿಯವರ ಸಮಾವೇಶಕ್ಕೆ ಹರಿದು ಬಂದ ಜನಸಾಗರ ನೋಡಿ ಕಾಂಗ್ರೆಸ್ ತಬ್ಬಿಬ್ಬಾಗಿದೆ. ಈಗಾಗಲೇ ಕಾಂಗ್ರೆಸ್ ಮುಕ್ತ ಭಾರತದ ಪ್ರತಿಜ್ಞೆ ಮಾಡಿರುವ ಮೋದಿ ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ್ನು ಕತ್ತೆಸೆಯಲು ಎಲ್ಲಾ ತಯಾರಿ ಮಾಡಿದ್ದಾರೆ.ನರೇಂದ್ರ ಮೋದಿಯವರ ಮಾತಿಗೆ ಭಯಗೊಂಡ ಕಾಂಗ್ರೆಸ್ ಹುಚ್ಚರಂತೆ ವರ್ತಿಸುತ್ತಿದೆ.

ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊಂದಿರುವ ರಮ್ಯಾ ಅನವಶ್ಯಕವಾಗಿ ಮಾತನಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ.ಹೇಳಿಕೊಂಡು ತಿರುಗಾಡಲು ಕಾಂಗ್ರೆಸ್ ಯಾವುದೇ ಸಾಧನೆ ಮಾಡಿಲ್ಲವಾದ್ದರಿಂದ ಬಿಜೆಪಿ ಮತ್ತು ದೇಶವಿರೋಧಿ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ..!

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ದೇಶದ ಮತ್ತು ರಾಜ್ಯದ ಅಭಿವೃದ್ಧಿಗೆ ಬೇಕಾದ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದರೆ ಇತ್ತ ರಮ್ಯಾ ನರೇಂದ್ರ ಮೋದಿಯವರ ಮಾತನ್ನು ತಿರುಚಿ ಪ್ರಧಾನಿ ಮಾದಕ ದ್ರವ್ಯ (ಗಾಂಜಾ) ಸೇವನೆ ಮಾಡಿ ಮಾತನಾಡಿದ್ದಾರೆ ಎಂದು ಟ್ವಿಟ್ ಮಾಡಿದ್ದಾಳೆ.ದೇಶದ ಪ್ರಧಾನಿಗೆ ಗೌರವ ಕೊಡಲಾಗದ ಈಕೆ ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್ ಎಂದು ಕರೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ..!

ರಮ್ಯಾಳ ಹೇಳಿಕೆಗೆ ತಿರುಗೇಟು ನೀಡಿದ ನವರಸ ನಾಯಕ:

ರಮ್ಯಾಳ ಈ ಹೇಳಿಕೆಗೆ ಖಡಕ್ಕಾಗಿ ತಿರುಗೇಟು ನೀಡಿದ ಕನ್ನಡ ಖ್ಯಾತ ನಟ ನವರಸ ನಾಯಕ ಜಗ್ಗೇಶ್ ‘ರಮ್ಯಾ ಸ್ಟಾರ್ ಹೋಟೇಲ್ ನಲ್ಲಿ ಕೂತು ಅಪ್ಪನ ದುಡ್ಡಲ್ಲಿ ಪಾರ್ಟಿ ಕೊಟ್ಟು ಪಾರ್ಟು ಗಿಟ್ಟಿಸಿ! ಪ್ರತಿ ಚಿತ್ರದ ಕ್ಯಾಚ್ಗೆ ಅದೇ ಸ್ಟಾರ್ ಹೋಟೆಲ್ ಪಾರ್ಟಿ! ದೊಡ್ಡವರ ನೆರಳಲ್ಲಿ ರಾಜಕೀಯ ಕ್ಯಾಚ್! ಆಮೇಲೆ ಮೆಟ್ಲೇರಕ್ಕೆ ಹೆಡ್ಡಾಫೀಸ್ ಕ್ಯಾಚ್ ಹಾಕ್ದೋರ್ಗೆ ಮೋದಿ ಆದರೇನು ,ಗಾಂಧಿ ಆದರೇನು ಯಾರಿಗೆಬೇಕಾದರೂ ಹಂಗಿಸುತ್ತಾರೆ’ ಎಂದು ಟ್ವಿಟ್ಟರ್ ಮೂಲಕ ರಮ್ಯಾಳ ಕಾಲೆಳೆದಿದ್ದಾರೆ.

ತನ್ನ ಶ್ರಮ ಇಲ್ಲದೇ ಪಲ್ಲಂಗ ಏರುವ ರಮ್ಯಾ ಯಾರ ಬಗ್ಗೆಯೂ ಹಗುರವಾಗಿ ಮಾತನಾಡುತ್ತಾರೆ.ಹೋದಲ್ಲೇಲ್ಲಾ ಮರ್ಯಾದೆ ಕಳೆದುಕೊಂಡು ಬರುತ್ತಿರುವಾ ರಮ್ಯಾ ಸಿನಿಮಾದಲ್ಲಿ ನಟನೆಮಾಡಿದ ಹಾಗೆಯೇ ರಾಜಕೀಯದಲ್ಲೂ ನಾಟಕವಾಡುತ್ತಿದ್ದಾರೆ.

ಪಾಕಿಸ್ತಾನ ನರಕ ಅಲ್ಲ, ಮಂಗಳೂರಲ್ಲಿ ನರಕವಿದೆ. ಪಾಕಿಗಳೂ ಕೂಡಾ ನಮ್ಮಂತೆ ಮನುಷ್ಯರು. ಅವರನ್ನು ನಾವು ಪ್ರೀತಿಯಿಂದ ಕಾಣಬೇಕು. ಪಾಕಿಸ್ತಾನವನ್ನು ಭಾರತ ಶತ್ರು ರಾಷ್ಟ್ರವೆಂದು ಘೋಷಿಸಿಲ್ಲ. ಅವರು ನಮ್ಮ ಭಾರತೀಯ ಸೈನಿಕರನ್ನು ಕೊಂದಿರಬಹುದು ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರನ್ನು ತಪ್ಪಿತಸ್ಥರೆಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಿರಿ. ಆದರೇನಾಯಿತು? ಮಂಗಳೂರಿಗೆ ಬರುತ್ತಿದ್ದಂತೆ ನಿಮ್ಮ ಮೇಲೆ ಮೊಟ್ಟೆಗಳ ಸುರಿಮಳೆಯಾಯಿತಷ್ಟೇ ಅಲ್ಲದೆ ನಿಮ್ಮ ವಿರುದ್ಧ ಸೆಕ್ಷನ್ 124-ಎ ಪ್ರಕಾರ ಪ್ರಕರಣ ದಾಖಲಾಯಿತು…

ಇಷ್ಟೆಲ್ಲಾ ಅವಾಂತರ ಮಾಡಿದ ನೀವು ಮತ್ತೆ ಕ್ಯಾತೆ ತೆಗೆದಿದ್ದೀರಿ ಎಂದರೆ ನಿಮಗೆ ಎಷ್ಟು ಅಹಂ ಭಾವನೆ ಇದೆ ಎಂಬುವುದು ಈಗ ಎಲ್ಲಾ ನಿಮ್ಮ ಅಭಿಮಾನಿ ಬಳಗಕ್ಕೆ ತಿಳಿದಿರಬಹುದು…ಇದು ಮೋದಿ ಯುಗ!! ಪ್ರಧಾನಿ ನರೇಂದ್ರ ಮೋದಿ ಅಂದರೆ ಇಡೀ ಭಾರತವಲ್ಲ.. ವಿದೇಶದಲ್ಲೂ ಅವರನ್ನು ದೇವರ ತರಹ ಪೂಜೆ ಮಾಡುವವರಿದ್ದಾರೆ.. ಅಂತಹ ಮಹಾನ್ ವ್ಯಕ್ತಿಗೆ ನೀವೇನಾದರೂ ಅಂದರೆ ಇಡೀ ಜನತೆ ನಿಮಗೆ ಶಾಪ ಹಾಕದೆ ಬಿಡುವುದಿಲ್ಲ!!

ಭಾರತವನ್ನು ನರಕ ಎಂದವರಿಂದ ಮತ್ತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.!
ರಮ್ಯಾಳ ಈ ಹೇಳಿಕೆಗೆ ಸ್ವತಃ ಕಾಂಗ್ರೆಸ್ ಕೂಡಾ ತಲೆ ಮೇಲೆ ಕೈಹಿಡಿದು ಕೂರುವಂತಾಗಿದೆ.ಸಾಮಾಜಿಕ ಜಾಲತಾಣದ ಜವಾಬ್ದಾರಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ರಮ್ಯಾಳಿಗೆ ಸರಿಯಾದ ಬುದ್ದಿ ಕಲಿಸುವ ನಾಯಕರೂ ಕಾಂಗ್ರೆಸ್ ನಲ್ಲಿ ಇಲ್ಲವಾಗಿದೆ.! ಯಥಾರಾಜ ತಥಾ ಪ್ರಜಾ ಮಾತಿನಂತೆ ಕಾಂಗ್ರೆಸ್ ಗೆ ತಕ್ಕಂತೆ ರಮ್ಯಾ ನಡೆದುಕೊಳ್ಳುತ್ತಿದ್ದಾರೆ.!

–ಅರ್ಜುನ್

Tags

Related Articles

Close