ಪ್ರಚಲಿತ

ಭಾರತೀಯ ಅಧಿಕಾರಿಗಳಿಗೆ ವಿಚಿತ್ರ ರೀತಿಯ ಕಿರುಕುಳ ನೀಡುತ್ತಿರುವ ಪಾಕಿಸ್ತಾನ!! ಮತ್ತೊಮ್ಮೆ ಬಯಲಾಯಿತು ಪಾಕಿಸ್ತಾನದ ಅಸಲೀ ಮುಖ!!

ಪದೇ ಪದೇ ಭಾರತವನ್ನು ಕಂಡರೆ ಸಾಕು ಉರಿದೇಳುತ್ತಿರುವ ಪಾಕಿಸ್ತಾನ ಭಾರತದ ಗಡಿಭಾಗದಲ್ಲಿ ನೀಡುತ್ತಿರುವ ಉಪಟಳದಿಂದಾಗಿ ಅದೆಷ್ಟೋ ಭಾರತೀಯರು ಕಂಗಾಲಾಗಿ ಹೋಗಿರುವ ವಿಚಾರ ತಿಳಿದೇ ಇದೆ!! ಅಷ್ಟೇ ಅಲ್ಲದೇ ಕಾಶ್ಮೀರದಲ್ಲಿ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿರುವ ಪಾಕಿಸ್ತಾನಿ ಭಯೋತ್ಪಾದಕರು ಭಾರತೀಯರನ್ನು ಹಿಂಸಿಸುತ್ತಿದ್ದಾರಲ್ಲದೇ ಕಲ್ಲು ತೂರಾಟ ಸೇರಿದಂತೆ ದೇಶದ ಗಡಿಭಾಗಗಳಲ್ಲಿ ನೀಡುತ್ತಿರುವ ಚಿತ್ರಹಿಂಸೆಗಳು ಸಾಲದು ಎನ್ನುವಂತೆ ಇದೀಗ ಭಾರತೀಯ ಅಧಿಕಾರಿಗಳಿಗೂ ವಿಚಿತ್ರ ರೀತಿಯ ಕಿರುಕುಳವನ್ನು ನೀಡುತ್ತಿದ್ದಾರೆ ಎಂದರೆ ನಂಬ್ತೀರಾ??

ಆದರೆ ಇದನ್ನು ನಂಬಲೇಬೇಕು!! ಕಳೆದ ಎರಡು ದಶಕಗಳಿಂದ ಭಾರತದ ಹತ್ತಾರು ವೀರ ಯೋಧರ ಶಿರಚ್ಛೇದ ಮಾಡಿದರೂ ಪಾಕ್ ಎಂದೂ ತಾನಿದನ್ನು
ಮಾಡಿರುವುದಾಗಿ ಇದುವರೆಗೆ ಒಪ್ಪಿಕೊಂಡ ನಿದರ್ಶನಗಳೇ ಇಲ್ಲ!! ರಣಹೇಡಿಗಳಿಗೆ ಎದುರುಗಡೆ ನಿಂತು ಯುದ್ದ ಮಾಡುವುದು ಗೊತ್ತಿಲ್ಲ. ಅವರಿಗೆ ಯಾವಾಗಲೂ ಹಿಂಬಾಗಿಲಿನಿಂದ ಮತ್ತು ಹಿಂದಿನಿಂದ ವೈರಿಯನ್ನು ಇರಿದು ಸಾಯಿಸುವುದು ಮತ್ತು ಅಲ್ಲಿಂದ ಕಳ್ಳಮಾರ್ಗದಲ್ಲಿ ಪಲಾಯನವಾಗುವುದು ಮಾತ್ರವೇ ಗೊತ್ತು ಎನ್ನುವ ವಿಚಾರ ನಮಗೂ ತಿಳಿದೇ ಇದೆ!!

ಆದರೆ ಈವರೆಗೆ ಪಾಕಿಸ್ತಾನ ಭಾರತೀಯ ಜನಸಾಮಾನ್ಯರಿಗೆ ಕಿರುಕುಳಗಳನ್ನು ನೀಡುತ್ತಿರುವ ವಿಚಾರ ಮಾತ್ರ ತಿಳಿದಿತ್ತು. ಆದರೆ ಪಾಕಿಸ್ತಾನದಲ್ಲಿ ನಿಯೋಜನೆ ಗೊಂಡಿರುವ ಭಾರತೀಯ ಅಧಿಕಾರಿ ಗಳಿಗೂ ವಿಚಿತ್ರ ರೀತಿಯ ಕಿರುಕುಳ ನೀಡಲಾಗುತ್ತಿದೆ ಎನ್ನುವ ವಿಚಾರ ಮಾತ್ರ ಈವರೆಗೆ ತಿಳಿದಿಲ್ಲ. ಹೌದು… ಈಗಾಗಲೇ ನವದೆಹಲಿಯಲ್ಲಿರುವ ಪಾಕಿಸ್ತಾನ ದೂತವಾಸ ಕಚೇರಿಯಲ್ಲಿನ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನ್ನ ರಾಯಭಾರಿಯನ್ನು ಕರೆಸಿಕೊಂಡಿರುವ ಪಾಕಿಸ್ತಾನದ ಅಸಲಿ ಮುಖ ಇದೀಗ ಬಯಲಾಗಿದೆ.

ಭಾರತದಲ್ಲಿ ತನ್ನ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ರಾಯಭಾರಿಯನ್ನು ಕರೆಸಿಕೊಂಡ ಪಾಕ್!!

ಇತ್ತೀಚೆಗಷ್ಟೇ ಭಾರತದ ರಾಜಧಾನಿ ದಿಲ್ಲಿಯಲ್ಲಿನ ಪಾಕ್ ದೂತಾವಾಸದ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಸಮಾಲೋಚನೆ ನಡೆಸಲು ಇಸ್ಲಾಮಾಬಾದ್, ದಿಲ್ಲಿಯಲ್ಲಿನ ತನ್ನ ರಾಯಭಾರಿಯನ್ನು ಕರೆಸಿಕೊಂಡಿದೆ ಎಂದು ಪಾಕ್ ವಿದೇಶ ಕಾರ್ಯಾಲಯವನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಪಾಕ್ ವಿದೇಶ ಕಾರ್ಯಾಲಯದ ಮೂಲಗಳಿಂದ ತಿಳಿದು ಬಂದಿರುವಂತೆ ದಿಲ್ಲಿಯಲ್ಲಿನ ಪಾಕ್ ಹೈಕಮಿಶನರ್ ಸೊಹೇಲ್ ಮಹಮೂದ್ ಅವರನ್ನು ಇಸ್ಲಾಮಾಬಾದ್‍ಗೆ ಕರೆಸಿಕೊಳ್ಳಲಾಗಿದೆ ಎಂದು ಪಾಕ್ ವಿದೇಶ ಕಾರ್ಯಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಅವರು ಇಸ್ಲಾಮಾಬಾದಿನಲ್ಲಿ ನಡೆಸಿದ ಸಾಪ್ತಾಹಿಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದರು.

ಅಷ್ಟೇ ಅಲ್ಲದೇ, ಹೊಸದಿಲ್ಲಿಯಲ್ಲಿನ ಪಾಕ್ ರಾಜತಂತ್ರಜ್ಞರಿಗೆ ಈಚೆಗೆ ಕಿರುಕುಳ ನೀಡಲಾದ ಘಟನೆಗಳ ಬಗ್ಗೆ ಸಮಾಲೋಚನೆ ನಡೆಸಲು ಪಾಕ್ ಸರಕಾರ ತನ್ನ ಹೈಕಮಿಶನರ್ ಅವರನ್ನು ಇಸ್ಲಾಮಾಬಾದ್‍ಗೆ ಕರೆಸಿಕೊಂಡಿದೆ ಎಂದು ವಕ್ತಾರ ಫೈಸಲ್ ತಿಳಿಸಿದ್ದು, ಭಾರತದಲ್ಲಿರುವ ಪಾಕ್ ರಾಜತಂತ್ರಜ್ಞರು ಮತ್ತು ಅವರ ಕುಟುಂಬದವರಿಗೆ ಭಾರತೀಯ ಸರಕಾರ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದರು. ಪಾಕ್ ಸರಕಾರ ಈ ಬಗ್ಗೆ ಭಾರತೀಯ ಉಪ ಹೈಕಮಿಶನರ್‍ಗೆ ಮತ್ತು ವಿದೇಶ ಸಚಿವಾಲಯಕ್ಕೆ ಹಲವು ಬಾರಿ ಪ್ರತಿಭಟನೆ ಸಲ್ಲಿಸಿದ ಹೊರತಾಗಿಯೂ ಅದು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಫೈಸಲ್ ಆರೋಪಿಸಿದ್ದರು. ಆದರೆ ಭಾರತೀಯ ಅಧಿಕಾರಿಗಳಿಗೆ ಪಾಕಿಸ್ತಾನ ಸರಕಾರವು ಅದ್ಯಾವ ರೀತಿ ಸತ್ಕರಿಸುತ್ತಿದೆ ಎನ್ನುವುದನ್ನೂ ಮಾತ್ರ ತಿಳಿಸಿಲ್ಲ!!

ಅಷ್ಟಕ್ಕೂ ಪಾಕ್ ಭಾರತೀಯ ಅಧಿಕಾರಿಗಳಿಗೆ, ಮಕ್ಕಳಿಗೆ ಯಾವ ರೀತಿ ಹಿಂಸಿಸುತ್ತೆ ಗೊತ್ತೇ???

ಹೌದು… ಗಡಿಭಾಗಗಳಲ್ಲಿ ಮಾತ್ರ ತನ್ನ ಅಟ್ಟಹಾಸವನ್ನು ಮೆರೆಯುತ್ತಿರುವ ಪಾಕಿಸ್ತಾನವು ಕಾಶ್ಮೀರದ ಮೇಲೆ ಸದಾ ಕಣ್ಣಿಡುವುದೇ ಅದರ ವ್ಯಾಧಿಯಾಗಿ ಹೋಗಿದೆ. ಸಂಪೂರ್ಣವಾಗಿ ಅದನ್ನು ಕಬಳಿಸಬೇಕೆಂಬ ಹಪಾಹಪಿತನವನ್ನು ಹೊಂದಿದ್ದರೂ ಕೂಡ ಅದು ಸಾಧ್ಯವಾಗದಂತಹ ಕೆಲಸ. ಇದೂ ಸಾಲದು ಎನ್ನುವಂತೆ ಭಾರತೀಯ ಅಧಿಕಾರಿಗಳಿಗೂ ವಿಚಿತ್ರ ರೀತಿಯ ಕಿರುಕುಳಗಳನ್ನು ನೀಡುತ್ತಿದೆ.

ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳು, ಕುಟುಂಬದವರಿಗೂ ಮಾತ್ರವಲ್ಲದೇ ಚಿಕ್ಕ ಮಕ್ಕಳಿಗೂ ಪಾಕಿಸ್ತಾನದಲ್ಲಿ ಕಿರುಕುಳ ನೀಡಲಾಗುತ್ತಿದೆ. ತಡರಾತ್ರಿ ಹಾಗೂ ಬೆಳಗಿನ ಜಾವ ನಿರಂತರವಾಗಿ ಡೋರ್ ಬೆಲ್ ಮಾಡಲಾಗುತ್ತದೆ. ಮನೆಗೆ ನೀರು, ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗುತ್ತದೆಯಲ್ಲದೇ ಕಾರಿನಲ್ಲಿ ಬೆನ್ನಟ್ಟಿಕೊಂಡು ಬಂದು ಬೆದರಿಕೆ ಹಾಕಲಾಗುತ್ತದೆ. ಅದೂ ಸಾಲದು ಎನ್ನುವಂತೆ ನಡುರಾತ್ರಿಯಲ್ಲಿ ಅಶ್ಲೀಲ ಫೆÇೀನ್ ಕರೆಗಳು ಮಾಡುವ ಮೂಲಕ ಆಕ್ರಮಣಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನಿಗಳು, ಭಾರತೀಯ ಮಕ್ಕಳು ಕಾರಿನಲ್ಲಿ ತೆರಳುತ್ತಿದ್ದರೆ ಅವರನ್ನು ಹೆದರಿಸುತ್ತಿದೆ. ಇದು ಭಾರತೀಯ ದೂತಾವಾಸದ ಹಿರಿಯ ಅಧಿಕಾರಿಗಳಿಗೆ ಪಾಕಿಸ್ತಾನ ನೀಡುತ್ತಿರುವ ಕಿರುಕುಳದ ಕೆಲವು ಸ್ಯಾಂಪಲ್‍ಗಳು ಅಷ್ಟೇ!!

ನೆರೆಹೊರೆಯವರ ಜಗಳದಲ್ಲಿ ಇವೆಲ್ಲವೂ ಕೂಡ ಸಾಮಾನ್ಯ ಅಂದುಕೊಂಡರೂ, ಅಣ್ವಸ್ತ್ರ ಸಜ್ಜಿತ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ಇಂತಹ ಬೆಳವಣಿಗೆಗಳು ಅತ್ಯಂತ ಗಂಭೀರವಾಗಿದೆ. 1947ರಿಂದೀಚೆಗೆ ಮೂರು ಯುದ್ಧಗಳನ್ನು ಮಾಡಿದ್ದರೂ ಜಮ್ಮು ಮತ್ತು ಕಾಶ್ಮೀರ ವಿವಾದ ಇತ್ಯರ್ಥವಾಗಿಲ್ಲ. ಅದು ಇಂದಿಗೂ ಕೂಡ ಗಡಿಯಲ್ಲಿ ಆಗಾಗ್ಗೆ ಚಕಮಕಿಗಳು ಮುಂದುವರಿದಿವೆ. ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯಗಳು ತಮ್ಮ ಹಿರಿಯ ರಾಜತಾಂತ್ರಿಕರು ಮತ್ತು ಕುಟುಂಬ ಸದಸ್ಯರಿಗೆ ಇಂತಹ ಕಿರುಕುಳ ನೀಡಲಾಗುತ್ತಿದೆ ಎಂದು ಪರಸ್ಪರ ದೂರಿಕೊಂಡಿವೆ. ಭಾರತೀಯರಿಗೆ ಬೆಳಗಿನ ಜಾವ 3 ಗಂಟೆಗೆ ಬಾಗಿಲ ಬೆಲ್ ಬಾರಿಸುವುದು, ರಾಜತಾಂತ್ರಿಕರನ್ನು ಭದ್ರತಾ ಸಿಬ್ಬಂದಿಗಳು ಹಿಂಬಾಲಿಸುವುದು, ಅಪರಿಚಿತ ಆಕ್ರಮಣಕಾರರು ಹಠಾತ್ತನೆ ಎದುರಾಗಿ ವೀಡಿಯೋ ಚಿತ್ರೀಕರಿಸಿಕೊಳ್ಳುವುದು- ಮುಂತಾದ ಘಟನೆಗಳು ನಡೆಯುತ್ತಿವೆ.

ಅಲ್ಲಿನ ಐ ಎಸ್ ಐ ಬೇಹುಗಾರಿಕೆ ಏನು ಗೊತ್ತೇ??

ಹೊಸದಿಲ್ಲಿಯಲ್ಲಿರುವ ಪಾಕ್ ದೂತಾವಾಸದ ಅಧಿಕಾರಿಗಳು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಕೆಲವು ದೂರುಗಳನ್ನು ಸಲ್ಲಿಸಿದ ಬಳಿಕ ಮತ್ತೊಂದು ಸುತ್ತಿನ ವಿವಾದ ತಲೆದೋರಿದೆ. ಅಷ್ಟೇ ಅಲ್ಲದೇ ಗಡಿಯಾಚೆಯಿಂದ ನಡೆಯುತ್ತಿರುವ ಭಯೋತ್ಪಾದನೆ ನಿಂತಿಲ್ಲ. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪಾಕಿಸ್ತಾನವೂ ಆಗಾಗ್ಗೆ ಆರೋಪಿಸುತ್ತಲೇ ಬಂದಿದೆ. ಆದರೆ ಪಾಕಿಸ್ತಾನದಲ್ಲಿ ಭಾರತೀಯ ಅಧಿಕಾರಿಗಳಿಗೆ ಮಾತ್ರ ವಿಚಿತ್ರ ರೀತಿಯ ಹಿಂಸೆಗಳನ್ನು ನೀಡುತ್ತಿರುವ ಪಾಕಿಸ್ತಾನದ ಅಸಲಿ ಮುಖ ಬಯಲಾಗಿದ್ದಂತೂ ಅಕ್ಷರಶಃ ನಿಜ.

“ಪಾಕಿಸ್ತಾನದಲ್ಲಿ ಭಾರತೀಯ ಅಧಿಕಾರಿಗಳು ಎಲ್ಲೇ ಹೋದರೂ ಅಲ್ಲಿನ ಗುಪ್ತಚರ ವಿಭಾಗದ ಐ ಎಸ್ ಐ ತಂಡ ಅವರನ್ನು ಹಿಂಬಾಲಿಸುತ್ತದೆ. ನಾನು ಎಲ್ಲೇ ಹೋದರೂ ಐ ಎಸ್ ಐ ತಂಡ ಹಿಂಬಾಲಿಸುತ್ತಿತ್ತು. ಚಿಕಿತ್ಸೆಗಾಗಿ ವೈದ್ಯರ ಬಳಿ ತೆರಳಿದರೂ, ಬಾಗಿಲ ಹೊರಗೆ ನಿಂತು ಏನು ಮಾತನಾಡುತ್ತಿದ್ದೇನೆ ಎಂದು ಅವರು ಕೇಳಿಸಿಕೊಳ್ಳುತ್ತಿದ್ದರು” ಎಂದು ಪಾಕಿಸ್ತಾನದಲ್ಲಿ ಕರ್ತವ್ಯ ನಿರ್ವಹಿಸಿದ್ದ ಮಾಜಿ ಅಧಿಕಾರಿ ವಿಷ್ಣು ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ದೂತಾವಾಸದ ಸಿಬ್ಬಂದಿಗಳಿಗೆ ಬಹಳ ಹಿಂದಿನಿಂದಲೂ ಇಂತಹ ಅನುಭವಗಳು ಆಗುತ್ತಲೇ ಇವೆ ಎಂದು ಹೇಳಿರುವ ನಿವೃತ್ತ ರಾಜತಾಂತ್ರಿಕ ಅಧಿಕಾರಿ ವಿಷ್ಣು ಪ್ರಕಾಶ್ ತಮಗೂ ಸ್ವತಃ ಇಂತಹ ಅನುಭವಗಳಾಗಿತ್ತು ಎಂದು ಹೇಳಿದ್ದಾರೆ!!

ಪ್ರತಿ ಬಾರಿಯೂ ತನ್ನ ಕುತಂತ್ರ ಬುದ್ದಿಯಿಂದಲೇ ಸುದ್ದಿಯಾಗುತ್ತಿರುವ ಪಾಕಿಸ್ತಾನವೂ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯ ಯಶಸ್ಸಿಗೆ ನಲುಗಿ
ಹೋಗಿದ್ದಂತೂ ಅಕ್ಷರಶಃ ನಿಜ! ಆದರೆ ಇದೀಗ ಗಡಿಭಾಗಗಳಲ್ಲಿ ಭಾರತೀಯರಿಗೆ ಕಿರುಕುಳ ನೀಡಿದ್ದೇ ಸಾಲದು ಎಂದು ಭಾರತೀಯ ಅಧಿಕಾರಿಗಳಿಗೂ ಅದರಲ್ಲೂ ಸಣ್ಣ ಸಣ್ಣ ಮಕ್ಕಳಿಗೂ ಕಿರುಕುಳ ನೀಡುವ ಪಾಕಿಸ್ತಾನದ ಈ ಬುದ್ದಿಗೆ ಅದೇನೂ ಹೇಳಬೇಕೋ ನಾ ಕಾಣೆ!!

ಕೃಪೆ: ವಿಜಯ ಕರ್ನಾಟಕ

– ಅಲೋಖಾ

Tags

Related Articles

Close